AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇರಳ ಗುಡ್ಡ ಕುಸಿತ: ಕನ್ನಡತಿ ಜಯಮ್ಮರ ಜೀವ ಉಳಿಸಿದ ದನಕರುಗಳು

ಕೇರಳದ ವಯನಾಡು ಜಿಲ್ಲೆಯಲ್ಲಿ ಭೀಕರ ಭೂಕುಸಿತದಿಂದ ಸಾವನ್ನಪ್ಪಿದವರ ಸಂಖ್ಯೆ 330 ದಾಟಿದೆ. ಇನ್ನೂ 300 ಜನರು ನಾಪತ್ತೆಯಾಗಿದ್ದಾರೆ. ಈ ನಡುವೆ ಭೀಕರ ಗುಡ್ಡ ಕುಸಿತದಿಂದ ತಪ್ಪಿಸಿಕೊಂಡು ಸಾವನ್ನು ಗೆದ್ದು ಬಂದ ಗಟ್ಟಿಗಿತ್ತಿ ಕನ್ನಡತಿಯ ರೋಚಕ ಕಥೆ ಇಲ್ಲಿದೆ.

ಕೇರಳ ಗುಡ್ಡ ಕುಸಿತ: ಕನ್ನಡತಿ ಜಯಮ್ಮರ ಜೀವ ಉಳಿಸಿದ ದನಕರುಗಳು
ಜಯಮ್ಮ
ಸೂರಜ್ ಪ್ರಸಾದ್ ಎಸ್.ಎನ್
| Edited By: ವಿವೇಕ ಬಿರಾದಾರ|

Updated on: Aug 03, 2024 | 9:24 AM

Share

ಚಾಮರಾಜನಗರ, ಆಗಸ್ಟ್​ 03: ಕೇರಳದ ವಯನಾಡಿನಲ್ಲಿ ಭಾರಿ ಗುಡ್ಡ ಕುಸಿತದಿಂದ  (Wayanad land slide) ಸಾವನ್ನಪ್ಪಿದವರ ಸಂಖ್ಯೆ 330 ದಾಟಿದೆ. ಇನ್ನೂ 300 ಜನರು ನಾಪತ್ತೆಯಾಗಿದ್ದಾರೆ. ಅವರಿಗಾಗಿ ಮಣ್ಣಿನ ಅವಶೇಷಗಳಲ್ಲಿ ತೀವ್ರ ಶೋಧ ಕಾರ್ಯಾಚರಣೆ ನಡೆದಿದೆ. ಕರ್ನಾಟಕದ ಆರು ಜನ ಮೃತಪಟ್ಟಿದ್ದಾರೆ. ಇದೇ ಭೀಕರ ಗುಡ್ಡ ಕುಸಿತದಿಂದ ತಪ್ಪಿಸಿಕೊಂಡು ಸಾವನ್ನು ಗೆದ್ದು ಬಂದ ಗಟ್ಟಿಗಿತ್ತಿ ಕನ್ನಡತಿಯ ರೋಚಕ ಕಥೆ ಇಲ್ಲಿದೆ.

ಜಯಮ್ಮ ದಂಪತಿ ವಯನಾಡು ಬಳಿಯ ಚೂರಲ್ಮಲದಲ್ಲಿ 35 ವರ್ಷಗಳಿಂದ ವಾಸವಾಗಿದ್ದರು. ಟೀ ಎಸ್ಟೇಟ್​ನಲ್ಲಿ ಕೆಲಸ ಮಾಡುತ್ತ ಹೈನುಗಾರಿಕೆ ಮಾಡಿಕೊಂಡಿದ್ದರು. ಜುಲೈ 23ರ ರಾತ್ರಿ ದನಕರಗಳು ಇದ್ದಕ್ಕಿದ್ದಂತೆ ಅರಚಲು ಶುರು ಮಾಡಿದ್ದವು. ದನಕರುಗಳು ಅರಚುವುದನ್ನು ಕಂಡು ಜಯಮ್ಮ ಕೊಟ್ಟಿಗೆ ಬಳಿ ಹೋಗಿ ನೋಡಿದಾಗ ಒಂದು ಕ್ಷಣ ಧಿಗ್ಬ್ರಾಂತರಾಗಿದ್ದಾರೆ.

ಸುಮುದ್ರದ ಅಲೆಯಂತೆ ಇರುವಝಿಂಜಿ ನದಿಯ ಹರಿವು ಜೋರಾಗಿತ್ತು. ನದಿ ನೀರು ಗ್ರಾಮದೊಳಗೆ ನುಗ್ಗಲು ಆರಂಭಿಸಿದೆ. ಹಾಗೆ ಅತ್ತ ಆಗುತಾನೆ ಗುಡ್ಡ ಕುಸಿಯಲು ಆರಂಭಿಸಿತ್ತು. ತಕ್ಷಣವೇ ಜಯಮ್ಮ ಪತಿ ಹಾಗೂ ಮಗನನ್ನು ಹೊರಗೆ ಕರೆದಿದ್ದಾರೆ. ಬಳಿಕ, ಅದಾಗಲೆ ಗುಡ್ಡ ಹತ್ತಿ ಕೂತಿದ್ದ ವಿನೋದ್​ ಎಂಬುವರು ಜಯಮ್ಮರ ಕೈ ಹಿಡಿದು ಮೇಲೆ ಎಳೆದುಕೊಂಡಿದ್ದಾರೆ. ನಂತರ ಗುಡ್ಡದ ಮೇಲೆ ಇದ್ದ ಇನ್ನೀತರರು ಜಯಮ್ಮನ ಪತಿ ಹಾಗೂ ಮಗನನ್ನೂ ಮೇಲೆ ಏಳುದುಕೊಂಡಿದ್ದಾರೆ.

ಇದನ್ನೂ ಓದಿ: ಕೇರಳ ವಯನಾಡು ಗುಡ್ಡ ಕುಸಿತದಿಂದ ಪಾರಾಗಿ, ಮೂವರನ್ನ ರಕ್ಷಿಸಿದ ಕನ್ನಡಿಗನ ಸಾಹಸ ಕಥೆ ಇಲ್ಲಿದೆ

ಆದರೆ, ಕಣ್ಣ ಮುಂದೆಯೇ ಆರು ಹಸುಗಳು ಕೊಚ್ಚಿ ಹೋದವು. ಹಸುಗಳು ಕೊಚ್ಚಿ ಹೋಗುತ್ತಿದ್ದರೂ ಏನು ಮಾಡಲಾಗದ ಪರಿಸ್ಥಿತಿ ಅವರಿಗಿತ್ತು. ಜಯಮ್ಮನ ಮನೆ ಸಂಪೂರ್ಣ ನಾಶವಾಗಿದೆ. ಜಯಮ್ಮ ಉಟ್ಟು ಬಟ್ಟೆಯಲ್ಲೇ ಕೇರಳ ತೊರೆದು, ತವರು ಮನೆ ಚಾಮರಾಜನಗರಕ್ಕೆ ಬಂದಿದ್ದಾರೆ. ಸದ್ಯ ಜಯಮ್ಮ ಮಗಳ ಮನೆಯಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.

“ನಮ್ಮ ಜೀವನಕ್ಕೆ ಆಧಾರವಾಗಿದ್ದ ದನಕರುಗಳು ಕೊಚ್ಚಿಕೊಂಡು ಹೋಗಿವೆ. ನಾವು ಬೀದಿಗೆ ಬಂದಿದ್ದೇವೆ. ಮುಂದೆ ನಾವು ಜೀವನ ನಡೆಸಲು ಕಷ್ಟವಾಗುತ್ತದೆ. ನಮಗೆ ಮತ್ತೆ ಕೇರಳಕ್ಕೆ ಹೋಗಿ ಜೀವನ ಮಾಡಲು ಆಗಲ್ಲ. ನಾವು ಇಲ್ಲೇ ಜೀವನ ಸಾಗಿಸುತ್ತೇವೆ. ಹೀಗಾಗಿ ಸರ್ಕಾರ ನಮಗೆ ಇಲ್ಲೇ ಒಂದು ಕೆಲಸ ನೀಡಲಿ. ಜೀವನ ಸಾಗಿಸಿಕೊಂಡು ಹೋಗುತ್ತೇವೆ” ಎಂದು ಜಯಮ್ಮ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Follow Us
ವಿನಯ್​ನೇ ನಾಮಿನೇಟ್ ಮಾಡಿದ ಸ್ಪರ್ಧಿ; ಸ್ಟಾರ್ಟಪ್ ಕಾರಣ ನೀಡಿದ ಕಂಟೆಸ್ಟಂಟ್
ವಿನಯ್​ನೇ ನಾಮಿನೇಟ್ ಮಾಡಿದ ಸ್ಪರ್ಧಿ; ಸ್ಟಾರ್ಟಪ್ ಕಾರಣ ನೀಡಿದ ಕಂಟೆಸ್ಟಂಟ್
ಶಿವಶಂಕರಪ್ಪ ಸಾಹುಕಾರ್ ಮನೆ ಸೇರಿ 21 ಕಡೆ ಇಡಿ ಮೆಗಾ ರೇಡ್!
ಶಿವಶಂಕರಪ್ಪ ಸಾಹುಕಾರ್ ಮನೆ ಸೇರಿ 21 ಕಡೆ ಇಡಿ ಮೆಗಾ ರೇಡ್!
ವಿಟಿಯು ಸಿಂಡಿಕೇಟ್ ಸದಸ್ಯನಿಂದಲೇ ಪರೀಕ್ಷಾ ಗೋಲ್ಮಾಲ್!
ವಿಟಿಯು ಸಿಂಡಿಕೇಟ್ ಸದಸ್ಯನಿಂದಲೇ ಪರೀಕ್ಷಾ ಗೋಲ್ಮಾಲ್!
‘ನೀ ನಂಗೆ ಅಲ್ಲವ’ ಸಿನಿಮಾಗೆ ‘ಬಿಗ್ ಬಾಸ್’ ಮಾಜಿಸ್ಪರ್ಧಿ ರಾಶಿಕಾ ವಿಶ್
‘ನೀ ನಂಗೆ ಅಲ್ಲವ’ ಸಿನಿಮಾಗೆ ‘ಬಿಗ್ ಬಾಸ್’ ಮಾಜಿಸ್ಪರ್ಧಿ ರಾಶಿಕಾ ವಿಶ್
ಕಳಪೆ ಆಹಾರ ಪೂರೈಸುವ ಹೋಟೆಲ್​ಗಳಿಗೆ 5 ಲಕ್ಷ ರೂ. ವರೆಗೆ ದಂಡ!
ಕಳಪೆ ಆಹಾರ ಪೂರೈಸುವ ಹೋಟೆಲ್​ಗಳಿಗೆ 5 ಲಕ್ಷ ರೂ. ವರೆಗೆ ದಂಡ!
ಇಂದು ಫ್ರೀಡಂಪಾರ್ಕ್​ನಲ್ಲಿ ಜೆಡಿಎಸ್​ ಪ್ರತಿಭಟನೆ; ಸಂಚಾರ ಮಾರ್ಗ ಬದಲಾವಣೆ
ಇಂದು ಫ್ರೀಡಂಪಾರ್ಕ್​ನಲ್ಲಿ ಜೆಡಿಎಸ್​ ಪ್ರತಿಭಟನೆ; ಸಂಚಾರ ಮಾರ್ಗ ಬದಲಾವಣೆ
ಮಂಗಳಗೌರಿ ವ್ರತ ಇಂದು: ಮೇಷಾದಿ ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಮಂಗಳಗೌರಿ ವ್ರತ ಇಂದು: ಮೇಷಾದಿ ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಪ್ರದೋಷ್ ಮಾಫಿ ಸಾಕ್ಷಿ ಅರ್ಜಿ ವಿಚಾರಣೆ ಮುಂದೂಡಿಕೆ; ದರ್ಶನ್ ಮನವಿ ವಜಾ
ಪ್ರದೋಷ್ ಮಾಫಿ ಸಾಕ್ಷಿ ಅರ್ಜಿ ವಿಚಾರಣೆ ಮುಂದೂಡಿಕೆ; ದರ್ಶನ್ ಮನವಿ ವಜಾ
ಬೆಂಗಳೂರಿನಲ್ಲಿ 800 KG ಜಿಲೆಟಿನ್‌ ಜಪ್ತಿ, ದೊಡ್ಡ ಅಪಾಯ ಜಸ್ಟ್ ಮಿಸ್!
ಬೆಂಗಳೂರಿನಲ್ಲಿ 800 KG ಜಿಲೆಟಿನ್‌ ಜಪ್ತಿ, ದೊಡ್ಡ ಅಪಾಯ ಜಸ್ಟ್ ಮಿಸ್!
ಮದ್ಯದ ಬಾಟಲ್ ಇಟ್ಟುಕೊಂಡು ಯಾರಿವಳು ಯಾರಿವಳು ಹಾಡು ಹಾಡಿದ ಸ್ವಾಮೀಜಿ
ಮದ್ಯದ ಬಾಟಲ್ ಇಟ್ಟುಕೊಂಡು ಯಾರಿವಳು ಯಾರಿವಳು ಹಾಡು ಹಾಡಿದ ಸ್ವಾಮೀಜಿ