AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚುನಾವಣೆಗಾಗಿ ವರ್ಗಾವಣೆಗೊಂಡಿದ್ದ ಅಧಿಕಾರಿಗಳನ್ನ ಮರು ವರ್ಗಾವಣೆ ಮಾಡಿ ಸರ್ಕಾರ ಆದೇಶ

ಚುನಾವಣೆಯ ವೇಳೆ "ಚುನಾವಣಾ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ ಮತ್ತು ನ್ಯಾಯಸಮ್ಮತ ಚುನಾವಣೆಗಾಗಿ" ಕೆಲ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಲಾಗಿತ್ತು. ಇದೀಗ ಚುನಾವಣೆಗಾಗಿ ವರ್ಗಾವಣೆಗೊಂಡಿದ್ದ ಅಧಿಕಾರಿಗಳನ್ನ ಮರು ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ.

ಚುನಾವಣೆಗಾಗಿ ವರ್ಗಾವಣೆಗೊಂಡಿದ್ದ ಅಧಿಕಾರಿಗಳನ್ನ ಮರು ವರ್ಗಾವಣೆ ಮಾಡಿ ಸರ್ಕಾರ ಆದೇಶ
ಅಧಿಕಾರಿಗಳ ಮರು ವರ್ಗಾವಣೆ ಮಾಡಿ ಆದೇಶಿಸಿದ ಸರ್ಕಾರ
ಪ್ರಜ್ವಲ್​ ಕುಮಾರ್ ಎನ್​ ವೈ
| Updated By: ಕಿರಣ್ ಹನುಮಂತ್​ ಮಾದಾರ್|

Updated on:Jun 27, 2024 | 6:57 PM

Share

ಬೆಂಗಳೂರು, ಜೂ.27: ಚುನಾವಣಾ(Election) ಹಿನ್ನೆಲೆ ವರ್ಗಾವಣೆಗೊಂಡಿದ್ದ ಅಧಿಕಾರಿಗಳನ್ನು ಮರು ವರ್ಗಾವಣೆ (Transfer) ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಚುನಾವಣೆಯ ವೇಳೆ “ಚುನಾವಣಾ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ ಮತ್ತು ನ್ಯಾಯಸಮ್ಮತ ಚುನಾವಣೆಗಾಗಿ” ಕೆಲ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಲಾಗಿತ್ತು. ಇದೀಗ ಆ ಅಧಿಕಾರಿಗಳ ಮರು ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ.

ಮರು ವರ್ಗಾವಣೆಗೊಂಡ ಅಧಿಕಾರಿಗಳು

* ಪಿ.ನಾಗೇಶ್ ಕುಮಾರ್ -ಹೆಸ್ಕಾಂ ಜಾಗೃತ ದಳ ಹೆಚ್ಚುವರಿ ಅಧೀಕ್ಷಕರು- ಬೆಂ.ಗ್ರಾಮಾಂತರ ಜಿಲ್ಲೆಗೆ ವರ್ಗಾವಣೆ.

* ಲಕ್ಷ್ಮಣ ನಾಯ್ಕ್ ವೈ – ಹೆಸ್ಕಾಂ ಜಾಗೃತ ದಳದ ಹೆಚ್ಚುವರಿ ಅಧೀಕ್ಷಕರು-  ಹುಬ್ಬಳ್ಳಿಗೆ ವರ್ಗಾವಣೆ

* ಅಬ್ದುಲ್ ಖಾದರ್ – ಹೆಚ್ಚುವರಿ ಎಸ್ಪಿ ಚಿತ್ರದುರ್ಗಕ್ಕೆ ವರ್ಗಾವಣೆ

* ರಾಮಚಂದ್ರಯ್ಯ ಎನ್ ಹೆಚ್. ಹೆಚ್ಚುವರಿ‌ ಎಸ್ಪಿ ತುಮಕೂರಿಗೆ ವರ್ಗಾವಣೆ

* ಲಕ್ಷ್ಮೀನಾರಯಣ ಎವಿ ಹೆಚ್ಚುವರಿ ಎಸ್ಪಿ ರಾಮನಗರಕ್ಕೆ ವರ್ಗಾವಣೆ

* ಜಗದೀಶ್‌ಎಂ- ಉ.ಕ ಹೆಚ್ಚುವರಿ ಎಸ್ಪಿಯಾಗಿ ವರ್ಗಾವಣೆ

* ಉಮೇಶ್ ಪಿ, ಡಿಸಿಪಿ ಸಿಎಆರ್ ಮಂಗಳೂರು ನಗರಕ್ಕೆ ವರ್ಗಾವಣೆ

*ಸಿದ್ಧನಗೌಡ ಯಂಕನಗೌಡ ಪಾಟೀಲ್ – ಡಿಸಿಪಿ ಸಿಎಆರ್ ಬೆಳಗಾವಿ ನಗರಕ್ಕೆ ವರ್ಗಾವಣೆ

ಇದನ್ನೂ ಓದಿ:ಬಾಲಭವನಕ್ಕೆ ಬರುವ ಪ್ರವಾಸಿಗರಿಂದ ಸ್ವಂತ ಖಾತೆಗೆ ಹಣ ವರ್ಗಾವಣೆ; ಇಬ್ಬರು ಸಿಬ್ಬಂದಿ ವಜಾ, ಮತ್ತಿಬ್ಬರು ಅಮಾನತು

ಚುನಾವಣೆ ವೇಳೆ ಹಲವು ಅಧಿಕಾರಿಗಳನ್ನ ವರ್ಗಾವಣೆ ಮಾಡಲಾಗಿತ್ತು. ಇದೀಗ ಪುನಃ ವರ್ಗಾವಣೆ ಆಗಿದ್ದ ಅಧಿಕಾರಿಗಳ ಮರು ವರ್ಗಾವಣೆ ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:51 pm, Thu, 27 June 24