AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chikkaballapur News: ಚಿಕ್ಕಬಳ್ಳಾಪುರ; ಮಾಜಿ ಸಚಿವ ಡಾ. ಕೆ ಸುಧಾಕರ್ ವಿರುದ್ದ ಕೆಂಡಕಾರಿದ ಶಾಸಕ ಪ್ರದೀಪ್ ಈಶ್ವರ್

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಮಾಜಿ ಸಚಿವ ಡಾ.ಕೆ ಸುಧಾಕರ್ ಹಾಗೂ ಹಾಲಿ ಶಾಸಕ ಪ್ರದೀಪ್ ಈಶ್ವರ್ ವಿರುದ್ಧದ ವಾಕ್ಸಮರ ತಾರಕಕ್ಕೇರಿದೆ. ಇಬ್ಬರು ನಾಯಕರೂ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದಾರೆ.

Chikkaballapur News: ಚಿಕ್ಕಬಳ್ಳಾಪುರ; ಮಾಜಿ ಸಚಿವ ಡಾ. ಕೆ ಸುಧಾಕರ್ ವಿರುದ್ದ ಕೆಂಡಕಾರಿದ ಶಾಸಕ ಪ್ರದೀಪ್ ಈಶ್ವರ್
ಡಾ. ಕೆ ಸುಧಾಕರ್ & ಪ್ರದೀಪ್ ಈಶ್ವರ್
Follow us
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: Ganapathi Sharma

Updated on:Jul 29, 2023 | 6:33 PM

ಚಿಕ್ಕಬಳ್ಳಾಫುರ: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಮಾಜಿ ಸಚಿವ ಡಾ.ಕೆ ಸುಧಾಕರ್ (Dr. K Sudhakar), ತಮ್ಮ ಬೆಂಬಲಿಗರ ಮೇಲೆ ಹಾಲಿ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಬೆಂಬಲಿಗರು ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಆರೋಪಿಸಿ ಚಿಕ್ಕಬಳ್ಳಾಪುರ ಎಸ್ಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಎಸ್ಪಿಗೆ ದೂರು ನೀಡಿದ್ದರು. ನಂತರ ಹಾಲಿ ಶಾಸಕ ಪ್ರದೀಪ್ ಈಶ್ವರ್ ಹಾಗೂ ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದರಿಂದ ಕೆರಳಿ ಕೆಂಡವಾದ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಪ್ರದೀಪ್ ಈಶ್ವರ್ ಮಾಜಿ ಸಚಿವ ಸುಧಾಕರ್ ವಿರುದ್ದ ಶನಿವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುಧಾಕರ್​​ಗೆ ಮನ ಮರ್ಯಾದೆ ಇದೆಯಾ; ಪ್ರದೀಪ್ ಈಶ್ವರ್ ಪ್ರಶ್ನೆ

ಮಾಜಿ ಸಚಿವ ಸುಧಾಕರ್​ಗೆ ಮನ ಮರ್ಯಾದೆ ಇದೆಯಾ? ನಾನು ಚಿಲ್ಲೆರೆ ರಾಜಕಾರಣ ಮಾಡುತ್ತೇನೆ, ರೌಡಿ ರಾಜಕಾರಣ ಮಾಡುತ್ತೇನೆ ಅಂತ ಹೇಳಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಕ್ಷೇತ್ರದಲ್ಲಿ ಗೊಂಡಾ ರಾಜಕಾರಣ ಯಾರು ಮಾಡಿದ್ದಾರೆ? ನನ್ನ ಅವಧಿಯಲ್ಲಿ ಯಾರಾದ್ರು ಬಾಲ ಬಿಚ್ಚಲಿ ನೋಡೋಣ. ಅಧಿಕಾರ ಇಲ್ಲದಿರುವಾಗಲೇ ಬಾಲ ಕಟ್ ಮಾಡಿದವನು ನಾನು. ನಿಮ್ಮ (ಸುಧಾಕರ್) ಪಾಲೋವರ್ಸ್​​ಗೆ ಹೇಳಿ ಬಾಲ ಬಿಚ್ಚಿದರೆ ಕಟ್ ಮಾಡುತ್ತೇನೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ಸುಧಾಕರ್ ಶಾಶ್ವತವಾಗಿ ಮಾಜಿ ಶಾಸಕ ಆಗಲಿದ್ದಾರೆ; ಪ್ರದೀಪ್

ಡಾ. ಕೆ ಸುಧಾಕರ್ ಇನ್ನು ಮುಂದೆ ಶಾಶ್ವತವಾಗಿ ಮಾಜಿ ಶಾಸಕರಾಗಿಯೇ ಇರಲಿದ್ದಾರೆ. ನಮ್ಮ ಬೆಂಬಲಿಗರು ನಿಮ್ಮ ಬೆಂಬಲಿಗನ ಮೇಲೆ ದೈಹಿಕ, ಮಾನಸಿಕ ಹಲ್ಲೆ ನಡೆಸಿದ್ದಾನೆ ಅಂತ ದೂರು ಕೊಡಿಸಿದ್ದೀರಿ. ಸುಧಾಕರ್ ನಿಮಗೆ ತಾಕತ್ತು ಇದ್ದರೆ ಸಾಕ್ಷಿ ತೊರಿಸಿ. ಎಸ್ಪಿ ಕಚೇರಿಗೆ ನಿಮ್ಮವರನ್ನು ಕರೆದುಕೊಂಡು ಹೋಗಿ ಸುಳ್ಳು ದೂರು ಕೊಡಿಸಿದ್ದೀರಿ. ನಿಮಗೆ ಮಾನ ಮರ್ಯಾದೆ ಇದೆಯಾ ಎಂದು ಪ್ರದೀಪ್ ಈಶ್ವರ್ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: Chikkaballapur News; ಕರ್ಮ ಸುಧಾಕರ್​ರನ್ನು ಹಿಂಬಾಲಿಸುತ್ತಿದೆ, ಹಿಂದೆ ನಾನು ಮಾಡುತ್ತಿದ್ದುದನ್ನು ಈಗ ಅವರು ಮಾಡುತ್ತಿದ್ದಾರೆ: ಪ್ರದೀಪ್ ಈಶ್ವರ್

ಸುಧಾಕರ್ ಅವರು, ನಾನು ರಾಜೀನಾಮೆ ಕೊಟ್ಟು ಬಂದು ಪಕ್ಷೇತರರಾಗಿ ಚುನಾವಣೆಗೆ ಸ್ಪರ್ಧಿಸಲು ಸವಾಲು ಹಾಕಿದ್ದಾರೆ. ನಾನ್ಯಾಕೆ ರಾಜೀನಾಮೆ ಕೊಟ್ಟು ಪಕ್ಷೇತರರಾಗಿ ಬರಬೇಕು. ಈಗ ತಾನೆ ಎರಡು ತಿಂಗಳ ಹಿಂದೆ ಸುಧಾಕರ್ ನನ್ನು ವಿರುದ್ದ ಹೀನಾಯವಾಗಿ ಸೋತಿದ್ದಾರೆ. ಐದು ವರ್ಷ ಆದ ಮೇಲೆ ಬರ್ತಿನಿ ಎದುರಿಸಿ. ಯಾಕೆ ನಿಮಗೆ ಬಿಜೆಪಿಯಲ್ಲೆ ಟಿಕೆಟ್ ಕೊಡಲ್ವಾ? ಇನ್ನು ಮುಂದೆ ನೀವು ಚಿಕ್ಕಬಳ್ಳಾಫುರ ಕ್ಷೇತ್ರದ ಆಸೆ ಬಿಟ್ಟು ಬಿಡಿ. ಬೇರೆ ಕ್ಷೇತ್ರ ಹುಡುಕಿಕೊಳ್ಳಿ ಎಂದು ಟಾಂಗ್ ಕೊಟ್ಟಿದ್ದಾರೆ.

ಸುಧಾಕರ್ ಮುಖ ನೋಡಿ ಐನೂರು ಓಟು ಸಿಗಲ್ಲ; ಪ್ರದೀಪ್ ವ್ಯಂಗ್ಯ

ನನಗೆ ಐದು ಸಾವಿರ ಓಟು ಆದರೂ ದೊರೆಯುತ್ತವೆ. ಸುಧಾಕರ್ ಮುಖ ನೋಡಿ ಐನೂರು ಓಟು ಕೂಡ ಸಿಗಲಾರದು. ಸುಧಾಕರ್ ಹುಟ್ಟೂರಲ್ಲೇ ಅವರಿಗೆ ಗೌರವ, ಮರ್ಯಾದೆ ಇಲ್ಲ ಎಂದು ಪ್ರದೀಪ್ ಈಶ್ವರ್ ವ್ಯಂಗ್ಯವಾಡಿದ್ದಾರೆ.

ಸುಧಾಕರ್ ಬೆಂಬಲಿಗರಿಗೆ ವಾರ್ನಿಂಗ್

ನಿವ್ಯಾರೂ ನೋಡಿರದ ಸುಧಾಕರ್​​​ರನ್ನು ನಾನು ನೋಡಿದ್ದೇನೆ. ನೀವು ಯಾರು ಅವರನ್ನು ನಂಬಿಕೊಳ್ಳಬೇಡಿ. ಅವರನ್ನು ನಂಬಿದರೆ ನಿಮಗೆ ಚಿಪ್ಪೇ ಗತಿ. ಯಾರಾದರೂ ಕಾನೂನು ಕೈಗೆತ್ತಿಕೊಂಡರೆ ಅಷ್ಟೆ ಕಥೆ ಎಂದು ಶಾಸಕ ಪ್ರದೀಪ್ ಈಶ್ವರ್ ಮಾಜಿ ಸಚಿವರ ಬೆಂಬಲಿಗರಿಗೆ ಎಚ್ಚರಿಕೆ ನೀಡಿದ್ದಾರೆ.

ಸುಧಾಕರ್ ಕಾಂಗ್ರೆಸ್ ಸೇರ್ಪಡೆಗೆ ಯತ್ನ; ಪ್ರದೀಪ್ ಈಶ್ವರ್

ಅಧಿಕಾರ ಯಾರಿಗೂ ಶಾಶ್ವತವಲ್ಲ. ಪ್ರದೀಪ್ ಈಶ್ವರ್ ವಿಚಾರದಲ್ಲಿ ಸುಧಾಕರ್ ಏನು ಮಾಡಲೂ ಸಾದ್ಯವಿಲ್ಲ. ಅವರು ಇದೀಗ ಸುಧಾಕರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲು ಯತ್ನಿಸಿದ್ದಾರೆ. ಕಾಂಗ್ರೇಸ್ ಸೇರ್ಪಡೆಯಾಗಲು ಸುಧಾಕರ್ ಸರ್ಕಸ್ ನಡೆಸಿದ್ದಾರೆ. ಈಗಾಗಲೇ ಕಾಂಗ್ರೆಸ್​​ನ ಒಬ್ಬರು ಧುರಿಣರನ್ನು ಭೇಟಿ ಮಾಡಿದ್ದಾರೆ. ಬೇರೆ ಯಾರೂ ಭೇಟಿಗೆ ಅವಕಾಶ ಕೊಡುತ್ತಿಲ್ಲ. ಸುಧಾಕರ್ ಕನಸು ಈಡೇರಲ್ಲ. ಬಿಜೆಪಿಯವರು ಅವರನ್ನು ಪಕ್ಷದಲ್ಲಿ ಇಟ್ಟುಕೊಳ್ಳಲ್ಲ. ಕಾಂಗ್ರೆಸ್​ನವರು ಸೇರಿಸಿಕೊಳ್ಳಲ್ಲ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.

ಇದನ್ನೂ ಓದಿ: ಶಾಸಕ ಪ್ರದೀಪ್ ಈಶ್ವರ್ ಚಿಲ್ಲರೆ ರಾಜಕಾರಣ ಮಾಡ್ತಿದ್ದಾರೆ, ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ -ಡಾ ಕೆ ಸುಧಾಕರ್

ಸುಧಾಕರ್ ಕಾಂಗ್ರೆಸ್​​​​ನಿಂದ ಲೋಕಸಭೆ ಟಿಕೆಟ್ ಕೇಳಿದ್ದಾರೆ. ಸಂಸದ ಸ್ಥಾನಕ್ಕೆ ಟಿಕೆಟ್ ಹೋಗಲಿ, ಜಿ.ಪಂ ಟಿಕೆಟ್ ಕೂಡ ಅವರಿಗೆ ಕೊಡಲ್ಲ. ಸ್ಥಳೀಯ ಶಾಸಕರು, ಸಚಿವರನ್ನು ಕೇಳದೆ ಹೈಕಮಾಂಡ್ ಸುಧಾಕರ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲ್ಲ. ಸುಧಾಕರ್​​ಗೆ ಮಾಡಲು ಕೆಲಸ ಇಲ್ಲ. ಏನು ಬೇಕಾದರೂ ಮಾಡಲಿ ಎಂದು ಪ್ರದೀಪ್ ಈಶ್ವರ್ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:29 pm, Sat, 29 July 23

5 ವಿಕೆಟ್ ಕಬಳಿಸಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಸ್ಫೋಟಕ ಬ್ಯಾಟರ್
5 ವಿಕೆಟ್ ಕಬಳಿಸಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಸ್ಫೋಟಕ ಬ್ಯಾಟರ್
ಪುರಿ ಜಗನ್ನಾಥ ರಥಯಾತ್ರೆ ವೇಳೆ ಕಾಲ್ತುಳಿತ, ಮೂವರು ಸಾವು, ಹಲವರಿಗೆ ಗಾಯ
ಪುರಿ ಜಗನ್ನಾಥ ರಥಯಾತ್ರೆ ವೇಳೆ ಕಾಲ್ತುಳಿತ, ಮೂವರು ಸಾವು, ಹಲವರಿಗೆ ಗಾಯ
ಏರು ಧ್ವನಿಯಲ್ಲಿ ಮಾತನಾಡಿದ್ರೆಂದು ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ ಪೊಲೀಸ್
ಏರು ಧ್ವನಿಯಲ್ಲಿ ಮಾತನಾಡಿದ್ರೆಂದು ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ ಪೊಲೀಸ್
Video: ಉತ್ತರಕಾಶಿಯಲ್ಲಿ ಮೇಘಸ್ಫೋಟ, 9 ಮಂದಿ ನಾಪತ್ತೆ
Video: ಉತ್ತರಕಾಶಿಯಲ್ಲಿ ಮೇಘಸ್ಫೋಟ, 9 ಮಂದಿ ನಾಪತ್ತೆ
Weekly Horoscope: ಜೂನ್​ 30 ರಿಂದ ಜುಲೈ 6 ರವರೆಗಿನ ವಾರ ಭವಿಷ್ಯ
Weekly Horoscope: ಜೂನ್​ 30 ರಿಂದ ಜುಲೈ 6 ರವರೆಗಿನ ವಾರ ಭವಿಷ್ಯ
ಆಷಾಢ ಮಾಸದಲ್ಲಿ ಶುಭ ಕಾರ್ಯಗಳನ್ನ ಯಾಕೆ ಮಾಡಬಾರದು ತಿಳಿಯಿರಿ
ಆಷಾಢ ಮಾಸದಲ್ಲಿ ಶುಭ ಕಾರ್ಯಗಳನ್ನ ಯಾಕೆ ಮಾಡಬಾರದು ತಿಳಿಯಿರಿ
ಆಶ್ಲೇಷ ನಕ್ಷತ್ರದಲ್ಲಿ ಚಂದ್ರ ಸಂಚಾರ, ಈ ದಿನ ಯಾರಿಗೆಲ್ಲಾ ಶುಭ ತಿಳಿಯಿರಿ
ಆಶ್ಲೇಷ ನಕ್ಷತ್ರದಲ್ಲಿ ಚಂದ್ರ ಸಂಚಾರ, ಈ ದಿನ ಯಾರಿಗೆಲ್ಲಾ ಶುಭ ತಿಳಿಯಿರಿ
ಉತ್ತರಾಖಂಡದಲ್ಲಿ ಪ್ರವಾಹ; ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಸರಯೂ ನದಿ
ಉತ್ತರಾಖಂಡದಲ್ಲಿ ಪ್ರವಾಹ; ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಸರಯೂ ನದಿ
ಜೈನ ಮುನಿಗಳಿಂದ ಪ್ರಧಾನಿ ಮೋದಿಗೆ ಧರ್ಮ ಚಕ್ರವರ್ತಿ ಬಿರುದು ಪ್ರದಾನ
ಜೈನ ಮುನಿಗಳಿಂದ ಪ್ರಧಾನಿ ಮೋದಿಗೆ ಧರ್ಮ ಚಕ್ರವರ್ತಿ ಬಿರುದು ಪ್ರದಾನ
ಧೂಮಪಾನ ಮತ್ತು ಡ್ರಗ್ಸ್ ಸೇವನೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ: ಡಾ ಸದಾನಂದ
ಧೂಮಪಾನ ಮತ್ತು ಡ್ರಗ್ಸ್ ಸೇವನೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ: ಡಾ ಸದಾನಂದ