ಮದ್ವೆಯಾಗಿದ್ದರೂ ಬಾಡದ ಹಳೇ ಪ್ರೀತಿ.. ಆಷಾಢ ಮಾಸಕ್ಕೆಂದು ತವರಿಗೆ ಬಂದು ಪ್ರಿಯಕರನ ಜೊತೆ ಸಾವಿಗ ಶರಣು

| Updated By: ರಮೇಶ್ ಬಿ. ಜವಳಗೇರಾ

Updated on: Jul 14, 2024 | 3:34 PM

ಆಷಾಢಕ್ಕೆ ತವರು ಮನೆಗೆ ಬಂದ ನವವಿವಾಹಿತೆಯೊಬ್ಬಳು ಪ್ರಿಯಕರನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ. ಅನುಷಾ( 19) ಮತ್ತು ಆಕೆಯ ಪ್ರಿಯಕರ ವೇಣು (21) ಆತ್ಮಹತ್ಯೆ ಮಾಡಿಕೊಂಡವರು. ಸೊಂಟಕ್ಕೆ ವೇಲ್ ಬಿಗಿದುಕೊಂಡು ಕೃಷಿ ಹೊಂಡಕ್ಕೆ‌ ಹಾರಿ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮದ್ವೆಯಾಗಿದ್ದರೂ ಬಾಡದ ಹಳೇ ಪ್ರೀತಿ.. ಆಷಾಢ ಮಾಸಕ್ಕೆಂದು ತವರಿಗೆ ಬಂದು ಪ್ರಿಯಕರನ ಜೊತೆ ಸಾವಿಗ ಶರಣು
ವೇಣು(21), ಅನುಷಾ(19)
Follow us on

ಚಿಕ್ಕಬಳ್ಳಾಪುರ, (ಜುಲೈ 14): ವೇಲನ್ನು ಟೊಂಕಕ್ಕೆ ಕಟ್ಟಿಕೊಂಡು ಕೃಷಿ ಹೊಂಡದ ನೀರಿಗೆ ಹಾರಿ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಂತಾಮಣಿ ತಾಲೂಕಿನ ಎಂ.ಮುದ್ದಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಎಂ.ಮುದ್ದಲಹಳ್ಳಿ ಗ್ರಾಮದ ಯುವಕ ವೇಣು (21) ಹಾಗೂ ಕಾಚಹಳ್ಳಿ ಗ್ರಾಮದ ಯುವತಿ ಅನುಷಾ (19) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಅನುಷಾ ಮತ್ತು ವೇಣು 2 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಅನುಷಾ ಮನೆಯವರು ಈ ಪ್ರೀತಿಗೆ ಒಪ್ಪಿಗೆ ನೀಡದೆ ಆಕೆಗೆ ಒಂದು ತಿಂಗಳ ಹಿಂದೆ ಅಷ್ಟೇ ಬೇರೆ ಯುವಕನ ಜತೆಗೆ ಮದುವೆ ಮಾಡಿದ್ದರು. ಆದ್ರೆ, ಇದೀಗ ಆಷಾಡ ಮಾಸವೆಂದು ತವರು ಮನೆ ಬಂದು ಪ್ರಿಯರನ ಜೊತೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಇವರು ಕಳೆದ ಎರಡು ವರ್ಷದಿಂದ ಪ್ರೀತಿ ಮಾಡುತ್ತಿದ್ದರು. ಈ ಬಗ್ಗೆ ಯುವತಿ ಮನೆಯಲ್ಲಿ ಜಾತಿ ನೆಪವೊಡ್ಡಿ ವಿರೋಧ ವ್ಯಕ್ತಪಡಿಸಿದ್ದರು. ಹೇಗಾದರೂ ಮಾಡಿ ಇಬ್ಬರನ್ನು ಬೇರೆ ಬೇರೆ ಮಾಡಬೇಕೆಂದು ಒಂದು ತಿಂಗಳ ಹಿಂದೆ ಬೇರೊಬ್ಬನ ಜೊತೆ ಯುವತಿಯ ಮದುವೆ ಮಾಡಲಾಗಿತ್ತು. ಅದರಂತೆ ಅನುಷಾ ದಾಬಸ್ ಪೇಟೆಯಲ್ಲಿ ಗಂಡನೊಂದಿಗೆ ಸಂಸಾರ ಮಾಡಿಕೊಂಡಿದ್ದಳು.

ಇದನ್ನೂ ಓದಿ: ಮಗಳ ವೀಡಿಯೋವನ್ನು ಅಶ್ಲೀಲವಾಗಿ ಎಡಿಟ್ ಮಾಡಿ ವೈರಲ್: ಉಡುಪಿಯ ಆಪತ್ಭಾಂದವ ಆಸೀಫನ ಅಸಲಿ ಮುಖ ಬಯಲು

ಆದ್ರೆ, ಆಷಾಡ ಮಾಸ ಇರುವುದರಿಂದ ಅತ್ತೆ ಸೊಸೆ ಒಂದೇ ಕಡೆ ಇರಬಾರದು ಎನ್ನುವ ನಂಬಿಕೆ ಇದೆ. ಹೀಗಾಗಿ ಅನುಷಾ ಗಂಡನ ಮನೆಯಿಂದ ತವರು ಮನೆಗೆ ಬಂದಿದ್ದಳು. ಬಳಿಕ ಅಜ್ಜಿ ಮನೆ ಎಂ ಮುದ್ದಲಹಳ್ಳಿಗೆ ಬಂದು ತನ್ನ ಪ್ರಿಯಕರನ್ನು ಭೇಟಿ ಮಾಡಿದ್ದಾಳೆ. ಆ ವೇಳೆ ಇಬ್ಬರೂ ಒಟ್ಟಿಗೆ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ನಿರ್ಧರಿಸಿ, ಮುದ್ದಲಹಳ್ಳಿ ಗ್ರಾಮ ಹೊರವಲಯದ ಕಾಡಿನಂಚಿನ ಕೃಷಿ ಹೊಂಡಕ್ಕೆ ಹೋಗಿ ಇಬ್ಬರೂ ಸೊಂಟಕ್ಕೆ ವೇಲ್ ಕಟ್ಟಿಕೊಂಡು ನೀರಿಗೆ ಹಾರಿದ್ದಾರೆ. ಇನ್ನು ವಿಷಯ ತಿಳಿದು ಸ್ಥಳಕ್ಕೆ ಕೆಂಚಾರ್ಲಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಈ ಬಗ್ಗೆ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ