BMRCL Namma Metro
ನಮ್ಮ ಮೆಟ್ರೋ ಎಂದು ಕರೆಯಲ್ಪಡುವ ಬೆಂಗಳೂರಿನ ಮೆಟ್ರೋ ರೈಲು ಸೇವೆಯನ್ನು ಸರ್ಕಾರಿ ಸ್ವಾಮ್ಯದ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ನಿರ್ವಹಣೆ ಮಾಡುತ್ತಿದೆ. 2011ರಲ್ಲಿ ಬೆಂಗಳೂರಿನಲ್ಲಿ ಮೆಟ್ರೋ ರೈಲು ಸೇವೆ ಮೊದಲಿಗೆ ಆರಂಭವಾಯಿತು. ಬಿಎಂಆರ್ಸಿಎಲ್ ಬೆಂಗಳೂರಿನಲ್ಲಿ ಮೆಟ್ರೋ ರೈಲು ವ್ಯವಸ್ಥೆಯ ಯೋಜನೆ, ನಿರ್ಮಾಣ ಮತ್ತು ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ಮಾಡುತ್ತಿದೆ. ನಮ್ಮ ಮೆಟ್ರೋ ಬಹು ಮಾರ್ಗಗಳನ್ನು ಒಳಗೊಂಡಿದೆ. ಇವುಗಳಲ್ಲಿ ಪರ್ಪಲ್ ಲೈನ್ ಮತ್ತು ಗ್ರೀನ್ ಲೈನ್ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಪ್ರಮುಖ ಮಾರ್ಗಗಳಾಗಿವೆ. ನಗರದ ವಿವಿಧ ಭಾಗಗಳಿಗೆ ಸುಧಾರಿತ ಸಂಪರ್ಕವನ್ನು ಒದಗಿಸುವ ಮೂಲಕ ಹೆಚ್ಚಿನ ಪ್ರದೇಶಗಳನ್ನು ಒಳಗೊಳ್ಳಲು ಮೆಟ್ರೋ ಜಾಲವು ನಿರಂತರವಾಗಿ ವಿಸ್ತರಿಸುತ್ತಿದೆ. ಬಿಎಂಆರ್ಸಿಎಲ್ ಬೆಂಗಳೂರಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಆಧುನೀಕರಿಸುವ ಮೂಲಕ ಮೆಟ್ರೋ ಸೇವೆಗಳನ್ನು ಬಸ್ ಮತ್ತು ಇತರ ರೀತಿಯ ಸಾರಿಗೆಯೊಂದಿಗೆ ಸಂಯೋಜಿಸಿದೆ. ಈ ಮೂಲಕ ತಡೆರಹಿತ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ
ಇನ್ನೂ ಹೆಚ್ಚು ಓದಿಆತ್ಮಹತ್ಯೆ ಸ್ಪಾಟ್ ಆಗುತ್ತಿದೆಯಾ ಮೆಟ್ರೋ? ಈವರೆಗೆ ಪ್ರಾಣ ಕಳೆದುಕೊಂಡವರೆಷ್ಟು?
ಇತ್ತೀಚೆಗೆ ಓರ್ವ ವ್ಯಕ್ತಿ ನಮ್ಮ ಮೆಟ್ರೋ ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬೆನ್ನಲ್ಲೇ ನಮ್ಮ ಮೆಟ್ರೋ ಇತ್ತೀಚೆಗೆ ಆತ್ಮಹತ್ಯೆ ಯತ್ನ ಹಾಗೂ ಅನಧಿಕೃತ ಚಟುವಟಿಕೆಗಳ ಹಾಟ್ಸ್ಪಾಟ್ ಆಗಿ ಬದಲಾಗುತ್ತಿದೆಯೇ ಎಂಬ ಆತಂಕ ಸಾರ್ವಜನಿಕರಲ್ಲಿ ಮೂಡಿದೆ. ಆತ್ಮಹತ್ಯೆ ಮಾಡಿಕೊಳ್ಳುವುದು ಹಾಗೂ ಪ್ರಯಾಣಿಕರಿಗೆ ಕಿರಿಕಿರಿ ಉಂಟುಮಾಡುವ ಘಟನೆಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿವೆ.
- Kiran Surya
- Updated on: Jul 29, 2026
- 9:57 pm
ಮೆಟ್ರೋಗೆ ಮೂರು ವರ್ಷದಲ್ಲಿ ₹1,614 ಕೋಟಿ ನಷ್ಟ: ಮತ್ತೆ ಟಿಕೆಟ್ ದರ ಏರಿಕೆಗೆ ಬಿಎಂಆರ್ಸಿಎಲ್ ಕಸರತ್ತು
ಕಳೆದ ಮೂರು ವರ್ಷಗಳಲ್ಲಿ ಬಿಎಂಆರ್ಸಿಎಲ್ಗೆ 1,614 ಕೋಟಿ ರೂ. ನಷ್ಟವಾಗಿದೆ ಎಂದು ತಿಳಿಸಿರುವ ನಿಗಮ, ಪ್ರತಿ ಮೂರು ವರ್ಷಕ್ಕೊಮ್ಮೆ ಶೇ 12 ರಷ್ಟು ಮೆಟ್ರೋ ಟಿಕೆಟ್ ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಅಂತಿಮ ನಿರ್ಧಾರಕ್ಕೆ ಸರ್ಕಾರಗಳ ಒಪ್ಪಿಗೆ ಅಗತ್ಯವಾಗಿದೆ. ಒಂದು ವೇಳೆ ಟಿಕೆಟ್ ದರ ಏರಿಕೆಯಾದರೆ, ಪ್ರಯಾಣಿಕರಿಗೆ ಮತ್ತೊಂದು ಹೊರೆಯಾಗಲಿದೆ.
- Kiran Surya
- Updated on: Jul 29, 2026
- 6:54 am
ಮೆಟ್ರೋ ರೈಲ್ವೆ ಹಳಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ: ಹಳದಿ ಮಾರ್ಗದಲ್ಲಿ ಮೆಟ್ರೋ ಸಂಚಾರ ಸ್ಥಗಿತ
Bangaluru Metro News: ಬೆಂಗಳೂರು ನಮ್ಮ ಮೆಟ್ರೋದ ಹಳದಿ ಮಾರ್ಗದಲ್ಲಿ ದುರಂತವೊಂದು ಸಂಭವಿಸಿದೆ. 35 ವರ್ಷದ ವ್ಯಕ್ತಿ ರೈಲು ಹಳಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ರೈಲಿನ ಕೆಳಗೆ ಸಿಲುಕಿದ್ದರಿಂದ ಮೃತಪಟ್ಟಿದ್ದಾರೆ. ಘಟನೆ ಹಿನ್ನೆಲೆ ಎಲೆಕ್ಟ್ರಾನಿಕ್ ಸಿಟಿ ಟು ಬೊಮ್ಮಸಂದ್ರ ಮಾರ್ಗದಲ್ಲಿ ಮೆಟ್ರೋ ಸಂಚಾರ ಸ್ಥಗಿತಗೊಂಡಿದೆ.
- Kiran Surya
- Updated on: Jul 27, 2026
- 8:55 pm
ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆ ಮತ್ತೆ ಮುನ್ನೆಲೆಗೆ: 3 ವರ್ಷಕ್ಕೊಮ್ಮೆ ದರ ಏರಿಕೆಗೆ ಪ್ಲ್ಯಾನ್!
Namma Metro Fare Hike: ಈ ವರ್ಷ ಫೆಬ್ರವರಿಯಲ್ಲಿ 5% ರಷ್ಟು ಟಿಕೆಟ್ ದರ ಏರಿಕೆ ಮಾಡಲು ಬಿಎಂಆರ್ಸಿಎಲ್ ಮುಂದಾಗಿತ್ತು. ಆದರೆ ಪ್ರಯಾಣಿಕರಿಂದ ಆಕ್ರೋಶ ಬೆನ್ನಲ್ಲೇ ತಡೆಹಿಡಿಯಲಾಗಿತ್ತು. ಇದೀಗ ಮತ್ತೆ ಟಿಕೆಟ್ ದರ ಏರಿಕೆ ಮಾಡಲು ನಮ್ಮ ಮೆಟ್ರೋ ಸಿದ್ಧತೆ ನಡೆಸಿದೆ. ಆದರೆ ಇದಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
- Kiran Surya
- Updated on: Jul 23, 2026
- 9:55 pm
ಆ 15ಕ್ಕೆ ಪಿಂಕ್ ಲೈನ್ ಮೆಟ್ರೋ ಮಾರ್ಗ ಓಪನ್ ಆಗೋದು ಡೌಟ್! ಇಲ್ಲಿದೆ ಅಸಲಿ ಕಾರಣ
Pink Line Metro Delayed: ಪಿಂಕ್ ಲೈನ್ ಮೆಟ್ರೋ ಪ್ರಯಾಣಿಕರ ಬಹುನಿರೀಕ್ಷಿತ ಮಾರ್ಗಗಳಲ್ಲಿ ಒಂದು. ಸದ್ಯ ಆರ್ಡಿಎಸ್ಓ ಸಂಸ್ಥೆಯಿಂದ ಅಂತಿಮ ಅನುಮತಿ ದೊರೆಯದ ಕಾರಣ ಆಗಸ್ಟ್ 15ಕ್ಕೆ ಮಾರ್ಗ ಓಪನ್ ಆಗುವುದು ಡೌಟು ಎನ್ನಲಾಗುತ್ತಿದೆ. ಹಾಗಾಗಿ ಮತ್ತೊಮ್ಮೆ ಪ್ರಯಾಣಿಕರಿಗೆ ಮೆಟ್ರೋ ನಿರಾಸೆ ಮೂಡಿಸಿದೆ.
- Kiran Surya
- Updated on: Jul 22, 2026
- 10:48 pm
ಮತ್ತಿಕೆರೆಯಲ್ಲಿ ನಿರ್ಮಾಣವಾಗಲಿದೆ 199 ಕೋಟಿ ರೂ. ವೆಚ್ಚದ ಬೃಹತ್ ‘ಡಬಲ್ ಡೆಕ್ಕರ್’ ಫ್ಲೈ ಓವರ್!
ಬೆಂಗಳೂರಿನ ಸಬ್ ಅರ್ಬನ್ ರೈಲ್ವೆ ಯೋಜನೆಯಡಿ ಮತ್ತಿಕೆರೆಯಲ್ಲಿ 199 ಕೋಟಿ ರೂ. ವೆಚ್ಚದಲ್ಲಿ 1.2 ಕಿ.ಮೀ ಉದ್ದದ ಬೃಹತ್ 'ಡಬಲ್ ಡೆಕ್ಕರ್' ಫ್ಲೈ ಓವರ್ ನಿರ್ಮಾಣಕ್ಕೆ ಕೆ-ರೈಡ್ ನಿರ್ಧರಿಸಿದೆ. ನಮ್ಮ ಮೆಟ್ರೋ ಮಾದರಿಯಲ್ಲೇ ಕೆಳಗೆ ರಸ್ತೆ, ಮಧ್ಯೆ ಮೇಲ್ಸೇತುವೆ ಹಾಗೂ ಮೇಲ್ಭಾಗದಲ್ಲಿ ರೈಲು ಸಂಚರಿಸಲಿದ್ದು, ಯಶವಂತಪುರ-ಮತ್ತಿಕೆರೆ ಭಾಗದ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಸಿಗಲಿದೆ.
- Kiran Surya
- Updated on: Jul 22, 2026
- 7:34 am
ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ವಿದ್ಯುತ್ ತಾಂತ್ರಿಕ ದೋಷ: ಯಶವಂತಪುರ – ಮಾದಾವರ ನಡುವೆ ರೈಲು ಸಂಚಾರ ವ್ಯತ್ಯಯ!
ಬೆಂಗಳೂರಿನ ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ಬೆಳಿಗ್ಗೆ ವಿದ್ಯುತ್ ಪೂರೈಕೆಯಲ್ಲಿ ತಾಂತ್ರಿಕ ದೋಷ ಉಂಟಾದ ಹಿನ್ನೆಲೆಯಲ್ಲಿ ಸಂಚಾರದಲ್ಲಿ ಭಾರಿ ವ್ಯತ್ಯಯವಾಗಿದೆ. ಸಿಲ್ಕ್ ಇನ್ಸ್ಟಿಟ್ಯೂಟ್ನಿಂದ ಯಶವಂತಪುರದವರೆಗೆ ಮಾತ್ರ ಶಾರ್ಟ್-ಲೂಪ್ನಲ್ಲಿ ರೈಲುಗಳು ಸಂಚರಿಸುತ್ತಿದ್ದು, ಯಶವಂತಪುರದಿಂದ ಮಾದಾವರ ನಡುವಿನ 10 ನಿಲ್ದಾಣಗಳಲ್ಲಿ ಸೇವೆ ಸ್ಥಗಿತಗೊಂಡಿದೆ. ಸಮಸ್ಯೆ ಸರಿಪಡಿಸಲು ತಾಂತ್ರಿಕ ತಂಡ ಕಾರ್ಯನಿರತವಾಗಿದ್ದು, ಬಿಎಂಆರ್ಸಿಎಲ್ ಪ್ರಯಾಣಿಕರ ಅನಾನುಕೂಲತೆಗೆ ವಿಷಾದಿಸಿದೆ.
- Kiran Surya
- Updated on: Jul 21, 2026
- 9:09 am
Namma Metro: ಬನ್ನೇರುಘಟ್ಟ ಪಿಂಕ್ ಲೈನ್ ಸಂಚಾರ ಆಗಸ್ಟ್ 15ಕ್ಕೂ ಅನುಮಾನ!
ಬೆಂಗಳೂರಿನ ನಮ್ಮ ಮೆಟ್ರೋ ಪಿಂಕ್ ಲೈನ್ನ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ ಮಾರ್ಗವನ್ನು ಆಗಸ್ಟ್ 15ರ ವೇಳೆಗೆ ಆರಂಭಿಸಲು BMRCL ಯೋಜಿಸಿತ್ತು. ಆದರೆ ಸಿಗ್ನಲಿಂಗ್ ಪರೀಕ್ಷೆ, ರೈಲು ಸೆಟ್ಗಳ ಕೊರತೆ ಹಾಗೂ ಕಾರ್ಮಿಕರ ಅಭಾವದಿಂದ ಕಾಮಗಾರಿ ವಿಳಂಬವಾಗಿದೆ. ಹೀಗಾಗಿ ಬನ್ನೇರುಘಟ್ಟ ರಸ್ತೆಯ ಈ ಮೆಟ್ರೋ ಸಂಚಾರ 2026ರ ಕೊನೆಯ ಹಂತಕ್ಕೆ ಮುಂದೂಡಲ್ಪಡುವ ಸಾಧ್ಯತೆಯಿದ್ದು, ನಿತ್ಯ ಪ್ರಯಾಣಿಕರಿಗೆ ಕಾಯುವಿಕೆ ತಪ್ಪಿದ್ದಲ್ಲ.
- Bhavana Hegde
- Updated on: Jul 21, 2026
- 9:06 am
ನಮ್ಮ ಮೆಟ್ರೋದಲ್ಲಿ ಹುಚ್ಚಾಟಕ್ಕೆ ಬೀಳಲಿದೆ ಬ್ರೇಕ್: ದಂಡದ ಮೊತ್ತ 25,000 ರೂ.ವರೆಗೆ ಏರಿಕೆ
ಬೆಂಗಳೂರು ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್ಸಿಎಲ್ ಹೊಸ ನಿಯಮಾವಳಿ ಮತ್ತು ಪರಿಷ್ಕೃತ ದಂಡವನ್ನು ಜಾರಿಗೊಳಿಸಿದೆ. ಮೆಟ್ರೋ ನಿಲ್ದಾಣ ಹಾಗೂ ರೈಲಿನಲ್ಲಿ ಹುಚ್ಚಾಟ, ರೀಲ್ಸ್ ಮಾಡುವುದು, ಜೋರು ಸಂಗೀತ, ಹಳಿಗಳ ಮೇಲೆ ಅನಧಿಕೃತ ಪ್ರವೇಶ, ಟಿಕೆಟ್ ದುರ್ಬಳಕೆ, ಅಸಭ್ಯ ವರ್ತನೆ ಹಾಗೂ ನಿಷಿದ್ಧ ವಸ್ತುಗಳ ಸಾಗಾಟಕ್ಕೆ ಭಾರಿ ದಂಡ ವಿಧಿಸಲಾಗುವುದು. ಸಾರ್ವಜನಿಕರ ಸುರಕ್ಷತೆ ಕಾಪಾಡುವುದು ಇದರ ಉದ್ದೇಶ. ಪ್ರತಿ ಮೂರು ವರ್ಷಗಳಿಗೊಮ್ಮೆ ದಂಡದ ಮೊತ್ತವು ಶೇ.10ರಷ್ಟು ಹೆಚ್ಚಲಿದೆ.
- Akshay Pallamajalu
- Updated on: Jul 18, 2026
- 7:46 am
ನಮ್ಮ ಮೆಟ್ರೋ ಪ್ರಯಾಣಿಕರ ಸುರಕ್ಷತೆಗೆ ಬಿಎಂಆರ್ಸಿಎಲ್ ಮಹತ್ವದ ಹೆಜ್ಜೆ: ಇನ್ನು ಮುಂದೆ 191 ಸ್ಟೇಷನ್ಗಳಲ್ಲೂ ಬರಲಿದೆ ‘ಪಿಎಸ್ಡಿ’ ಡೋರ್!
ಬೆಂಗಳೂರಿನ ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆ ಯತ್ನ ಪ್ರಕರಣಗಳಿಗೆ ಬ್ರೇಕ್ ಹಾಕಲು ಬಿಎಂಆರ್ಸಿಎಲ್ ಮಹತ್ವದ ಮಾಸ್ಟರ್ ಪ್ಲಾನ್ ಮಾಡಿದೆ. ಪ್ರಯಾಣಿಕರ ಸುರಕ್ಷತೆಗಾಗಿ ಒಟ್ಟು 191 ಮೆಟ್ರೋ ಸ್ಟೇಷನ್ಗಳಲ್ಲಿ 1,273.83 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಪಿಎಸ್ಡಿ (Platform Screen Door) ಅಳವಡಿಸಲು ಸಿದ್ಧತೆ ನಡೆಸಲಾಗಿದೆ. ರಾಜ್ಯ ಸರ್ಕಾರದ ಒಪ್ಪಿಗೆ ಸಿಕ್ಕಿದ್ದು, ಕೇಂದ್ರದ ಗ್ರೀನ್ ಸಿಗ್ನಲ್ ಬೆನ್ನಲ್ಲೇ ಕಾಮಗಾರಿ ಆರಂಭವಾಗಲಿದೆ.
- Kiran Surya
- Updated on: Jul 17, 2026
- 12:36 pm
ಇಂದಿರಾನಗರ ಮೆಟ್ರೋ ನಿಲ್ದಾಣದ ಬಳಿ ಅನುಮಾನಾಸ್ಪದ ಘಟನೆ: ಸ್ಪ್ರೇ ಮಾಡಿ ಓಡಿಹೋದ ಅನಾಮಿಕ
Indiranagar Metro spray incident: ಬೆಂಗಳೂರಿನ ಇಂದಿರಾನಗರ ಮೆಟ್ರೋ ನಿಲ್ದಾಣದ ಹೊರಗೆ ಇಂದು ಅನಾಮಿಕ ವ್ಯಕ್ತಿಯೊಬ್ಬ ಸ್ಪ್ರೇ ಮಾಡಿ ಓಡಿಹೋದ ಘಟನೆ ಆತಂಕ ಮೂಡಿಸಿದೆ. ಸ್ಪ್ರೇ ಮಾಡಿದ ಪರಿಣಾಮ, ಪ್ರಯಾಣಿಕರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸದ್ಯ BMRCL ಭದ್ರತಾ ಸಿಬ್ಬಂದಿ ಅನಾಮಿಕ ವ್ಯಕ್ತಿಯ ಹುಡುಕಾಟ ನಡೆಸಿದ್ದಾರೆ.
- Kiran Surya
- Updated on: Jul 16, 2026
- 9:49 pm
ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಬಂತು ಮತ್ತೊಂದು ಹೊಸ ಟ್ರೇನ್: ಹೆಬ್ಬಗೋಡಿ ಡಿಪೋ ತಲುಪಿದ 14ನೇ ಡ್ರೈವರ್ ಲೆಸ್ ರೈಲು
Namma Metro Yellow Line: ನಮ್ಮ ಮೆಟ್ರೋದ ಹಳದಿ ಮಾರ್ಗಕ್ಕೆ 14ನೇ ಚಾಲಕರಹಿತ (ಡ್ರೈವರ್ಲೆಸ್) ರೈಲು ಬೆಂಗಳೂರಿನ ಹೆಬ್ಬಗೋಡಿ ಡಿಪೋ ತಲುಪಿದೆ. ಸದ್ಯ ಹಳದಿ ಮಾರ್ಗದಲ್ಲಿ 10 ಮೆಟ್ರೋ ರೈಲುಗಳು ಸಂಚಾರ ಮಾಡುತ್ತಿದ್ದು, ಒಟ್ಟು 15 ಡ್ರೈವರ್ ಲೆಸ್ ರೈಲುಗಳನ್ನು ಆರ್ಡರ್ ನೀಡಲಾಗಿದೆ. 11 ಮತ್ತು 12ನೇ ಮೆಟ್ರೋ ರೈಲು ವಾಣಿಜ್ಯ ಸಂಚಾರ ಶುರು ಮಾಡಿದ ಬಳಿಕ, ಪ್ರಯಾಣಿಕರ ಕಾಯುವಿಕೆ ಅವಧಿ ಮತ್ತು ದಟ್ಟಣೆ ಮತ್ತಷ್ಟು ಕಡಿತವಾಗುವ ಸಾಧ್ಯತೆ ಇದೆ.
- Kiran Surya
- Updated on: Jul 16, 2026
- 4:14 pm