AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸೂರು ಗ್ರಾಮದಲ್ಲಿ ಅಚ್ಚರಿಯ ಘಟನೆ: ಕಹಿ ಬೇವಿನ ಮರದಲ್ಲಿ ಸಿಹಿ ದ್ರಾವಣ

ಚಾಮರಾಜನಗರದ ಹನೂರು ತಾಲೂಕಿನ ಕುರಟ್ಟಿ ಹೊಸೂರು ಗ್ರಾಮದಲ್ಲಿ ಸಾಮಾನ್ಯ ಕಹಿಯಾದ ಬೇವಿನ ಮರವೊಂದು ಸಿಹಿ ದ್ರಾವಣ ಹರಿಸುತ್ತಿದೆ. ಈ ಅಚ್ಚರಿಯ ಘಟನೆ ಇಡೀ ಗ್ರಾಮಸ್ಥರನ್ನು ದಿಗ್ಭ್ರಮೆಗೊಳಿಸಿದೆ. ಗ್ರಾಮಸ್ಥರು ಇದನ್ನು ಪವಾಡವೆಂದು ಭಾವಿಸಿದ್ದಾರೆ. ಈ ಸಿಹಿ ದ್ರವದ ಹಿಂದಿನ ಕಾರಣವನ್ನು ತಿಳಿಯಲು ಸಸ್ಯಶಾಸ್ತ್ರಜ್ಞರ ಪರೀಕ್ಷೆ ಅಗತ್ಯವಿದೆ. ಇದು ವಿಜ್ಞಾನಿಗಳಿಗೆ ಒಂದು ಸವಾಲಾಗಿದೆ.

ಹೊಸೂರು ಗ್ರಾಮದಲ್ಲಿ ಅಚ್ಚರಿಯ ಘಟನೆ: ಕಹಿ ಬೇವಿನ ಮರದಲ್ಲಿ ಸಿಹಿ ದ್ರಾವಣ
ಸಿಹಿ ಬೇವಿನ ಮರ ಹನೂರುImage Credit source: Tv9 kannada
ಸೂರಜ್ ಪ್ರಸಾದ್ ಎಸ್.ಎನ್
| Edited By: |

Updated on: Feb 03, 2026 | 8:56 PM

Share

ಚಾಮರಾಜನಗರ, ಫೆ.3: ಬೇವಿನ ಮರ ಕಹಿಯಾಗಿರುವುದನ್ನು ಕೇಳಿರಬಹುದು, ಆದರೆ ಯಾವತ್ತಾದರೂ ಸಿಹಿಯಾಗಿರುವುದನ್ನು ಕೇಳಿದ್ದೀರಾ? ಆದರೆ ಈ ಗ್ರಾಮದಲ್ಲಿ ಒಂದು ಅಚ್ಚರಿಯೇ ನಡೆದಿದೆ. ಇದೀಗ ಈ ಘಟನೆಗೆ ಇಡೀ ಗ್ರಾಮವೇ ದಿಗ್ಭ್ರಮೆಗೊಂಡಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕುರಟ್ಟಿ ಹೊಸೂರು ಗ್ರಾಮದಲ್ಲಿ ಬೇವಿನ ಮರವೊಂದು ಸಿಹಿ ದ್ರಾವಣವನ್ನು ಹರಿಸುವ ಮೂಲಕ ಭಾರಿ ಅಚ್ಚರಿ ಮೂಡಿಸಿದೆ. ಹನೂರು ತಾಲೂಕಿನ ಕುರಟ್ಟಿ ಹೊಸೂರು ಗ್ರಾಮದ ಮುನಿ ಸಿದ್ದ ಎಂಬುವವರ ಜಮೀನಿನಲ್ಲಿ ಈ ಬೇವಿನ ಮರವಿದೆ. ಸಾಮಾನ್ಯವಾಗಿ ಕಹಿಯಾಗಿರುವ ಬೇವಿನ ಮರದ ರೆಂಬೆ (Sweet Neem Tree )ಕೊಂಬೆಗಳಿಂದ ಬಿಳಿ ಬಣ್ಣದ ದ್ರಾವಣ ಬರುತ್ತಿದೆ. ಈ ದ್ರಾವಣವು ಬೆಲ್ಲದ ಪಾಕ ಅಥವಾ ಸಕ್ಕರೆಯಂತೆ ಸಿಹಿಯಾಗಿದೆ ಎಂದು ಅದನ್ನು ಸೇವಿಸಿದ ಗ್ರಾಮಸ್ಥರು ತಿಳಿಸಿದ್ದಾರೆ. ಮರದಿಂದ ಜಿನಗುತ್ತಿರುವ ಈ ಸಿಹಿ ದ್ರವವನ್ನು ಕಂಡ ಗ್ರಾಮಸ್ಥರು ಇದೊಂದು ಪವಾಡ ಎಂದು ನಂಬಿದ್ದಾರೆ.

ಇನ್ನು ಮರದ ಬುಡದ ಬಳಿ ಬಂದು ಸೇರುತ್ತಿರುವ ಈ ದ್ರಾವಣವನ್ನು ನೋಡಲು ಮತ್ತು ರುಚಿ ನೋಡಲು ಜನರು ಕುತೂಹಲದಿಂದ ಆಗಮಿಸುತ್ತಿದ್ದಾರೆ. ಬೇವಿನ ಮರದಿಂದ ಬಿಳಿ ದ್ರವ ಬರುವುದು ಸಾಮಾನ್ಯವಾದರೂ, ಅದು ಸಿಹಿಯಾಗಿರುವುದು ಇದೊಂದು ವಿಚಿತ್ರ ಘಟನೆಯಾಗಿದೆ. ಈ ದ್ರಾವಣವು ಯಾವ ರಾಸಾಯನಿಕ ಬದಲಾವಣೆಯಿಂದ ಸಿಹಿಯಾಗಿದೆ ಎಂಬುದು ಇನ್ನೂ ನಿಗೂಢವಾಗಿದೆ. ಸಸ್ಯ ಶಾಸ್ತ್ರಜ್ಞರು ಅಥವಾ ರಸಾಯನಶಾಸ್ತ್ರಜ್ಞರು ಈ ದ್ರಾವಣವನ್ನು ಲ್ಯಾಬ್‌ನಲ್ಲಿ ಪರೀಕ್ಷೆ ನಡೆಸಿದ ನಂತರವಷ್ಟೇ ಇದರ ಹಿಂದಿನ ಅಸಲಿ ಕಾರಣ ತಿಳಿದುಬರಬೇಕಿದೆ.

ಇದನ್ನೂ ಓದಿ: ಹಿಂದಿ ಮಾತನಾಡುವವರು ನಿಜವಾದ ಇಂಡಿಯನ್ಸ್​​​​, ದಕ್ಷಿಣ ಭಾರತೀಯರು ಜೋಕರ್​​: ಭಾಷಾ ಸಂಘರ್ಷಕ್ಕೆ ಮತ್ತೊಂದು ಕಿಡಿ

ಇನ್ನು ಸಾಮಾನ್ಯವಾಗಿ ಬೇವಿನ ಮರ ಕಹಿಯಿಂದ ಕೂಡಿರುತ್ತೆ ಬೇವಿನ ಎಲೆ ಬೇವಿನ ಕಾಯಿ ಕಹಿಯಾಗಿರುತ್ತೆ ಆದ್ರೆ ಈ ಬೇವಿನ ಮರದಲ್ಲಿ ಮಾತ್ರ ಹೇಗೆ ಸಿಹಿ ದ್ರಾವಣ ಬರುತ್ತಿದೆ ಎಂಬುದೆ ಯಕ್ಷ ಪ್ರಶ್ನೆಯಾಗಿದೆ. ದೇಶದ ಹಲವೆಡೆ ಬೇವಿನ ಮರದಿಂದ ನೀರು ಬರುವುದು ಬಿಳಿ ದ್ರವ ಬರುವುದು ಕಂಡಿದ್ದೇವೆ, ಕೇಳಿದ್ದೇವೆ ಆದ್ರೆ ಈ ರೀತಿ ಸಿಹಿಯಾಗಿರುವುದು ಇದೆ ಮೊದಲಾಗಿದೆ. ಯಾವ ಕೆಮಿಕಲ್ ರಿಯಾಕ್ಷನ್ ನಿಂದ ಈ ರೀತಿ ಸಿಹಿ ದ್ರವ್ಯ ಸೃಷ್ಠಿಯಾಗ್ತಾಯಿದೆ ಅನ್ನೋದೆ ನಿಜಕ್ಕೂ ಅಚ್ಚರಿಗಾಗಿದೆ ಎಂದು ಒಂದು ಯಕ್ಷ ಪ್ರಶ್ನೆಯಾಗಿ ಉಳಿದಿದೆ ಎಂದು ಜಮೀನಿನ ಮಾಲೀಕ ಮುನಿ ಸಿದ್ದ ಹೇಳಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮೂರು ತಿಂಗಳಲ್ಲಿ 250 ಕೋಟಿ ಕಳೆದುಕೊಂಡಿದ್ದಾರೆ ನಿರ್ಮಾಪಕರು: ಕೆ ಮಂಜು
ಮೂರು ತಿಂಗಳಲ್ಲಿ 250 ಕೋಟಿ ಕಳೆದುಕೊಂಡಿದ್ದಾರೆ ನಿರ್ಮಾಪಕರು: ಕೆ ಮಂಜು
ಪಾಕ್ ಕ್ರಿಕೆಟ್ ಭವಿಷ್ಯ ಮೋದಿ ಕೈಯಲ್ಲಿದೆ; ರಮೀಜ್ ರಾಜಾ
ಪಾಕ್ ಕ್ರಿಕೆಟ್ ಭವಿಷ್ಯ ಮೋದಿ ಕೈಯಲ್ಲಿದೆ; ರಮೀಜ್ ರಾಜಾ
ಧರ್ಮರಾಯಸ್ವಾಮಿ ದೇಗುಲದ ಚಿನ್ನದ ನಕ್ಲೇಸ್ ಕಳ್ಳತನ ಪ್ರಕರಣಕ್ಕೆ ಬಿಗ್ ಟಿಸ್ಟ್
ಧರ್ಮರಾಯಸ್ವಾಮಿ ದೇಗುಲದ ಚಿನ್ನದ ನಕ್ಲೇಸ್ ಕಳ್ಳತನ ಪ್ರಕರಣಕ್ಕೆ ಬಿಗ್ ಟಿಸ್ಟ್
ಯಶ್ ತಾಯಿ ಮಾಡಿದ ಆರೋಪ ತಳ್ಳಿಹಾಕಿದ ಪಿಡಿಒ ನಟರಾಜ್; ವಿಡಿಯೋ ನೋಡಿ..
ಯಶ್ ತಾಯಿ ಮಾಡಿದ ಆರೋಪ ತಳ್ಳಿಹಾಕಿದ ಪಿಡಿಒ ನಟರಾಜ್; ವಿಡಿಯೋ ನೋಡಿ..
ಚೀಟಿ ಹೆಸರಲ್ಲಿ 4 ಕೋಟಿ ಮಕ್ಮಲ್​​ ಟೋಪಿ: ಕಣ್ಣೀರು ಹಾಕಿದ ಸಂತ್ರಸ್ತರು
ಚೀಟಿ ಹೆಸರಲ್ಲಿ 4 ಕೋಟಿ ಮಕ್ಮಲ್​​ ಟೋಪಿ: ಕಣ್ಣೀರು ಹಾಕಿದ ಸಂತ್ರಸ್ತರು
ಅಕ್ರಮವಾಗಿ ಬೆಂಗಳೂರಿಗೆ ಸಾಗಿಸುತ್ತಿದ್ದ 70ಕ್ಕೂ ಹೆಚ್ಚು ಗೋವು ರಕ್ಷಣೆ
ಅಕ್ರಮವಾಗಿ ಬೆಂಗಳೂರಿಗೆ ಸಾಗಿಸುತ್ತಿದ್ದ 70ಕ್ಕೂ ಹೆಚ್ಚು ಗೋವು ರಕ್ಷಣೆ
ರೆಸಾರ್ಟ್​​ಗಾಗಿ ವೈದ್ಯನಿಂದ 2 ಎಕ್ರೆ ಪ್ರದೇಶದಲ್ಲಿದ್ದ ಮರಗಳ ಮಾರಣಹೋಮ!
ರೆಸಾರ್ಟ್​​ಗಾಗಿ ವೈದ್ಯನಿಂದ 2 ಎಕ್ರೆ ಪ್ರದೇಶದಲ್ಲಿದ್ದ ಮರಗಳ ಮಾರಣಹೋಮ!
ಮಹಿಳೆ ಅಕ್ರಮ ಸಂಬಂಧ ಪ್ರಕರಣದ ಬಗ್ಗೆ ಬಿಗ್​​​ ಅಪ್ಡೇಟ್​​ ನೀಡಿದ ಪೊಲೀಸರು
ಮಹಿಳೆ ಅಕ್ರಮ ಸಂಬಂಧ ಪ್ರಕರಣದ ಬಗ್ಗೆ ಬಿಗ್​​​ ಅಪ್ಡೇಟ್​​ ನೀಡಿದ ಪೊಲೀಸರು
ತಾಯಿ ಜತೆ ಓಡಿ ಹೋಗಿದ್ದವನನ್ನ ಕೊಲೆಗೈದ ಪುತ್ರ, ಶವದ ಮೇಲೆ ಕಾಲಿಟ್ಟು ಕರೆ
ತಾಯಿ ಜತೆ ಓಡಿ ಹೋಗಿದ್ದವನನ್ನ ಕೊಲೆಗೈದ ಪುತ್ರ, ಶವದ ಮೇಲೆ ಕಾಲಿಟ್ಟು ಕರೆ
ಸೈಟ್ ವಿವಾದ: ಯಶ್ ತಾಯಿ ಪುಷ್ಪಾ ಮೇಲೆ ಮಾನನಷ್ಟ ಕೇಸ್ ಹಾಕಲು ಪಿಡಿಒ ನಿರ್ಧಾರ
ಸೈಟ್ ವಿವಾದ: ಯಶ್ ತಾಯಿ ಪುಷ್ಪಾ ಮೇಲೆ ಮಾನನಷ್ಟ ಕೇಸ್ ಹಾಕಲು ಪಿಡಿಒ ನಿರ್ಧಾರ