Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿವಿ9 ಧ್ಯೇಯವಾಕ್ಯ ‘ಉತ್ತಮ ಸಮಾಜಕ್ಕಾಗಿ’ ಎಂಬುದನ್ನು ಅಕ್ಷರಶಃ ಪಾಲಿಸಿಕೊಂಡು ಬಂದಿದ್ದೇವೆ- ಸಿಇಒ ಬರುಣ್​ ದಾಸ್

ಟಿವಿ9 ಕರ್ನಾಟಕದ ಬಗ್ಗೆ ಕನ್ನಡಿಗರ ಪ್ರೀತಿ ಮತ್ತು ಗೌರವ ಏನು ಎಂಬುದನ್ನು ನಾನು ಬಲ್ಲೆನು. ಒಂದು ಸಂಸ್ಥೆಯಾಗಿ ಅದನ್ನು ನಾವು ಚೆನ್ನಾಗಿ ಬಲ್ಲೆವು. ಈ ಜವಾಬ್ದಾರಿಯನ್ನು ಪೂರೈಸಲು ನಾವು ಪ್ರತಿ ದಿನ ಏಳುವಾಗ ಅಪಾರ ಜವಾಬ್ದಾರಿಯನ್ನು ಮನಗಂಡು ಮುಂದಿನ ಹೆಜ್ಜೆ ಹಾಕುತ್ತೇವೆ - ಟಿವಿ9 ನೆಟ್​ವರ್ಕ್​​ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬರುಣ್​​​ ದಾಸ್​

ಟಿವಿ9 ಧ್ಯೇಯವಾಕ್ಯ ‘ಉತ್ತಮ ಸಮಾಜಕ್ಕಾಗಿ’ ಎಂಬುದನ್ನು ಅಕ್ಷರಶಃ ಪಾಲಿಸಿಕೊಂಡು ಬಂದಿದ್ದೇವೆ- ಸಿಇಒ ಬರುಣ್​ ದಾಸ್
ಟಿವಿ9 ಧ್ಯೇಯವಾಕ್ಯ ‘ಉತ್ತಮ ಸಮಾಜಕ್ಕಾಗಿ’ ಎಂಬುದನ್ನು ಅಕ್ಷರಶಃ ಪಾಲಿಸಿಕೊಂಡು ಬಂದಿದ್ದೇವೆ- ಸಿಇಒ ಬರುನ್​ ದಾಸ್
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jan 05, 2022 | 6:48 AM

ಬೆಂಗಳೂರು: ಟಿವಿ9 ಕರ್ನಾಟಕ ನವನಕ್ಷತ್ರ ಸನ್ಮಾನ 2021 ಕಾರ್ಯಕ್ರಮದಲ್ಲಿ ಟಿವಿ9 ನೆಟ್​ವರ್ಕ್​​ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬರುಣ್​​ ದಾಸ್​ ಅವರು ಟಿವಿ9 ನಡೆದುಬಂದ ಹಾದಿ ಮತ್ತು ಅದರ ರೂಪುರೇಷೆ ಬಗ್ಗೆ ಮಾತನಾಡಿದರು. ಟಿವಿ9 ಕನ್ನಡ ಇದೀಗತಾನೇ ತನ್ನ 15 ವಸಂತಗಳನ್ನು ಪೂರೈಸಿದೆ. ಆದರೆ ಕರ್ನಾಟಕದ ಏಳು ಕೋಟಿ ಜನತೆಯ ಆಶೋತ್ತರಗಳನ್ನು ಪೂರೈಸುವ ನಿಟ್ಟಿನಲ್ಲಿ ನಮ್ಮ ಪಾತ್ರಗಳು ಮತ್ತು ಜವಾಬ್ದಾರಿಗಳು ಏನು ಎಂಬುದರ ಬಗ್ಗೆ ನಾವು ಇಂದಿಗೂ ಪ್ರಜ್ಞಾ ಪೂರ್ವಕವಾಗಿದ್ದೇವೆ. ಟಿವಿ9 ಕರ್ನಾಟಕದ ಬಗ್ಗೆ ಕನ್ನಡಿಗರ ಪ್ರೀತಿ ಮತ್ತು ಗೌರವ ಏನು ಎಂಬುದನ್ನು ನಾನು ಬಲ್ಲೆನು. ಒಂದು ಸಂಸ್ಥೆಯಾಗಿ ಅದನ್ನು ನಾವು ಚೆನ್ನಾಗಿ ಬಲ್ಲೆವು. ಈ ಜವಾಬ್ದಾರಿಯನ್ನು ಪೂರೈಸಲು ನಾವು ಪ್ರತಿ ದಿನ ಏಳುವಾಗ ಅಪಾರ ಜವಾಬ್ದಾರಿಯನ್ನು ಮನಗಂಡು ಮುಂದಿನ ಹೆಜ್ಜೆ ಹಾಕುತ್ತೇವೆ ಎಂದು ಹೇಳಿದರು.

1903ರಲ್ಲಿ ಮಹಾತ್ಮ ಗಾಂಧಿ ಅವರು ಒಂದು ನೈತಿಕ ಪಾಠ ಹೇಳಿಕೊಟ್ಟರು. ಅದು ಮಾಧ್ಯಮದ ನೈತಿಕತೆಯ ಬಗೆಗಿನ ಪಾಠವಾಗಿತ್ತು. ಪತ್ರಿಕೋದ್ಯಮದ ಏಕೈಕ ಧ್ಯೇಯೋದ್ದೇಶ ಸೇವೆಯಾಗಿಬೇಕು. ಅದರ ಅರ್ಥ, ಪತ್ರಿಕೋದ್ಯಮದ ಬಗೆಗಿನ ಅವರ ಕಾಳಜಿ ಏನು ಆಗಿತ್ತೆಂದರೆ ಸುದ್ದಿ ಮಾಧ್ಯಮದ ಧ್ಯೇಯೋದ್ದೇಶವು ನ್ಯೂಸ್​ ಬ್ಯುಸಿನೆಸ್​ಗಿಂತ ದೊಡ್ಡದಾಗಿರಬೇಕು; ಅದು ಸೇವೆಯಾಗಿರಬೇಕು. ಗಾಂಧೀಜಿ ಅವರ ಆಶೋತ್ತರಕ್ಕೆ ತಕ್ಕಂತೆ ಟಿವಿ9 ನೆಟ್​ವರ್ಕ್​ ಸಂಸ್ಥೆಯವರು ಪತ್ರಿಕೋದ್ಯಮವೆಂದರೆ ದೇಶ ಸೇವೆ ಎಂದು ಬಗೆದಿದ್ದೇವೆ. ಟಿವಿ9 ಕರ್ನಾಟಕದ ಧ್ಯೇಯವಾಕ್ಯದಲ್ಲಿದ್ದಂತೆ ಉತ್ತಮ ಸಮಾಜಕ್ಕಾಗಿ ಎಂಬುದನ್ನು ಅಕ್ಷರಶಃ ಪಾಲಿಸಿಕೊಂಡು ಬಂದಿದ್ದೇವೆ ಎಂದು ಸಿಇಒ ಬರುಣ್​​ ದಾಸ್ ಹೇಳಿದರು. ​

ದೇಶದಲ್ಲಿ ನಾವು 6 ಸುದ್ದಿ ಚಾನೆಲ್​ಗಳನ್ನು ಹೊಂದಿದ್ದೇವೆ. ಈ ಎಲ್ಲಾ ಚಾನೆಲ್​ಗಳು ತಮ್ಮ ತಮ್ಮ ಮಾರುಕಟ್ಟೆಯಲ್ಲಿ ಅಗ್ರಗಣ್ಯ ಸ್ಥಾನದಲ್ಲಿವೆ. ಇದರ ಜೊತೆಗೆ ಡಿಜಿಟಲ್​ ವೇದಿಕೆಗಳೂ ಇವೆ. ಅವು ಪ್ರತಿ ತಿಂಗಳು 100 ಮಿಲಿಯನ್​ ವಿಸಿಟರ್ಸ್​ ಅನ್ನು ಹೊಂದಿದೆ. ನಾನು ವ್ಯಕ್ತಿಗತವಾಗಿ ದೇಶದಾದ್ಯಂತ ಸಂಚರಿಸುತ್ತಿರುತ್ತೇನೆ. ನಾನು ನನ್ನ ಸ್ವಂತ ರಾಜ್ಯವಾದ ಪಶ್ಚಿಮ ಬಂಗಾಳದಿಂದ 35 ವರ್ಷಗಳಿಂದ ಹೊರಗುಳಿದಿದ್ದೇನೆ. ಕರ್ನಾಟಕ ಅಂದರೆ ಅದಕ್ಕೆ ನಾನು ವಿಶೇಷ ಸ್ಥಾನ ನೀಡುತ್ತೇನೆ. ಕರ್ನಾಟಕದ ಜನತೆಗೆ ಎಲ್ಲದರಲ್ಲೂ ಉತ್ಕೃಷ್ಟತೆ ಸಾಧಿಸುವುದು ಅಭ್ಯಾಸವಾಗಿಬಿಟ್ಟಿದೆ. ಅದುಬಿಟ್ಟರೆ ಅವರು ತಮ್ಮ ಪ್ರಾದೇಶಿಕತೆಯ ಹಣೆಪಟ್ಟಿಗೆ ಜೋತುಬೀಳುವುದಿಲ್ಲ. ಅವರು ದೇಶದ ಸಂಸ್ಕೃತಿ ಮತ್ತು ನೈತಿಕತೆಯ ಜೊತೆ ಹಾಸುಹೊಕ್ಕಿದ್ದಾರೆ. ಪ್ರತ್ಯೇಕತೆಯ ಭಾವದಿಂದ ಕನ್ನಡಿಗರು ದೂರ ಬಹುದೂರ. ಇದರಿಂದ ದೇಶದ ಗೌರವ ಹೆಚ್ಚಾಗಿದೆ ಎಂದು ಪ್ರಶಂಶಿಸಿದರು.

ಇಂದು ಇಲ್ಲಿ ಸೇರಿರುವ ನವನಕ್ಷತ್ರಗಳನ್ನು ಕೇವಲ ಪ್ರಶಸ್ತಿಯ ಮೌಲ್ಯಮಾಪನದಿಂದ ನೋಡಲಾಗದು. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದ ಅತಿ ದೊಡ್ಡ ನ್ಯೂಸ್​ ನೆಟ್​ವರ್ಕ್​​ ಆಗಿ ಟಿವಿ9 ಈ ನವನಕ್ಷತ್ರಗಳನ್ನು ಗುರುತಿಸಿ, ಗೌರವಿಸುತ್ತಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ. ಇಂತಹ ನಕ್ಷತ್ರಗಳ ಸನ್ಮಾನದಲ್ಲಿ ಭಾಗಿಯಾಗಿರುವ ನಿಮಗೆಲ್ಲಾ ಆತ್ಮೀಯ ಸ್ವಾಗತ ಎಂದು ಸಿಇಒ ಬರುಣ್​​ ದಾಸ್ ಹೇಳಿದರು.

ಟಿವಿ9 ನೆಟ್​ವರ್ಕ್​​ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬರುಣ್​ ದಾಸ್​ ಭಾಷಣದ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ:

Also Read: ಟಿವಿ9 ಮುಂಚೂಣಿ ಸ್ಥಾನದಲ್ಲಿ ಇದೆ ಎಂಬುದನ್ನು ಹೆಗ್ಗಳಿಕೆಯಿಂದ ಹೇಳಬೇಕಿದೆ- ತುಮಕೂರು ಸಿದ್ದಗಂಗಾ ಶ್ರೀಗಳ ಆಶೀರ್ವಚನ

Also Read: ಟಿವಿ9 ಕನ್ನಡಿಗರಿಗಾಗಿ ನಂಬಿಕಾರ್ಹ, ಅಧಿಕಾರಯುತ, ನಿಖರ ಸುದ್ದಿ ಸಾದರ ಪಡಿಸಲು ಕಟಿಬದ್ಧ: ವ್ಯವಸ್ಥಾಪಕ ಸಂಪಾದಕ ಶ್ರೀಧರನ್

Published On - 1:17 pm, Tue, 4 January 22

ಕುಡಿದ ಯುವಕರಿಂದ ಆಂಧ್ರದ ಮಹಿಳಾ ಪೊಲೀಸ್ ಅಧಿಕಾರಿಯ ಕೂದಲೆಳೆದು ಹಲ್ಲೆ
ಕುಡಿದ ಯುವಕರಿಂದ ಆಂಧ್ರದ ಮಹಿಳಾ ಪೊಲೀಸ್ ಅಧಿಕಾರಿಯ ಕೂದಲೆಳೆದು ಹಲ್ಲೆ
ಪುನೀತ್ ಕೆನ್ನೆಗೆ ಹೊಡೆಯುವ ದೃಶ್ಯ ಹೇಗಿತ್ತು? ಆ ದಿನದ ಅನುಭವ ತಿಳಿಸಿದ ನಟ
ಪುನೀತ್ ಕೆನ್ನೆಗೆ ಹೊಡೆಯುವ ದೃಶ್ಯ ಹೇಗಿತ್ತು? ಆ ದಿನದ ಅನುಭವ ತಿಳಿಸಿದ ನಟ
‘ಅಪ್ಪು’ ಸಿನಿಮಾದ ಅವಕಾಶ ನನಗೆ ಸಿಕ್ಕಾಗ ನಂಬೋಕೆ ಆಗಲಿಲ್ಲ: ಗುರುಕಿರಣ್
‘ಅಪ್ಪು’ ಸಿನಿಮಾದ ಅವಕಾಶ ನನಗೆ ಸಿಕ್ಕಾಗ ನಂಬೋಕೆ ಆಗಲಿಲ್ಲ: ಗುರುಕಿರಣ್
ಕರಾವಳಿ ಜಿಲ್ಲೆಗಳ ಸಮಸ್ಯೆಯನ್ನು ಸದನದ ಗಮನಕ್ಕೆ ತಂದ ಸುನೀಲ ಕುಮಾರ
ಕರಾವಳಿ ಜಿಲ್ಲೆಗಳ ಸಮಸ್ಯೆಯನ್ನು ಸದನದ ಗಮನಕ್ಕೆ ತಂದ ಸುನೀಲ ಕುಮಾರ
ಪಾರ್ಕಿಂಗ್ ವಿಚಾರಕ್ಕೆ ಜಗಳ; ಡಯಾಲಿಸಿಸ್‌ನಲ್ಲಿದ್ದ ವಿಜ್ಞಾನಿ ಸಾವು
ಪಾರ್ಕಿಂಗ್ ವಿಚಾರಕ್ಕೆ ಜಗಳ; ಡಯಾಲಿಸಿಸ್‌ನಲ್ಲಿದ್ದ ವಿಜ್ಞಾನಿ ಸಾವು
ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿ ಮಾಡಿದ್ದು ಅವರಿಗೆ ಅನೂಕೂಲವಾಗಲು: ಸಚಿವ
ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿ ಮಾಡಿದ್ದು ಅವರಿಗೆ ಅನೂಕೂಲವಾಗಲು: ಸಚಿವ
ಮಾತು ವಾಪಸ್ ಪಡೆಯುತ್ತೇನೆಂದರೂ ಬಿಡದ ಯತ್ನಾಳ್, ಕೊನೆಗೆ ಕೈಮುಗಿದ ಖಾದರ್​​
ಮಾತು ವಾಪಸ್ ಪಡೆಯುತ್ತೇನೆಂದರೂ ಬಿಡದ ಯತ್ನಾಳ್, ಕೊನೆಗೆ ಕೈಮುಗಿದ ಖಾದರ್​​
ಸಂಘರ್ಷದ ಹಾದಿ ಬೇಡ, ಸಮಾಜಕ್ಕಾಗಿ ಎಲ್ಲರೂ ಒಟ್ಟಾಗಿ ಹೋಗೋಣ: ರೇಣುಕಾಚಾರ್ಯ
ಸಂಘರ್ಷದ ಹಾದಿ ಬೇಡ, ಸಮಾಜಕ್ಕಾಗಿ ಎಲ್ಲರೂ ಒಟ್ಟಾಗಿ ಹೋಗೋಣ: ರೇಣುಕಾಚಾರ್ಯ
ಹೋಳಿ ಬಣ್ಣ ತಾಕದಂತೆ ಜಾಮಾ ಮಸೀದಿ ಮೇಲೆ ಟಾರ್ಪಲ್ ಮುಚ್ಚಿದ ಪೊಲೀಸರು
ಹೋಳಿ ಬಣ್ಣ ತಾಕದಂತೆ ಜಾಮಾ ಮಸೀದಿ ಮೇಲೆ ಟಾರ್ಪಲ್ ಮುಚ್ಚಿದ ಪೊಲೀಸರು
ಅಶ್ವಥ್ ನಾರಾಯಣಗೆ ಹೇಳೋದು ಪೂರ್ತಿ ಕೇಳು ತಮ್ಮಾ ಎಂದ ಸಿದ್ದರಾಮಯ್ಯ
ಅಶ್ವಥ್ ನಾರಾಯಣಗೆ ಹೇಳೋದು ಪೂರ್ತಿ ಕೇಳು ತಮ್ಮಾ ಎಂದ ಸಿದ್ದರಾಮಯ್ಯ