ಕರ್ನಾಟಕದ ಲಾಲಿಹಾಡಿಗೆ ಮನಸೋತ ಮೋದಿ, ಮನ್ ಕೀ ಬಾತ್​​ನಲ್ಲಿ ಮೆಚ್ಚಿದ ಮಂಜುನಾಥ್​ ಯಾರು? ಇಲ್ಲಿದೆ ಮಾಹಿತಿ

ಈ ಸ್ಪರ್ಧೆ ಬಗ್ಗೆ ನನಗೆ ಮಾಹಿತಿ ಇರಲಿಲ್ಲ. ನನ್ನ ಪತ್ನಿ ಹಾಗೂ ಮಗ ಹೇಳಿದರು. ಬಳಿಕ ನಾನು ಕೂಡ ಅದರ ಬಗ್ಗೆ ಟಿವಿಯಲ್ಲಿ ಬಂದ ಜಾಹೀರಾತು ಮೂಲಕ ತಿಳಿದುಕೊಂಡೆ. -ಬಿ.ಎಂ. ಮಂಜುನಾಥ್

ಕರ್ನಾಟಕದ ಲಾಲಿಹಾಡಿಗೆ ಮನಸೋತ ಮೋದಿ, ಮನ್ ಕೀ ಬಾತ್​​ನಲ್ಲಿ ಮೆಚ್ಚಿದ ಮಂಜುನಾಥ್​ ಯಾರು? ಇಲ್ಲಿದೆ ಮಾಹಿತಿ
ಬಿ.ಎಂ. ಮಂಜುನಾಥ್
Follow us
| Updated By: ಆಯೇಷಾ ಬಾನು

Updated on:Feb 26, 2023 | 2:07 PM

ಚಾಮರಾಜನಗರ:ಕೇಂದ್ರ ಸಂಸ್ಕೃತಿ ಸಚಿವಾಲಯ ಆಯೋಜನೆ ಮಾಡಿದ್ದ ಜೋಗುಳ ಗೀತ ರಚನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಜಿಲ್ಲೆಯ ಸಾಹಿತಿ ಬಿ.ಎಂ. ಮಂಜುನಾಥ್(B.M. Manjunath) ಬಗ್ಗೆ ಪ್ರಧಾನಿ ಮೋದಿ(Narendra Modi) ಅವರು ಇಂದು ಮನ್ ಕಿ ಬಾತ್ ನಲ್ಲಿ ಪ್ರಶಂಸಿದ್ದಾರೆ.

ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಸಂಸ್ಕ್ರತಿ ಸಚಿವಾಲಯ ರಾಷ್ಟ್ರಮಟ್ಟದಲ್ಲಿ ನಡೆಸಿದ ಪೆನ್ ಎ ಲೋರಿ ಸ್ಪರ್ಧೆ ಬಗ್ಗೆ ಪ್ರಧಾನಿ ವಿಷಯ ಪ್ರಸ್ತಾಪ ಮಾಡಿದರು. ಈ ವೇಳೆ “ಜೋಗುಳ ಗೀತೆ ಸ್ಪರ್ಧೆಯಲ್ಲಿ ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಬಿ.ಎಂ. ಮಂಜುನಾಥ ಪ್ರಥಮ ಬಹುಮಾನ ಪಡೆದಿದ್ದಾರೆ. ಕನ್ನಡದಲ್ಲಿ ಅವರು ಬರೆದ ಮಲಗು ಕಂದ ಕವಿತೆಗೆ ಬಹುಮಾನ ದೊರಕಿದೆ. ಈ ಜೋಗುಳ ಗೀತೆಗೆ ಅವರ ತಾಯಿ, ಅಜ್ಜಿ ಹಾಡುತ್ತಿದ್ದ ಜೋಗುಳಗಳೇ ಸ್ಫೂರ್ತಿಯಾಗಿವೆ. ಇದನ್ನು ಕೇಳಿದರೆ ನಿಮಗೂ ಆನಂದವಾಗುತ್ತದೆ” ಎಂದು ಮೋದಿ ಹೇಳಿದ್ದಾರೆ.

2022ರ ಫೆಬ್ರವರಿಯಲ್ಲಿ ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ರಂಗೋಲಿ ಸ್ಪರ್ಧೆ, ದೇಶಭಕ್ತಿ ಗೀತೆ ಹಾಗೂ ಜೋಗುಳ ಗೀತ ರಚನೆ ಸ್ಪರ್ಧೆಗಳನ್ನು ಆನ್ ಲೈನ್ ಮೂಲಕ ಆಹ್ವಾನ ನೀಡಲಾಗಿತ್ತು. ಈ ಸ್ಪರ್ಧೆಗೆ ಗೀತೆ ರಚನೆ ಮಾಡಿ ಬಿ.ಎಂ.ಮಂಜುನಾಥ್ ಕಳುಹಿಸಿಕೊಟ್ಟಿದ್ದರು. ಈ ಸ್ಪರ್ಧೆ ಮೂರು ಹಂತದಲ್ಲಿ ನಡೆದಿದ್ದು ಮೊದಲಿಗೆ ಜಿಲ್ಲಾ ಮಟ್ಟದಲ್ಲಿ ನಡೆದಿತ್ತು. ಇದರಲ್ಲಿ ಮಂಜುನಾಥ್ ಎರಡನೇ ಸ್ಥಾನ ಪಡೆದಿದ್ದರು. ಬಳಿಕ ರಾಜ್ಯ ಮಟ್ಟದಲ್ಲಿ ಮೊದಲು ಹಾಗೂ ರಾಷ್ಟ್ರಮಟ್ಟದಲ್ಲಿ ಮೊದಲಿಗರಾಗಿ ಆಯ್ಕೆಯಾದರು.ಇದರಲ್ಲಿ ರಾಷ್ಟ್ರ ಮಟ್ಟದಲ್ಲಿ ಪ್ರಥಮ ಬಹುಮಾನ ಪಡೆದವರಿಗೆ 6 ಲಕ್ಷ ಬಹುಮಾನ ಕೂಡ ಘೋಷಣೆ ಮಾಡಲಾಗಿದೆ.

ಇದನ್ನೂ ಓದಿ: Narendra Modi: ಆರ್​ಆರ್​ಆರ್ ಹಾಡಿಗೆ ಕುಣಿದ ಕೊರಿಯನ್ನರು, ಭೇಷ್ ಎಂದ ಪ್ರಧಾನಿ ಮೋದಿ

ಪತ್ನಿ-ಮಗನ ಒತ್ತಾಯಕ್ಕೆ ಬರೆದು ಕಳಿಸಿದೆ, ಆದ್ರೆ ಈಗ ಬಹುಮಾನ ಸಿಕ್ಕಿದೆ

ಮಂಜುನಾಥ್ ಅವರು ವೃತ್ತಿಯಲ್ಲಿ ಎಲ್.ಐ.ಸಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಬಾಳಗುಣಸೆ ಗ್ರಾಮದವರು. ಸದ್ಯ ಕೊಳ್ಳೇಗಾಲದಲ್ಲಿ ವಾಸಮಾಡುತ್ತಿದ್ದಾರೆ. ಈ ಸ್ಪರ್ಧೆ ಬಗ್ಗೆ ನನಗೆ ಮಾಹಿತಿ ಇರಲಿಲ್ಲ. ನನ್ನ ಪತ್ನಿ ಹಾಗೂ ಮಗ ಹೇಳಿದರು. ಬಳಿಕ ನಾನು ಕೂಡ ಅದರ ಬಗ್ಗೆ ಟಿವಿಯಲ್ಲಿ ಬಂದ ಜಾಹೀರಾತು ಮೂಲಕ ತಿಳಿದುಕೊಂಡೆ. ಆದ್ರೆ ಹೆಂಡತಿ ಹಾಗೂ ಮಗನ ಒತ್ತಾಯದಿಂದ ಬರೆದು ಸ್ಪರ್ಧೆಗೆ ಕಳುಹಿಸಿದ್ದೆ ಅಂತ ಮಂಜುನಾಥ್ ಟಿವಿ9 ಡಿಜಿಟಲ್ ಜೊತೆ ಮಾತನಾಡಿ ಹೇಳಿದ್ರು. ಅಷ್ಟೆ ಅಲ್ಲದೆ ನಾನು ಕಳುಹಿಸುವ ಮುನ್ನ ನಾನು ರಾಷ್ಟ್ರ ಮಟ್ಟದಲ್ಲಿ ಬಹುಮಾನ ಗಳಿಸುತ್ತೇನೆ ಎಂದು ಅನಿಸಿರಲಿಲ್ಲ.‌ ನನ್ನಲಿದ್ದ ಸೊಂಬೇರಿತನದಿಂದಲು ಇಲ್ಲಿಯು ಕೂಡ ನನ್ನ ಸಾಹಿತ್ಯ ಕಥೆ ಕವನಗಳನ್ನು ಯಾವುದೇ ಪತ್ರಿಕೆಗಳು ಕಳುಹಿಸುತ್ತಿರಲಿಲ್ಲ.‌ ಇದೀಗಾ ಬಹುಮಾನ ಬಂದು ಪ್ರಧಾನಿಯವರು ಮನ್ ಕೀ ಬಾತ್ ನಲ್ಲಿ ಪ್ರಸ್ತಾಪ ಮಾಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಇವರ ಚಿತ್ತ ಚಿತ್ತಾರ ಎಂಬ ಕವನ ಸಂಕಲನ ಹಾಗೂ ಶಾಪ ಎಂಬ ನಾಟಕದ ಪುಸ್ತಕಗಳನ್ನು ಹೊರತಂದಿದ್ದಾರೆ. ಇನ್ನು ಎರಡು ಕೃತಿಗಳು ಬಿಡುಗಡೆಗೆ ಸಿದ್ದತೆ ಹಂತದಲ್ಲಿವೆಯಂತೆ‌.

ವರದಿ: ದಿಲೀಪ್ ಚೌಡಹಳ್ಳಿ, ಟಿವಿ9 ಚಾಮರಾಜನಗರ

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:07 pm, Sun, 26 February 23