wheeling: ವ್ಹೀಲಿಂಗ್​ ವಿಚಾರವಾಗಿ ಎರಡು ಗುಂಪುಗಳ ನಡುವೆ ಘರ್ಷಣೆ: 6 ಯುವಕರ ಬಂಧನ

ಗಲಾಟೆ ಸಂಬಂಧ 6 ಯುವಕರನ್ನು ಬಂಧಿಸಿ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ. ನಗರದ ಸಂತೇಮರಹಳ್ಳಿ ವೃತ್ತದ ಬಳಿ ರಾತ್ರಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು.

wheeling: ವ್ಹೀಲಿಂಗ್​ ವಿಚಾರವಾಗಿ ಎರಡು ಗುಂಪುಗಳ ನಡುವೆ ಘರ್ಷಣೆ: 6 ಯುವಕರ ಬಂಧನ
ಪರಿಶೀಲನೆ ಮಾಡುತ್ತಿರುವ ಪೊಲೀಸರು.
Edited By:

Updated on: Sep 06, 2022 | 12:08 PM

ಚಾಮರಾಜನಗರ: ವ್ಹೀಲಿಂಗ್​ ವಿಚಾರವಾಗಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿರುವಂತಹ ಘಟನೆ ಚಾಮರಾಜನಗರದ ಸಂತೇಮರಹಳ್ಳಿ ವೃತ್ತದ ಬಳಿ ರಾತ್ರಿ ನಡೆದಿದೆ. ಗಲಾಟೆ ಸಂಬಂಧ 6 ಯುವಕರನ್ನು ಬಂಧಿಸಿ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ. ನಗರದ ಸಂತೇಮರಹಳ್ಳಿ ವೃತ್ತದ ಬಳಿ ರಾತ್ರಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಬಂದೋಬಸ್ತ್ ಮಾಡದೆ ನಿರ್ಲಕ್ಷ್ಯ ವಹಿಸಲಾಗಿದೆ. ಬಂದೋಬಸ್ತ್​ಗೆ ನಿನ್ನೆ ರಾತ್ರಿ ನೂರಾರು ಪೊಲೀಸರ ನಿಯೋಜನೆ ಮಾಡಿದ್ದು, ಬೆಳಗ್ಗೆ ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸದೇ ನಿರ್ಲಕ್ಷ್ಯವಾಗಿದೆ. ಈ ಕುರಿತಾಗಿ ಚಾಮರಾಜನಗರ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್ ಹೇಳಿಕೆ ನೀಡಿದ್ದು, ಬೈಕ್​ ವ್ಹೀಲಿಂಗ್ ನಿಗ್ರಹಕ್ಕೆ ವಿಶೇಷ ತಂಡವನ್ನು ರಚನೆ ಮಾಡಿದ್ದೇವೆ.

ಗಲಾಟೆ ಸಂಬಂಧ ಒಟ್ಟು 6 ಜನರನ್ನು ವಶಕ್ಕೆ ಪಡೆದಿದ್ದೇವೆ. ಮುಂಜಾಗ್ರತಾ ಕ್ರಮವಾಗಿ ಕೆಎಸ್​​ಆರ್​​ಪಿ, ಡಿಎಆರ್, ಸಿವಿಲ್​ ಸಿಬ್ಬಂದಿಯಿಂದ ಪ್ರಮುಖ ಬೀದಿಗಳಲ್ಲಿ SP ಶಿವಕುಮಾರ್, ASP ಸುಂದರರಾಜು ನೇತೃತ್ವದಲ್ಲಿ ಪಥಸಂಚಲನ ಮಾಡಲಾಗಿದೆ. ಸಂತೇಮರಹಳ್ಳಿ ವೃತ್ತದ ಸುತ್ತಮುತ್ತ ಪೊಲೀಸ್ ಬಿಗಿ ಬಂದೋಬಸ್ತ್​ ಒದಗಿಸಲಾಗಿದೆ ಎಂದು ಹೇಳಿದರು.

ಜಮೀನು ವಿವಾದ ಹಿನ್ನೆಲೆ ಪೊಲೀಸರ ಎದುರೇ ಮಾರಾಮಾರಿ

ಕೋಲಾರ: ಜಮೀನು ವಿವಾದ ಹಿನ್ನೆಲೆ ಪೊಲೀಸರ ಎದುರೇ ಮಾರಾಮಾರಿ ನಡೆದಿರುವಂತಹ ಘಟನೆ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದಲ್ಲಿ ನಡೆದಿದೆ. ರಸ್ತೆಯಲ್ಲಿ ಪೊಲೀಸರ ಎದುರೇ ಮಚ್ಚುಗಳಲ್ಲಿ ಹೊಡೆದಾಡಿಕೊಂಡಿದ್ದು, ಕೆಎಸ್​ಆರ್​ಟಿಸಿ ಬಸ್​ ಕಂಡಕ್ಟರ್​ ವೇಣು ಮೇಲೆ ಮಚ್ಚಿನಿಂದ ಹಲ್ಲೆ ಮಾಡಲಾಗಿದೆ. ಮೀಸಗಾನಹಳ್ಳಿಯ ಕೃಷ್ಣಪ್ಪ, ಸಂಬಂಧಿಕರಿಂದ ಹಲ್ಲೆ ಆರೋಪ ಮಾಡಿದ್ದು, ಜಾಗದ ವಿಚಾರಕ್ಕೆ ಗಂಗರಾಜ್, ಕೃಷ್ಣಪ್ಪ ನಡುವೆ ಗಲಾಟೆಯಾಗಿದೆ. ಗಂಗರಾಜ್​ಗೆ ಕಂಡಕ್ಟರ್​​ ವೇಣು ಬೆಂಬಲಿಸಿದ್ದಕ್ಕೆ ಕೆರಳಿ ಹಲ್ಲೆ ನಡೆಸಿದ್ದು, ಮಾರಾಮಾರಿಯಲ್ಲಿ ಎರಡೂ ಗುಂಪಿನ ನಾಲ್ವರಿಗೆ ಗಾಯವಾಗಿದೆ. ಲಾಠಿಚಾರ್ಜ್ ಮಾಡಿ 2 ಗುಂಪುಗಳನ್ನು ಪೊಲೀಸರು ಚದುರಿಸಿದರು. ಘಟನೆ ಸಂಬಂಧ ಐವರು ಆರೋಪಿಗಳನ್ನು ಬಂಧಿಸಿದ್ದು, ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ: ಬಿಬಿಎಂಪಿ ಕಸದ ಲಾರಿಗೆ ಮತ್ತೊಂದು ಬಲಿ: ಬೈಕ್​ಗೆ ಬಿಬಿಎಂಪಿ ಕಸದ ಲಾರಿ ಡಿಕ್ಕಿ ಹೊಡೆದು ಬೈಕ್​ ಸವಾರ ಸಾವು

ನಡುಬೀದಿಯಲ್ಲಿ‌ ಕುಡುಕರಿಬ್ಬರ ಮಾರಿಮಾರಿ

ಕೋಲಾರ: ನಡುಬೀದಿಯಲ್ಲಿ‌ ಕುಡುಕರಿಬ್ಬರು ಮಾರಾಮಾರಿ ಮಾಡಿರುವಂತಹ ಘಟನೆ ಜಿಲ್ಲೆಯ ನೂತನ ಬಸ್ ನಿಲ್ದಾಣದ ಬಳಿ ಘಟನೆ ನಡೆದಿದೆ. ಎಣ್ಣೆ ಗುಂಗಿನಲ್ಲಿ ಇಬ್ಬರು ಹೊಡೆದಾಡಿಕೊಂಡಿದ್ದು, ಅವ್ಯಾಚ್ಚ ಶಬ್ದಗಳಿಂದ ನಿಂದಿಸುತ್ತಾ ಪರಸ್ಪರ ಕಾದಾಡಿದ್ದಾರೆ. ಯಾವುದೇ ದೂರೂ ಇಲ್ಲ. ಪ್ರತಿದೂರು ಇಲ್ಲ. ಬಡೆದಾಡಿಕೊಂಡು ಮತ್ತೆ‌ ಮನೆ ಹಾದಿ ಹಿಡಿದಿದ್ದಾರೆ. ನಗರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

ಲೈಂಗಿಕ ಕಿರುಕುಳ ಆರೋಪ: ಶಿಕ್ಷಕ ಅಮಾನತು

ಚಿಕ್ಕಬಳ್ಳಾಪುರ: 8ನೇ ತರಗತಿ ವಿದ್ಯಾರ್ಥಿನಿಗೆ ಶಾಲೆಯಲ್ಲೆ ಲೈಂಗಿಕ ಕಿರುಕುಳ ಆರೋಪದಡಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕ ವೆಂಕಟಸ್ವಾಮಿ ನನ್ನು ಅಮಾನತು ಮಾಡಲಾಗಿದೆ. ದೈಹಿಕ ಶಿಕ್ಷಕ ವೆಂಕಟಸ್ವಾಮಿಯನ್ನು ಅಮಾನತು ಮಾಡಿ ಡಿ.ಡಿ.ಪಿ.ಐ ಜಯರಾಮ್ ರೆಡ್ಡಿ ಆದೇಶ ಹೊರಡಿಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 2:50 pm, Sun, 4 September 22