ಕಳ್ಳರ ಜತೆ ಸೇರಿ ಕಳ್ಳತನ ಮಾಡುವ ಪೊಲೀಸಪ್ಪ, ಕಾನ್ಸ್​ಟೇಬಲ್ ಯಲ್ಲಪ್ಪ ಸಿಕ್ಕಿಬಿದ್ದನಪ್ಪ

ಪ್ರಕರಣಗಳನ್ನು ಭೇದಿಸಿ ಅಪರಾಧಿಗಳನ್ನು ಹಿಡಿದು ಅವರನ್ನು ನ್ಯಾಯಾಲಯಕ್ಕೆ ಒಪ್ಪಿಸಿ ಅಪರಾಧ ಕೃತ್ಯಗಳನ್ನು ತಡೆಗಟ್ಟುವಲ್ಲಿ ಪೋಲಿಸರ ಪಾತ್ರ ಬಹಳ ದೊಡ್ಡದಾಗಿದೆ. ಆದ್ರೆ, ಇಲ್ಲೋರ್ವ ಪೊಲೀಸಪ್ಪ ದರೋಡೆಕೋರರನ್ನು ಹಿಡಿಯುವ ಬದಲಿಗೆ ಅವರ ಜೊತೆಯಲ್ಲೇ ಸೇರಿಕೊಂಡು ಕಳ್ಳತನಕ್ಕೆ ಇಳಿದಿದ್ದಾನೆ. ಈಗಾಗಲೇ ಎರಡು ಪ್ರಕರಣದಲ್ಲಿ ಸಿಲುಕಿ ಅಮಾನುಗೊಂಡಿರುವ ಕಾನ್ಸ್​ಟೇಬಲ್ ಈಗ ಮೂರನೇ ಕಳ್ಳತನ ಕೇಸ್​ನಲ್ಲಿ ಪೊಲೀಸರ ಅತಿಥಿಯಾಗಿದ್ದಾನೆ. ಈ ಪ್ರಕರಣದ ವಿವರ ಈ ಕೆಳಗಿನಂತಿದೆ.

ಕಳ್ಳರ ಜತೆ ಸೇರಿ ಕಳ್ಳತನ ಮಾಡುವ ಪೊಲೀಸಪ್ಪ, ಕಾನ್ಸ್​ಟೇಬಲ್ ಯಲ್ಲಪ್ಪ ಸಿಕ್ಕಿಬಿದ್ದನಪ್ಪ
ಬಂಧಿತ ಕಾನ್ಸ್​ಟೇಬಲ್ ಯಲ್ಲಪ್ಪ
Follow us
| Updated By: ರಮೇಶ್ ಬಿ. ಜವಳಗೇರಾ

Updated on: Oct 17, 2023 | 12:02 PM

ಬೆಂಗಳೂರು, (ಅಕ್ಟೋಬರ್ 17): ದರೋಡೆಕೋರರನ್ನು ಹಿಡಿಯಬೇಕಾದವರೇ ಕಳ್ಳರ ಜೊತೆ ಸೇರಿ ಮನೆಕಳ್ಳತನ(theft Cases) ಮಾಡುತ್ತಿದ್ದ ಪೊಲೀಸ್ ಕಾನ್ಸ್​ಟೇಬಲ್ (Police Constable) ಅರೆಸ್ಟ್ ಆಗಿದ್ದಾನೆ. ಹೌದು….ಬೇಲಿಯೇ ಎದ್ದು ಹೊಲ ಮೇಯ್ದಂತೆ, ಕಳ್ಳರನ್ನು ಹಿಡಿದು ಶಿಕ್ಷೆಗೊಳಪಡಿಸುವ ಪೊಲೀಸಪ್ಪ ಕಳ್ಳರ ಜೊತೆ ಸೇರಿಕೊಂಡು ಮನೆಗಳ್ಳತನ ಮಾಡುತ್ತಿದ್ದ ಪೊಲೀಸ್​ ಕಾನ್ಸ್​​ಟೇಬಲ್​​ ಯಲ್ಲಪ್ಪ ಎನ್ನುವಾತನ್ನನ್ನು ಬೆಂಗಳೂರಿನ(Bengaluru)  ಜ್ಞಾನಭಾರತಿ ಪೊಲೀಸರು ಬಂಧಿಸಿದ್ದಾರೆ.

ಒಂದಲ್ಲ ಎರಡಲ್ಲ ಒಟ್ಟು ಮೂರು ಮನೆಗಳ್ಳತನ ಪ್ರಕರಣದಲ್ಲಿ ಪೊಲೀಸ್​ ಕಾನ್ಸ್​​ಟೇಬಲ್​​ ಯಲ್ಲಪ್ಪ ಭಾಗಿಯಾಗಿದ್ದ. ಈ ಹಿಂದೆ ಚಂದ್ರಾಲೇಔಟ್, ಚಿಕ್ಕ ಜಾಲ,ಬನಶಂಕರಿ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದ ಆರೋಪದ ಮೇಲೆ ಯಲ್ಲಪ್ಪನನ್ನ ಅಮಾನತು ಮಾಡಿ ತನಿಖೆಗೆ ಅದೇಶ ಹೊರಡಿಸಲಾಗಿತ್ತು. ಆದರೂ ತನ್ನ ಹಳೆ ಚಾಳಿಯನ್ನ ಬಿಡದ ಯಲ್ಲಪ್ಪ, ತನ್ನ ಕೈಚಳಕ ಮುಂದುವರೆಸಿ ಇದೀಗ ಲಾಕ್​ ಆಗಿದ್ದಾನೆ.

ಇದನ್ನೂ ಓದಿ: ಬೆಂಗಳೂರು ಏರ್ಪೋರ್ಟ್ ರಸ್ತೆಯಲ್ಲಿ ಮೂರು ಕಡೆ ಕಳ್ಳತನ, ಆನೇಕಲ್​ನಲ್ಲಿ ಕಾರಿನ ಗಾಜು ಒಡೆದು ಹಣ ಕದ್ದ ಖದೀಮರು

ಚಂದ್ರಾಲೇಔಟ್, ಚಿಕ್ಕ ಜಾಲದಲ್ಲೂ ಕೈ ಚಳಕ ತೋರಿಸಿದ್ದ ಯಲ್ಲಪ್ಪ. ಈ ಹಿಂದೆ ಕೂಡ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದ. ಅಗ ಬನಶಂಕರಿ ಠಾಣೆಯ ಕ್ರೈಂ ವಿಭಾಗದ ಕಾನ್ಸ್ ಟೇಬಲ್ ಅಗಿದ್ದ. ಕಳ್ಳತನ ಆರೋಪಿಗಳ ವಿಚಾರಣೆ ವೇಳೆ ಕಾನ್ಸ್​ಟೇಬಲ್​ ಯಲ್ಲಪನ ಪಾತ್ರದ ಬಗ್ಗೆ ಬಾಯ್ಬಿಟ್ಟಿದ್ದರು. ಬಳಿಕ ತನಿಖೆ ನಡೆಸಿದ್ದ ಪೊಲೀಸರು ಪ್ರಾಥಮಿಕ ಹಂತದಲ್ಲಿ ಯಲಪ್ಪನ ಪಾತ್ರದ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಯಲ್ಲಪ್ಪನನ್ನು ಅಮಾನತು ಮಾಡಲಾಗಿತ್ತು.

ಇನ್ನು ಕಳ್ಳತನ ಮಾಡಿದ್ದ ವಸ್ತುಗಳ ರಿಕವರಿಗಾಗಿ ಯಲ್ಲಪ್ಪನನ್ನು ಆತನ ಊರಿಗೆ ಕರೆದುಕೊಂಡು ಹೋದಾಗ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದ. ಊರಿಗೆ ಮಾತ್ರ ಕರೆದುಕೊಂಡು ಹೋಗಬೇಡಿ ಎಂದು ಪಟ್ಟು ಹಿಡಿದಿದ್ದ ಎಂದು ತಿಳಿದುಬಂದಿದೆ.

ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಆರಕ್ಷಕರು ಇರುತ್ತಾರೆ. ಸ್ಥಳೀಯವಾಗಿ ನಡೆಯುವ ಸಾವಿರಾರು ಪ್ರಕರಣಗಳನ್ನು ಬೇಧಿಸಿ ಅಪರಾಧಿಗಳನ್ನು ಹಿಡಿದು ಅವರನ್ನು ನ್ಯಾಯಾಲಯಕ್ಕೆ ಒಪ್ಪಿಸಿ ತನಿಖೆ ನಡೆಯುವಾಗ ಅ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತವಾದ ಸಾಕ್ಷಿಗಳನ್ನು ಒದಗಿಸಿ ಅಪರಾಧಿಗೆ ಶಿಕ್ಷೆಯಾಗುವಂತೆ ಮಾಡುವುದರಲ್ಲಿ ಪೋಲಿಸರ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಅದೆಷ್ಟೋ ಪ್ರಕರಣಗಳನ್ನು ನ್ಯಾಯಾಲಯದವರೆಗೂ ಬಾರದಂತೆ ಸ್ಥಳೀಯವಾಗಿಯೇ ಪೋಲಿಸರು ಬಗೆಹರಿಸುವ ಕಾರಣ ನಮ್ಮ ಸಮಾಜದಲ್ಲಿ ಪೋಲಿಸರಿಗೆ ಅಪಾರವಾದ ಗೌರವ ಇದೆ, ನಮ್ಮ ಕರ್ನಾಟಕದ ಪೋಲಿಸರೆಂದರೆ ದಕ್ಷತೆ ಮತ್ತು ಪ್ರಾಮಣಿಕತೆಗೆ ಇಡೀ ದೇಶದಲ್ಲೇ ಹೆಸರುವಾಸಿಯಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಅಪರಾಧಿಗಳನ್ನು ಹಿಡಿದು ಅವರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕಾದಂತಹ ಕೆಲ ಪೋಲೀಸರೇ ಈ ರೀತಿಯ ಅಂದರೆ ಲಂಚ ಹೀಗೆ ಅನೇಕ ಅಪರಾಧಗಳಲ್ಲಿ ಭಾಗಿಯಾಗುತ್ತಿರುವುದು ದುರಂತ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ತಾಜಾ ಸುದ್ದಿ
‘ಆಯಸ್ಸು ಜಾಸ್ತಿ ಆದಷ್ಟು ಹೆಚ್ಚು ಸಾವುಗಳನ್ನು ನೋಡಬೇಕು’; ಶ್ರೀನಾಥ್ ಬೇಸರ
‘ಆಯಸ್ಸು ಜಾಸ್ತಿ ಆದಷ್ಟು ಹೆಚ್ಚು ಸಾವುಗಳನ್ನು ನೋಡಬೇಕು’; ಶ್ರೀನಾಥ್ ಬೇಸರ
ಅಪರ್ಣಾ ಪಾರ್ಥಿವ ಶರೀರದ ಮುಂದೆ ಮಜಾ ತಂಡ ಕಣ್ಣೀರು
ಅಪರ್ಣಾ ಪಾರ್ಥಿವ ಶರೀರದ ಮುಂದೆ ಮಜಾ ತಂಡ ಕಣ್ಣೀರು
ಅಂಬಾನಿ ಕುಟುಂಬದಲ್ಲಿ ಮದುವೆ ಮುನ್ನ ಸಂಪನ್ನಗೊಂಡ ಶಿವ ಶಕ್ತಿ ಪೂಜೆ
ಅಂಬಾನಿ ಕುಟುಂಬದಲ್ಲಿ ಮದುವೆ ಮುನ್ನ ಸಂಪನ್ನಗೊಂಡ ಶಿವ ಶಕ್ತಿ ಪೂಜೆ
ಅಪರ್ಣಾ ಸರಳ ಜೀವಿ, ವೃತ್ತಿಪರ ಅಸೂಯೆ ಅವರಲ್ಲಿರಲಿಲ್ಲ: ಅರ್ಚನಾ ಉಡುಪ
ಅಪರ್ಣಾ ಸರಳ ಜೀವಿ, ವೃತ್ತಿಪರ ಅಸೂಯೆ ಅವರಲ್ಲಿರಲಿಲ್ಲ: ಅರ್ಚನಾ ಉಡುಪ
ಅಪರ್ಣಾ ಪಾರ್ಥಿವ ಶರೀರದ ಮುಂದೆನಿಂತು ಭಾವುಕರಾದ ಪತಿ; ಅಂತಿಮ ಸಂಸ್ಕಾರ ಎಲ್ಲಿ
ಅಪರ್ಣಾ ಪಾರ್ಥಿವ ಶರೀರದ ಮುಂದೆನಿಂತು ಭಾವುಕರಾದ ಪತಿ; ಅಂತಿಮ ಸಂಸ್ಕಾರ ಎಲ್ಲಿ
ಹೇಗಿತ್ತು ನೋಡಿ ಅಪರ್ಣಾ ಕೊನೆ ದಿನ; ಕ್ಯಾನ್ಸರ್​ನಲ್ಲೂ ನಗು ನಗುತ್ತಲೇ ಇದ್ರು
ಹೇಗಿತ್ತು ನೋಡಿ ಅಪರ್ಣಾ ಕೊನೆ ದಿನ; ಕ್ಯಾನ್ಸರ್​ನಲ್ಲೂ ನಗು ನಗುತ್ತಲೇ ಇದ್ರು
Daily Devotional: ಸಂಜೆ 6 ಗಂಟೆ ನಂತರ ಈ ವಸ್ತುಗಳನ್ನು ಮನೆಗೆ ತರಲೇಬಾರದು
Daily Devotional: ಸಂಜೆ 6 ಗಂಟೆ ನಂತರ ಈ ವಸ್ತುಗಳನ್ನು ಮನೆಗೆ ತರಲೇಬಾರದು
ಲಕ್ಷ್ಮೀ ದೇವಿ ಆರಾಧನೆಗೆ ಸೂಕ್ತವಾದ ದಿನ ಶುಕ್ರವಾರದ ದಿನ ಭವಿಷ್ಯ ತಿಳಿದುಕೊಳ
ಲಕ್ಷ್ಮೀ ದೇವಿ ಆರಾಧನೆಗೆ ಸೂಕ್ತವಾದ ದಿನ ಶುಕ್ರವಾರದ ದಿನ ಭವಿಷ್ಯ ತಿಳಿದುಕೊಳ
‘ನೋಡಿದಾಗ ಬೇಸರ ಶುರುವಾಯ್ತು’: ದರ್ಶನ್ ಕೇಸ್ ಬಗ್ಗೆ ವಿಜಯ್ ರಾಘವೇಂದ್ರ ಮಾತು
‘ನೋಡಿದಾಗ ಬೇಸರ ಶುರುವಾಯ್ತು’: ದರ್ಶನ್ ಕೇಸ್ ಬಗ್ಗೆ ವಿಜಯ್ ರಾಘವೇಂದ್ರ ಮಾತು
10 ಹುದ್ದೆಗೆ ನೂರಾರು ಯುವಕರ ನೂಕುನುಗ್ಗಲು; ಕಾಲ್ತುಳಿತದ ವಿಡಿಯೋ ವೈರಲ್
10 ಹುದ್ದೆಗೆ ನೂರಾರು ಯುವಕರ ನೂಕುನುಗ್ಗಲು; ಕಾಲ್ತುಳಿತದ ವಿಡಿಯೋ ವೈರಲ್