Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನ್ಯ ಜಾತಿಯ ಪ್ರೇಮಿಗಳು ಪರಾರಿ; ಯುವತಿ ಕಡೆಯವರಿಂದ ಪ್ರಿಯತಮನ ತಮ್ಮನ ಆಟೋಗೆ ಬೆಂಕಿ!

ಪ್ರೇಮಿಗಳಿಬ್ಬರು ಊರಿಂದ ಪರಾರಿಯಾಗಿ ಮದುವೆಯಾಗಿದ್ದಾರೆ. ಇದರಿಂದ ಆಕ್ರೋಶಗೊಂಡ ಯುವತಿಯ ಕಡೆಯವರು ಆಕೆಯ ಪ್ರೀಯತಮನ ತಮ್ಮನ ಆಟೋಗೆ ಬೆಂಕಿ ಹಾಕಿ ಪ್ರಾಣ ಬೆದರಿಕೆ ಹಾಕಿದ ಘಟನೆ ಚಿಕ್ಕಬಳ್ಳಾಪುರ(Chikkaballapur) ಜಿಲ್ಲೆಯ ಗುಡಿಬಂಡೆ ತಾಲ್ಲೂಕು ಮೇಲಿನ ಅಪ್ಪಿರೆಡ್ಡಿಹಳ್ಳಿ‌ ಗ್ರಾಮದಲ್ಲಿ ನಡೆದಿದೆ.

ಅನ್ಯ ಜಾತಿಯ ಪ್ರೇಮಿಗಳು ಪರಾರಿ; ಯುವತಿ ಕಡೆಯವರಿಂದ ಪ್ರಿಯತಮನ ತಮ್ಮನ ಆಟೋಗೆ ಬೆಂಕಿ!
ಪ್ರೇಮಿಗಳು
Follow us
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: ಕಿರಣ್ ಹನುಮಂತ್​ ಮಾದಾರ್

Updated on:Nov 30, 2023 | 5:58 PM

ಚಿಕ್ಕಬಳ್ಳಾಪುರ, ನ.30: ಆ ಯುವಕ-ಯುವತಿ ಜಾತಿಯ ಎಲ್ಲೇ ಮೀರಿ ಒಬ್ಬರಿಗೊಬ್ಬರು ಪರಸ್ಪರ ಪ್ರೀತಿಸಿದ್ದರು. ಅವರಿಬ್ಬರ ಮದುವೆ (Marriage)ಗೆ ಯುವತಿಯ ಕಡೆಯವರು ವಿರೋಧ ವ್ಯಕ್ತಪಡಿಸಿದ ಹಿನ್ನಲೆ ಕಡೆಗೆ ಇಬ್ಬರು ಊರಿಂದ ಪರಾರಿಯಾಗಿ ಮದುವೆಯಾಗಿದ್ದಾರೆ. ಇದರಿಂದ ಆಕ್ರೋಶಗೊಂಡ ಯುವತಿಯ ಕಡೆಯವರು ಆಕೆಯ ಪ್ರೀಯತಮನ ತಮ್ಮನ ಆಟೋಗೆ ಬೆಂಕಿ ಹಾಕಿ ಪ್ರಾಣ ಬೆದರಿಕೆ ಹಾಕಿದ ಘಟನೆ ಚಿಕ್ಕಬಳ್ಳಾಪುರ(Chikkaballapur) ಜಿಲ್ಲೆಯ ಗುಡಿಬಂಡೆ ತಾಲ್ಲೂಕು ಮೇಲಿನ ಅಪ್ಪಿರೆಡ್ಡಿಹಳ್ಳಿ‌ ಗ್ರಾಮದಲ್ಲಿ ನಡೆದಿದೆ.

ಅನ್ಯ ಜಾತಿಯ ಪ್ರೇಮಿಗಳ ಮದುವೆಗೆ ಹೊತ್ತಿ ಉರಿದ ಆಟೋ!

ಮೇಲಿನ ಅಪ್ಪಿರೆಡ್ಡಿಹಳ್ಳಿ ಗ್ರಾಮದ ರಾಮಕೃಷ್ಣಪ್ಪ-ಆನಂದಮ್ಮ ದಂಪತಿಗಳ ಪುತ್ರಿ ಮೌನಿಕ ಹಾಗೂ ಅವುಲಪ್ಪ-ನಾರಾಯಣಮ್ಮ ದಂಪತಿಯ ಪುತ್ರ ಸುರೇಶ್ ಕುಮಾರ್ ಜಾತಿಯ ಎಲ್ಲೆ ಮೀರಿ ಮದುವೆಯಾಗಿದ್ದರು. ಮೌನಿಕ, ಪಿಯುಸಿ ಓದಿ ಮನೆಯಲ್ಲಿದ್ದರೆ, ಸುರೇಶ್ ಕುಮಾರ್ ಸೆಂಟ್ರಿಂಗ್ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದ. ಈ ಪ್ರೇಮಿಗಳಿಬ್ಬರು ಎದುರು-ಬದುರು ಮನೆಯವರಾಗಿದ್ದರಿಂದ ನೋಡ ನೋಡುತ್ತಲೇ ಪ್ರೀತಿ ಚಿಗುರಿದೆ. ಪ್ರೀತಿಸಿದ ಜೋಡಿಯ ಮದುವೆಗೆ ಜಾತಿ ಅಡ್ಡ ಬಂದ ಕಾರಣಕ್ಕೆ ಪ್ರೇಮಿಗಳಿಬ್ಬರು ಪರಾರಿಯಾಗಿ ಮದುವೆಯಾಗಿದ್ದಾರೆ.

ಇದನ್ನೂ ಓದಿ:ಮದ್ವೆಯಾಗಿದ್ದರೂ ಪ್ರಿಯಕರನ ಜತೆ ಲಿವ್​ ಇನ್ ರಿಲೇಷನ್ ಶಿಪ್: ಏಕಾಏಕಿ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು

ಇದು ಹುಡುಗಿಯ ಪೋಷಕರ ಪಿತ್ತ ನೆತ್ತಿಗೇರಿಸುವಂತಾಗಿದೆ. ಈ ಹಿನ್ನಲೆ  ಯುವತಿಯ ಕಡೆಯವರು ಸುರೇಶ್ ಕುಮಾರ್, ತಮ್ಮ ಮೋಹನ್ ಎಂಬುವವರ ಆಟೋಗೆ ಬೆಂಕಿ ಹಚ್ಚಿದ್ದಾರೆಂದು ಆರೋಪಿಸಲಾಗಿದೆ. ಇನ್ನು ಹುಡುಗಿಯ ಕಡೆಯವರು ಪ್ರಬಲವಾಗಿದ್ದು, ದಾಳಿ ಮಾಡುವ ಭೀತಿಯಲ್ಲಿ ಹುಡುಗನ ಕಡೆಯವರಿದ್ದಾರೆ. ಪರಿಣಾಮ ತಲೆ ಮರೆಸಿಕೊಂಡು ಪ್ರಾಣ ರಕ್ಷಿಸಿಕೊಳ್ಳುವಂತಾಗಿದೆ. ಜಾತಿ‌ ಮೀರಿದ ಪ್ರೀತಿ ಮದುವೆ ಹಂತಕ್ಕೆ ಹೋದ ಪರಿಣಾಮ, ಮೇಲಿನ ಅಪ್ಪಿರೆಡ್ಡಿಹಳ್ಳಿ‌ ಗ್ರಾಮದಲ್ಲಿ ಆಕ್ರೋಶದ ಬೆಂಕಿ ಹೊಗೆಯಾಡುತ್ತಿದೆ. ಇನ್ನು ಈ ನವಜೋಡಿಗಳಿಗೆ ಪ್ರಾಣ ಬೆದರಿಕೆ ಇದ್ದು, ಭದ್ರತೆಯ ಹಿನ್ನೆಲೆಯಲ್ಲಿ ನಾಪತ್ತೆಯಲ್ಲಿದ್ದಾರಂತೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:10 pm, Thu, 30 November 23

ಆಡಳಿತ ಮತ್ತು ವಿರೋಧ ಪಕ್ಷದ ನಾಯಕರಿಗೆ ಕೇವಲ ಅಧಿಕಾರದ ತೆವಲು: ಗೋವಿಂದು
ಆಡಳಿತ ಮತ್ತು ವಿರೋಧ ಪಕ್ಷದ ನಾಯಕರಿಗೆ ಕೇವಲ ಅಧಿಕಾರದ ತೆವಲು: ಗೋವಿಂದು
Live: ಆರ್​ಎಸ್​ಎಸ್ ಅಖಿಲ ಭಾರತೀಯ ಪ್ರತಿನಿಧಿ ಸಭಾ ಪತ್ರಿಕಾಗೋಷ್ಠಿ ಲೈವ್
Live: ಆರ್​ಎಸ್​ಎಸ್ ಅಖಿಲ ಭಾರತೀಯ ಪ್ರತಿನಿಧಿ ಸಭಾ ಪತ್ರಿಕಾಗೋಷ್ಠಿ ಲೈವ್
ಪರೀಕ್ಷೆ ಇಲ್ಲದಿರುವುದನ್ನು ಸಚಿವರಿಂದ ಖಚಿತಪಡಿಸಿಕೊಂಡಿದ್ದೆವು: ವಾಟಾಳ್
ಪರೀಕ್ಷೆ ಇಲ್ಲದಿರುವುದನ್ನು ಸಚಿವರಿಂದ ಖಚಿತಪಡಿಸಿಕೊಂಡಿದ್ದೆವು: ವಾಟಾಳ್
ಹನಿ ಟ್ರ್ಯಾಪ್ ಆರೋಪ ವಿಷಯದಲ್ಲಿ ಸಿಎಂ, ಹೆಚ್​ಎಂ ಪ್ರತಿಕ್ರಿಯೆ ನೀಡಿಲ್ಲ
ಹನಿ ಟ್ರ್ಯಾಪ್ ಆರೋಪ ವಿಷಯದಲ್ಲಿ ಸಿಎಂ, ಹೆಚ್​ಎಂ ಪ್ರತಿಕ್ರಿಯೆ ನೀಡಿಲ್ಲ
VIDEO: ಹಾರುವ ಹಾರಿಸ್... ಅದ್ಭುತ ಕ್ಯಾಚ್ ಹಿಡಿದ ರೌಫ್
VIDEO: ಹಾರುವ ಹಾರಿಸ್... ಅದ್ಭುತ ಕ್ಯಾಚ್ ಹಿಡಿದ ರೌಫ್
ಬೆಂಗಳೂರಲ್ಲಿ ಕರ್ನಾಟಕ ಬಂದ್​ಗೆ ಮಿಶ್ರ ಪ್ರತಿಕ್ರಿಯೆ
ಬೆಂಗಳೂರಲ್ಲಿ ಕರ್ನಾಟಕ ಬಂದ್​ಗೆ ಮಿಶ್ರ ಪ್ರತಿಕ್ರಿಯೆ
ಪ್ರತಿಭಟನೆಗೆ ಬಂದ್ ಬಿಟ್ಟು ಪರ್ಯಾಯ ದಾರಿ ಹುಡುಕಬೇಕು: ಆಟೋರಿಕ್ಷಾ ಚಾಲಕರು
ಪ್ರತಿಭಟನೆಗೆ ಬಂದ್ ಬಿಟ್ಟು ಪರ್ಯಾಯ ದಾರಿ ಹುಡುಕಬೇಕು: ಆಟೋರಿಕ್ಷಾ ಚಾಲಕರು
ಕಮೆಂಟೇಟರ್ ಜಾನಿ ನಿಜವಾದ ಹೆಸರೇನು? ಈ ಹೆಸರು ಬಂದಿದ್ದು ಹೇಗೆ?
ಕಮೆಂಟೇಟರ್ ಜಾನಿ ನಿಜವಾದ ಹೆಸರೇನು? ಈ ಹೆಸರು ಬಂದಿದ್ದು ಹೇಗೆ?
ಆಣೆ ಪ್ರಮಾಣ ಮಾಡುವುದು ಯಾಕೆ? ಆಣೆ ತಪ್ಪಿದರೆ ಏನಾಗುತ್ತದೆ ನೋಡಿ
ಆಣೆ ಪ್ರಮಾಣ ಮಾಡುವುದು ಯಾಕೆ? ಆಣೆ ತಪ್ಪಿದರೆ ಏನಾಗುತ್ತದೆ ನೋಡಿ
ರವಿ ಮೀನ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ ಇಲ್ಲಿದೆ
ರವಿ ಮೀನ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ ಇಲ್ಲಿದೆ