AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೂರಾರು ವರ್ಷದಿಂದ ಅಲ್ಲಿ ಕಾಡು ಪ್ರಾಣಿಗಳು ವಾಸವಾಗಿದ್ದವು, ಈಗ ಸರ್ಕಾರವೇ ಅಲ್ಲಿ ಸೈಟ್​ ಮಾಡಿ ಮಾರಾಟ ಮಾಡುತ್ತಿದೆ!

ಬೀದರ್ ನ ಹೊರವಲಯದಲ್ಲಿ ಬೆಳ್ಳೂರಾ ಗ್ರಾಮದ ಸುತ್ತಮುತ್ತ ಬಯಲು ಪ್ರದೇಶದಲ್ಲಿ ನೂರಾರು ವರ್ಷದಿಂದ ಕಾಡು ಪ್ರಾಣಿಗಳು ವಾಸವಿದ್ದವು. ಅಲ್ಲಿನ ಕೆರೆಯ ನೀರು ಕುಡಿದು, ಅಲ್ಲಿನ ಹುಲ್ಲನ್ನ ತಿಂದು ಯಾರದೂ ಭಯವಿಲ್ಲದೆ ಓಡಾಡಿಕೊಂಡಿದ್ದವು. ಆದರೆ ಈಗ ಆ ಜಾಗದಲ್ಲಿ ಸೈಟ್ ನಿರ್ಮಿಸಿ ಮಾರಾಟ ಮಾಡಲಾಗುತ್ತಿದೆ. ಸ್ವತಃ ಸರ್ಕಾರಿ ಸಂಸ್ಥೆಯೇ (ಕೆಐಡಿಬಿ) ಈ ಕೆಲಸಕ್ಕೆ ಕೈ ಹಾಕಿರುವುದು ವಿಪರ್ಯಾಸವೆನಿಸಿದೆ. ಇದರಿಂದಾಗಿ ಕೃಷ್ಣಮೃಗಳು, ಜಿಂಕೆಗಳು ಜಾಗ ಖಾಲಿ ಮಾಡುವ ಸಮಯ‌ ಸನ್ನಿಹಿತವಾಗಿದೆ. ಇಷ್ಟೆಲ್ಲ ನಡೆಯುತ್ತಿದ್ದರೂ ಅರಣ್ಯ ಇಲಾಖೆ, ಜಿಲ್ಲಾಡಳಿತ ಕಂಡೂ‌ಕಾಣದಂತೆ ಕುಳಿತಿದೆ.

ಸುರೇಶ ನಾಯಕ
| Edited By: ಸಾಧು ಶ್ರೀನಾಥ್​|

Updated on:Mar 16, 2024 | 5:26 PM

Share

ನೂರಾರು ವರ್ಷದಿಂದ ಆ ಬಯಲು ಪ್ರದೇಶದಲ್ಲಿ ಕಾಡು ಪ್ರಾಣಿಗಳು (Wild Animals) ವಾಸವಾಗಿದ್ದವು. ಅಲ್ಲಿನ ಕೆರೆಯ ನೀರು ಕುಡಿದು, ಅಲ್ಲಿನ ಹುಲ್ಲನ್ನ ತಿಂದು ಯಾರದೂ ಭಯವಿಲ್ಲದೆ ಓಡಾಡಿಕೊಂಡಿದ್ದವು. ಆದರೆ ಈಗ ಆ ಜಾಗದಲ್ಲಿ ಸೈಟ್ ನಿರ್ಮಿಸಿ ಮಾರಾಟ ಮಾಡಲಾಗುತ್ತಿದೆ (Karnataka Government). ಅಳವಿನಂಚಿನಲ್ಲಿರುವ ಜಿಂಕೆಗಳ ವಾಸಸ್ಥಾನದ ಜಾಗ ಕಬಳಿಕೆ… ಜಿಂಕೆ, ಕೃಷ್ಣಮೃಗ ವಾಸಿಸುತ್ತಿದ್ದ ನೂರಾರು ಎಕರೆಯಷ್ಟು ಪ್ರದೇಶದಲ್ಲಿ ಸೈಟ್ ನಿರ್ಮಾಣ. ಇತ್ತ ಕೆಐಡಿಬಿಯಿಂದಲೂ ( KIADB) ಸೈಟ್ ನಿರ್ಮಾಣ ಮಾಡಿ ಮಾರಾಟ. ವನ್ಯ ಜೀವಿಗಳ ವಾಸಸ್ಥಾನಕ್ಕೆ ಧಕ್ಕೆ. ಐದಾರು ವರ್ಷಗಳ ಹಿಂದೆ ಐದು ಸಾವಿರಕ್ಕಿದ್ದ ಇವುಗಳ ಸಂಖ್ಯೆ ಒಂದು ಸಾವಿರಕ್ಕೆ ಇಳಿಕೆ… ನೂರಾರು ‌ವರ್ಷದಿಂದ‌ ಆ ಜಾಗೆಯಲ್ಲಿದ್ದ ಕೃಷ್ಣಮೃಗಳು, ಜಿಂಕೆಗಳು ಜಾಗ ಖಾಲಿ ಮಾಡುವ ಸಮಯ‌ ಸನ್ನಿಹಿತವಾಗಿದೆ (Bidar News).

ಇಷ್ಟೆಲ್ಲ ನಡೆಯುತ್ತಿದ್ದರೂ ಅರಣ್ಯ ಇಲಾಖೆ, ಜಿಲ್ಲಾಡಳಿತ ಕಂಡೂ‌ಕಾಣದಂತೆ ಕುಳಿತಿದೆ. ಹೌದು ಬೀದರ್ (Bidar)ನ ಹೊರವಲಯದಲ್ಲಿ ಬೆಳ್ಳೂರಾ ಗ್ರಾಮದ ಸುತ್ತಮುತ್ತ 650 ಎಕರೆಯಷ್ಟು ವಿಶಾಲವಾದ ಬಯಲು ಪ್ರದೇಶವಿತ್ತು. ಈ ಜಾಗದಲ್ಲಿ ಸುಂದರವಾದ ಕೆರೆ, ಸಮೃದ್ಧ ಹುಲ್ಲುಗಾವಲು ಪ್ರದೇಶವಿತ್ತು. ಹೀಗಾಗಿ ಈ ಪ್ರದೇಶದಲ್ಲಿ ಯಥೇಚ್ಚವಾಗಿ ಜಿಂಕೆ, ಕೃಷ್ಣಮೃಗಗಳು ವಾಸವಾಗಿದ್ದವು. ಆದರೆ ಈ ಜಾಗಕ್ಕೆ ಈಗ ಬಂಗಾರದ ಬೆಲೆ ಬಂದಿದ್ದು ಈ ಜಾಗದ ಮೇಲೆ ಭೂ ಮಾಫಿಯಾದ ಕಣ್ಣು ಬಿದ್ದಿದೆ. ಇದರ ಪರಿಣಾಮವಾಗಿ ಇಲ್ಲಿ ನೂರಾರು ಎಕರೆಯಷ್ಟು ಪ್ರದೇಶದಲ್ಲಿ ಸೈಟ್ ನಿರ್ಮಿಸಿ ಮಾರಾಟ ಮಾಡಲಾಗುತ್ತಿದೆ. ಇದರ ಜೊತೆಗೆ ಈಗಾಗಲೇ ಕೆಐಡಿಬಿಯವರು 250 ಕ್ಕೂ ಹೆಚ್ಚು ಎಕರೆಯಷ್ಟು ಪ್ರದೇಶವನ್ನ ವಶಪಡಿಸಿಕೊಂಡು ಅಲ್ಲಿನ ಎಲ್ಲ ಜಾಗದಲ್ಲೂ ತಂತಿ ಬೆಲಿಯನ್ನ ಹಾಕಿದ್ದಾರೆ!

ಹೀಗಾಗಿ ಹತ್ತಾರು ವರ್ಷದಿಂದ ಆ ಜಾಗದಲ್ಲಿ ವಾಸವಾಗಿದ್ದ ಕಾಡು ಪ್ರಾಣಿಗಳು ಈಗ ಜಾಗ ಖಾಲಿ ಮಾಡುವ ಸಮಯ ಸನ್ನಿಹಿತವಾಗಿದೆ. ಲ್ಯಾಂಡ್ ಮಾಫಿಯಾದವರು ಹಾಗೂ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಡಿಬಿ) ಕಾಮಗಾರಿಗಳು ಪ್ರಾಣಿಗಳ ತುತ್ತಿನ ಚೀಲವನ್ನೇ ಕಿತ್ತುಕೊಳ್ಳುತ್ತಿವೆ. ಪ್ರತಿ ನಿತ್ಯ ಬೆಳ್ಳಂಬೆಳಗ್ಗೆ ಬರುವ ಜಿಂಕೆ, ಕೃಷ್ಣಮೃಗಗಳು ನಮ್ಮ ಕಾಲ ಮುಗಿಯಿತೇ…? ಎಂಬ ಆತಂಕವನ್ನ ಎದುರಿಸುವ ವಾತಾವರಣ ಇಲ್ಲಿ ನಿರ್ಮಾಣವಾಗಿದೆ. ಕೂಡಲೇ ಪ್ರಾಣಿಗಳಿಗೆ ಕಂಟಕವಾಗಿರುವ ಈ ಕೆಲಸವನ್ನ ಬಂದ್ ಮಾಡಬೇಕು. ಪ್ರಾಣಿಗಳ ಸಂರಕ್ಷಣೆಗೆ ಒತ್ತುಕೊಡಬೇಕೆಂದು ಬೀದರ್ ನ ಪ್ರಾಣಿಪ್ರಿಯರು ಸರಕಾರಕ್ಕೆ ವಿನಂತಿಸಿದ್ದಾರೆ.

ನೂರಾರು ವರುಷಗಳಿಂದ ಇದೇ ಸ್ಥಳದಲ್ಲಿ ಕೃಷ್ಣ ಮೃಗ ಹಾಗೂ ಜಿಂಕೆಗಳು ವಾಸ ಮಾಡುತ್ತಿವೆ. ಆದರೆ ಇತ್ತೀಚಿಗೆ ಕೆಲವು ವರ್ಷಗಳಿಂದ ವನ್ಯ ಜೀವಿಗಳು ವಾಸ ಮಾಡುವ ಸ್ಥಳದಲ್ಲಿ ಕೆಐಡಿಬಿಯಿಂದ ಬೃಹತ್ ರಸ್ತೆಗಳು, ಹೈಮಾಸ್ಟ್ ವಿದ್ಯುತ್ ದೀಪಗಳು, ಚರಂಡಿ ಸೇರಿದಂತೆ ಹತ್ತು ಹಲವಾರು ಅಭಿವೃದ್ಧಿ ಕೆಲಸಗಳನ್ನ ಮಾಡಲಾಗಿದೆ. ಆದರೆ ಈಗ ಮತ್ತೆ ನೂರಾರು ಎಕರೆಯಷ್ಟೂ ವಿಶಾಲವಾದ ಸ್ಥಳದಲ್ಲಿ ಕೆಐಡಿಯವರು ಸಾರ್ವಜನಿಕರು ಸೈಟ್ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

Also Read: ಅದಿರು ಸಾಗಣೆಯ ದುಷ್ಪರಿಣಾಮ: ವಿಚಿತ್ರ ಪರಿಸ್ಥಿತಿಯಲ್ಲಿ ಚಿತ್ರದುರ್ಗ ತಾಲೂಕಿನ ಗ್ರಾಮಸ್ಥರು, ಲಾರಿ ಮಾಲೀಕರು! ಪರಿಹಾರವೇನು?

ವಾಹನಗಳ ಓಡಾಟ, ಜೆಸಿಬಿಗಳ ಘರ್ಜನೆಯಿಂದಾಗಿ ವಣ್ಯ ಜೀವಿಗಳ ಪಾಲಿಗೆ ಮರಣ ಶಾಸನವಾಗಿ ಪರಿಣಮಿಸಿದೆ. ಆದ್ರೆ ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಇಲ್ಲಿಯ ಅರಣ್ಯ ಪ್ರದೇಶ ಹಾಗೂ ಅರಣ್ಯದಲ್ಲಿ ಇರುವ ಕಾಡು ಪ್ರಾ ಣಿಗಳು ನಶಿಸಿ ಹೋಗುತ್ತಿವೆ ಎಂಬ ವಾದವನ್ನು ಪ್ರಾಣಿ ಪ್ರಿಯರು ಮಾಡುತ್ತಿದ್ದಾರೆ.

ಕಳೆದ ನಾಲ್ಕು ವರ್ಷದಿಂದ ಜಿಂಕೆ, ಕೃಷ್ಣಮೃಗಳು ವಾಸಿಸುವ ಇಲ್ಲಿನ ಬಯಲು ಪ್ರದೇಶದ ಸ್ಥಳದಲ್ಲಿ ಕೆಐಡಿಬಿಯವರು ಒಂದಿಲ್ಲೊಂದು ಕಾಮಗಾರಿಯನ್ನ ಮಾಡುತ್ತಲೇ ಬಂದಿದ್ದಾರೆ. ವನ್ಯಜೀವಿಗಳು ವಾಸಿಸುವ ಸ್ಥಳದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳಿಗೆ ಅವಕಾಶ ಕೊಡಬೇಡಿ ಎಂದು ಪ್ರಾಣಿಪ್ರಿಯರು ಸಾಕಷ್ಟು ಸಲ ಅರಣ್ಯ ಇಲಾಖೆಯ ಅಧಿಕಾರಿಗಳನ್ನ ಕೇಳಿದರೆ ಅವರು ಜಿಲ್ಲಾಡಳಿತದ ಮೇಲೆಯೂ… ಜಿಲ್ಲಾಡಳಿತದವರನ್ನ ಕೇಳಿದರೆ ಅವರು ಕೆಐಡಿಬಿ ಅಧಿಕಾರಿಗಳ ಮೇಲೆಯೂ ಹೀಗೆ ಒಬ್ಬರ ಮೇಲೊಬ್ಬರು ಹಾಕುತ್ತಾ ಕಾಲ ಕಳೆಯುತ್ತಿದ್ದಾರೆ.

ಬೀದರ್ ಜಿಲ್ಲೆಯ ಜನರು ಕೈಗಾರಿಕರಣದ ವಿರೋಧಿಗಳಲ್ಲದ್ದಿದ್ದರೂ, ಅಮೂಲ್ಯ ಪ್ರಾಣಿ ಮತ್ತು ಅರಣ್ಯ ಸಂಪತ್ತಿನ ಅಳಿವಿಗೆ ಕೆಐಡಿಬಿ ಯೋಜನೆಗಳು ಕಾರಣವಾಗುತ್ತಿವೆ. ಸರಕಾರ ಕೂಡಲೇ ಇತ್ತ ಚಿತ್ತ ಹರಿಸಿ ಸಂರಕ್ಷಣಾ ಕಾಯ್ದೆಯಲ್ಲಿ ಶೆಡ್ಯೂಲ್ ಒಂದರ ಅಡಿ ಬರುವ ಕೃಷ್ಣ ಮೃಗದ ಸಂರಕ್ಷಣೆ ಮತ್ತು ಅದರ ವಾಸ ಸ್ಥಾನಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:23 pm, Sat, 16 March 24

Follow Us
Suresh Naik
Suresh Naik

ಸುರೇಶ ನಾಯಕ ಮೂಲತಃ, ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮೇಲ್ಮನಹಟ್ಟಿ ಗ್ರಾಮದರು. ಓದಿದ್ದು ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪದವಿ ಹಾಗೂ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 2009 ರಿಂದ ಅಂದರೆ ಕಳೆದ 16 ವರ್ಷದಿಂದ ದೃಷ್ಯ ಮಾಧ್ಯಮ ಕ್ಷೇತ್ರದಲ್ಲಿದ್ದು ಸಮಯ ಸುದ್ದಿ ವಾಹಿನಿಯ ಇನ್ ಪೂಟ್ ವಿಭಾಗದಲ್ಲಿ, ಜೊತೆಗೆ ಕಸ್ತೂರಿ ಸುದ್ದಿವಾಹಿನಿಯ ಹುಬ್ಬಳ್ಳಿ ವರದಿಗಾರನಾಗಿ ನಾಲ್ಕು ವರ್ಷ ಕೆಲಸ ಮಾಡಿದ ಅನುಭವವಿದೆ. 2014 ಪೆಬ್ರುವರಿ 01 ರಿಂದ ಟಿವಿ9 ಸುದ್ದಿವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದು, 10 ವರ್ಷ ಪೂರೈಸಿದ್ದಾರೆ. ಟಿವಿ9 ನ ಆರಂಭದಲ್ಲಿ ಬಾಗಲಕೋಟೆ ಜಿಲ್ಲೆಯ ವರದಿಗಾರನಾಗಿ ಸಧ್ಯ ಬೀದರ್ ಜಿಲ್ಲೆಯ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಕೃಷಿ, ಮಾನವೀಯ ಕಳಕಳಿಯ ವರದಿ, ರೈತರ ಸಮಸ್ಯೆಗಳ ಕುರಿತು ಹೆಚ್ಚಿನ ಒತ್ತು ಕೊಟ್ಟು ತಮ್ಮ ಸುದ್ದಿಯ ಮೂಲಕ ನೊಂದವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದ್ದಾರೆ. ಕಾಡು ಸುತ್ತೋದು, ಸಂಗೀತ ಕೇಳೋದು, ಇವರ ಹವ್ಯಾಸವಾಗಿದೆ...

Read More
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ಹೇಗೆ?
ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ಹೇಗೆ?