AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇರಳ ಗುಡ್ಡ ಕುಸಿತ: ಕನ್ನಡತಿ ಜಯಮ್ಮರ ಜೀವ ಉಳಿಸಿದ ದನಕರುಗಳು

ಕೇರಳದ ವಯನಾಡು ಜಿಲ್ಲೆಯಲ್ಲಿ ಭೀಕರ ಭೂಕುಸಿತದಿಂದ ಸಾವನ್ನಪ್ಪಿದವರ ಸಂಖ್ಯೆ 330 ದಾಟಿದೆ. ಇನ್ನೂ 300 ಜನರು ನಾಪತ್ತೆಯಾಗಿದ್ದಾರೆ. ಈ ನಡುವೆ ಭೀಕರ ಗುಡ್ಡ ಕುಸಿತದಿಂದ ತಪ್ಪಿಸಿಕೊಂಡು ಸಾವನ್ನು ಗೆದ್ದು ಬಂದ ಗಟ್ಟಿಗಿತ್ತಿ ಕನ್ನಡತಿಯ ರೋಚಕ ಕಥೆ ಇಲ್ಲಿದೆ.

ಕೇರಳ ಗುಡ್ಡ ಕುಸಿತ: ಕನ್ನಡತಿ ಜಯಮ್ಮರ ಜೀವ ಉಳಿಸಿದ ದನಕರುಗಳು
ಜಯಮ್ಮ
ಸೂರಜ್ ಪ್ರಸಾದ್ ಎಸ್.ಎನ್
| Edited By: |

Updated on: Aug 03, 2024 | 9:24 AM

Share

ಚಾಮರಾಜನಗರ, ಆಗಸ್ಟ್​ 03: ಕೇರಳದ ವಯನಾಡಿನಲ್ಲಿ ಭಾರಿ ಗುಡ್ಡ ಕುಸಿತದಿಂದ  (Wayanad land slide) ಸಾವನ್ನಪ್ಪಿದವರ ಸಂಖ್ಯೆ 330 ದಾಟಿದೆ. ಇನ್ನೂ 300 ಜನರು ನಾಪತ್ತೆಯಾಗಿದ್ದಾರೆ. ಅವರಿಗಾಗಿ ಮಣ್ಣಿನ ಅವಶೇಷಗಳಲ್ಲಿ ತೀವ್ರ ಶೋಧ ಕಾರ್ಯಾಚರಣೆ ನಡೆದಿದೆ. ಕರ್ನಾಟಕದ ಆರು ಜನ ಮೃತಪಟ್ಟಿದ್ದಾರೆ. ಇದೇ ಭೀಕರ ಗುಡ್ಡ ಕುಸಿತದಿಂದ ತಪ್ಪಿಸಿಕೊಂಡು ಸಾವನ್ನು ಗೆದ್ದು ಬಂದ ಗಟ್ಟಿಗಿತ್ತಿ ಕನ್ನಡತಿಯ ರೋಚಕ ಕಥೆ ಇಲ್ಲಿದೆ.

ಜಯಮ್ಮ ದಂಪತಿ ವಯನಾಡು ಬಳಿಯ ಚೂರಲ್ಮಲದಲ್ಲಿ 35 ವರ್ಷಗಳಿಂದ ವಾಸವಾಗಿದ್ದರು. ಟೀ ಎಸ್ಟೇಟ್​ನಲ್ಲಿ ಕೆಲಸ ಮಾಡುತ್ತ ಹೈನುಗಾರಿಕೆ ಮಾಡಿಕೊಂಡಿದ್ದರು. ಜುಲೈ 23ರ ರಾತ್ರಿ ದನಕರಗಳು ಇದ್ದಕ್ಕಿದ್ದಂತೆ ಅರಚಲು ಶುರು ಮಾಡಿದ್ದವು. ದನಕರುಗಳು ಅರಚುವುದನ್ನು ಕಂಡು ಜಯಮ್ಮ ಕೊಟ್ಟಿಗೆ ಬಳಿ ಹೋಗಿ ನೋಡಿದಾಗ ಒಂದು ಕ್ಷಣ ಧಿಗ್ಬ್ರಾಂತರಾಗಿದ್ದಾರೆ.

ಸುಮುದ್ರದ ಅಲೆಯಂತೆ ಇರುವಝಿಂಜಿ ನದಿಯ ಹರಿವು ಜೋರಾಗಿತ್ತು. ನದಿ ನೀರು ಗ್ರಾಮದೊಳಗೆ ನುಗ್ಗಲು ಆರಂಭಿಸಿದೆ. ಹಾಗೆ ಅತ್ತ ಆಗುತಾನೆ ಗುಡ್ಡ ಕುಸಿಯಲು ಆರಂಭಿಸಿತ್ತು. ತಕ್ಷಣವೇ ಜಯಮ್ಮ ಪತಿ ಹಾಗೂ ಮಗನನ್ನು ಹೊರಗೆ ಕರೆದಿದ್ದಾರೆ. ಬಳಿಕ, ಅದಾಗಲೆ ಗುಡ್ಡ ಹತ್ತಿ ಕೂತಿದ್ದ ವಿನೋದ್​ ಎಂಬುವರು ಜಯಮ್ಮರ ಕೈ ಹಿಡಿದು ಮೇಲೆ ಎಳೆದುಕೊಂಡಿದ್ದಾರೆ. ನಂತರ ಗುಡ್ಡದ ಮೇಲೆ ಇದ್ದ ಇನ್ನೀತರರು ಜಯಮ್ಮನ ಪತಿ ಹಾಗೂ ಮಗನನ್ನೂ ಮೇಲೆ ಏಳುದುಕೊಂಡಿದ್ದಾರೆ.

ಇದನ್ನೂ ಓದಿ: ಕೇರಳ ವಯನಾಡು ಗುಡ್ಡ ಕುಸಿತದಿಂದ ಪಾರಾಗಿ, ಮೂವರನ್ನ ರಕ್ಷಿಸಿದ ಕನ್ನಡಿಗನ ಸಾಹಸ ಕಥೆ ಇಲ್ಲಿದೆ

ಆದರೆ, ಕಣ್ಣ ಮುಂದೆಯೇ ಆರು ಹಸುಗಳು ಕೊಚ್ಚಿ ಹೋದವು. ಹಸುಗಳು ಕೊಚ್ಚಿ ಹೋಗುತ್ತಿದ್ದರೂ ಏನು ಮಾಡಲಾಗದ ಪರಿಸ್ಥಿತಿ ಅವರಿಗಿತ್ತು. ಜಯಮ್ಮನ ಮನೆ ಸಂಪೂರ್ಣ ನಾಶವಾಗಿದೆ. ಜಯಮ್ಮ ಉಟ್ಟು ಬಟ್ಟೆಯಲ್ಲೇ ಕೇರಳ ತೊರೆದು, ತವರು ಮನೆ ಚಾಮರಾಜನಗರಕ್ಕೆ ಬಂದಿದ್ದಾರೆ. ಸದ್ಯ ಜಯಮ್ಮ ಮಗಳ ಮನೆಯಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.

“ನಮ್ಮ ಜೀವನಕ್ಕೆ ಆಧಾರವಾಗಿದ್ದ ದನಕರುಗಳು ಕೊಚ್ಚಿಕೊಂಡು ಹೋಗಿವೆ. ನಾವು ಬೀದಿಗೆ ಬಂದಿದ್ದೇವೆ. ಮುಂದೆ ನಾವು ಜೀವನ ನಡೆಸಲು ಕಷ್ಟವಾಗುತ್ತದೆ. ನಮಗೆ ಮತ್ತೆ ಕೇರಳಕ್ಕೆ ಹೋಗಿ ಜೀವನ ಮಾಡಲು ಆಗಲ್ಲ. ನಾವು ಇಲ್ಲೇ ಜೀವನ ಸಾಗಿಸುತ್ತೇವೆ. ಹೀಗಾಗಿ ಸರ್ಕಾರ ನಮಗೆ ಇಲ್ಲೇ ಒಂದು ಕೆಲಸ ನೀಡಲಿ. ಜೀವನ ಸಾಗಿಸಿಕೊಂಡು ಹೋಗುತ್ತೇವೆ” ಎಂದು ಜಯಮ್ಮ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ