Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಟಿವಿ9’ ರಿಯಾಲಿಟಿ ಚೆಕ್: ಅನೇಕ ಕಡೆಗಳಲ್ಲಿ ಕಡಿಮೆಯೇ ಆಗಿಲ್ಲ ಮೆಟ್ರೋ ಟಿಕೆಟ್ ದರ!

ಬಿಎಂಆರ್​ಸಿಎಲ್ ಶೇ 46 ರಿಂದ 47 ರಷ್ಟು ದರ ಏರಿಕೆ ಮಾಡಲಾಗುವುದು ಎಂದು ಹೇಳಿ ಬರೋಬ್ಬರಿ ಶೇ 100 ರಷ್ಟು ಹೆಚ್ಚಳ ಮಾಡಿದ್ದು, ಜನಾಕ್ರೋಶಕ್ಕೆ ಕಾರಣವಾಗಿತ್ತು. ಸಿಎಂ ಸೂಚನೆಯ ನಂತರ ದರ ಪರಿಷ್ಕರಣೆ ಮಾಡುತ್ತೇವೆ ಎಂದು ಹೇಳಿ ಇದೀಗ ಕೆಲವೊಂದು ಸ್ಟೇಷನ್​ಗಳಿಗೆ ಮಾತ್ರ ಕಡಿಮೆ ಮಾಡಿ ಕೈ ತೊಳೆದುಕೊಂಡಿದೆ. ಹೀಗಾಗಿ ಪ್ರಯಾಣಿಕರ ಆಕ್ರೋಶ ಮುಂದುವರಿದಿದೆ. ಮೆಟ್ರೋ ಟಿಕೆಟ್ ದರದ ಬಗ್ಗೆ ‘ಟಿವಿ’ ಮಾಡಿರುವ ರಿಯಾಲಿಟಿ ಚೆಕ್​ನಲ್ಲಿ ಕಂಡುಬಂದ ಮಾಹಿತಿ ಇಲ್ಲಿದೆ.

‘ಟಿವಿ9’ ರಿಯಾಲಿಟಿ ಚೆಕ್: ಅನೇಕ ಕಡೆಗಳಲ್ಲಿ ಕಡಿಮೆಯೇ ಆಗಿಲ್ಲ ಮೆಟ್ರೋ ಟಿಕೆಟ್ ದರ!
ನಮ್ಮ ಮೆಟ್ರೋ
Follow us
Kiran Surya
| Updated By: Ganapathi Sharma

Updated on: Feb 16, 2025 | 7:36 PM

ಬೆಂಗಳೂರು, ಫೆಬ್ರವರಿ 16: ಕಳೆದ ಏಳು ವರ್ಷಗಳಿಂದ ನಮ್ಮ ಮೆಟ್ರೋ ಟಿಕೆಟ್ ದರ ಹೆಚ್ಚಳ ಮಾಡಿಲ್ಲ. ಹಾಗಾಗಿ ಶೇ 46 ರಿಂದ 47 ರಷ್ಟು ದರ ಹೆಚ್ಚಳ ಮಾಡುತ್ತೇವೆಂದ ಬಿಎಂಆರ್​ಸಿಎಲ್ ಬರೋಬ್ಬರಿ ಶೇ 90 ರಿಂದ 100 ರಷ್ಟು ದರ ಏರಿಕೆ ಮಾಡಿತ್ತು. ಸಾರ್ವಜನಿಕರ ಆಕ್ರೋಶದ ನಂತರ ಬಿಎಂಆರ್​ಸಿಎಲ್ ಎಂಡಿ ಮಹೇಶ್ವರ ರಾವ್ ದುಪ್ಪಟ್ಟಾಗಿರುವ ಸ್ಟೇಷನ್​ಗಳಿಗೆ ಕಡಿಮೆ ಮಾಡುತ್ತೇವೆ ಎಂದಿದ್ದರು. ಆದರೆ ಕೆಲವೊಂದು ಸ್ಟೇಷನ್ ಗಳಿಗೆ ಮಾತ್ರ ಶೇ 10 ರಷ್ಟು ದರ ಕಡಿಮೆ ಮಾಡಿ ಕೈತೊಳೆದುಕೊಂಡಿದ್ದಾರೆ. ಈ ಬಗ್ಗೆ ‘ಟಿವಿ9’ ಭಾನುವಾರ ರಿಯಾಲಿಟಿ ಚೆಕ್ ಮಾಡಿದೆ. ಈ ವೇಳೆ, ಪ್ರಯಾಣಿಕರು ನಮ್ಮ ಸ್ಟೇಷನ್​​ನಲ್ಲಿ ಯಾವುದೇ ದರ ಪರಿಷ್ಕರಣೆ ಆಗಿಲ್ಲ, ಹಿಂದೆ ಇದ್ದಷ್ಟೇ ಇದೆ ಎಂದು ದೂರಿದ್ದಾರೆ.

ಕೋಣನಕುಂಟೆ ಕ್ರಾಸ್​ನಿಂದ ಆರ್​​ವಿ ರೋಡ್​ಗೆ 20 ರುಪಾಯಿ ಇತ್ತು, ದರ ಏರಿಕೆ ಆದ ಮೇಲೆ 40 ರುಪಾಯಿ ಆಗಿದೆ. ದರ ಪರಿಷ್ಕರಣೆ ಆದ ಮೇಲೂ 40 ರುಪಾಯಿಯೇ ಇದೆ ಎಂದು ಹಿರಿಯ ನಾಗರಿಕರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೆಟ್ರೋ ಹಳೆಯ ದರ, ದರ ಏರಿಕೆಯ ನಂತರದ ಮತ್ತು ಮರು ಪರಿಷ್ಕರಣೆ ನಂತರದ ವಿವರ

  • ಟಿಕೆಟ್ ದರ ಏರಿಕೆಯ ಹಿಂದೆ ಸ್ಯಾಂಡಲ್ ಸೋಪ್ ಫ್ಯಾಕ್ಟರಿ ಯಿಂದ ಜಯನಗರ 33 ರುಪಾಯಿ ಇತ್ತು. ದರ ಏರಿಕೆಯ ನಂತರ 60 ರುಪಾಯಿ ಆಗಿದೆ. ಯಾವುದೇ ದರ ಪರಿಷ್ಕರಣೆ ಆಗಿಲ್ಲ (ಏರಿಕೆ 27 ರುಪಾಯಿ).
  • ವಾಜರಹಳ್ಳಿ ಯಿಂದ ನ್ಯಾಷನಲ್ ಕಾಲೇಜಿಗೆ ದರ ಏರಿಕೆಯ ಹಿಂದೆ 28.5 ರುಪಾಯಿ ಇತ್ತು, ದರ ಏರಿಕೆ ಆದ ಮೇಲೆ 50 ರುಪಾಯಿ ಆಗಿದೆ. ಆದರೆ ಇಲ್ಲಿ ಯಾವುದೇ ದರ ಪರಿಷ್ಕರಣೆ ಆಗಿಲ್ಲ (22 ರುಪಾಯಿ ಏರಿಕೆ).
  • ಮೈಸೂರು ರೋಡ್​ನಿಂದ ಕೆಂಪೇಗೌಡ ಮೆಟ್ರೋ ಸ್ಟೇಷನ್​ಗೆ ಹಿಂದೆ 23 ರುಪಾಯಿ ಇತ್ತು, ಏರಿಕೆಯ ಆದ ಮೇಲೆ 40 ರುಪಾಯಿ ಆಗಿದ್ದು, ಯಾವುದೇ ಪರಿಷ್ಕರಣೆ ಆಗಿಲ್ಲ (17 ರುಪಾಯಿ ಏರಿಕೆ ಆಗಿದೆ).
  • ಆರ್ ವಿ ರೋಡ್​ನಿಂದ ವಿಧಾನಸೌಧ ದರ ಏರಿಕೆಗೆ ಮೊದಲು 28.50 ರುಪಾಯಿ ಇತ್ತು, ದರ ಏರಿಕೆ ಆದ ಮೇಲೆ 47.50 ರುಪಾಯಿ ಆಗಿದೆ. ಇಲ್ಲಿ ಯಾವುದೇ ಪರಿಷ್ಕರಣೆ ಆಗಿಲ್ಲ (19 ರುಪಾಯಿ ಏರಿಕೆ ಆಗಿದೆ).
  • ದರ ಏರಿಕೆಯ ಮೊದಲು ಯಶವಂತಪುರ ದಿಂದ ಯಲಚೇನಹಳ್ಳಿಗೆ 42.75 ರುಪಾಯಿ ಇತ್ತು, ದರ ಏರಿಕೆ ಆದ ಮೇಲೆ 70 ರುಪಾಯಿ ಆಗಿದೆ. ಇಲ್ಲಿ ಯಾವುದೇ ದರ ಪರಿಷ್ಕರಣೆ ಆಗಿಲ್ಲ (28 ರುಪಾಯಿ ಆಗಿದೆ).
  • ದರ ಏರಿಕೆಯ ಮೊದಲು ಸಂಪಿಗೆ ಮೆಟ್ರೋ ಸ್ಟೇಷನ್​ನಿಂದ ನಾಗಸಂದ್ರಕ್ಕೆ 33.25 ರುಪಾಯಿ ಇತ್ತು, ದರ ಏರಿಕೆಯ ಆದ ಮೇಲೆ 60 ರುಪಾಯಿ ಆಗಿದೆ. ಇಲ್ಲಿ ಯಾವುದೇ ದರ ಪರಿಷ್ಕರಣೆ ಆಗಿಲ್ಲ (27 ರುಪಾಯಿ ಏರಿಕೆ ಆಗಿದೆ).
  • ದರ ಏರಿಕೆಯ ಮೊದಲು ಕೆಂಪೇಗೌಡ ಮೆಟ್ರೋ ಸ್ಟೇಷನ್ ನಿಂದ ಮಾದಾವರ ಮೆಟ್ರೋ ಸ್ಟೇಷನ್ ಗೆ 40 ರುಪಾಯಿ ಇತ್ತು, ದರ ಏರಿಕೆಯ ನಂತರ 70 ರುಪಾಯಿ ಆಗಿದೆ. ಇಲ್ಲಿ ಯಾವುದೇ ದರ ಪರಿಷ್ಕರಣೆ ಆಗಿಲ್ಲ (30 ರುಪಾಯಿ ಏರಿಕೆ ಆಗಿದೆ).
  • ದರ ಏರಿಕೆಯ ಮೊದಲು ಕೋಣನಕುಂಟೆ ಕ್ರಾಸ್​ನಿಂದ ನ್ಯಾಷನಲ್ ಕಾಲೇಜಿಗೆ 20 ರುಪಾಯಿ ಇತ್ತು, ದರ ಏರಿಕೆಯ ನಂತರ 40 ಆಗಿದೆ. ಇಲ್ಲೂ ಯಾವುದೇ ದರ ಪರಿಷ್ಕರಣೆ ಆಗಿಲ್ಲ (20 ರುಪಾಯಿ ಏರಿಕೆ ಆಗಿದೆ).
  • ದರ ಏರಿಕೆಯ ಹಿಂದೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೆಟ್ರೋ ಸ್ಟೇಷನ್​​ನಿಂದ ಕೆಂಗೇರಿ ಬಸ್ ಸ್ಟ್ಯಾಂಡ್​ಗೆ 35 ರುಪಾಯಿ ಇತ್ತು, ದರ ಏರಿಕೆಯ ನಂತರ 60 ರುಪಾಯಿ ಆಗಿದ್ದು, ಇಲ್ಲಿ ಯಾವುದೇ ದರ ಪರಿಷ್ಕರಣೆ ಮಾಡಿಲ್ಲ (25 ರುಪಾಯಿ ದರ ಏರಿಕೆ ಆಗಿದೆ).

ಶೇ 90 ರಿಂದ 100 ರಷ್ಟು ಹೆಚ್ಚಳವಾಗಿದ್ದ ದರವನ್ನು ಕೇವಲ ಶೇ 10 ರಷ್ಟು ಕಡಿಮೆ ಮಾಡಿ ಬಿಎಂಆರ್​ಸಿಎಲ್ ಕೈ ತೊಳೆದುಕೊಂಡಿದೆ. ಸಿಎಂ ಮಾತಿಗೂ ಪ್ರಯಾಣಿಕರ ಒತ್ತಡಕ್ಕೂ ಮಣಿದಿಲ್ಲ.‌ ನಮ್ಮ ಮೆಟ್ರೋ ಟಿಕೆಟ್ ದರ ಹೆಚ್ಚಳ ಮಾಡಿ ಇಂದಿಗೆ ಒಂದು ವಾರ ಆಯಿತು. ಸಾಕಷ್ಟು ಸ್ಟೇಷನ್ ಗಳಲ್ಲಿ ಶೇ 90 ರಿಂದ 100 ರ ದರ ಏರಿಕೆಯನ್ನೇ ಉಳಿಸಿಕೊಳ್ಳಲಾಗಿದೆ. ಇದಕ್ಕೆ ಪ್ರಯಾಣಿಕರಿಂದ ಆಕ್ರೋಶ ವ್ಯಕ್ತವಾಗಿದೆ.

ಇದನ್ನೂ ಓದಿ: ನಮ್ಮ ಮೆಟ್ರೋ ಟಿಕೆಟ್ ದರ ಶೇ 30 ರ ವರೆಗೆ ಇಳಿಕೆ: ಆದರೆ ಎಲ್ಲೆಡೆಯೂ ಅಲ್ಲ!

ಒಟ್ಟಿನಲ್ಲಿ ದರ ಕಡಿಮೆ ಮಾಡುತ್ತೇವೆಂದು ಮಾತು ನೀಡಿದ ಬಿಎಂಆರ್​ಸಿಎಲ್ ಅಲ್ಲೊಂದು ಇಲ್ಲೊಂದು ಸ್ಟೇಷನ್​ಗಳಿಗೆ ಮಾತ್ರ ಶೇ 10 ರಷ್ಟು ದರ ಕಡಿಮೆ ಮಾಡಿ, ದುಪ್ಪಟ್ಟು ದರ ಹೆಚ್ಚಾದ ಎಲ್ಲೆಡೆಯೂ ಕಡಿಮೆ ಮಾಡುತ್ತೇವೆ ಎಂದು ಹುಸಿ ಭರವಸೆ ನೀಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಲೋಡ್‌ ಶೆಡ್ಡಿಂಗ್‌: ವಿದ್ಯುತ್​ ಇಲ್ಲದೇ ರೈತರು, ವಿದ್ಯಾರ್ಥಿಗಳು ಪರದಾಟ!
ಲೋಡ್‌ ಶೆಡ್ಡಿಂಗ್‌: ವಿದ್ಯುತ್​ ಇಲ್ಲದೇ ರೈತರು, ವಿದ್ಯಾರ್ಥಿಗಳು ಪರದಾಟ!
ಮೊದಲ ಬಾರಿ ಶಾಸಕನಾಗಿರುವ ಧೀರಜ್ ಬಹಳಷ್ಟು ಅರ್ಥಮಾಡಿಕೊಳ್ಳಬೇಕಿದೆ: ಕೆಎಂಎಸ್
ಮೊದಲ ಬಾರಿ ಶಾಸಕನಾಗಿರುವ ಧೀರಜ್ ಬಹಳಷ್ಟು ಅರ್ಥಮಾಡಿಕೊಳ್ಳಬೇಕಿದೆ: ಕೆಎಂಎಸ್
ಒತ್ತುವರಿ ತೆರವು ಕಾರ್ಯಾಚರಣೆಯಿಂದ ಕುಮಾರಸ್ವಾಮಿ ಭಯಗೊಂಡಿಲ್ಲ: ಮಂಜು
ಒತ್ತುವರಿ ತೆರವು ಕಾರ್ಯಾಚರಣೆಯಿಂದ ಕುಮಾರಸ್ವಾಮಿ ಭಯಗೊಂಡಿಲ್ಲ: ಮಂಜು
ಯಾದಗಿರಿ ಜಿಲ್ಲೆಯ ಜನ ಹನಿಹನಿ ನೀರಿಗಾಗಿ ಪರಿತಪಿಸುತ್ತಿದ್ದಾರೆ: ಶರಣಗೌಡ
ಯಾದಗಿರಿ ಜಿಲ್ಲೆಯ ಜನ ಹನಿಹನಿ ನೀರಿಗಾಗಿ ಪರಿತಪಿಸುತ್ತಿದ್ದಾರೆ: ಶರಣಗೌಡ
ಗ್ಯಾರಂಟಿ ಯೋಜನೆಗಳ ಬಗ್ಗೆ ತನ್ನದೇನೂ ತಕರಾರಿಲ್ಲವೆಂದ ಶರಣಗೌಡ ಕಂದ್ಕೂರ್
ಗ್ಯಾರಂಟಿ ಯೋಜನೆಗಳ ಬಗ್ಗೆ ತನ್ನದೇನೂ ತಕರಾರಿಲ್ಲವೆಂದ ಶರಣಗೌಡ ಕಂದ್ಕೂರ್
Video: ಕೇಂದ್ರ ಸಚಿವರ ಜತೆ ರೈತ ಮುಖಂಡರ ಮಾತುಕತೆ
Video: ಕೇಂದ್ರ ಸಚಿವರ ಜತೆ ರೈತ ಮುಖಂಡರ ಮಾತುಕತೆ
ಮಜಾ ಟಾಕೀಸ್​ಗೆ ಮಜಾ ಹೆಚ್ಚಿಸೋಕೆ ಬಂದ ಕ್ರಿಕೆಟ್ ಕಾಮೆಂಟೇಟರ್ಸ್
ಮಜಾ ಟಾಕೀಸ್​ಗೆ ಮಜಾ ಹೆಚ್ಚಿಸೋಕೆ ಬಂದ ಕ್ರಿಕೆಟ್ ಕಾಮೆಂಟೇಟರ್ಸ್
ಬಿಜೆಪಿ ಯಾವತ್ತಿಗೂ ಮುಸ್ಲಿಂ ವಿರೋಧಿ ಪಕ್ಷ ಅಲ್ಲ: ವಿಜಯೇಂದ್ರ
ಬಿಜೆಪಿ ಯಾವತ್ತಿಗೂ ಮುಸ್ಲಿಂ ವಿರೋಧಿ ಪಕ್ಷ ಅಲ್ಲ: ವಿಜಯೇಂದ್ರ
ದರ್ಶನ್ ಮಾದರಿ ಅನುಸರಿಸುವಂತೆ ಬೇರೆ ಸದಸ್ಯರನ್ನು ಕೋರಿದ ಖಾದರ್
ದರ್ಶನ್ ಮಾದರಿ ಅನುಸರಿಸುವಂತೆ ಬೇರೆ ಸದಸ್ಯರನ್ನು ಕೋರಿದ ಖಾದರ್
ಖಾಸಗಿ ಸಂಸ್ಥೆಯ ಸಿಬ್ಬಂದಿ ಇದ್ದ ವಾಹನಕ್ಕೆ ಬೆಂಕಿ, ನಾಲ್ಕು ಮಂದಿ ಸಜೀವ ದಹನ
ಖಾಸಗಿ ಸಂಸ್ಥೆಯ ಸಿಬ್ಬಂದಿ ಇದ್ದ ವಾಹನಕ್ಕೆ ಬೆಂಕಿ, ನಾಲ್ಕು ಮಂದಿ ಸಜೀವ ದಹನ