ಹೋಳಿ: ಬಣ್ಣದೋಕುಳಿಯಲಿ ಮಿಂದೆದ್ದು ನೀರು ವ್ಯರ್ಥ ಮಾಡಿದವರಿಗೆ ಜಲಮಂಡಳಿಯಿಂದ ಬಿತ್ತು ಫೈನ್

ರಾಜಧಾನಿಯ ಜಲಕ್ಷಾಮದ ಮಧ್ಯೆ ನೀರಿನ ಮಿತಬಳಕೆಗೆ ಜಲಮಂಡಳಿ ಶತಾಯಗತಾಯ ಪ್ರಯತ್ನ ಮಾಡ್ತಿದೆ. ನೀರಿನ ಮಿತಬಳಕೆ ಬಗ್ಗೆ ಅರಿವು ಮೂಡಿಸಿದ್ರೂ ಎಚ್ಚೆತ್ತುಕೊಳ್ಳದವರ ವಿರುದ್ಧ ಜಲಮಂಡಳಿ ದಂಡಾಸ್ತ್ರ ಪ್ರಯೋಗಿಸಿದೆ. ಇತ್ತ ಹೋಲಿ ಆಚರಣೆಗೆ ನೀರು ವ್ಯರ್ಥ ಮಾಡಿದವರಿಗೂ ಜಲಮಂಡಳಿ ಬಿಸಿ ಮುಟ್ಟಿಸಿದೆ

ಹೋಳಿ: ಬಣ್ಣದೋಕುಳಿಯಲಿ ಮಿಂದೆದ್ದು ನೀರು ವ್ಯರ್ಥ ಮಾಡಿದವರಿಗೆ ಜಲಮಂಡಳಿಯಿಂದ ಬಿತ್ತು ಫೈನ್
ಸಾಂದರ್ಭಿಕ ಚಿತ್ರ
Follow us
| Updated By: ಆಯೇಷಾ ಬಾನು

Updated on: Mar 26, 2024 | 7:07 AM

ಬೆಂಗಳೂರು, ಮಾರ್ಚ್​.26: ಬೆಂಗಳೂರಿನ ಜಲಕ್ಷಾಮದ ((Bengaluru) ಮಧ್ಯೆ ಇರೋ ನೀರಿನ ಮಿತಬಳಕೆಗೆ ಜಲಮಂಡಳಿ (BWSSB) ಕೆಲ ಕ್ರಮಗಳನ್ನ ತೆಗೆದುಕೊಳ್ಳೋಕೆ ಮುಂದಾಗಿದೆ. ಈಗಾಗಲೇ ಕುಡಿಯೋ ನೀರು, ಬೋರ್ ವೆಲ್ ನೀರನ್ನ ಅನ್ಯ ಉದ್ದೇಶಕ್ಕೆ ಬಳಸಿದ್ರೆ ದಂಡ ಹಾಕ್ತೀವೆ ಅಂತಾ ಎಚ್ಚರಿಕೆ ನೀಡಿದ್ದ ಜಲಮಂಡಳಿ, ಇದೀಗ ವಾಹನ ತೊಳೆಯೋದಕ್ಕೆ, ಗಾರ್ಡನ್ ಗೆ ಕುಡಿಯೋ ನೀರು ಬಳಸುವವರಿಗೆ ದಂಡಾಸ್ತ್ರ ಪ್ರಯೋಗಿಸಿದೆ. ನೀರನ್ನ ವ್ಯರ್ಥ ಮಾಡಿದ್ರೆ 5 ಸಾವಿರ ದಂಡ ಅಂತಾ ಆದೇಶಿಸಿದ್ದ ಜಲಮಂಡಳಿ, ನೀರಿನ ದುರ್ಬಳಕೆ ಮಾಡಿದವರಿಂದ ಬರೋಬ್ಬರಿ 1 ಲಕ್ಷದ 10 ಸಾವಿರ ದಂಡ ವಸೂಲಿ ಮಾಡಿದೆ.

ಇನ್ನು ಹೋಳಿ ಆಚರಣೆ ವೇಳೆ ನೀರನ್ನ ವ್ಯರ್ಥ ಮಾಡಬೇಡಿ ಅಂತಾ ಮನವಿ ಮಾಡಿದ್ದ ಜಲಮಂಡಳಿಯ ಆದೇಶವನ್ನ ಕೆಲ ಅಪಾರ್ಟ್ ಮೆಂಟ್ ಅಸೋಸಿಯೇಷನ್ ಉಲ್ಲಂಘಿಸಿ ಹೋಳಿ ಆಚರಿಸಿವೆ. ರೈನ್ ಡ್ಯಾನ್ಸ್ , ನೀರಿನ ವ್ಯರ್ಥ ಮಾಡದಂತೆ ಆದೇಶಿಸಿದ್ದ ಜಲಮಂಡಳಿಗೆ ಕ್ಯಾರೇ ಎನ್ನದ ವರ್ತೂರಿನ ಖಾಸಗಿ ರೆಸಾರ್ಟ್ ನಲ್ಲಿ ರೇನ್ ಡ್ಯಾನ್ಸ್ ಆಯೋಜಿಸಿದ್ರೆ, ಅತ್ತ ಚಿಕ್ಕನಾಯಕನಹಳ್ಳಿಯ ಅಪಾರ್ಟ್ ಮೆಂಟ್ ನಲ್ಲೂ ಅಸೋಯೇಷನ್ ನಿಂದ ನೀರು ವ್ಯರ್ಥ ಮಾಡಿ ಹೋಳಿ ಆಚರಿಸಲಾಗಿದೆ.

ಸದ್ಯ ನೀರನ ಅಭಾವ ಎದುರಾಗಿರೋ ಹೊತ್ತಲ್ಲೇ ನೀರನ್ನ ವ್ಯರ್ಥ ಮಾಡಬೇಡಿ ಅಂದ್ರು ಕೂಡ ಕೆಲ ಜಾಗಗಳಲ್ಲಿ ನೀರಿನ ದುರ್ಬಳಕೆ ಮಾಡಲಾಗಿದೆ. ಇತ್ತ ಹೋಳಿ ಆಚರಣೆ ನೆಪದಲ್ಲಿ ನೀರು ವ್ಯರ್ಥ ಮಾಡಿದವರಿಗೆ ಶಾಕ್ ನೀಡಿರೋ ಜಲಮಂಡಳಿ, ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆ ಕೊಟ್ಟಿದೆ.

ಇದನ್ನೂ ಓದಿ: ಬೋರ್‌ವೆಲ್‌ಗಳಲ್ಲಿ ನೀರಿನ ಮಟ್ಟ ರಕ್ಷಿಸಲು ಎಐ, ಐ‌ಒಟಿ! ಜಲಮಂಡಳಿ ಹೊಸ ಯೋಜನೆ

ಕುಡಿಯಲು ನೀರಿಲ್ಲದ ಎಷ್ಟೋ‌ ಜನರು ಸಾವಿರಾರು ರೂ ಹಣ ಕೊಟ್ಟು ಟ್ಯಾಂಕರ್ ಗಳನ್ನ ಖರೀದಿ‌ ಮಾಡ್ತಿದ್ದಾರೆ. ‌ಈ‌‌ ಮಧ್ಯೆ ನೀರಿನ ಹಾಹಾಕಾರ ಇರುವ ಬಗ್ಗೆ ಮಾಹಿತಿ ಇದ್ರು‌ ಕೂಡ ಅಪಾರ್ಟ್ಮೆಂಟ್ ಮಾಲೀಕರು ಹಾಗೂ ರೆಸಾರ್ಟ್ ಮಾಲೀಕರು ಹಣದಾಸೆಗೆ ರೈನ್ಸ್ ಡ್ಯಾನ್ಸ್ ಹಾಗೂ ಸ್ವಿಮ್ಮಿಂಗ್ ಡ್ಯಾನ್ಸ್‌ ಮಾಡಿರುವುದು ವಿಷಾದನೀಯ ಎಂದು ನಿವಾಸಿಯೊಬ್ಬರು ಅಸಮಾಧಾನ ಹೊರ ಹಾಕಿದರು.

ಒಟ್ಟಿನಲ್ಲಿ ಒಂದೆಡೆ ನಗರದ ಜಲದಾಹ ದಿನದಿಂದ ದಿನಕ್ಕೆ ಹೆಚ್ಚಾಗ್ತಿರೋ ಹೊತ್ತಲ್ಲೇ, ಅತ್ತ ಜನರು ಮಾತ್ರ ಇರೋ ನೀರನ್ನ ಉಳಿಸಿಕೊಳ್ಳದೇ ವ್ಯರ್ಥ ಮಾಡಿರೋದು ನಿಜಕ್ಕೂ ದುರದೃಷ್ಟಕರ. ಸದ್ಯ ನೀರಿನ ಮಿತಬಳಕೆಗೆ ಜಲಮಂಡಳಿ ಪಣತೊಟ್ಟಿದ್ದು, ಜನರು ಕೂಡ ಇರೋ ನೀರನ್ನ ಹಿತಮಿತವಾಗಿ ಬಳಸಬೇಕಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ
VIDEO: ಮೈದಾನದಲ್ಲೇ ಹೊಡೆದಾಡಿಕೊಂಡ ಬ್ಯಾಟರ್-ಬೌಲರ್..!
VIDEO: ಮೈದಾನದಲ್ಲೇ ಹೊಡೆದಾಡಿಕೊಂಡ ಬ್ಯಾಟರ್-ಬೌಲರ್..!