AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಂಕಿತ ಉಗ್ರರ ಬಳಿ ತಪ್ಪಾಗಿ ವ್ಯಾಖ್ಯಾನಿಸಿದ ಕುರಾನ್ ಪ್ರತಿ ಪತ್ತೆ: ಮೊಬೈಲ್​ ಡೇಟಾ ಡಿಕೋಡ್ ಮಾಡಲು ಪೊಲೀಸರ ಯತ್ನ

ತಪ್ಪಾಗಿ ವ್ಯಾಖ್ಯಾನಿಸಿದ ಕುರಾನ್​ನ ದಾಖಲೆಯಲ್ಲಿ ಜಿಹಾದ್ ಬಗ್ಗೆ ವಿವರ, ಕೊಲ್ಲುವುದು, ಷರಿಯಾ ಕಾನೂನಿನ ವಿವರಗಳು ಇವೆ. ಈ ಕುರಾನ್​ಗೆ ಅನುಗುಣವಾಗಿಯೇ ನಾವು ಬದುಕಬೇಕು ಎಂದೆಲ್ಲಾ ಅದರಲ್ಲಿ ವಿವರಗಳಿದ್ದವು.

ಶಂಕಿತ ಉಗ್ರರ ಬಳಿ ತಪ್ಪಾಗಿ ವ್ಯಾಖ್ಯಾನಿಸಿದ ಕುರಾನ್ ಪ್ರತಿ ಪತ್ತೆ: ಮೊಬೈಲ್​ ಡೇಟಾ ಡಿಕೋಡ್ ಮಾಡಲು ಪೊಲೀಸರ ಯತ್ನ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jul 26, 2022 | 3:00 PM

ಬೆಂಗಳೂರು: ನಗರದಲ್ಲಿ ಇತ್ತೀಚೆಗೆ ಪೊಲೀಸರು ವಶಕ್ಕೆ ತೆಗೆದುಕೊಂಡ ಶಂಕಿತ ಉಗ್ರ ಅಖ್ತರ್ ಮತ್ತು ಅವನ ಸಹಚರನ ಬಳಿ ತಪ್ಪಾಗಿ ವ್ಯಾಖ್ಯಾನಿಸಿದ ಕುರಾನ್ ಪ್ರತಿಗಳು ಪತ್ತೆಯಾಗಿವೆ ಪೊಲೀಸರು ತಿಳಿಸಿದ್ದಾರೆ. ಇವು ಅಲ್​ಖೈದಾ ಉಗ್ರಗಾಮಿ ಸಂಘಟನೆಗೆ ಯುವಕರನ್ನು ನೇಮಿಸಿಕೊಳ್ಳುವ ವ್ಯಕ್ತಿ ಕಳಿಸಿದ್ದ ದಾಖಲೆಗಳು ಎಂದು ಪೊಲೀಸರು ಹೇಳಿದ್ದಾರೆ. ತಪ್ಪಾಗಿ ವ್ಯಾಖ್ಯಾನಿಸಿದ ಕುರಾನ್​ನ ದಾಖಲೆಯಲ್ಲಿ ಜಿಹಾದ್ ಬಗ್ಗೆ ವಿವರ, ಕೊಲ್ಲುವುದು, ಷರಿಯಾ ಕಾನೂನಿನ ವಿವರಗಳು ಇವೆ. ಈ ಕುರಾನ್​ಗೆ ಅನುಗುಣವಾಗಿಯೇ ನಾವು ಬದುಕಬೇಕು ಎಂದೆಲ್ಲಾ ಅದರಲ್ಲಿ ವಿವರಗಳಿದ್ದವು.

ಸೇಲಂನಲ್ಲಿ ಸೆರೆಸಿಕ್ಕ ಜುಬಾ ಮತ್ತು ತಿಲಕ್ ನಗರದಲ್ಲಿ ಸೆರೆ ಸಿಕ್ಕ ಆಖ್ತರ್ ಇಬ್ಬರನ್ನು ನೇಮಿಸಿಕೊಂಡಿದ್ದವ ಒಬ್ಬನೇ ವ್ಯಕ್ತಿ. ಅಖ್ತರ್ ಮಾದರಿಯಲ್ಲೆ ಜುಬಾ ಸಹಿತ ಅಲ್ ಖೈದಾ ಗೆ ನೇಮಕಾತಿ ಅಗಿದ್ದ. ಫೇಸ್​ಬುಕ್, ಟ್ವಿಟ್ಟರ್, ಟೆಲಿಗ್ರಾಮ್, ವಾಟ್ಸ್ಯಾಪ್ ಮತ್ತು ಸ್ನಾಪ್​ಚಾಟ್ ಮೂಲಕ ಸಂಪರ್ಕ ಬೆಳೆಸಿಕೊಂಡಿದ್ದ. ನಂತರದ ದಿನಗಳಲ್ಲಿ ಜುಬಾ ಜೊತೆ ಸಂಪೂರ್ಣ ಸಂಪರ್ಕ ಎರ್ಪಟ್ಟಿತ್ತು. ಜುಬಾ ತಾನು ಅಲ್​ಖೈದಾ ಸೇರಲು ಸಿದ್ದನಿದ್ದೇನೆ ಎಂದಿದ್ದಾನೆ. ಜಿಹಾದ್​ಗಾಗಿ ಅಲ್​ಖೈದಾಗೆ ಸೇರಲು ಆತ ಸಿದ್ಧನಾಗಿದ್ದ. ಇಬ್ಬರಿಗೂ ಬಕ್ರೀದ್ ಬಳಿಕ ಕಾಶ್ಮೀರಕ್ಕೆ ಬರಲು ತಿಳಿಸಿಲಾಗಿತ್ತು. ಮುಂದಿನ ಹದಿನೈದು ದಿನದ ಒಳಗೆ ಕಾಶ್ಮೀರಕ್ಕೆ ಹೊರಡಲು ಅವರು ಸಿದ್ಧವಾಗಿದ್ದರು.

ಅಲ್​ಖೈದಾ ಉಗ್ರಗಾಮಿ ಸಂಘಟನೆಗೆ ಸೇರಲೆಂದು ಇಬ್ಬರು ಶಂಕಿತರು ಅಫ್ಘಾನಿಸ್ತಾನಕ್ಕೆ ತೆರಳಲು ಸಿದ್ಧರಾಗಿದ್ದರು. ಕಾಶ್ಮೀರಕ್ಕೆ ಸೇರಿಕೊಂಡ ಬಳಿಕ ಅಲ್ಲಿಂದ ಪಾಕ್ ಆಕ್ರಮಿತ ಕಾಶ್ಮೀರದ ಮಾರ್ಗವಾಗಿ ಅಫ್ಘಾನಿಸ್ತಾನಕ್ಕೆ ಕರೆಸಿಕೊಳ್ಳಲು ಉಗ್ರರನ್ನು ನೇಮಿಸಿಕೊಳ್ಳುವ ವ್ಯಕ್ತಿಗಳು ಸಂಚು ರೂಪಿಸಿದ್ದರು. ಆದರೆ ಇದೀಗ ಪೊಲೀಸರ ವಶದಲ್ಲಿರುವವರಿಗೆ ಕಾಶ್ಮೀರದಿಂದ ಎತ್ತಕಡೆ ತೆರಳಬೇಕು ಎಂಬ ಮಾಹಿತಿ ನೀಡಿರಲಿಲ್ಲ. ಒಮ್ಮೆ ಕಾಶ್ಮೀರ ತಲುಪಿದ ನಂತರ ಅಲ್ಲಿಂದ ಮುಂದೆ ಯಾವ ಸ್ಥಳಕ್ಕೆ ತಲುಪಬೇಕು ಎಂದು ತಿಳಿಸಲಾಗುವುದು ಎಂದಷ್ಟೇ ಅವರಿಗೆ ಉಗ್ರರ ನೇಮಕಾತಿ ಮಾಡಿಕೊಳ್ಳುವವರು ವಿವರಿಸಿದ್ದರು.

ಇಬ್ಬರೂ ಶಂಕಿತರನ್ನು ಪ್ರತ್ಯೇಕವಾಗಿ ನೇಮಕ ಮಾಡಿಕೊಳ್ಳಲಾಗಿತ್ತು. ನೇಮಕಾತಿಯ ನಂತರ ಇಬ್ಬರನ್ನೂ ಮಾತನಾಡಲು ತಿಳಿಸಲಾಗಿತ್ತು. ಅದರಂತೆ ಕೆಲ ದಿನಗಳ ಹಿಂದೆ ಒಮ್ಮೆ ಫೋನ್ ಮೂಲಕ ಅವರು ಮಾತನಾಡಿಕೊಂಡಿದ್ದರು. ಹೊರಡುವ ದಿನ ಮತ್ತೊಮ್ಮೆ ಮಾತನಾಡಿಕೊಳ್ಳುವ ಹಂಚಿಕೆಯಿತ್ತು. ಈ ನಡುವಣ ಅವಧಿಯಲ್ಲಿ ಅವರು ಫೋನ್ ಕಾಲ್ ಅಥವಾ ಮೆಸೇಜ್ ಮೂಲಕ ಸಂಪರ್ಕ ಹೊಂದುವಂತಿಲ್ಲ ಎಂದು ಹೇಳಲಾಗಿತ್ತು.

ಶಂಕಿತ ಅಖ್ತರ್ ಮೊಬೈಲ್​ನಿಂದ ಹೋಗಿದ್ದ ಒಂದು ಕರೆಯ ಮೇಲೆ ಸಿಸಿಬಿ ಪೊಲೀಸರಿಗೆ ಅನುಮಾನ ಬಂದು ಹೆಚ್ಚಿನ ತನಿಖೆ ನಡೆಸಲಾಯಿತು. ತನಿಖೆ ವೇಳೆ ಇಬ್ಬರು ಅಲ್​ಖೈದಾ ಬಗ್ಗೆ ಮಾತನಾಡಿದ್ದ ಸಂಗತಿ ಬೆಳಕಿಗೆ ಬಂದಿತ್ತು.

ಶಂಕಿತರ ಬಳಿ ಎರಡು ಮೊಬೈಲ್​ಗಳು ಪತ್ತೆಯಾಗಿದ್ದವು. ಒಂದು ಮೊಬೈಲ್ ಅನ್ನು ಕುಟುಂಬ ಮತ್ತು ಕೆಲಸ ಮಾಡುವ ಸ್ಥಳದಲ್ಲಿ ಬಳಸಲು ಮೀಸಲಿಟ್ಟಿದ್ದರು. ಮತ್ತೊಂದು ಮೊಬೈಲ್ ಅನ್ನು ಮೊಬೈಲ್ ಸೋಷಿಯಲ್ ಮೀಡಿಯಾ ಮತ್ತು ಉಗ್ರವಾದಕ್ಕೆ ಬಳಕೆ ಮಾಡುತ್ತಿದ್ದರು. ಉಗ್ರವಾದಿಗಳನ್ನು ಸಂಪರ್ಕಿಸಲು ಬಳಸುತ್ತಿದ್ದ ಮೊಬೈಲ್​ನಿಂದ ಬೇರೆ ಯಾರಿಗೂ ಕರೆ ಮಾಡುತ್ತಿರಲಿಲ್ಲ. ಈ ನಂಬರ್ ಅನ್ನು ಸ್ಥಳೀಯವಾಗಿಯೂ ಯಾರಿಗೂ ಕೊಟ್ಟಿರಲಿಲ್ಲ. ಅಖ್ತರ್​ನ ಸ್ವಂತ ಅಣ್ಣ ಮತ್ತು ಅವನದೇ ಕೊಠಡಿಯಲ್ಲಿದ್ದ ಇತರ ಮೂವರಿಗೂ ಅಖ್ತರ್​ನ ಇನ್ನೊಂದು ಮುಖದ ಪರಿಚಯ ಇರಲಿಲ್ಲ. ಇದೀಗ ಪೊಲೀಸರು ಅಖ್ತರ್ ಅಣ್ಣನನ್ನು ವಿಚಾರಣೆಗೆ ಕರೆಸಿದ್ದಾರೆ.

ಮೊಬೈಲ್​ನಲ್ಲಿದ್ದ ಹಲವು ದಾಖಲೆಗಳನ್ನು ಡಿಲೀಟ್ ಮಾಡಿದ್ದ ಅಖ್ತರ್ ಫೇಸ್​ಬುಕ್ ಅಕೌಂಟ್ ಅನ್ನೂ ಡೀಅಕ್ಟಿವೇಟ್ ಮಾಡಿದ್ದ. ಸದ್ಯ ವೈಜ್ಞಾನಿಕವಾಗಿ ಸೈಬರ್ ಎಕ್ಸ್​ಪರ್ಟ್​ಗಳ ಮೂಲಕ ಎಲ್ಲ ದತ್ತಾಂಶವನ್ನು ಹೊರ ತೆಗೆಯಲು ಯತ್ನಿಸಲಾಗುತ್ತಿದೆ. ಶಂಕಿತರ ಉಗ್ರರನ್ನು ಮುಂದಿನ ದಿನಗಳಲ್ಲಿ ಅಲ್​ಖೈದಾ ಉಗ್ರಗಾಮಿ ಸಂಘಟನೆಗೆ ನೇಮಕ ಮಾಡಲು ಹಲವು ಪ್ರಯತ್ನಗಳ ನಡೆದಿದ್ದವು ಎಂದು ಪೊಲೀಸರು ಅವರ ಮೊಬೈಲ್​ನಿಂದ ಸಂಗ್ರಹಿಸಿದ ದಾಖಲೆಗಳನ್ನು ಆಧರಿಸಿ ಆರೋಪ ಮಾಡಿದ್ದಾರೆ.

ಜಿಹಾದ್​ಗಾಗಿ ಪ್ರಾಣ ಕೊಡಬೇಕು, ಜಗತ್ತಿನಲ್ಲಿ ಷರಿಯತ್ ಕಾನೂನು ಜಾರಿಯಾಗಲು ಹೋರಾಡಬೇಕು ಎಂದೆಲ್ಲಾ ಅವರಿಗೆ ಸಂದೇಶಗಳನ್ನು ಕಳಿಸಿ ಮನವೊಲಿಸಲು ಯತ್ನಿಸಲಾಗಿತ್ತು.

Published On - 2:57 pm, Tue, 26 July 22

ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ
ವಿಧಾನಸಭೆ ವಿಸರ್ಜಸಿ ಚುನಾವಣೆ ಎದುರಿಸುವಂತೆ ಸರ್ಕಾರಕ್ಕೆ ಅಶ್ವಥ್ ಸವಾಲು
ವಿಧಾನಸಭೆ ವಿಸರ್ಜಸಿ ಚುನಾವಣೆ ಎದುರಿಸುವಂತೆ ಸರ್ಕಾರಕ್ಕೆ ಅಶ್ವಥ್ ಸವಾಲು
ಟೈಲರ್​ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ
ಟೈಲರ್​ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ
ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ
ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ
ಕನ್ನಡಿಗರು ಸಹನಶೀಲರು ಆದರೆ ಕಣಕಿದರೆ ಸುಮ್ಮನಿರಲ್ಲ: ನಾರಾಯಣಗೌಡ, ಕರವೇ
ಕನ್ನಡಿಗರು ಸಹನಶೀಲರು ಆದರೆ ಕಣಕಿದರೆ ಸುಮ್ಮನಿರಲ್ಲ: ನಾರಾಯಣಗೌಡ, ಕರವೇ