ಚಾಮರಾಜನಗರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಕುರುಡು ಕಾಂಚಾಣ ತಾಂಡವ? ಆಡಿಯೋ ಹೇಳುತ್ತಿದೆ ಲಂಚಾವತಾರದ ಕಥೆ

ಚಾಮರಾಜನಗರ ಜಿಲ್ಲೆಯ ಅಂಗನವಾಡಿ ಕೇಂದ್ರಗಳಿಗೆ ಪೌಷ್ಠಿಕ ಆಹಾರ ಪೂರೈಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಗೀತಾಲಕ್ಷ್ಮೀ ಎಂಬುವವರು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಚಾಮರಾಜನಗರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಕುರುಡು ಕಾಂಚಾಣ ತಾಂಡವ? ಆಡಿಯೋ ಹೇಳುತ್ತಿದೆ ಲಂಚಾವತಾರದ ಕಥೆ
ಲಂಚಕ್ಕೆ ಬೇಡಿಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಮೇಲೆ ಗಂಭೀರ ಆರೋಪ
Updated By: ಕಿರಣ್ ಹನುಮಂತ್​ ಮಾದಾರ್

Updated on: Jul 28, 2023 | 2:55 PM

ಚಾಮರಾಜನಗರ, ಜು.28: ಜಿಲ್ಲೆಯ ಅಂಗನವಾಡಿ ಕೇಂದ್ರಗಳಿಗೆ ಪೌಷ್ಠಿಕ ಆಹಾರ ಪೂರೈಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ(Deputy Director of Women and Child Welfare Department) ಗೀತಾಲಕ್ಷ್ಮೀ ಎಂಬುವವರು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಹೌದು ಮಹಿಳೆಯರೇ ಆಹಾರ ಸಂಸ್ಕರಿಸಿ ಪ್ಯಾಕೆಟ್ ಮಾಡಿ ಅಂಗನವಾಡಿ ಕೇಂದ್ರಗಳಿಗೆ ಪೂರೈಸುವ ಕೇಂದ್ರ ನಡೆಸುತ್ತಿದ್ದರು. ಇದಕ್ಕೆ ಪ್ರತಿ ತಿಂಗಳು ಬಿಲ್‌ ಮಂಜೂರು ಮಾಡಲು ಅಧಿಕಾರಿಗಳಿಗೆ 1 ಲಕ್ಷ ರೂಪಾಯಿ ಲಂಚ ನೀಡಬೇಕು ಎಂಬ ಗಂಭೀರ ಆರೋಪವನ್ನ ಮಹಿಳಾ ಸ್ವ ಸಹಾಯ ಸಂಘದ ಮುಖ್ಯಸ್ಥೆ ನಾಗವೇಣಿ ಎಂಬುವವರು ಮಾಡಿದ್ದಾರೆ.

ಲಂಚಕ್ಕಾಗಿ ಡಿಮ್ಯಾಂಡ್ ಮಾಡಿದ್ರ ಮಹಿಳಾ ಅಧಿಕಾರಿ?

ಲಂಚ ಕೊಡದೇ ಇದ್ದುದ್ದಕ್ಕೆ ಅಧಿಕಾರಿಗಳು ಕೇಂದ್ರವನ್ನೇ ಬಂದ್ ಮಾಡಿಸಿದರು ಎಂಬ ಆರೋಪ ಮಾಡುತ್ತಿದ್ದಾರೆ. ತಾವು ಸೂಚಿಸಿದ ವ್ಯಕ್ತಿಯಿಂದಲೇ ಕಚ್ಚಾ ಆಹಾರ ಖರೀದಿಸಬೇಕಂತೆ, ಇನ್ನು ಈ ಕುರಿತಾಗಿ ಹಿಂದಿನ ಸಿಡಿಪಿಒಗೆ ಗೂಗಲ್ ಪೇ ಮೂಲಕ ಲಂಚದ ಹಣ ಪಾವತಿ ಬಗ್ಗೆ, ಜೊತೆಗೆ ಮದ್ಯವರ್ತಿ ಮೂಲಕ ಲಂಚ ನೀಡಿರುವ ಕುರಿತು ಫೋನ್ ಸಂಭಾಷಣೆಯ ದಾಖಲೆಯನ್ನ ಗೀತಾಲಕ್ಷ್ಮೀ ಅವರು ನೀಡಿದ್ದಾರೆ. ಇನ್ನು ಈಗಿನ ಸಿಡಿಪಿಒಗೆ ಲಂಚ ಕೊಡದ ಹಾಗೂ ಅವರು ಹೇಳಿದ ಕಡೆಯಲ್ಲೇ ಕಚ್ಚಾ ಆಹಾರ ಖರೀದಿಸದ ಕಾರಣ ಆಹಾರ ಕೇಂದ್ರವನ್ನ ಬಂದ್ ಮಾಡಿಸಿದ್ದಾರಂತೆ. ಇದರಿಂದ ಸ್ವ ಸಹಾಯ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ 15 ಕ್ಕೂ ಹೆಚ್ಚು ಮಹಿಳೆಯರು ಈಗ ಬೀದಿ ಪಾಲಾಗಿದ್ದಾರೆ.

ಇದನ್ನೂ ಓದಿ:Bengaluru; ತಮ್ಮ ಮೊದಲ ಅವಧಿಯ ಆಡಳಿತಾವಧಿಯಲ್ಲಿ ಭ್ರಷ್ಟಾಚಾರ ನಡೆದಿಲ್ಲ ಅಂತ ಹೇಳುವ ಸಿದ್ದರಾಮಯ್ಯ ಭಂಡತನ ಪ್ರದರ್ಶಿಸುತ್ತಿದ್ದಾರೆ: ಬಸವರಾಜ ಬೊಮ್ಮಾಯಿ

ಆರೋಪವನ್ನ ಅಲ್ಲಗಳೆದ ಅಧಿಕಾರಿ

ಇಷ್ಟೆಲ್ಲಾ ದಾಖಲೆ ಸಹಿತ ಆರೋಪಿಸಿದರೂ, ಆ ಆರೋಪದಲ್ಲಿ ಹುರುಳಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಗೀತಾಲಕ್ಷ್ಮೀ ಹೇಳುತ್ತಿದ್ದಾರೆ. ಹೌದು ಈ ಎಲ್ಲಾ ಆರೋಪವನ್ನ ಸಾರಾ ಸಗಟಾಗಿ ತಳ್ಳಿ ಹಾಕಿದ್ದಾರೆ. ಸರಿಯಾದ ಸಮಯಕ್ಕೆ ಪೌಷ್ಟಿಕ ಆಹಾರ ಸರಬರಾಜು ಮಾಡುವಲ್ಲಿ ವಿಫಲವಾಗಿದ್ದಾರೆ. ಜಿಎಸ್ಟಿ ಲ್ಯಾಪ್ಸ್ ಆಗಿದೆ. ಗುಣಮಟ್ಟದ ಆಹಾರ ಸರಬರಾಜು ಮಾಡುತ್ತಿರಲಿಲ್ಲ. ಆಡಿಟ್ ಮಾಡಿಸಿಲ್ಲ ಹಾಗಾಗಿ ಕೇಂದ್ರ ಬಂದ್ ಮಾಡಿಸಿದ್ದೇವೆ ಎಂದು ಅಧಿಕಾರಿ ಸಬೂಬು ನೀಡಿದ್ದಾರೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ