AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಡಿಯೂರಪ್ಪಗೆ ಯಾಮಾರಿಸಿದ ಎಚ್​ ಡಿ ರೇವಣ್ಣ: ನಿಮಗೆ ಒಳ್ಳೆಯ ಆರೋಗ್ಯ, ಶಕ್ತಿ ಕೊಡಲಿ ಎಂದು ಕೋರಿಕೊಂಡೆ ಎಂದರು!

ಬೆಂಗಳೂರು: ಕರ್ನಾಟಕ ವಿಧಾನಮಂಡಲದ ಎರಡನೆಯ ದಿನದ ಕಾರ್ಯಕಲಾಪ ಆರಂಭವಾಗಿದ್ದು, ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿನ್ನೆ ನಿಧನರಾದ ಕಾಂಗ್ರೆಸ್​ ಹಿರಿಯ ನಾಯಕ ಅಸ್ಕರ್ ಫರ್ನಾಂಡಿಸ್​ ಅವರಿ ಸಂತಾಪ ಸೂಚಿಸಿ, ಮಾತನಾಡುತ್ತಿದ್ದಾರೆ. ಇನ್ನು ಕಲಾಪ ಆರಂಭಕ್ಕೂ ಮುನ್ನ ವಿಧಾನಸೌಧದ ಲಾಂಜ್‌ನಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಮತ್ತು ಜೆಡಿ ಎಸ್​ ಹಿರಿಯ ಶಾಸಕ ಎಚ್​ ಡಿ ರೇವಣ್ಣ ಅವರು ಮುಖಾಮುಖಿಯಾಗಿ ಸ್ವಾರಸ್ಯಕರವಾಗಿ ಮಾತನಾಡಿಕೊಂಡರು. ಮಾಧ್ಯಮಗಳಿಗೆ ಏನು ಹೇಳಿದೆ ರೇವಣ್ಣ ಎಂದು ಬಿ ಎಸ್​ ಯಡಿಯೂರಪ್ಪ ನೇರವಾಗಿ […]

ಯಡಿಯೂರಪ್ಪಗೆ ಯಾಮಾರಿಸಿದ ಎಚ್​ ಡಿ ರೇವಣ್ಣ:  ನಿಮಗೆ ಒಳ್ಳೆಯ ಆರೋಗ್ಯ, ಶಕ್ತಿ ಕೊಡಲಿ ಎಂದು ಕೋರಿಕೊಂಡೆ ಎಂದರು!
ಯಡಿಯೂರಪ್ಪಗೆ ಯಾಮಾರಿಸಿದ ಎಚ್​ ಡಿ ರೇವಣ್ಣ: ನಿಮಗೆ ಒಳ್ಳೆಯ ಆರೋಗ್ಯ, ಶಕ್ತಿ ಕೊಡಲಿ ಎಂದು ಕೋರಿಕೊಂಡೆ ಎಂದರು!
TV9 Web
| Edited By: |

Updated on:Sep 14, 2021 | 12:20 PM

Share

ಬೆಂಗಳೂರು: ಕರ್ನಾಟಕ ವಿಧಾನಮಂಡಲದ ಎರಡನೆಯ ದಿನದ ಕಾರ್ಯಕಲಾಪ ಆರಂಭವಾಗಿದ್ದು, ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿನ್ನೆ ನಿಧನರಾದ ಕಾಂಗ್ರೆಸ್​ ಹಿರಿಯ ನಾಯಕ ಅಸ್ಕರ್ ಫರ್ನಾಂಡಿಸ್​ ಅವರಿ ಸಂತಾಪ ಸೂಚಿಸಿ, ಮಾತನಾಡುತ್ತಿದ್ದಾರೆ. ಇನ್ನು ಕಲಾಪ ಆರಂಭಕ್ಕೂ ಮುನ್ನ ವಿಧಾನಸೌಧದ ಲಾಂಜ್‌ನಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಮತ್ತು ಜೆಡಿ ಎಸ್​ ಹಿರಿಯ ಶಾಸಕ ಎಚ್​ ಡಿ ರೇವಣ್ಣ ಅವರು ಮುಖಾಮುಖಿಯಾಗಿ ಸ್ವಾರಸ್ಯಕರವಾಗಿ ಮಾತನಾಡಿಕೊಂಡರು.

ಮಾಧ್ಯಮಗಳಿಗೆ ಏನು ಹೇಳಿದೆ ರೇವಣ್ಣ ಎಂದು ಬಿ ಎಸ್​ ಯಡಿಯೂರಪ್ಪ ನೇರವಾಗಿ ಕೇಳಿದಾಗ, ಏನೂ ಇಲ್ಲ ಸರ್ ಬಿ ಎಸ್​ಯಡಿಯೂರಪ್ಪಗೆ ಒಳ್ಳೆಯ ಆರೋಗ್ಯ, ಶಕ್ತಿ ಕೊಡಲಿ ಎಂದು ಕೇಳಿರುವುದಾಗಿ ಹೇಳಿದ್ದೇನೆ ಎಂದು ರೇವಣ್ಣ ನಗೆಯಾಡುತ್ತಲೇ ಹೇಳಿದರು. ಅದಕ್ಕೆ ಎಚ್​ ಡಿ ರೇವಣ್ಣ ಅವರ ಭುಜ ತಟ್ಟಿ ಯಡಿಯೂರಪ್ಪ ಮುಂದಕ್ಕೆ ತೆರಳಿದರು.

ರೇವಣ್ಣ ಮಾಧ್ಯಮದವರ ಜೊತೆ ಮಾತನಾಡಿದ್ದು ಕಲ್ಬುರ್ಗಿ ಪಾಲಿಕೆ ವಿಚಾರವಾಗಿ!

ಸದನ ಸಲಹಾ ಸಮಿತಿಯ (ಬಿಎಸಿ) ಸಭೆ ಮುಗಿಸಿಕೊಂಡು ಹೊರಬಂದ ವೇಳೆ ಇಬ್ಬರೂ ನಾಯಕರು ಪರಸ್ಪರ ಮಾತನಾಡಿಕೊಂಡು ಹಾಸ್ಯದ ಚಟಾಕಿ ಹಾರಿಸಿದರು. ಬಿಎಸಿ ಸಭೆ ಮುಗಿಸಿ ವಿಧಾನಸಭೆಗೆ ತೆರಳುವ ವೇಳೆ ವಿಧಾನಸೌಧದ ಲಾಂಜ್ ನಲ್ಲಿ ಮಾಜಿ ಸಿಎಂ ಯಡಿಯೂರಪ್ಪಗೆ ಎದುರಾದ ಜೆಡಿಎಸ್ ಶಾಸಕ ಹೆಚ್‌‌.ಡಿ. ರೇವಣ್ಣ ಅವರನ್ನುದ್ದೇಶಿಸಿ, ಏನು ಹೇಳಿದ್ಯಯ್ಯಾ ಮೀಡಿಯಾಗೆ ಎಂದು ಯಡಿಯೂರಪ್ಪ ಕೇಳಿದರು.

ಏನೂ ಇಲ್ಲ ಸಾರ್, ಯಡಿಯೂರಪ್ಪ ಸಾಹೇಬ್ರಿಗೆ ಒಳ್ಳೆಯ ಆರೋಗ್ಯ, ಶಕ್ತಿ ಕೊಡಲಿ ಎಂದು ಕೇಳಿಕೊಂಡಿದ್ದೇನೆ ಎಂದು ಹೇಳಿದ್ದೇನೆ ಸಾರ್ ಎಂದರು ರೇವಣ್ಣ. ಅದಕ್ಕೆ ನಕ್ಕು ರೇವಣ್ಣ ಭುಜ ತಟ್ಟಿ ವಿಧಾನಸಭೆ ಕಲಾಪದಲ್ಲಿ ಭಾಗವಹಿಸಲು ಯಡಿಯೂರಪ್ಪ ಒಳಹೋದರು. ಗಮನಾರ್ಹವೆಂದರೆ ಇದಕ್ಕೂ ಮುನ್ನ ಕಲ್ಬುರ್ಗಿ ಪಾಲಿಕೆ ವಿಚಾರವಾಗಿ ರೇವಣ್ಣ ಮಾಧ್ಯಮದವರ ಜೊತೆ ಮಾತನಾಡಿದರು.

Karnataka Assembly Session | ವಿಧಾನಸಭೆ​ ಕಲಾಪ ನೇರ ಪ್ರಸಾರ | TV9 Kannada Live

ಇದನ್ನೂ ಓದಿ: ವಿಧಾನಸೌಧ ಎದುರು ಎತ್ತಿನ ಗಾಡಿಯಿಂದ ಕೆಳಗೆ ಬಿದ್ದ ಕಾಂಗ್ರೆಸ್​ ಶಾಸಕರು! ಏನಾಯ್ತು ಅಲ್ಲಿ?

ಇದನ್ನೂ ಓದಿ: ಕಾಂಗ್ರೆಸ್​ನವರು ಯುಪಿಎ ಸರ್ಕಾರ ಇದ್ದಾಗ ಪ್ರತಿಭಟನೆ ಮಾಡಬೇಕಿತ್ತು; ಸದನದಲ್ಲೇ ತಕ್ಕ ಉತ್ತರ ನೀಡುವೆ – ಸಿಎಂ ಬೊಮ್ಮಾಯಿ

(bs yediyurappa and hd revanna meet during bac meet during karnataka assembly session)

Published On - 12:13 pm, Tue, 14 September 21

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!