AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾತ್ರೆಗಳ ರೂಪದಲ್ಲಿ ಚಾಕಲೇಟ್​ ಮಾರಾಟ ಮಾಡುವ ಜಾಲ, ಶಾಲಾ ಮಕ್ಕಳೇ ಇವರ ಟಾರ್ಗೆಟ್

ಬೆಂಗಳೂರಿನಲ್ಲಿ ಮಕ್ಕಳು ತಿಂಡಿ ಖರೀದಿ ಮಾಡಲಿ ಎಂದು ದುಡ್ಡು ಕೊಟ್ಟು ಕಳಿಸುವ ಪೋಷಕರು ಸ್ವಲ್ಪ ಹುಷಾರಾಗಿರಿ. ಏಕೆಂದರೆ ಚಾಕಲೇಟ್ ಸೇಲ್ ಮಾಡುವ ಭರದಲ್ಲಿ ಮಕ್ಕಳ ಜೀವಕ್ಕೆ ಕುತ್ತು ತಂದೊಡ್ಡುವ ಆಹಾರ ತಯಾರಕರು ರೆಡಿಯಾಗಿದ್ದಾರೆ.ಹೌದು...ಥೇಟ್ ಮಾತ್ರೆಗಳ ರೂಪದಲ್ಲಿ ರಾಜಾರೋಷವಾಗಿ ಚಾಕಲೇಟ್ ಗಳ ಮಾರಾಟ ಮಾಡುವ ಜಾಲ ಪತ್ತೆಯಾಗಿದೆ.

ಮಾತ್ರೆಗಳ ರೂಪದಲ್ಲಿ ಚಾಕಲೇಟ್​ ಮಾರಾಟ ಮಾಡುವ ಜಾಲ, ಶಾಲಾ ಮಕ್ಕಳೇ ಇವರ ಟಾರ್ಗೆಟ್
Tablet Chocolate
TV9 Web
| Edited By: |

Updated on: Jul 21, 2025 | 8:22 PM

Share

ಬೆಂಗಳೂರು, (ಜುಲೈ 21): ಬೆಂಗಳೂರಿನಲ್ಲಿ ಮಕ್ಕಳು ಪಾಪ ತಿಂಡಿ, ಚಾಕಲೇಟ್ (chocolate) ಖರೀದಿ ಮಾಡಲಿ ಎಂದು ದುಡ್ಡು ಕೊಟ್ಟು ಕಳಿಸುವ ಪೋಷಕರು ಹುಷಾರಾಗಿ ಇರುವುದು ಒಳಿತು. ಏಕೆಂದರೆ ತಿಂಡಿ ತಿನಿಸುಗಳ ಮಾರಾಟ ಭರದಲ್ಲಿ ಆಹಾರ ತಯಾರಕರು ಇಳಿದಿರುವ ಕೀಳು ಮಟ್ಟ ನಿಜಕ್ಕೂ ಅಸಹ್ಯ ಹುಟ್ಟಿಸುವಂತಿದೆ. ಥೇಟ್ ಮಾತ್ರೆಗಳ (Tablets) ರೂಪದಲ್ಲಿ ರಾಜಾರೋಷವಾಗಿ ಚಾಕಲೇಟ್ ಗಳ ಮಾರಾಟ ಮಾಡುವ ಜಾಲ ಪತ್ತೆಯಾಗಿದೆ. ವಿದ್ಯಾರಣ್ಯಪುರ ಬಳಿಯ ಬಾಲಾಜಿ ಲೇಔಟ್, ರಾಘವೇಂದ್ರ ಕಾಲೋನಿ, ಚಿಕ್ಕ ಬೆಟ್ಟಹಳ್ಳಿ, ದೊಡ್ಡ ಬೆಟ್ಟಹಳ್ಳಿ ಸುತ್ತಮುತ್ತ ಅದರಲ್ಲೂ ಶಾಲೆಗಳ ಸುತ್ತಮುತ್ತ ಮಕ್ಕಳನ್ನ ಟಾರ್ಗೆಟ್ ಮಾಡಿ ಮಾತ್ರೆ ಸ್ವರೂಪದ ಚಾಕಲೇಟ್ ಗಳನ್ನು ಸೇಲ್ ಮಾಡುತ್ತಿರುವುದು ಟಿವಿ9 ಕನ್ನಡ ರಿಯಾಲಿಟಿ ಚೆಕ್ ನಲ್ಲಿ ಬಯಲಾಗಿದೆ.

ಅಂಗಡಿ ವ್ಯಾಪಾರಿಗಳು ಕೂಡ ಮಕ್ಕಳು ತಗೆದುಕೊಳ್ಳುತ್ತಾರೆ ಎಂದು ಮಕ್ಕಳ ಹಿತಾಸಕ್ತಿ ಮರೆತು ಮಾರಾಟ ಮಾಡುತ್ತಿದ್ದಾರೆ. ಮಾತ್ರೆ ಸ್ವರೂಪದ ಚಾಕಲೇಟ್ ಪ್ಯಾಕೇಜಿಂಗ್ ನಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ FSSAI ಅನುಮತಿಯೂ ಇಲ್ಲ. ಆಹಾರ ತಯಾರಕರ ವಿಳಾಸವು ಇಲ್ಲದೆ ಸೇಲ್ ಮಾಡಲಾಗುತ್ತಿದೆ. ಇನ್ನು ಈ ಬಗ್ಗೆ ಆತಂಕ ವ್ಯಕ್ತಪಡಿಸುವ ಆಹಾರ ತಜ್ಞರು ಹಾಗೂ ವೈದ್ಯರು ತೀವ್ರ ಆತಂಕ ಹೊರಹಾಕಿದ್ದಾರೆ.

ಇದನ್ನೂ ಓದಿ: ಈ ಒಂದಿಷ್ಟು ಆಹಾರಗಳಿಗೆ ಎಕ್ಸ್‌ಪೈರಿ ಡೇಟ್‌ ಅನ್ನೋದೇ ಇಲ್ಲವಂತೆ

ಆಹಾರ ಇಲಾಖೆ, ಕಾನೂನು ಯಾವುದರ ಭಯವೂ ಇಲ್ಲದೆ ಇಷ್ಟು ರಾಜಾರೋಷವಾಗಿ ಈ ರೀತಿಯ ಉತ್ಪನ್ನಗಳನ್ನು ಸೇಲ್ ಮಾಡುತ್ತ ಅಮಾಯಕ ಮಕ್ಕಳ ಜೀವದ ಜೊತೆ ಚೆಲ್ಲಾಟವಾಡಲು ನಿಂತಿದ್ದಾರೆ. ಇವುಗಳನ್ನು ತಿನ್ನುತ್ತಾ, ನಿಜವಾದ ಮಾತ್ರೆಗಳನ್ನು ತಿಂದು ಏನಾದರೂ ಅನಾಹುತವಾದರೆ ಯಾರು ಹೊಣೆ? ಮತ್ತೊಂದೆಡೆ ಇದರ ಹಿಂದೆ ಬೇರೇನಾದರೂ ಉದ್ದೇಶ ಇರಬಹುದಾ ಎಂಬುವುದನ್ನ ಇನ್ನಾದರೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಅಧಿಕಾರಿಗಳು ಪತ್ತೆ ಹಚ್ಚಬೇಕಿದೆ.

ವರದಿ: ಲಕ್ಷ್ಮಿ ನರಸಿಂಹ ಟಿವಿ9 ಬೆಂಗಳೂರು

ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ
Ashes 2025: ಮೂರಕ್ಕೆ ಮೂರು... ಆಸ್ಟ್ರೇಲಿಯಾ ಪಾಲಾದ ಆ್ಯಶಸ್
Ashes 2025: ಮೂರಕ್ಕೆ ಮೂರು... ಆಸ್ಟ್ರೇಲಿಯಾ ಪಾಲಾದ ಆ್ಯಶಸ್
ಶೆಟ್ಟಿ ಗ್ಯಾಂಗ್ ಬಿರುಕು? ಮೊದಲ ಬಾರಿಗೆ ಮೌನ ಮುರಿದ ಪ್ರಮೋದ್ ಶೆಟ್ಟಿ
ಶೆಟ್ಟಿ ಗ್ಯಾಂಗ್ ಬಿರುಕು? ಮೊದಲ ಬಾರಿಗೆ ಮೌನ ಮುರಿದ ಪ್ರಮೋದ್ ಶೆಟ್ಟಿ