ಬೆಂಗಳೂರು ಹೋಟೆಲ್​, ರೆಸ್ಟೋರೆಂಟ್​ಗಳಲ್ಲೂ ಮತದಾನ ಜಾಗೃತಿ: ತಿಂಡಿ-ತಿನಿಸುಗಳೊಂದಿಗೆ ಟೇಬಲ್​ಗೆ ಬರುತ್ತೆ ಮತದಾನ ಸಂದೇಶ

ಬೆಂಗಳೂರಿನ ಹೋಟೇಲ್​ ಮತ್ತು ರೆಸ್ಟೋರೆಂಟ್​ಗಳಿಗೆ ನೀವು ಹೋದರೇ, ಅಲ್ಲಿಯ ಸಿಬ್ಬಂದಿ ನಿಮಗೆ ತಿಂಡಿ-ತಿನಿಸುಗೊಳೊಂದಿಗೆ, ಮತದಾನ ಮಾಡಿ ಎಂಬ ಸಂದೇಶವನ್ನೂ ಕೂಡ ಸರ್ವ್​ ಮಾಡುತ್ತಾರೆ.

ಬೆಂಗಳೂರು ಹೋಟೆಲ್​, ರೆಸ್ಟೋರೆಂಟ್​ಗಳಲ್ಲೂ ಮತದಾನ ಜಾಗೃತಿ: ತಿಂಡಿ-ತಿನಿಸುಗಳೊಂದಿಗೆ ಟೇಬಲ್​ಗೆ ಬರುತ್ತೆ ಮತದಾನ ಸಂದೇಶ
ಸಾಂದರ್ಭಿಕ ಚಿತ್ರ
Follow us
|

Updated on:Apr 18, 2023 | 10:02 AM

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ (Karnataka Assembly Election 2023) ಹಿನ್ನೆಲೆ ಮೇ 10 ರಂದು ಮತದಾನ ನಡೆಯಲಿದ್ದು, ರಾಜ್ಯದ ಪ್ರತಿಯೊಬ್ಬ ಪ್ರಜೆಯೂ ಮತದಾನ (Vote) ಮಾಡಿ ಎನ್ನುವ ಮಾತುಗಳನ್ನು ಮತ್ತು ಘೋಷಣೆಗಳನ್ನು ಎಲ್ಲೆಡೆ ಕೇಳುತ್ತಿದ್ದೇವೆ. ಕಳೆದ ಎಲ್ಲ ಚುನಾವಣೆಗಿಂತ ಈ ಬಾರಿ ಅತಿ ಹೆಚ್ಚು ಮತದಾನವಾಗಬೇಕೆಂದು ರಾಜ್ಯ ಚುನಾವಣಾ ಆಯೋಗ (Karnataka Election Commission) ಗುರಿ ಇಟ್ಟುಕೊಂಡಿದ್ದು, ಈ ಸಂಬಂಧ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಅದೇ ರೀತಿಯಾಗಿ ಹೋಟೆಲ್​​ (Hotel) ಮತ್ತು ರೆಸ್ಟೋರೆಂಟ್​ಗಳಲ್ಲಿ (Restaurant) ಕೂಡ ಈ ಜಾಗೃತಿ ಅಭಿಯಾನ ನಡೆಯಲಿದೆ. ಹೌದು ನೀವು ಹೋಟೆಲ್​​ ಮತ್ತು ರೆಸ್ಟೋರೆಂಟ್​ಗಳಿಗೆ ಹೋದರೇ, ಅಲ್ಲಿಯ ಸಿಬ್ಬಂದಿ ನಿಮಗೆ ತಿಂಡಿ-ತಿನಿಸುಗೊಳೊಂದಿಗೆ, ಮತದಾನ ಮಾಡಿ ಎಂಬ ಸಂದೇಶವನ್ನೂ ಕೂಡ ಸರ್ವ್​ ಮಾಡುತ್ತಾರೆ.

ಈ ರೀತಿಯಾಗಿ ಮತದಾನ ಜಾಗೃತಿ ಮಾಡಲು ಕಾರಣ 2018ರ ವಿಧಾನಸಭಾ ಚುನಾವಣೇ ಸಮಯಲದಲ್ಲಿ ನೀರಸ ಮತದಾನವಾದ ಹಿನ್ನೆಲೆ ಚುನಾವಣಾ ಆಯೋಗ ಈ ಕ್ರಮಕ್ಕೆ ಮುಂದಾಗಿದೆ. ರಾಜಧಾನಿಯಲ್ಲಿ ಹೋಟೆಲ್​ಗಳು ಮತ್ತು ವಿವಿಧ ಕ್ಷೇತ್ರದ ಖ್ಯಾತ ವ್ಯಕ್ತಿಗಳು ಆಯೋಗ ಮತದಾನ ಜಾಗೃತಿಗೆ ಕೈ ಜೋಡಿಸಿದ್ದಾರೆ. ಇನ್ನು ಹೋಟೆಲ್​​ ಮತ್ತು ರೆಸ್ಟೋರೆಂಟ್​ಗಳಲ್ಲಿ ಮತದಾನ ಜಾಗೃತಿ ಕುರಿತಾದ ಪೋಸ್ಟ್​ರಗಳನ್ನು ಹಾಕಲಾಗುತ್ತದೆ. ತಪ್ಪದೇ ಮತದಾನ ಮಾಡುವಂತೆ ಮಾಲೀಕರು ಮತ್ತು ಸರ್ವ್​ಗಳು ಗ್ರಾಹಕರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.

ಮತದಾನ ದಿನದಂದು, ಹೋಟೆಲ್​​ ಮತ್ತು ರೆಸ್ಟೋರೆಂಟ್​ಗಳಲ್ಲಿ ಸಿಬ್ಬಂದಿಯ ಕೊರತೆ ಉಂಟಾಗಬಹುದು. ಏಕೆಂದರೆ ರಾಜ್ಯದ ಇತರ ಭಾಗದ ನೌಕರರು ನಗರದ ಹೋಟೆಲ್​​ ಮತ್ತು ರೆಸ್ಟೋರೆಂಟ್​ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅವರು ಕೂಡ ತಮ್ಮ ಊರುಗಳಿಗೆ ತೆರಳಿ ಮತ ಚಲಾಯಿಸಲು ಪ್ರೋತ್ಸಾಹಿಸಲಾಗುತ್ತದೆ. ಮತ ಚಲಾಯಿಸಲು ಹೋಗುವಾಗ ಮತ್ತು ಹಿಂತಿರುಗಲು ಸಿಬ್ಬಂದಿಗೆ ಬಸ್ ಪ್ರಯಾಣ ದರವನ್ನು ನೀಡಲಿದ್ದೇವೆ. ನಮ್ಮ ಗ್ರಾಹಕರಲ್ಲಿ ನಾವು ಮತದಾನ ಮಾಡಿ ಎಂದು ಪ್ರಚಾರ ಮಾಡುತ್ತಿರುವಾಗ ನೌಕರರು ಮತದಾನ ಮಾಡಲು ಅವಕಾಶ ನೀಡದಿದ್ದರೇ ಅದು ಅನ್ಯಾಯವಾಗುತ್ತದೆ” ಎಂದು ನೃಪತುಂಗ ರಸ್ತೆಯ ನಿಸರ್ಗ ಹೋಟೆಲ್ ಮಾಲೀಕ ಕೃಷ್ಣ ರಾಜ್ ಎಂಬುವರು ಹೇಳಿದ್ದಾರೆ.

ಇದನ್ನೂ ಓದಿ: Karnataka Election 2023: ಮತದಾನದ ವೇಳೆ ಸರದಿ ಸಾಲಿನ ಬಗ್ಗೆ ಚಿಂತಿಸಬೇಕಿಲ್ಲ, ಬರಲಿದೆ ಹೊಸ ಮೊಬೈಲ್ ಅಪ್ಲಿಕೇಶನ್

ನಗರದಲ್ಲಿ ಸುಮಾರು 40,000 ಹೋಟೆಲ್​ಗಳಿದ್ದು, 1.25 ಲಕ್ಷ ಉದ್ಯೋಗಿಗಳನ್ನು ಹೊಂದಿದೆವೆ. ಅವರಲ್ಲಿ ಶೇ 60 ರಷ್ಟು ಜನರು ಕರ್ನಾಟಕದ ವಿವಿಧ ಭಾಗದಿಂದ ಬಂದವರು. ಈ ನೌಕರರಿಗೆ ತಮ್ಮ ಊರುಗಳಿಗೆ ತೆರಳಿ ಮತದಾನ ಮಾಡುವಂತೆ ಅನುಕೂಲ ಮಾಡಿಕೊಡುತ್ತೇವೆ ಎಂದು ಅಸೋಸಿಯೇಶನ್‌ನ ಅಧ್ಯಕ್ಷ ಪಿಸಿ ರಾವ್ ಹೇಳಿದ್ದಾರೆ. ಯಾರು ಮತದಾನ ಮಾಡಿರುತ್ತಾರೋ, ಅವರ ಬೆರಳುಗಳ ಮೇಲಿನ ಶಾಯಿಯನ್ನು ನೋಡಿ ಮತದಾನದ ದಿನದಂದು ರಿಯಾಯಿತಿ ಅಥವಾ ಉಚಿತ ಆಹಾರ ಸೇವೆಯನ್ನು ಒದಗಿಸಲು ಕೆಲವು ರೆಸ್ಟೋರೆಂಟ್‌ಗಳು ಯೋಜಿಸುತ್ತಿವೆ. ಮತದಾನದ ಪ್ರಮಾಣವನ್ನು ಹೆಚ್ಚಿಸುವ ಕಾರ್ಯಸೂಚಿಯಲ್ಲಿದ್ದರೂ, ಯಾರೂ ಕೂಡ ರಾಜಕೀಯ ಪಕ್ಷಗಳ ಪರವಾಗಿ ಪ್ರಚಾರ ಮಾಡುವುದಿಲ್ಲ ಎಂದು ಪಿಸಿ ರಾವ್ ಸ್ಪಷ್ಟಪಡಿಸಿದರು.

ಕೆಲವು ಹೋಟೆಲ್​ಗಳಿಗೆ ರಜೆ?

ಕೆಲವು ಹೋಟೆಲ್​​ ಮತ್ತು ರೆಸ್ಟೋರೆಂಟ್‌ಗಳು ಮತದಾನದ ದಿನದಂದು ಬಂದ್​ ಆಗಲಿವೆ. ಎಲ್ಲ 1,600 ಕಾರ್ಮಿಕರು ಊರುಗಳಿಗೆ ತೆರಳಿ ಮತ ಚಲಾಯಿಸಲು ರಜೆ ನೀಡಲಾಗಿರುವುದರಿಂದ ಹೋಟೆಲ್​​ ಮತ್ತು ರೆಸ್ಟೋರೆಂಟ್​ಗಳನ್ನು ಮುಚ್ಚುವ ಸಾಧ್ಯತೆಯಿದೆ ಎಂದು ಪಾಕಶಾಲಾ ಮತ್ತು ನಂದಿ ಉಪಾಚಾರ್‌ನ ಹಿರಿಯ ಉಪಾಧ್ಯಕ್ಷ ಸುರೇಂದ್ರ ಹೆಗಡೆ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:55 am, Tue, 18 April 23

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ