AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಟಿವಿ9’ ರಿಯಾಲಿಟಿ ಚೆಕ್: ಅನೇಕ ಕಡೆಗಳಲ್ಲಿ ಕಡಿಮೆಯೇ ಆಗಿಲ್ಲ ಮೆಟ್ರೋ ಟಿಕೆಟ್ ದರ!

ಬಿಎಂಆರ್​ಸಿಎಲ್ ಶೇ 46 ರಿಂದ 47 ರಷ್ಟು ದರ ಏರಿಕೆ ಮಾಡಲಾಗುವುದು ಎಂದು ಹೇಳಿ ಬರೋಬ್ಬರಿ ಶೇ 100 ರಷ್ಟು ಹೆಚ್ಚಳ ಮಾಡಿದ್ದು, ಜನಾಕ್ರೋಶಕ್ಕೆ ಕಾರಣವಾಗಿತ್ತು. ಸಿಎಂ ಸೂಚನೆಯ ನಂತರ ದರ ಪರಿಷ್ಕರಣೆ ಮಾಡುತ್ತೇವೆ ಎಂದು ಹೇಳಿ ಇದೀಗ ಕೆಲವೊಂದು ಸ್ಟೇಷನ್​ಗಳಿಗೆ ಮಾತ್ರ ಕಡಿಮೆ ಮಾಡಿ ಕೈ ತೊಳೆದುಕೊಂಡಿದೆ. ಹೀಗಾಗಿ ಪ್ರಯಾಣಿಕರ ಆಕ್ರೋಶ ಮುಂದುವರಿದಿದೆ. ಮೆಟ್ರೋ ಟಿಕೆಟ್ ದರದ ಬಗ್ಗೆ ‘ಟಿವಿ’ ಮಾಡಿರುವ ರಿಯಾಲಿಟಿ ಚೆಕ್​ನಲ್ಲಿ ಕಂಡುಬಂದ ಮಾಹಿತಿ ಇಲ್ಲಿದೆ.

‘ಟಿವಿ9’ ರಿಯಾಲಿಟಿ ಚೆಕ್: ಅನೇಕ ಕಡೆಗಳಲ್ಲಿ ಕಡಿಮೆಯೇ ಆಗಿಲ್ಲ ಮೆಟ್ರೋ ಟಿಕೆಟ್ ದರ!
ನಮ್ಮ ಮೆಟ್ರೋ
Kiran Surya
| Edited By: |

Updated on: Feb 16, 2025 | 7:36 PM

Share

ಬೆಂಗಳೂರು, ಫೆಬ್ರವರಿ 16: ಕಳೆದ ಏಳು ವರ್ಷಗಳಿಂದ ನಮ್ಮ ಮೆಟ್ರೋ ಟಿಕೆಟ್ ದರ ಹೆಚ್ಚಳ ಮಾಡಿಲ್ಲ. ಹಾಗಾಗಿ ಶೇ 46 ರಿಂದ 47 ರಷ್ಟು ದರ ಹೆಚ್ಚಳ ಮಾಡುತ್ತೇವೆಂದ ಬಿಎಂಆರ್​ಸಿಎಲ್ ಬರೋಬ್ಬರಿ ಶೇ 90 ರಿಂದ 100 ರಷ್ಟು ದರ ಏರಿಕೆ ಮಾಡಿತ್ತು. ಸಾರ್ವಜನಿಕರ ಆಕ್ರೋಶದ ನಂತರ ಬಿಎಂಆರ್​ಸಿಎಲ್ ಎಂಡಿ ಮಹೇಶ್ವರ ರಾವ್ ದುಪ್ಪಟ್ಟಾಗಿರುವ ಸ್ಟೇಷನ್​ಗಳಿಗೆ ಕಡಿಮೆ ಮಾಡುತ್ತೇವೆ ಎಂದಿದ್ದರು. ಆದರೆ ಕೆಲವೊಂದು ಸ್ಟೇಷನ್ ಗಳಿಗೆ ಮಾತ್ರ ಶೇ 10 ರಷ್ಟು ದರ ಕಡಿಮೆ ಮಾಡಿ ಕೈತೊಳೆದುಕೊಂಡಿದ್ದಾರೆ. ಈ ಬಗ್ಗೆ ‘ಟಿವಿ9’ ಭಾನುವಾರ ರಿಯಾಲಿಟಿ ಚೆಕ್ ಮಾಡಿದೆ. ಈ ವೇಳೆ, ಪ್ರಯಾಣಿಕರು ನಮ್ಮ ಸ್ಟೇಷನ್​​ನಲ್ಲಿ ಯಾವುದೇ ದರ ಪರಿಷ್ಕರಣೆ ಆಗಿಲ್ಲ, ಹಿಂದೆ ಇದ್ದಷ್ಟೇ ಇದೆ ಎಂದು ದೂರಿದ್ದಾರೆ.

ಕೋಣನಕುಂಟೆ ಕ್ರಾಸ್​ನಿಂದ ಆರ್​​ವಿ ರೋಡ್​ಗೆ 20 ರುಪಾಯಿ ಇತ್ತು, ದರ ಏರಿಕೆ ಆದ ಮೇಲೆ 40 ರುಪಾಯಿ ಆಗಿದೆ. ದರ ಪರಿಷ್ಕರಣೆ ಆದ ಮೇಲೂ 40 ರುಪಾಯಿಯೇ ಇದೆ ಎಂದು ಹಿರಿಯ ನಾಗರಿಕರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೆಟ್ರೋ ಹಳೆಯ ದರ, ದರ ಏರಿಕೆಯ ನಂತರದ ಮತ್ತು ಮರು ಪರಿಷ್ಕರಣೆ ನಂತರದ ವಿವರ

  • ಟಿಕೆಟ್ ದರ ಏರಿಕೆಯ ಹಿಂದೆ ಸ್ಯಾಂಡಲ್ ಸೋಪ್ ಫ್ಯಾಕ್ಟರಿ ಯಿಂದ ಜಯನಗರ 33 ರುಪಾಯಿ ಇತ್ತು. ದರ ಏರಿಕೆಯ ನಂತರ 60 ರುಪಾಯಿ ಆಗಿದೆ. ಯಾವುದೇ ದರ ಪರಿಷ್ಕರಣೆ ಆಗಿಲ್ಲ (ಏರಿಕೆ 27 ರುಪಾಯಿ).
  • ವಾಜರಹಳ್ಳಿ ಯಿಂದ ನ್ಯಾಷನಲ್ ಕಾಲೇಜಿಗೆ ದರ ಏರಿಕೆಯ ಹಿಂದೆ 28.5 ರುಪಾಯಿ ಇತ್ತು, ದರ ಏರಿಕೆ ಆದ ಮೇಲೆ 50 ರುಪಾಯಿ ಆಗಿದೆ. ಆದರೆ ಇಲ್ಲಿ ಯಾವುದೇ ದರ ಪರಿಷ್ಕರಣೆ ಆಗಿಲ್ಲ (22 ರುಪಾಯಿ ಏರಿಕೆ).
  • ಮೈಸೂರು ರೋಡ್​ನಿಂದ ಕೆಂಪೇಗೌಡ ಮೆಟ್ರೋ ಸ್ಟೇಷನ್​ಗೆ ಹಿಂದೆ 23 ರುಪಾಯಿ ಇತ್ತು, ಏರಿಕೆಯ ಆದ ಮೇಲೆ 40 ರುಪಾಯಿ ಆಗಿದ್ದು, ಯಾವುದೇ ಪರಿಷ್ಕರಣೆ ಆಗಿಲ್ಲ (17 ರುಪಾಯಿ ಏರಿಕೆ ಆಗಿದೆ).
  • ಆರ್ ವಿ ರೋಡ್​ನಿಂದ ವಿಧಾನಸೌಧ ದರ ಏರಿಕೆಗೆ ಮೊದಲು 28.50 ರುಪಾಯಿ ಇತ್ತು, ದರ ಏರಿಕೆ ಆದ ಮೇಲೆ 47.50 ರುಪಾಯಿ ಆಗಿದೆ. ಇಲ್ಲಿ ಯಾವುದೇ ಪರಿಷ್ಕರಣೆ ಆಗಿಲ್ಲ (19 ರುಪಾಯಿ ಏರಿಕೆ ಆಗಿದೆ).
  • ದರ ಏರಿಕೆಯ ಮೊದಲು ಯಶವಂತಪುರ ದಿಂದ ಯಲಚೇನಹಳ್ಳಿಗೆ 42.75 ರುಪಾಯಿ ಇತ್ತು, ದರ ಏರಿಕೆ ಆದ ಮೇಲೆ 70 ರುಪಾಯಿ ಆಗಿದೆ. ಇಲ್ಲಿ ಯಾವುದೇ ದರ ಪರಿಷ್ಕರಣೆ ಆಗಿಲ್ಲ (28 ರುಪಾಯಿ ಆಗಿದೆ).
  • ದರ ಏರಿಕೆಯ ಮೊದಲು ಸಂಪಿಗೆ ಮೆಟ್ರೋ ಸ್ಟೇಷನ್​ನಿಂದ ನಾಗಸಂದ್ರಕ್ಕೆ 33.25 ರುಪಾಯಿ ಇತ್ತು, ದರ ಏರಿಕೆಯ ಆದ ಮೇಲೆ 60 ರುಪಾಯಿ ಆಗಿದೆ. ಇಲ್ಲಿ ಯಾವುದೇ ದರ ಪರಿಷ್ಕರಣೆ ಆಗಿಲ್ಲ (27 ರುಪಾಯಿ ಏರಿಕೆ ಆಗಿದೆ).
  • ದರ ಏರಿಕೆಯ ಮೊದಲು ಕೆಂಪೇಗೌಡ ಮೆಟ್ರೋ ಸ್ಟೇಷನ್ ನಿಂದ ಮಾದಾವರ ಮೆಟ್ರೋ ಸ್ಟೇಷನ್ ಗೆ 40 ರುಪಾಯಿ ಇತ್ತು, ದರ ಏರಿಕೆಯ ನಂತರ 70 ರುಪಾಯಿ ಆಗಿದೆ. ಇಲ್ಲಿ ಯಾವುದೇ ದರ ಪರಿಷ್ಕರಣೆ ಆಗಿಲ್ಲ (30 ರುಪಾಯಿ ಏರಿಕೆ ಆಗಿದೆ).
  • ದರ ಏರಿಕೆಯ ಮೊದಲು ಕೋಣನಕುಂಟೆ ಕ್ರಾಸ್​ನಿಂದ ನ್ಯಾಷನಲ್ ಕಾಲೇಜಿಗೆ 20 ರುಪಾಯಿ ಇತ್ತು, ದರ ಏರಿಕೆಯ ನಂತರ 40 ಆಗಿದೆ. ಇಲ್ಲೂ ಯಾವುದೇ ದರ ಪರಿಷ್ಕರಣೆ ಆಗಿಲ್ಲ (20 ರುಪಾಯಿ ಏರಿಕೆ ಆಗಿದೆ).
  • ದರ ಏರಿಕೆಯ ಹಿಂದೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೆಟ್ರೋ ಸ್ಟೇಷನ್​​ನಿಂದ ಕೆಂಗೇರಿ ಬಸ್ ಸ್ಟ್ಯಾಂಡ್​ಗೆ 35 ರುಪಾಯಿ ಇತ್ತು, ದರ ಏರಿಕೆಯ ನಂತರ 60 ರುಪಾಯಿ ಆಗಿದ್ದು, ಇಲ್ಲಿ ಯಾವುದೇ ದರ ಪರಿಷ್ಕರಣೆ ಮಾಡಿಲ್ಲ (25 ರುಪಾಯಿ ದರ ಏರಿಕೆ ಆಗಿದೆ).

ಶೇ 90 ರಿಂದ 100 ರಷ್ಟು ಹೆಚ್ಚಳವಾಗಿದ್ದ ದರವನ್ನು ಕೇವಲ ಶೇ 10 ರಷ್ಟು ಕಡಿಮೆ ಮಾಡಿ ಬಿಎಂಆರ್​ಸಿಎಲ್ ಕೈ ತೊಳೆದುಕೊಂಡಿದೆ. ಸಿಎಂ ಮಾತಿಗೂ ಪ್ರಯಾಣಿಕರ ಒತ್ತಡಕ್ಕೂ ಮಣಿದಿಲ್ಲ.‌ ನಮ್ಮ ಮೆಟ್ರೋ ಟಿಕೆಟ್ ದರ ಹೆಚ್ಚಳ ಮಾಡಿ ಇಂದಿಗೆ ಒಂದು ವಾರ ಆಯಿತು. ಸಾಕಷ್ಟು ಸ್ಟೇಷನ್ ಗಳಲ್ಲಿ ಶೇ 90 ರಿಂದ 100 ರ ದರ ಏರಿಕೆಯನ್ನೇ ಉಳಿಸಿಕೊಳ್ಳಲಾಗಿದೆ. ಇದಕ್ಕೆ ಪ್ರಯಾಣಿಕರಿಂದ ಆಕ್ರೋಶ ವ್ಯಕ್ತವಾಗಿದೆ.

ಇದನ್ನೂ ಓದಿ: ನಮ್ಮ ಮೆಟ್ರೋ ಟಿಕೆಟ್ ದರ ಶೇ 30 ರ ವರೆಗೆ ಇಳಿಕೆ: ಆದರೆ ಎಲ್ಲೆಡೆಯೂ ಅಲ್ಲ!

ಒಟ್ಟಿನಲ್ಲಿ ದರ ಕಡಿಮೆ ಮಾಡುತ್ತೇವೆಂದು ಮಾತು ನೀಡಿದ ಬಿಎಂಆರ್​ಸಿಎಲ್ ಅಲ್ಲೊಂದು ಇಲ್ಲೊಂದು ಸ್ಟೇಷನ್​ಗಳಿಗೆ ಮಾತ್ರ ಶೇ 10 ರಷ್ಟು ದರ ಕಡಿಮೆ ಮಾಡಿ, ದುಪ್ಪಟ್ಟು ದರ ಹೆಚ್ಚಾದ ಎಲ್ಲೆಡೆಯೂ ಕಡಿಮೆ ಮಾಡುತ್ತೇವೆ ಎಂದು ಹುಸಿ ಭರವಸೆ ನೀಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ದಿ ರೈಸ್ ಆಫ್ ಅಶೋಕ: ಇಂಗ್ಲಿಷ್ ಟೈಟಲ್ ಇಟ್ಟಿದ್ದಕ್ಕೆ ಕಾರಣ ತಿಳಿಸಿದ ಸತೀಶ್
ದಿ ರೈಸ್ ಆಫ್ ಅಶೋಕ: ಇಂಗ್ಲಿಷ್ ಟೈಟಲ್ ಇಟ್ಟಿದ್ದಕ್ಕೆ ಕಾರಣ ತಿಳಿಸಿದ ಸತೀಶ್
ರಾಜಸ್ಥಾನದ ಬಲೋತ್ರಾದಲ್ಲಿ ಬಸ್ ಅಪಘಾತದಲ್ಲಿ 6 ಜನ ಸಾವು, ಹಲವರಿಗೆ ಗಾಯ
ರಾಜಸ್ಥಾನದ ಬಲೋತ್ರಾದಲ್ಲಿ ಬಸ್ ಅಪಘಾತದಲ್ಲಿ 6 ಜನ ಸಾವು, ಹಲವರಿಗೆ ಗಾಯ
ಕರ್ನಾಟಕ ವಿರುದ್ಧ 5 ವಿಕೆಟ್ ಉರುಳಿಸಿದ ಆಕಿಬ್ ನಬಿ
ಕರ್ನಾಟಕ ವಿರುದ್ಧ 5 ವಿಕೆಟ್ ಉರುಳಿಸಿದ ಆಕಿಬ್ ನಬಿ
ಬಾಗಲಕೋಟೆ ಬೆನ್ನಲ್ಲೇ ಮಡಿಕೇರಿ ಹಿಂದೂ ಸಂಗಮದಲ್ಲಿ ಗಲಾಟೆ: ವಿಡಿಯೋ ನೋಡಿ
ಬಾಗಲಕೋಟೆ ಬೆನ್ನಲ್ಲೇ ಮಡಿಕೇರಿ ಹಿಂದೂ ಸಂಗಮದಲ್ಲಿ ಗಲಾಟೆ: ವಿಡಿಯೋ ನೋಡಿ
ವಿರೋಶ್ ಮದುವೆ: ರಾಯಲ್ ಉಡುಗೆಯ ಹಿಂದಿನ ಅಚ್ಚರಿಯ ವಿಷಯ ಕೇಳಿ..
ವಿರೋಶ್ ಮದುವೆ: ರಾಯಲ್ ಉಡುಗೆಯ ಹಿಂದಿನ ಅಚ್ಚರಿಯ ವಿಷಯ ಕೇಳಿ..
ಏರ್ ಇಂಡಿಯಾ ಅವಾಂತರ: 2 ದಿನಗಳಿಂದ ಪ್ಲೈಟ್ ನಲ್ಲೇ ಉಳಿದ ಕನ್ನಡಿಗರು!
ಏರ್ ಇಂಡಿಯಾ ಅವಾಂತರ: 2 ದಿನಗಳಿಂದ ಪ್ಲೈಟ್ ನಲ್ಲೇ ಉಳಿದ ಕನ್ನಡಿಗರು!
ಕರ್ನಾಟಕ ಕಾಂಗ್ರೆಸ್​​ನಲ್ಲಿ ನಾಯಕತ್ವ ಬದಲಾವಣೆ? ರಾಬರ್ಟ್ ವಾದ್ರಾ ಏನಂದ್ರು?
ಕರ್ನಾಟಕ ಕಾಂಗ್ರೆಸ್​​ನಲ್ಲಿ ನಾಯಕತ್ವ ಬದಲಾವಣೆ? ರಾಬರ್ಟ್ ವಾದ್ರಾ ಏನಂದ್ರು?
ಚೌಟ್ರಿವರೆಗೂ ಬಂದು ಮದುವೆ ಬೇಡ ಎಂದ ವಧು!
ಚೌಟ್ರಿವರೆಗೂ ಬಂದು ಮದುವೆ ಬೇಡ ಎಂದ ವಧು!
ಪೆಟ್ರೋಲ್​​ಗೆ ಎಥನಾಲ್ ಮಿಕ್ಸ್: ಯಾರಿಗೆ ಲಾಭ? ಪೆಟ್ರೋಲ್ ಬೆಲೆ ಇಳಿಯುತ್ತಾ?
ಪೆಟ್ರೋಲ್​​ಗೆ ಎಥನಾಲ್ ಮಿಕ್ಸ್: ಯಾರಿಗೆ ಲಾಭ? ಪೆಟ್ರೋಲ್ ಬೆಲೆ ಇಳಿಯುತ್ತಾ?
ಅಪಘಾತಕ್ಕೀಡಾಗಿ ರಸ್ತೆಯಲ್ಲಿ ಬಿದ್ದಿದ್ದ ಯುವಕನಿಗೆ ಕೇಂದ್ರ ಸಚಿವ ಸಹಾಯ
ಅಪಘಾತಕ್ಕೀಡಾಗಿ ರಸ್ತೆಯಲ್ಲಿ ಬಿದ್ದಿದ್ದ ಯುವಕನಿಗೆ ಕೇಂದ್ರ ಸಚಿವ ಸಹಾಯ