AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಂಡ ಹಾಯುವುದು ಗೊತ್ತು, ಆದರೆ ಬಾಣಹಳ್ಳಿಯಲ್ಲಿ ನಡೆಯುವ ಸತ್ಯವತಿ ಜಾತ್ರೆಯಲ್ಲಿ ದೇವರಿಗೆ ಉರಿಯುವ ಕೆಂಡವೇ ನೈವೇದ್ಯ! ಇದು ತಲೆ‌ತಲಾಂತರಗಳ ವಾಡಿಕೆ

kenda jatre: ಇಲ್ಲಿ ದೇವರಿಗೆ ಉರಿಯುವ ಕೆಂಡವೇ ನೈವೇದ್ಯ. ಕೆಂಡದ ರಾಶಿಯಿಂದ ಬರಿಗೈಲಿ ಕೊಳಗದಲ್ಲಿ ಅಳೆದು ಜೋಳಿಗೆಗೆ ಸುರಿದು ದೇವರಿಗೆ ನೈವೇದ್ಯೆ ಮಾಡಲಾಗುತ್ತೆ. ನಿಜಕ್ಕೂ ಮೈನವಿರೇಳಿಸುವ ಈ ಜಾತ್ರೆ ಎಲ್ಲಿ ನಡೆಯುವುದು ಎಲ್ಲಿ ಅಂತೀರಾ? ಈ ಸ್ಟೋರಿ ನೋಡಿ

ಕೊಂಡ ಹಾಯುವುದು ಗೊತ್ತು, ಆದರೆ ಬಾಣಹಳ್ಳಿಯಲ್ಲಿ ನಡೆಯುವ ಸತ್ಯವತಿ ಜಾತ್ರೆಯಲ್ಲಿ ದೇವರಿಗೆ ಉರಿಯುವ ಕೆಂಡವೇ ನೈವೇದ್ಯ! ಇದು ತಲೆ‌ತಲಾಂತರಗಳ ವಾಡಿಕೆ
ಬಾಣಹಳ್ಳಿಯಲ್ಲಿ ನಡೆಯುವ ಸತ್ಯವತಿ ಜಾತ್ರೆಯಲ್ಲಿ ದೇವರಿಗೆ ಉರಿಯುವ ಕೆಂಡವೇ ನೈವೇದ್ಯ!
TV9 Web
| Updated By: ಸಾಧು ಶ್ರೀನಾಥ್​|

Updated on:Mar 07, 2023 | 5:21 PM

Share

ಚಾಮರಾಜನಗರ (Chamarajanagar) ತಾಲೂಕು ಬಾಣಹಳ್ಳಿಯಲ್ಲಿ ನಡೆಯುವ ಸತ್ಯವತಿ ಜಾತ್ರೆ ನಿಜಕ್ಕೂ ಮೈ ನವಿರೇಳಿಸುತ್ತದೆ. ಸಾಮಾನ್ಯವಾಗಿ ಜಾತ್ರೆಗಳಲ್ಲಿ ಹರಕೆ ಹೊತ್ತ ಭಕ್ತರು ಕೊಂಡ ಹಾಯುವುದನ್ನು (konda jatre) ನೋಡಿದ್ದೇವೆ. ಆದರೆ ಬಾಣಹಳ್ಳಿಯಲ್ಲಿ ನಡೆಯುವ ಸತ್ಯವತಿ ಜಾತ್ರೆಯಲ್ಲಿ ಉರಿಯುವ ಕೆಂಡವನ್ನೇ ದೇವರಿಗೆ ನೈವೇದ್ಯ ಮಾಡಲಾಗುತ್ತೆ. ಉರಿಯುವ ಕೆಂಡವನ್ನು ಬರಿಗೈಲಿ ತುಂಬಿ ಕೊಳಗದಲ್ಲಿ ಅಳೆದು ಬಟ್ಟೆಯ ಜೋಳಿಗೆಗೆ ಸುರಿಯಲಾಗುತ್ತೆ. ಕೆಂಡ ತುಂಬಿದ ಜೋಳಿಗೆಯನ್ನು ಗರ್ಭಗುಡಿಗೆ ಕೊಂಡೊಯ್ದು ಬಾಳೆ ಎಲೆ ಮೇಲೆ ಕೆಂಡ ಸುರಿದು ಸತ್ಯವತಿ ದೇವಿಗೆ ನೈವೇದ್ಯ ಮಾಡಲಾಗುತ್ತೆ. ಬೆಳಿಗ್ಗೆಯೇ ಕಾಡಿನಿಂದ ಹಸಿ ಮರ ಕಡಿದು ತಂದು ಸತ್ಯವತಿ ದೇವಸ್ಥಾನದ ಮುಂದೆ ರಾಶಿ ಮಾಡಿ ಕೊಂಡ ಸಿದ್ದಪಡಿಸಲಾಗುತ್ತೆ‌. ಸತ್ಯವತಿ ದೇವಸ್ಥಾನದ ಅರ್ಚಕ ಸುಬ್ಬಪ್ಪ ಅವರು ಬೆಳಿಗ್ಗೆಯಿಂದ ಉಪವಾಸವಿದ್ದು ಬಳಿಕ ಕೊಂಡ ಹಾಕುವ ಸ್ಥಳಕ್ಕೆಸತ್ತಿಗೆ ಸೂರಪಾನಿ ಗಳೊಂದಿಗೆ ಮೆರವಣಿಗೆಯಲ್ಲಿ ಬಂದು ಕೆಂಡದ ರಾಶಿಗೆ ಬರಿಗೈ ಹಾಕಿ ಕೆಂಡವನ್ನು ಕೊಳಗದಲ್ಲಿ ಅಳೆದ ಜೋಳಿಗೆಗೆ ತುಂಬುತ್ತಾರೆ ( kenda jatre).

ಬರಿಗೈಯಲ್ಲಿ ಕೆಂಡ ತುಂಬಿದರು ಅರ್ಚಕನ ಕೈ ಸುಡುವುದಿಲ್ಲವಂತೆ! ಜೋಳಿಗೆ ಸುಟ್ಟು ಹೋಗುವುದಿಲ್ಲವಂತೆ.ಈ ಜಾತ್ರೆ ತಲೆ‌ತಲಾಂತರಗಳಿಂದಲೂ ನಡೆದುಕೊಂಡು ಬಂದಿದೆಯಂತೆ. ಈ ಜಾತ್ರೆ ಹಾಗೂ ಇಲ್ಲಿನ ದೇವಿಯ ಶಕ್ತಿ ಬಗ್ಗೆ ಎಲ್ಲರಿಗೂ ನಂಬಿಕೆ ಇದೆ. ಇದರಿಂದ ಇದೆಲ್ಲಾ ಸತ್ಯವತಿ ದೇವಿಯ ಪವಾಡ ಎಂಬುದು ಗ್ರಾಮಸ್ಥರ ನಂಬಿಕೆಯಾಗಿದೆ.

ಇದನ್ನೂ ಓದಿ:

ಕಲಬುರಗಿ: “ಸಣ್ಣ ರೈತರಿಗೆ ಕೃಷಿ ಉಪಕರಣಗಳ ಬಳಕೆ” ಕಾರ್ಯಾಗಾರಕ್ಕೆ ಅರ್ಜಿ ಆಹ್ವಾನ

ದೇವಸ್ಥಾನಕ್ಕೆ ಪ್ರವೇಶ ಮಾಡುವ ವಿವಾದದ ಹಿನ್ನೆಲೆ ಹಾಗೂ ಕೊರೊನಾ ಕಾರಣದಿಂದ ಸತ್ಯವತಿ ಜಾತ್ರೆ ಕಳೆದ ಐದು ವರ್ಷಗಳಿಂದ ನಿಂತು ಹೋಗಿತ್ತು. ಇದೀಗ ಐದು ವರ್ಷಗಳ ಬಳಿಕ ಜಾತ್ರೆ ನಡೆದ ಹಿನ್ನೆಲೆಯಲ್ಲಿ ಸಹಸ್ರಾರು ಭಕ್ತರು ಆಗಮಿಸಿ ಕೊಳಗಕ್ಕೆ ಕೆಂಡವನ್ನು ಬರಿಗೈಲಿ ಅಳೆದು ತುಂಬುವ ಮೈನವಿರೇಳಿಸುವ ದೃಶ್ಯ ಕಣ್ತುಂಬಿಕೊಂಡರು.

ವರದಿ: ದಿಲೀಪ್ ಚೌಡಹಳ್ಳಿ, ಟಿವಿ9, ಚಾಮರಾಜನಗರ

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:17 pm, Tue, 7 March 23

ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ