AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸೂರು ಗ್ರಾಮದಲ್ಲಿ ಅಚ್ಚರಿಯ ಘಟನೆ: ಕಹಿ ಬೇವಿನ ಮರದಲ್ಲಿ ಸಿಹಿ ದ್ರಾವಣ

ಚಾಮರಾಜನಗರದ ಹನೂರು ತಾಲೂಕಿನ ಕುರಟ್ಟಿ ಹೊಸೂರು ಗ್ರಾಮದಲ್ಲಿ ಸಾಮಾನ್ಯ ಕಹಿಯಾದ ಬೇವಿನ ಮರವೊಂದು ಸಿಹಿ ದ್ರಾವಣ ಹರಿಸುತ್ತಿದೆ. ಈ ಅಚ್ಚರಿಯ ಘಟನೆ ಇಡೀ ಗ್ರಾಮಸ್ಥರನ್ನು ದಿಗ್ಭ್ರಮೆಗೊಳಿಸಿದೆ. ಗ್ರಾಮಸ್ಥರು ಇದನ್ನು ಪವಾಡವೆಂದು ಭಾವಿಸಿದ್ದಾರೆ. ಈ ಸಿಹಿ ದ್ರವದ ಹಿಂದಿನ ಕಾರಣವನ್ನು ತಿಳಿಯಲು ಸಸ್ಯಶಾಸ್ತ್ರಜ್ಞರ ಪರೀಕ್ಷೆ ಅಗತ್ಯವಿದೆ. ಇದು ವಿಜ್ಞಾನಿಗಳಿಗೆ ಒಂದು ಸವಾಲಾಗಿದೆ.

ಹೊಸೂರು ಗ್ರಾಮದಲ್ಲಿ ಅಚ್ಚರಿಯ ಘಟನೆ: ಕಹಿ ಬೇವಿನ ಮರದಲ್ಲಿ ಸಿಹಿ ದ್ರಾವಣ
ಸಿಹಿ ಬೇವಿನ ಮರ ಹನೂರುImage Credit source: Tv9 kannada
ಸೂರಜ್ ಪ್ರಸಾದ್ ಎಸ್.ಎನ್
| Edited By: |

Updated on: Feb 03, 2026 | 8:56 PM

Share

ಚಾಮರಾಜನಗರ, ಫೆ.3: ಬೇವಿನ ಮರ ಕಹಿಯಾಗಿರುವುದನ್ನು ಕೇಳಿರಬಹುದು, ಆದರೆ ಯಾವತ್ತಾದರೂ ಸಿಹಿಯಾಗಿರುವುದನ್ನು ಕೇಳಿದ್ದೀರಾ? ಆದರೆ ಈ ಗ್ರಾಮದಲ್ಲಿ ಒಂದು ಅಚ್ಚರಿಯೇ ನಡೆದಿದೆ. ಇದೀಗ ಈ ಘಟನೆಗೆ ಇಡೀ ಗ್ರಾಮವೇ ದಿಗ್ಭ್ರಮೆಗೊಂಡಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕುರಟ್ಟಿ ಹೊಸೂರು ಗ್ರಾಮದಲ್ಲಿ ಬೇವಿನ ಮರವೊಂದು ಸಿಹಿ ದ್ರಾವಣವನ್ನು ಹರಿಸುವ ಮೂಲಕ ಭಾರಿ ಅಚ್ಚರಿ ಮೂಡಿಸಿದೆ. ಹನೂರು ತಾಲೂಕಿನ ಕುರಟ್ಟಿ ಹೊಸೂರು ಗ್ರಾಮದ ಮುನಿ ಸಿದ್ದ ಎಂಬುವವರ ಜಮೀನಿನಲ್ಲಿ ಈ ಬೇವಿನ ಮರವಿದೆ. ಸಾಮಾನ್ಯವಾಗಿ ಕಹಿಯಾಗಿರುವ ಬೇವಿನ ಮರದ ರೆಂಬೆ (Sweet Neem Tree )ಕೊಂಬೆಗಳಿಂದ ಬಿಳಿ ಬಣ್ಣದ ದ್ರಾವಣ ಬರುತ್ತಿದೆ. ಈ ದ್ರಾವಣವು ಬೆಲ್ಲದ ಪಾಕ ಅಥವಾ ಸಕ್ಕರೆಯಂತೆ ಸಿಹಿಯಾಗಿದೆ ಎಂದು ಅದನ್ನು ಸೇವಿಸಿದ ಗ್ರಾಮಸ್ಥರು ತಿಳಿಸಿದ್ದಾರೆ. ಮರದಿಂದ ಜಿನಗುತ್ತಿರುವ ಈ ಸಿಹಿ ದ್ರವವನ್ನು ಕಂಡ ಗ್ರಾಮಸ್ಥರು ಇದೊಂದು ಪವಾಡ ಎಂದು ನಂಬಿದ್ದಾರೆ.

ಇನ್ನು ಮರದ ಬುಡದ ಬಳಿ ಬಂದು ಸೇರುತ್ತಿರುವ ಈ ದ್ರಾವಣವನ್ನು ನೋಡಲು ಮತ್ತು ರುಚಿ ನೋಡಲು ಜನರು ಕುತೂಹಲದಿಂದ ಆಗಮಿಸುತ್ತಿದ್ದಾರೆ. ಬೇವಿನ ಮರದಿಂದ ಬಿಳಿ ದ್ರವ ಬರುವುದು ಸಾಮಾನ್ಯವಾದರೂ, ಅದು ಸಿಹಿಯಾಗಿರುವುದು ಇದೊಂದು ವಿಚಿತ್ರ ಘಟನೆಯಾಗಿದೆ. ಈ ದ್ರಾವಣವು ಯಾವ ರಾಸಾಯನಿಕ ಬದಲಾವಣೆಯಿಂದ ಸಿಹಿಯಾಗಿದೆ ಎಂಬುದು ಇನ್ನೂ ನಿಗೂಢವಾಗಿದೆ. ಸಸ್ಯ ಶಾಸ್ತ್ರಜ್ಞರು ಅಥವಾ ರಸಾಯನಶಾಸ್ತ್ರಜ್ಞರು ಈ ದ್ರಾವಣವನ್ನು ಲ್ಯಾಬ್‌ನಲ್ಲಿ ಪರೀಕ್ಷೆ ನಡೆಸಿದ ನಂತರವಷ್ಟೇ ಇದರ ಹಿಂದಿನ ಅಸಲಿ ಕಾರಣ ತಿಳಿದುಬರಬೇಕಿದೆ.

ಇದನ್ನೂ ಓದಿ: ಹಿಂದಿ ಮಾತನಾಡುವವರು ನಿಜವಾದ ಇಂಡಿಯನ್ಸ್​​​​, ದಕ್ಷಿಣ ಭಾರತೀಯರು ಜೋಕರ್​​: ಭಾಷಾ ಸಂಘರ್ಷಕ್ಕೆ ಮತ್ತೊಂದು ಕಿಡಿ

ಇನ್ನು ಸಾಮಾನ್ಯವಾಗಿ ಬೇವಿನ ಮರ ಕಹಿಯಿಂದ ಕೂಡಿರುತ್ತೆ ಬೇವಿನ ಎಲೆ ಬೇವಿನ ಕಾಯಿ ಕಹಿಯಾಗಿರುತ್ತೆ ಆದ್ರೆ ಈ ಬೇವಿನ ಮರದಲ್ಲಿ ಮಾತ್ರ ಹೇಗೆ ಸಿಹಿ ದ್ರಾವಣ ಬರುತ್ತಿದೆ ಎಂಬುದೆ ಯಕ್ಷ ಪ್ರಶ್ನೆಯಾಗಿದೆ. ದೇಶದ ಹಲವೆಡೆ ಬೇವಿನ ಮರದಿಂದ ನೀರು ಬರುವುದು ಬಿಳಿ ದ್ರವ ಬರುವುದು ಕಂಡಿದ್ದೇವೆ, ಕೇಳಿದ್ದೇವೆ ಆದ್ರೆ ಈ ರೀತಿ ಸಿಹಿಯಾಗಿರುವುದು ಇದೆ ಮೊದಲಾಗಿದೆ. ಯಾವ ಕೆಮಿಕಲ್ ರಿಯಾಕ್ಷನ್ ನಿಂದ ಈ ರೀತಿ ಸಿಹಿ ದ್ರವ್ಯ ಸೃಷ್ಠಿಯಾಗ್ತಾಯಿದೆ ಅನ್ನೋದೆ ನಿಜಕ್ಕೂ ಅಚ್ಚರಿಗಾಗಿದೆ ಎಂದು ಒಂದು ಯಕ್ಷ ಪ್ರಶ್ನೆಯಾಗಿ ಉಳಿದಿದೆ ಎಂದು ಜಮೀನಿನ ಮಾಲೀಕ ಮುನಿ ಸಿದ್ದ ಹೇಳಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ರಾಜ್ಯ ಸರ್ಕಾರ ದಿವಾಳಿ, ಸಂಬಳ ನೀಡಲೂ ಹಣವಿಲ್ಲ: ಅಶೋಕ್​​ ಸ್ಫೋಟಕ ಆರೋಪ
ರಾಜ್ಯ ಸರ್ಕಾರ ದಿವಾಳಿ, ಸಂಬಳ ನೀಡಲೂ ಹಣವಿಲ್ಲ: ಅಶೋಕ್​​ ಸ್ಫೋಟಕ ಆರೋಪ
ಉದ್ಯೋಗಾಕಾಂಕ್ಷಿಗಳ ಕಿಚ್ಚು: ಅನುಮತಿ ನಿರಾಕರಣೆ ನಡುವೆಯೂ ಬೃಹತ್​ ಪ್ರತಿಭಟನೆ
ಉದ್ಯೋಗಾಕಾಂಕ್ಷಿಗಳ ಕಿಚ್ಚು: ಅನುಮತಿ ನಿರಾಕರಣೆ ನಡುವೆಯೂ ಬೃಹತ್​ ಪ್ರತಿಭಟನೆ
ಪೊಲೀಸರ ವಿರೋಧದ ಮಧ್ಯೆಯೇ ಜಯನಗರ ವೃತ್ತದ ಕಡೆಗೆ ಯುವಕರ ಮೆರವಣಿಗೆ!
ಪೊಲೀಸರ ವಿರೋಧದ ಮಧ್ಯೆಯೇ ಜಯನಗರ ವೃತ್ತದ ಕಡೆಗೆ ಯುವಕರ ಮೆರವಣಿಗೆ!
Live: ಧಾರವಾಡದಲ್ಲಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ಪ್ರತಿಭಟನೆ
Live: ಧಾರವಾಡದಲ್ಲಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ಪ್ರತಿಭಟನೆ
ಬೆಂಗಳೂರು: ಸೈರನ್​ನಿಂದ ತಪ್ಪಿತು ಕೆನರಾ ಬ್ಯಾಂಕ್ ಕಳ್ಳತನ ಯತ್ನ!
ಬೆಂಗಳೂರು: ಸೈರನ್​ನಿಂದ ತಪ್ಪಿತು ಕೆನರಾ ಬ್ಯಾಂಕ್ ಕಳ್ಳತನ ಯತ್ನ!
ರೇಣುಕಾಸ್ವಾಮಿ ಕೊಲೆ ಕೇಸ್​​​ನಲ್ಲಿ ತನಿಖಾಧಿಕಾರಿಗಳಿಂದ ನಡೆದಿದೆ ಎಡವಟ್ಟು?
ರೇಣುಕಾಸ್ವಾಮಿ ಕೊಲೆ ಕೇಸ್​​​ನಲ್ಲಿ ತನಿಖಾಧಿಕಾರಿಗಳಿಂದ ನಡೆದಿದೆ ಎಡವಟ್ಟು?
ಮನೆಯಲ್ಲಿ ಅಗ್ನಿ ಅವಘಡ, ಅವಳಿ ಶಿಶುಗಳು ಸೇರಿ ಆರು ಮಂದಿ ಸಜೀವದಹನ
ಮನೆಯಲ್ಲಿ ಅಗ್ನಿ ಅವಘಡ, ಅವಳಿ ಶಿಶುಗಳು ಸೇರಿ ಆರು ಮಂದಿ ಸಜೀವದಹನ
ಕೃತಿ ಸನೋನ್ ಮನಗೆದ್ದ ನಾಲ್ಕು ಸಾವಿರ ಕೋಟಿ ಒಡೆಯ; ಧೋನಿಗೆ ಅತ್ಯಾಪ್ತ
ಕೃತಿ ಸನೋನ್ ಮನಗೆದ್ದ ನಾಲ್ಕು ಸಾವಿರ ಕೋಟಿ ಒಡೆಯ; ಧೋನಿಗೆ ಅತ್ಯಾಪ್ತ
ಅಡಿಗೆ ಮನೆ ಹೇಗಿರಬೇಕು? ಈ ವಸ್ತುಗಳಿದ್ರೆ ಕಷ್ಟ ತಪ್ಪಿದ್ದಲ್ಲ!
ಅಡಿಗೆ ಮನೆ ಹೇಗಿರಬೇಕು? ಈ ವಸ್ತುಗಳಿದ್ರೆ ಕಷ್ಟ ತಪ್ಪಿದ್ದಲ್ಲ!
ಇಂದು ಈ ರಾಶಿಯವರ ವ್ಯಾಪಾರದಲ್ಲಿ ಯಶಸ್ಸು
ಇಂದು ಈ ರಾಶಿಯವರ ವ್ಯಾಪಾರದಲ್ಲಿ ಯಶಸ್ಸು