AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಿಹಾದಿಗಳಿಗೆ ಏನು ಶಿಕ್ಷೆ: ಮುಸ್ಲಿಂ ಸಮುದಾಯದ ಮುಂದೆ ಸಪ್ತಸೂತ್ರದ ಪ್ರಶ್ನೆಯಿಟ್ಟ ಸಂತೋಷ್ ಗುರೂಜಿ

ಇಲ್ಲಿರುವ ಮುಸ್ಲಿಮರು ಬೇರೆ ದೇಶದಿಂದ ಬಂದವರೇನೂ ಅಲ್ಲ. ನಮ್ಮಲ್ಲೇ ಇದ್ದವರು. ಆದರೆ ಇತ್ತೀಚೆಗೆ ಮುಸ್ಲಿಂ ಹಾಗೂ ಹಿಂದೂಗಳ ನಡುವೆ ದೊಡ್ಡ ಕಂದಕ ಉಂಟಾಗುತ್ತಿದೆ.

ಜಿಹಾದಿಗಳಿಗೆ ಏನು ಶಿಕ್ಷೆ: ಮುಸ್ಲಿಂ ಸಮುದಾಯದ ಮುಂದೆ ಸಪ್ತಸೂತ್ರದ ಪ್ರಶ್ನೆಯಿಟ್ಟ ಸಂತೋಷ್ ಗುರೂಜಿ
ಸಂತೋಷ್ ಗುರೂಜಿ
TV9 Web
| Edited By: |

Updated on: Apr 11, 2022 | 2:10 PM

Share

ಬೆಂಗಳೂರು: ನಾನು ಸುಮಾರು 25 ವರ್ಷಗಳಿಂದ ಹಿಂದುತ್ವದ ಭಾಷಣ ಮಾಡುತ್ತಿದ್ದೇನೆ. ಆದರೆ ಈಗಿನ ಕಾಲಘಟ್ಟವೇ ಬೇರೆಯಾಗಿದೆ. ರಣರಂಗದಲ್ಲಿರುವ ನಾವು ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ ಎಂದು ಹಿಂದುತ್ವ ಸಂಘಟನೆಗಳ ಒಕ್ಕೂಟದ ಮುಖಂಡರಾದ ಸಂತೋಷ ಗುರೂಜಿ (Santhosh Guruji) ಹೇಳಿದರು. ಕಲಬುರ್ಗಿಯಲ್ಲಿ ಶೇ 70ರಷ್ಟು ವ್ಯಾಪಾರ ವಹಿವಾಟು ಮುಸ್ಲಿಮರ ಕೈಲಿದೆ. ವಿಜಯಪುರದಲ್ಲಿಯೂ ಪರಿಸ್ಥಿತಿ ಭಿನ್ನವಾಗಿಲ್ಲ. ಇದರ ಬಗ್ಗೆ ನನಗೆ ಹೊಟ್ಟೆಕಿಚ್ಚು ಇಲ್ಲ. ಇಲ್ಲಿರುವ ಮುಸ್ಲಿಮರು ಬೇರೆ ದೇಶದಿಂದ ಬಂದವರೇನೂ ಅಲ್ಲ. ನಮ್ಮಲ್ಲೇ ಇದ್ದವರು. ಆದರೆ ಇತ್ತೀಚೆಗೆ ಮುಸ್ಲಿಂ ಹಾಗೂ ಹಿಂದೂಗಳ ನಡುವೆ ದೊಡ್ಡ ಕಂದಕ ಉಂಟಾಗುತ್ತಿದೆ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. 4 ಸಾವಿರ ಸ್ವಾಮೀಜಿಗಳ ಬೆಂಬಲ ಹಾಗೂ ಆಶೀರ್ವಾದದೊಂದಿಗೆ ನಾನು ಸಂಧಾನಕ್ಕೆ ಬಂದಿದ್ದೇನೆ. ನಮ್ಮ 47 ಹಿಂದೂ ಸಂಘಟನೆಗಳನ್ನು ಸೇರಿಸಿ ಒಂದು ಹಿಂದೂ ರಕ್ಷಣಾ ಪರಿಷತ್ ಎನ್ನುವ ಒಕ್ಕೂಟ ಮಾಡಿಕೊಂಡಿದ್ದೇವೆ ಎಂದು ಹೇಳಿದ್ದಾರೆ.

ಧಾರವಾಡದಲ್ಲಿ ನಿನ್ನೆ ರಾತ್ರಿ ಕಲ್ಲಂಗಡಿ ಹಣ್ಣಿಗಾಗಿ ಗಲಾಟೆ ನಡೆದಿದೆ. ಅದಕ್ಕೂ ಮೊದಲು ಮಾವಿನಹಣ್ಣಿಗಾಗಿ ಗಲಾಟೆ ನಡೆದಿತ್ತು. ಈ ಕಂದಕ ಮುಂದುವರೆಯಬಾರದು. ನಾವು ಮೊಟ್ಟ ಮೊದಲು ಭಾರತೀಯರಾಗಬೇಕು. ಹಿಂದೂ ಸಮಾಜ ವಿಶಾಲವಾಗಿದೆ ಎಂದು ಹೇಳಿದರು. ಚಂದ್ರು ಕೊಲೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಭಾಷೆ ಬರುವುದಿಲ್ಲ ಎಂದು ಚಂದ್ರವನ್ನು ಕೊಲೆ ಮಾಡಿದ್ದು ಸರಿಯಲ್ಲ. ಚಂದ್ರು ಅದಾಗಲೇ ಕೈಸ್ತ ಮತಕ್ಕೆ ಮತಾಂತರ ಆಗಿದ್ದರು. ಸತ್ಯವೆಂದರೆ ಅವನು ಈಗ ನಮ್ಮವನಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ಶಾಂತಿ ಕದಡುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಸಪ್ತ ಸೂತ್ರದ ಪ್ರಶ್ನೆಗಳನ್ನು ಮುಸ್ಲಿಮರ ಮುಂದೆ ಇಟ್ಟಿದ್ದಾರೆ. ಈ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಸಿಕ್ಕರೆ ನಾವೂ ಈಗಲೇ ನಿಮ್ಮೊಡನೆ ಸ್ನೇಹ ಮಾಡುತ್ತೇವೆ. ನಮ್ಮ ಹಿಂದೂ ಮುಖಂಡರನ್ನು ಒಪ್ಪಿಸುವ ಕಾರ್ಯ ನಾವು ಮಾಡುತ್ತೇವೆ ಎಂದು ಭರವಸೆ ನೀಡಿದರು.

  1. ಅಪರಾಧಿ, ಜಿಹಾದಿಗಳಿಗೆ ಹೇಗೆ ಶಿಕ್ಷೆ ನೀಡುವಿರಿ (ಜಿಹಾದಿಗಳನ್ನು ಧರ್ಮದಿಂದ ಹೊರಕ್ಕೆ ಹಾಕುವಿರಾ)
  2. ಸಂವಿಧಾನ, ಕೋರ್ಟ್ ಆದೇಶ ತಿರಸ್ಕರಿಸಿದ್ದಕ್ಕೆ ಪ್ರಾಯಶ್ಚಿತ್ತ ಏನು? (ಹಿಜಾಬ್ ವಿಚಾರದಲ್ಲಿ ಕೋರ್ಟ್ ಆದೇಶಕ್ಕೆ ಅವಮಾನ ಮಾಡಿದ್ದಾರೆ, ಅವರನ್ನು ಏನು ಮಾಡುವಿರಿ)
  3. ಸಾರ್ವಜನಿಕ ಸ್ಥಳಗಳಲ್ಲಿ ಹಿಜಾಬ್ ಬೇಡ (ಹಿಜಾಬ್​ನಿಂದ ಕ್ರಾಸ್ ವೋಟ್ ಆಗುತ್ತೆ. ಹಿಜಾಬ್ ಹಾಕಿದ ಮಹಿಳೆಗೆ ಸಮಸ್ಯೆಯಾದರೆ ಸಿಸಿಟಿವಿಯಲ್ಲಿ ತಿಳಿಯುವುದಿಲ್ಲ. ಈ ಬಗ್ಗೆ ಮುಂದೆ ಏನು ಕ್ರಮ ಕೈಗೊಳ್ಳುತ್ತಿರಾ?
  4. ನಮಾಜ್ ಮಾಡುವ ಕೈಯಲ್ಲಿ ಮಚ್ಚು ಹಿಡಿಯಬಾರದು. ಇದನ್ನು ಘೋಷಣೆ ಮಾಡಿ
  5. ಸಂತಾನ ನಿಯಂತ್ರಣ ನೀತಿಗಾಗಿ ಹೋರಾಟಕ್ಕೆ ಬೆಂಬಲ ಇದೆಯ (ಇದು ಮುಂದಿನ ಅಭಿಯಾನ)
  6. ಮದರಸಗಳಲ್ಲಿ ಪ್ರಚೋದನ ಭಾಷಣಕ್ಕೆ ಕಡಿವಾಣ ಹಾಕಿ?
  7. ಗೋವುಗಳನ್ನು ಕದ್ದರೆ ಏನು ಕ್ರಮ ಕೈಗೊಳ್ಳುತ್ತೀರಿ? ಗೋವುಗಳನ್ನು ಕದಿಯುವವರಿಗೆ ಶಿಕ್ಷೆ ನೀಡುವಿರಾ?

ಇದನ್ನೂ ಓದಿ: ನುಗ್ಗಿಕೇರಿಯಲ್ಲಿ ಮುಸ್ಲಿಂ ವ್ಯಾಪಾರಿ ಮೇಲೆ ದೌರ್ಜನ್ಯ ಪ್ರಕರಣ; ಓರ್ವ ಶ್ರೀರಾಮ ಸೇನೆ ಕಾರ್ಯಕರ್ತನನ್ನು ಬಂಧಿಸಿದ ಧಾರವಾಡ ಪೊಲೀಸ್

ಇದನ್ನೂ ಓದಿ: ಹಿಂದೂ ಮುಸ್ಲಿಂ ಎಂದು ಯಾರಾದ್ರು ಅಡೆತಡೆ ಮಾಡಿದ್ರೆ..: ಹಾಸನದಲ್ಲಿ ಗುಡುಗಿದ ಹೆಚ್.ಡಿ ರೇವಣ್ಣ

Follow Us
Web contact
Web contact

TV9 Kannada

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು