AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಮನೆ ಮಾಡಿದ ಯುಗಾದಿ ಸಂಭ್ರಮ; ಹಣ್ಣು, ಹೂವುಗಳ ಬೆಲೆಗೆ ಗ್ರಾಹಕರು ಶಾಕ್!

ಹಣ್ಣುಗಳಿಗೆ 20 ರಿಂದ 30 ರೂಪಾಯಿ, ಹೂವುಗಳಿಗೆ 30 ರಿಂದ 40 ರೂಪಾಯಿ ಹೆಚ್ಚಳವಾಗಿದೆ. ಯುಗಾದಿ ಹಬ್ಬದ ಹಿನ್ನೆಲೆ ಇಂದು ಒಂದು ಕಟ್ಟು ಮಾವಿನ ಎಲೆಗೆ 10 ರೂ. ಇದೆ.

ಬೆಂಗಳೂರಿನಲ್ಲಿ ಮನೆ ಮಾಡಿದ ಯುಗಾದಿ ಸಂಭ್ರಮ; ಹಣ್ಣು, ಹೂವುಗಳ ಬೆಲೆಗೆ ಗ್ರಾಹಕರು ಶಾಕ್!
ಕೆಆರ್ ಮಾರ್ಕೆಟ್​ನಲ್ಲಿ ಜನ ಸಾಗರ
TV9 Web
| Updated By: sandhya thejappa|

Updated on:Apr 02, 2022 | 9:51 AM

Share

ಬೆಂಗಳೂರು: ನಾಡಿನೆಲ್ಲೆಡೆ ಇಂದು (ಏಪ್ರಿಲ್ 2) ಚಾಂದ್ರಮಾನ ಯುಗಾದಿ (Ugadi) ಹಬ್ಬ. ಬೆಳಿಗ್ಗೆ ಬೇಗನೇ ಎದ್ದು ಮನೆ ಮಂದಿ ಎಲ್ಲಾ ದೇವರ ಪೂಜೆಗೆ ಸಿದ್ಧಪಡಿಸುವುದು, ಸಂಜೆ ಊಟಕ್ಕೆ ತಯಾರಿ ಮಾಡುವುದೇ ಒಂಥರಾ ಸಂಭ್ರಮ ಸಡಗರ. ಇನ್ನು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ (Bengaluru) ಹಬ್ಬದ ಸಂಭ್ರಮ ಮನೆ ಮಾಡಿದೆ. ಮನೆಯಲ್ಲಿ ದೇವರಿಗೆ ನೈವೇದ್ಯ ಇಟ್ಟು ಪೂಜೆ ಮಾಡುವುದಕ್ಕೆ ತಯಾರಿ ನಡೆಸುತ್ತಿದ್ದಾರೆ. ಕಳೆದ 2 ವರ್ಷದಿಂದ ಕೊರೊನಾ (Coronvirus) ಕಾರಣದಿಂದ ಯುಗಾದಿ ಹಬ್ಬವನ್ನು ಸರಳವಾಗಿ ಆಚರಣೆ ಮಾಡಲಾಗಿತ್ತು. ಆದರೆ ಈ ಬಾರಿ ಎಲ್ಲೆಲ್ಲೂ ಯುಗಾದಿ ಹಬ್ಬ ಸಂಭ್ರಮ ಜೋರಾಗಿದೆ.

ಇನ್ನು ಹಬ್ಬದ ಹಿನ್ನೆಲೆ ನಗರದ ಜನರಿಗೆ ಶಾಕ್ ಎದುರಾಗಿದ್ದು, ಹಣ್ಣು , ಹೂ ಬೆಲೆ ಹೆಚ್ಚಳವಾಗಿದೆ. ಹಣ್ಣುಗಳಿಗೆ 20 ರಿಂದ 30 ರೂಪಾಯಿ, ಹೂವುಗಳಿಗೆ 30 ರಿಂದ 40 ರೂಪಾಯಿ ಹೆಚ್ಚಳವಾಗಿದೆ. ಯುಗಾದಿ ಹಬ್ಬದ ಹಿನ್ನೆಲೆ ಇಂದು ಒಂದು ಕಟ್ಟು ಮಾವಿನ ಎಲೆಗೆ 10 ರೂ. ಇದೆ. ಬೇವಿನ ಸೊಪ್ಪಿಗೆ 20 ರೂ. ನಿಗದಿಯಾಗಿದೆ. ಒಂದು ಮಾರು ತುಳಸಿಗೆ 50 ರೂ. ಇದ್ದರೆ. ಒಂದು ಕೆಜಿ ಬೆಲ್ಲಕ್ಕೆ (ಅಚ್ಚು/ಉಂಡೆ) 50- 60 ರೂಪಾಯಿ ಇದೆ.

ಇಂದಿನ ಹೂವುಗಳ ಬೆಲೆ ಹೀಗಿದೆ: * ಒಂದು ಕೆಜಿ ಮಲ್ಲಿಗೆ ಮೊಗ್ಗು – 600 ರೂ. * ಒಂದು ಸೇವಂತಿಗೆ – 200 ರೂ. * ಕನಕಾಂಬರ 400 – ರೂ. * ಸುಗಂಧರಾಜ 80 – ರೂ. * ಗುಲಾಬಿ 150 – ರೂ. * ಚೆಂಡು ಹೂವು- 60 ರೂಪಾಯಿ ಇದೆ.

ಇಂದಿನ ಹಣ್ಣುಗಳ ಬೆಲೆ ಹೀಗಿದೆ: * ಒಂದು ಕೆಜಿ ಸೇಬು – 160 ರೂ. * ದಾಳಿಂಬೆ 250 – ರೂ * ಮೂಸಂಬಿ 100 – ರೂ. * ಆರೆಂಜ್ 120 – ರೂ. * ಸಪೋಟ 100 – ರೂ. * ಸೀಬೆಹಣ್ಣು 120 – ರೂ. * ಏಲಕ್ಕಿ ಬಾಳೆಹಣ್ಣು – 70 ರೂ. * ದ್ರಾಕ್ಷಿ 100-120 ರೂ. ಇದೆ.

ಇದನ್ನೂ ಓದಿ

Andre Russell: ಸಿಕ್ಸರ್ ಮ್ಯಾನ್ ರಸೆಲ್ ಅವರ ಒಂದೊಂದು ಸಿಕ್ಸ್​​ ಹೇಗಿತ್ತು ಗೊತ್ತೇ?: ಇಲ್ಲಿದೆ ನೋಡಿ

ಸಚಿವ ಎಮ್ ಟಿ ಬಿ ನಾಗರಾಜ ಕ್ಷೇತ್ರದ ಜನರಿಗೆ ಯುಗಾದಿ ಹಬ್ಬಕ್ಕೆ ಅಕ್ಕಿ, ಬೇಳೆ ಮತ್ತು ಅಡುಗೆ ಎಣ್ಣೆ ಹಂಚಿದರು!

Published On - 8:22 am, Sat, 2 April 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ