ಚಿಂತಾಮಣಿಯಲ್ಲಿ ಹುಣಸೆಹಣ್ಣಿನ ಘಮಲು, ಭಾರೀ ಸಂಖ್ಯೆಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟ ಪಕ್ಕದ ರಾಜ್ಯಗಳ ವ್ಯಾಪಾರಿಗಳು

Chintamani tamarind market: ಈ ಬಾರಿ ಮರದಲ್ಲಿರುವ ಎಲೆಗಳನ್ನೇ ಮೀರಿಸುವ ಹಾಗೆ ಹುಣಸೆ ಕಾಯಿಗಳು ಬಿಟ್ಟಿವೆ. ಇದ್ರಿಂದ ಅಗತ್ಯಕ್ಕಿಂತ ಹೆಚ್ಚಿಗೆ ಸರಕು ಮಾರುಕಟ್ಟೆಗ ಬರ್ತಿದೆ. ಭಾನುವಾರ, ಮಂಗಳವಾರ ಹಾಗೂ ಶುಕ್ರವಾರ ಹುಣಸೆ ಹಣ್ಣಿನ ಸಂತೆ ನಡೆಯುತ್ತೆ, ನೂರಾರು ಟನ್ ಹುಣಸೆಹಣ್ಣು ಮಾರುಕಟ್ಟೆಗೆ ಬರ್ತಿದೆ. ಆದರೆ ಇದ್ರಿಂದ ನಿರೀಕ್ಷೆಯಷ್ಟು ಬೆಲೆ ಸಿಗ್ತಿಲ್ಲ. ರೈತರಂತೂ ಬೆಲೆ ಕಡಿಮೆಯಿಂದ ಅಸಮಾಧಾನಗೊಂಡಿದ್ದಾರೆ.

ಚಿಂತಾಮಣಿಯಲ್ಲಿ ಹುಣಸೆಹಣ್ಣಿನ ಘಮಲು, ಭಾರೀ ಸಂಖ್ಯೆಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟ ಪಕ್ಕದ ರಾಜ್ಯಗಳ ವ್ಯಾಪಾರಿಗಳು
ಚಿಂತಾಮಣಿ ಮಾರುಕಟ್ಟೆಯಲ್ಲಿ ಹುಣಸೆಹಣ್ಣಿನ ಘಮಲು, ಲಗ್ಗೆಯಿಟ್ಟ ವ್ಯಾಪಾರಿಗಳು
Updated By: ಸಾಧು ಶ್ರೀನಾಥ್​

Updated on: Mar 23, 2024 | 6:58 AM

ರುಚಿ ರುಚಿಯಾಗಿ ಸವಿರುಚಿಗಾಗಿ ಅಡುಗೆ ಮಾಡಬೇಕು ಅಂದ್ರೆ ಅದೊಂದು ಪದಾರ್ಥ ಬೇಕೆ ಬೇಕು, ಅಡುಗೆ ಮನೆಯಲ್ಲಿ ಅದು ಇಲ್ಲದೆ ಅಡುಗೆ ಪರಿಪೂರ್ಣವಾಗಲ್ಲ, ಈಗ ಅದರ ಸೀಜನ್ ಆರಂಭವಾಗಿದ್ದು… ಅದೊಂದು ಮಾರುಕಟ್ಟೆಯಲ್ಲಿ ಅದರದ್ದೇ ಕಾರುಕಾರು. ಅಷ್ಟಕ್ಕೂ ಅದೇನ್ ಅಂತೀರಾ ಈ ವರದಿ ನೋಡಿ!! ಇದು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ, ಇದು ಕೋಲಾರ ಚಿಕ್ಕಬಳ್ಳಾಪುರ ಅವಳಿ ಜಿಲ್ಲೆಗೆ ಖ್ಯಾತಿ. ಇಂಥದರಲ್ಲಿ ಇಲ್ಲಿ ನಡೆಯುವ ಹುಣಸೆ ಹಣ್ಣಿನ ಮಾರುಕಟ್ಟೆ (tamarind traders) ದಕ್ಷಿಣ ಭಾರತದಲ್ಲಿ ಖ್ಯಾತಿ. ಈಗ ಎಲ್ಲಿ ನೋಡಿದ್ರೂ ಎತ್ತ ನೋಡಿದ್ರೂ… ಹುಣಸೆ ಹಣ್ಣಿನ ಸಿಜನ್ (Chintamani tamarind market).

ಇದ್ರಿಂದ ರೈತರು ತಾವು ಬೆಳೆದ ಹುಣಸೆ ಹಣ್ಣು ಹಾಗೂ ಕಾಯಿಯನ್ನು ತೆಗೆದುಕೊಂಡು ಚಿಂತಾಮಣಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ. ಇದ್ರಿಂದ ಹುಣಸೆ ಹಣ್ಣು ಕೊಂಡುಕೊಳ್ಳಲು ಕೇರಳ ತಮಿಳನಾಡು ಆಂದ್ರ ಮಹಾರಾಷ್ಟ್ರದಿಂದಲೂ ದೊಡ್ಡ ದೊಡ್ಡ ಕಂಪನಿಗಳು ದೊಡ್ಡ ದೊಡ್ಡ ವರ್ತಕರು ಇಲ್ಲಿಗೆ ಆಗಮಿಸಿ ಹುಣಸೆ ಹಣ್ಣು ಖರೀದಿ ಮಾಡ್ತಿದ್ದಾರೆ.

Also Read: Forest Poachers – ಚಿಕ್ಕಬಳ್ಳಾಪುರದಲ್ಲಿ ನವಿಲುಗಳ ಮಾರಣಹೋಮ, ತಿಂಗಳಲ್ಲಿ 15ಕ್ಕೂ ಹೆಚ್ಚು ರಾಷ್ಟ್ರಪಕ್ಷಿಗಳ ಹತ್ಯೆ

ಈ ಬಾರಿ ಹುಣಸೆ ಮರದಲ್ಲಿರುವ ಎಲೆಗಳನ್ನೇ ಮೀರಿಸುವ ಹಾಗೆ ಹುಣಸೆ ಕಾಯಿಗಳು ಬಿಟ್ಟಿವೆ. ಇದ್ರಿಂದ ಅಗತ್ಯಕ್ಕಿಂತ ಹೆಚ್ಚಿಗೆ ಸರಕು ಮಾರುಕಟ್ಟೆಗ ಬರ್ತಿದೆ. ಭಾನುವಾರ, ಮಂಗಳವಾರ ಹಾಗೂ ಶುಕ್ರವಾರ ಹುಣಸೆ ಹಣ್ಣಿನ ಸಂತೆ ನಡೆಯುತ್ತೆ, ನೂರಾರು ಟನ್ ಹುಣಸೆಹಣ್ಣು ಮಾರುಕಟ್ಟೆಗೆ ಬರ್ತಿದೆ. ಆದರೆ ಇದ್ರಿಂದ ನಿರೀಕ್ಷೆಯಷ್ಟು ಬೆಲೆ ಸಿಗ್ತಿಲ್ಲ. ರೈತರಂತೂ ಬೆಲೆ ಕಡಿಮೆಯಿಂದ ಅಸಮಾಧಾನಗೊಂಡಿದ್ದಾರೆ.

ಮತ್ತೊಂದೆಡೆ ಹುಣಸೆ ಹಣ್ಣಿನ ಆಟಾಟೋಪದ ಮುಂದೆ ಟೊಮ್ಯಾಟೊ ಬೆಲೆ ಕುಸಿದಿದೆ. ಕೆ.ಜಿ. ಹುಣಸೆಹಣ್ಣು 30 ರೂಪಾಯಿಗೆ ಬಿಕಾರಿಯಾಗ್ತಿದೆ, ಇದ್ರಿಂದ ಟೊಮ್ಯಾಟೊ ಹಣ್ಣುಗಳನ್ನು ಕೇಳೋರೆ ಇಲ್ಲದಂತಾಗಿದೆ. ಟೊಮ್ಯಾಟೊಗೂ ಒಂದು ಕಾಲವಾದ್ರೆ ಹುಣಸೆಗೂ ಒಂದು ಕಾಲ ಎನ್ನುವಂತಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ​