AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Haralur Lake: ಬೆಂಗಳೂರಿನ ಹರಳೂರು ಕೆರೆಗೆ ಹರಿಯುತ್ತಿದೆ ಕೊಳಚೆ ನೀರು, ಮೀನುಗಳ ಮಾರಣಹೋಮ

ಮಳೆನೀರನ್ನು ಕೆರೆಗೆ ಸಾಗಿಸಬೇಕಾಗಿರುವ ಕಾಲುವೆಗೆ ಚರಂಡಿ ನೀರು ಬೆರೆಯುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.

Haralur Lake: ಬೆಂಗಳೂರಿನ ಹರಳೂರು ಕೆರೆಗೆ ಹರಿಯುತ್ತಿದೆ ಕೊಳಚೆ ನೀರು, ಮೀನುಗಳ ಮಾರಣಹೋಮ
ಬೆಂಗಳೂರಿನ ಹರಳೂರು ಕೆರೆಯಲ್ಲಿ ಸತ್ತಿರುವ ಮೀನುಗಳು
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 15, 2022 | 10:32 AM

ಬೆಂಗಳೂರು: ನಗರದ ಬೆಳ್ಳಂದೂರು ಪ್ರದೇಶದ ಹರಳೂರು ಕೆರೆಯಲ್ಲಿ (Haralur lake) ಮತ್ತೊಮ್ಮೆ ಮೀನುಗಳು ಸತ್ತು (Fish Kill) ತೇಲುತ್ತಿವೆ. ಕಳೆದ ಮೂರ್ನಾಲ್ಕು ದಿನಗಳಲ್ಲಿ ಮೂರರಿಂದ ನಾಲ್ಕು ಟನ್​ಗಳಷ್ಟು ಮೀನುಗಳು ಸತ್ತಿವೆ ಎಂದು ಎಎನ್​ಐ ಸುದ್ದಿಸಂಸ್ಥೆಯು ವರದಿ ಮಾಡಿದೆ. ವಿಷಕಾರಿ ಕೊಳಚೆ ನೀರು ಕೆರೆಗೆ ಹರಿಯುತ್ತಿರುವುದೇ ಮೀನುಗಳ ಸಾವಿಗೆ ಮುಖ್ಯ ಕಾರಣ ಎಂದು ಹೇಳಲಾಗಿದೆ.

ಮಳೆನೀರನ್ನು ಕೆರೆಗೆ ಸಾಗಿಸಬೇಕಾಗಿರುವ ಕಾಲುವೆಗೆ ಚರಂಡಿ ನೀರು ಬೆರೆಯುತ್ತಿದೆ ಎಂದು ಸ್ಥಳೀಯರಾದ ಅಮರದೀಪ್ ಅಡಿಗ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ವಿಷಕಾರಿ ಚರಂಡಿ ನೀರನ್ನು ಕೆರೆಗೆ ಹರಿಸಬಾರದು ಎನ್ನುವ ಕಾರಣಕ್ಕೆ ನಿರ್ಮಿಸಿರುವ ಬ್ಯಾರಿಕೇಡ್​ಗಳು ಸ್ವಲ್ಪ ಸಮಯದವರೆಗೆ ಮಾತ್ರ ಕೊಳಕು ನೀರನ್ನು ಹಿಡಿದಿಟ್ಟುಕೊಳ್ಳುತ್ತವೆ. ಆದರೆ ಕೆಲವೇ ಹೊತ್ತಿನಲ್ಲಿ ಅದು ಉಕ್ಕಿ ಹರಿಯುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ.

ಕೊಳಕು ನೀರನ್ನು ಕೆರೆಗೆ ಸೇರದಂತೆ ತಡೆಯಬೇಕಾದ ಬ್ಯಾರಿಕೇಡ್ ವೈಫಲ್ಯದಿಂದಾಗಿ ಕಳೆದ ಮೂರ್ನಾಲ್ಕು ದಿನಗಳಲ್ಲಿ ಸುಮಾರು 4 ಟನ್ ಮೀನುಗಳು ಸಾವನ್ನಪ್ಪಿವೆ. ‘ಮಳೆನೀರನ್ನು ಕೆರೆಗೆ ಹರಿಸುವ ಕಾಲುವೆ ಜಾಲಕ್ಕೆ ಒಂದು ಕಡೆ ಕೊಳಚೆ ನೀರನ್ನು ಬೆರೆಯುತ್ತಿದೆ. ಅದೇ ನೀರು ಕೆರೆಗೂ ಬರುತ್ತಿದೆ. ಹೀಗಾಗಿಯೇ ಆಗಾಗ ಕೆರೆಯಲ್ಲಿ ನೊರೆ ಕಾಣಿಸಿಕೊಳ್ಳುತ್ತಿದೆ. ಆಮ್ಲಜನಕದ ಕೊರತೆಯಿಂದಾಗಿ ಮೀನುಗಳು ಸಾಯುವುದು ಸಾಮಾನ್ಯ ಸಂಗತಿಯಾಗಿದೆ’ ಎಂದು ಸ್ಥಳೀಯರು ಹೇಳುತ್ತಾರೆ.

7 ತಿಂಗಳಲ್ಲಿ 8 ಬಾರಿ ಮೀನುಗಳ ಸಾವು

ಬೆಂಗಳೂರು ಆ್ಯಕ್ಷನ್ ಏಡ್ ಸಂಸ್ಥೆಯು ಪ್ರಕಟಿಸಿರುವ ‘ಫಿಶ್​ಕಿಲ್ ಇನ್ ಲೇಕ್ಸ್ ಆಫ್ ಬೆಂಗಳೂರು 2017-2022’ (Fishkill in Lakes of Bengaluru) ವರದಿಯ ಪ್ರಕಾರ 2022ರ ಜನವರಿಯಿಂದ ಜುಲೈ ಅವಧಿಯಲ್ಲಿ ಬೆಂಗಳೂರಿನ ಕೆರೆಗಳಲ್ಲಿ ಒಟ್ಟು ಎಂಟು ಬಾರಿ ಮೀನುಗಳು ಸಾಮೂಹಿಕವಾಗಿ ಸಾವನ್ನಪ್ಪಿವೆ. ಕಳೆದ ಐದು ವರ್ಷಗಳ ವಾರ್ಷಿಕ ಸರಾಸರಿಯ ಪ್ರಮಾಣವನ್ನೂ ಇದು ಮೀರಿದೆ. 2017 ಮತ್ತು 2018ರಲ್ಲಿ ಆರು ಬಾರಿ ಇಂಥ ಘಟನೆಗಳು ನಡೆದಿದ್ದವು. 2019 ಮತ್ತು 2021ರಲ್ಲಿ ಲಾಕ್​ಡೌನ್ ಕಾರಣದಿಂದ ಮೀನುಗಳ ಸಾವಿನ ಪ್ರಕರಣಗಳು ಹೆಚ್ಚಾಗಿ ವರದಿಯಾಗಿರಲಿಲ್ಲ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪ್ರದೇಶದಲ್ಲಿ ಕೊಳಕು ನೀರು ಕೆರೆಗಳನ್ನು ಸೇರುವ ಪ್ರಕರಣಗಳು ಹಲವು ಬಾರಿ ವರದಿಯಾಗಿವೆ. ಆದರೂ ಅಧಿಕಾರಿಗಳು ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.

ಅಂಥ ಟ್ರಿಕ್ಸ್ ನನ್ನ ಹತ್ರ ಬೇಡ: ಮಾಧ್ಯಮಗಳ ಎದುರು ಶಿವರಾಜ್​ಕುಮಾರ್ ಗರಂ
ಅಂಥ ಟ್ರಿಕ್ಸ್ ನನ್ನ ಹತ್ರ ಬೇಡ: ಮಾಧ್ಯಮಗಳ ಎದುರು ಶಿವರಾಜ್​ಕುಮಾರ್ ಗರಂ
ಸುರೇಶ್ ರೈನಾಗೆ ಓಂ ಸಿನಿಮಾ ರೀತಿ ಲಾಂಗ್ ಹಿಡಿಯೋದು ಕಲಿಸಿದ ಶಿವಣ್ಣ
ಸುರೇಶ್ ರೈನಾಗೆ ಓಂ ಸಿನಿಮಾ ರೀತಿ ಲಾಂಗ್ ಹಿಡಿಯೋದು ಕಲಿಸಿದ ಶಿವಣ್ಣ
Weekly Horoscope: ಜೂನ್​ 2 ರಿಂದ 8 ರವರೆಗಿನ ವಾರ ಭವಿಷ್ಯ
Weekly Horoscope: ಜೂನ್​ 2 ರಿಂದ 8 ರವರೆಗಿನ ವಾರ ಭವಿಷ್ಯ
Daily Devotional: ಮನೆಗೆ ಬರುವ ಅತಿಥಿಗಳ ಉಪಚಾರ ಹೇಗಿರಬೇಕು?
Daily Devotional: ಮನೆಗೆ ಬರುವ ಅತಿಥಿಗಳ ಉಪಚಾರ ಹೇಗಿರಬೇಕು?
Daily Horoscope: ಈ ರಾಶಿಯವರು ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರುವುದು ಬೇಡ
Daily Horoscope: ಈ ರಾಶಿಯವರು ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರುವುದು ಬೇಡ
ಶಿವರಾಜ್​ ಕುಮಾರ್​ ಬಗ್ಗೆ ಹಗುರ ಮಾತುಗಳ ಸಹಿಸಲ್ಲ: ಬೇಳೂರು ಗೋಪಾಲಕೃಷ್ಣ
ಶಿವರಾಜ್​ ಕುಮಾರ್​ ಬಗ್ಗೆ ಹಗುರ ಮಾತುಗಳ ಸಹಿಸಲ್ಲ: ಬೇಳೂರು ಗೋಪಾಲಕೃಷ್ಣ
ಕ್ರಿಮಿನಲ್​ಗಳಿಗೆ ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ಖಡಕ್ ಎಚ್ಚರಿಕೆ
ಕ್ರಿಮಿನಲ್​ಗಳಿಗೆ ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ಖಡಕ್ ಎಚ್ಚರಿಕೆ
ಬೆಂಗಳೂರಿನ ಆಟೋ ಚಾಲಕನಿಗೆ ಚಪ್ಪಲಿಯಿಂದ ಹೊಡೆದ ಹೊರ ರಾಜ್ಯದ ಯುವತಿ
ಬೆಂಗಳೂರಿನ ಆಟೋ ಚಾಲಕನಿಗೆ ಚಪ್ಪಲಿಯಿಂದ ಹೊಡೆದ ಹೊರ ರಾಜ್ಯದ ಯುವತಿ
ಅಕ್ರಮ ಸಂಬಂಧ ಹೊಂದಿದ್ದ ಜೋಡಿಯನ್ನು ಕಟ್ಟಿ ಹಾಕಿ, ಶುದ್ಧೀಕರಿಸಿದ ಸ್ಥಳೀಯರು
ಅಕ್ರಮ ಸಂಬಂಧ ಹೊಂದಿದ್ದ ಜೋಡಿಯನ್ನು ಕಟ್ಟಿ ಹಾಕಿ, ಶುದ್ಧೀಕರಿಸಿದ ಸ್ಥಳೀಯರು
ಕಮಲ್ ಹೇಳಿಕೆಯನ್ನು ಭಾವುಕವಾಗಿ ನೋಡುವ ಅಗತ್ಯವಿಲ್ಲ: ಕಿಶೋರ್
ಕಮಲ್ ಹೇಳಿಕೆಯನ್ನು ಭಾವುಕವಾಗಿ ನೋಡುವ ಅಗತ್ಯವಿಲ್ಲ: ಕಿಶೋರ್