AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಂದಿ ಗಿರಿಧಾಮವನ್ನು ಪ್ರವಾಸೋದ್ಯಮ ಇಲಾಖೆ ಸುಪರ್ದಿಗೆ ನೀಡಿದ್ದೇ ತಡ, ಬೆಟ್ಟದ ಮೇಲೆ ಕುಡುಕರು ತಟ್ಟಾಡುವುದು ಮಿತಿ ಮೀರಿದೆ!

Nandi hills: ನಂದಿ ಗಿರಿಧಾಮ ವಿಶ್ವವಿಖ್ಯಾತ ಪ್ರವಾಸಿ ತಾಣ. ಇಂತಹ ಪ್ರಕೃತಿ ತಾಣವನ್ನು ತೋಟಗಾರಿಕೆ ಇಲಾಖೆಯಿಂದ ಪ್ರವಾಸೋದ್ಯಮ ಇಲಾಖೆಯ ಕೆಎಸ್‌ಟಿಡಿಸಿ ಸುಪರ್ದಿಗೆ ನೀಡಿದ್ದೇ ತಡ ಬೆಟ್ಟದಲ್ಲಿ ಎಲ್ಲೆಲ್ಲೂ ಮೋಜು, ಮಸ್ತಿ ಸೇರಿದಂತೆ ಕುಡುಕರ ಹಾವಳಿ ಹೆಚ್ಚಾಗಿದೆ.

ನಂದಿ ಗಿರಿಧಾಮವನ್ನು ಪ್ರವಾಸೋದ್ಯಮ ಇಲಾಖೆ ಸುಪರ್ದಿಗೆ ನೀಡಿದ್ದೇ ತಡ, ಬೆಟ್ಟದ ಮೇಲೆ ಕುಡುಕರು ತಟ್ಟಾಡುವುದು ಮಿತಿ ಮೀರಿದೆ!
ನಂದಿ ಗಿರಿಧಾಮವನ್ನು ಪ್ರವಾಸೋದ್ಯಮ ಇಲಾಖೆ ಸುಪರ್ದಿಗೆ ನೀಡಿದ್ದೇ ತಡ, ಬೆಟ್ಟದ ಮೇಲೆ ಕುಡುಕರು ತಟ್ಟಾಡುವುದು ಮಿತಿ ಮೀರಿದೆ!
TV9 Web
| Edited By: |

Updated on: Sep 18, 2022 | 6:06 AM

Share

ಚಿಕ್ಕಬಳ್ಳಾಪುರ: ಅದು ವಿಶ್ವವಿಖ್ಯಾತ ಪ್ರವಾಸಿತಾಣ. ಅಲ್ಲಿಗೆ ಹೋಗಿ ಕೆಲಕಾಲ ವಿಹಾರ ಮಾಡಿದರೆ ಅದೇನೋ ಮನಸ್ಸಿಗೆ ಹಿತವೆನಿಸುತ್ತೆ. ಅಲ್ಲಿರುವ ಅಹ್ಲಾದಕರ ವಾತಾವರಣಕ್ಕೆ ಮನಸೋಲದವರೇ ಇಲ್ಲ. ಪ್ರೇಮಿಗಳಿಗೆ ಪ್ರೇಮಸ್ವರ್ಗ, ವೃದ್ಧರಿಗೆ ವಿಶ್ರಾಂತಿಧಾಮ, ನವವಿವಾಹಿತರಿಗೆ ಹನಿಮೂನ್ ತಾಣ, ಪ್ರಕೃತಿ ಪ್ರಿಯರ ಅಚ್ಚುಮೆಚ್ಚಿನ ತಾಣ ಎಂದೇ ಖ್ಯಾತಿಯಾಗಿದ್ದ ಆ ತಾಣ ಈಗ ಮುಂದುವರಿದು ಕುಡುಕರ ನೆಚ್ಚಿನ ತಾಣವಾದಂತೆ ಕಂಡುಬಂದಿದೆ! ಅಷ್ಟಕ್ಕೂ ಅದ್ಯಾವ ತಾಣ ಅಂದರೆ…

ಆಕಾಶ-ಭೂಮಿ ಒಂದಾಗಿ, ಭೂಮಿಯ ಮೇಲೆ ಸ್ವರ್ಗ ಸೃಷ್ಟಿಸಿರುವ ಇದು ನಂದಿ ಗಿರಿಧಾಮ (World famous Nandi hills). ವಿಶ್ವವಿಖ್ಯಾತ ಪ್ರವಾಸಿ ತಾಣ. ಇಂತಹ ಪ್ರಕೃತಿ ತಾಣವನ್ನು ತೋಟಗಾರಿಕೆ (Horticulture) ಇಲಾಖೆಯಿಂದ ಪ್ರವಾಸೋದ್ಯಮ (Tourism) ಇಲಾಖೆಯ ಕೆಎಸ್‌ಟಿಡಿಸಿ (KSTDC) ಸುಪರ್ದಿಗೆ ನೀಡಿದ್ದೇ ತಡ ಬೆಟ್ಟದಲ್ಲಿ ಎಲ್ಲೆಲ್ಲೂ ಮೋಜು, ಮಸ್ತಿ ಸೇರಿದಂತೆ ಕುಡುಕರ (Drunkard) ಹಾವಳಿ ಹೆಚ್ಚಾಗಿದೆ. ಇದರಿಂದ ಗಿರಿಧಾಮದಲ್ಲಿ ಗಿಡ, ಮರ, ಪೊದೆಗಳ ಸಂಖ್ಯೆಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಮದ್ಯದ ಬಾಟಲಿಗಳ ರಾಶಿಗಳೇ ಕಾಣುತ್ತಿವೆ. ಇನ್ನು ಸ್ವಚ್ಚತಾ ಅಭಿಯಾನದ ಪ್ರಯುಕ್ತ ಚಿಕ್ಕಬಳ್ಳಾಪುರ (Chikkaballapur) ಜಿಲ್ಲಾ ಪಂಚಾಯ್ತಿ ನಂದಿ ಗಿರಿಧಾಮದಲ್ಲಿ ಸ್ವಚ್ಚ ನಂದಿ ಕಾರ್ಯಕ್ರಮ ಆಯೋಜನೆ ಮಾಡಿದಾಗ ರಾಶಿ ರಾಶಿ ಮದ್ಯದ ಬಾಟಲುಗಳು ಪತ್ತೆಯಾಗಿವೆ.

ಇನ್ನು ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್ ಸೇರಿದಂತೆ ಜಿಲ್ಲೆಯ 157 ಗ್ರಾಮ ಪಂಚಾಯ್ತಿಗಳ ಪಿಡಿಓಗಳು, ಕಾರ್ಯದರ್ಶಿಗಳು, ಬಿಲ್‌ ಕಲೆಕ್ಟರ್‌ಗಳು ತಾಲ್ಲೂಕು ಪಂಚಾಯ್ತಿಗಳು ಇ.ಓ. ಅಧಿಕಾರಿಗಳು ಸೇರಿದಂತೆ ನೂರಾರು ಜನ ಅಧಿಕಾರಿ ಸಿಬ್ಬಂದಿ ನಂದಿ ಗಿರಿಧಾಮವನ್ನು ಸ್ವಚ್ಛ ಮಾಡಿದರು. ಗಿರಿ ಧಾಮದಲ್ಲಿದ್ದ ಪ್ಲಾಸ್ಟಿಕ್ ಬಾಟಲು ಮತ್ತು ಮದ್ಯದ ಬಾಟಲುಗಳನ್ನು ತುಂಬಿಕೊಂಡು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ವಿಲೇವಾರಿ ಮಾಡಿದರು. ಇನ್ನು ಸ್ವಚ್ಛತೆಯೇ ಸೇವೆ ಎಂಬ ಧ್ಯೇಯದೊಂದಿಗೆ ಚಿಕ್ಕಬಳ್ಳಾಪುರ ತಾಲ್ಲೂಕಿನ ಸುಲ್ತಾನ ಪೇಟೆಯಿಂದ ಕುದುರೆ ಮೆಟ್ಟಿಲುಗಳ ಮೂಲಕ ಟ್ರಕ್ಕಿಂಗ್ ಅಂಡ್ ಕ್ಲೀನಿಂಗ್ ಮಾಡಿ ಸುಂದರ ಪ್ರಕೃತಿ ಸೊಬಗಿಗೆ ಮಾರುಹೋದರು ಎನ್ನುತ್ತಾರೆ ಧನುರೇಖಾ, ಮುಖ್ಯ ಯೋಜನಾಧಿಕಾರಿ, ಚಿಕ್ಕಬಳ್ಳಾಪುರ ಜಿ ಪಂ.

ನಂದಿ ಗಿರಿಧಾಮ ತೋಟಗಾರಿಕೆ ಇಲಾಖೆಯ ಅಧೀನದಲ್ಲಿದ್ದಾಗ ಗಿಡ, ಮರ, ಬಳ್ಳಿ ಸೇರಿದಂತೆ ಸ್ವಚ್ಛತೆಗೆ ಪ್ರಾಮುಖ್ಯತೆ ನೀಡುತ್ತಿದ್ದರು. ಆದರೆ ಪ್ರವಾಸೋದ್ಯಮ ಇಲಾಖೆಯ ವ್ಯಾಪ್ತಿಗೆ ನಂದಿ ಗಿರಿಧಾಮ ಬರುತ್ತಿದ್ದಂತೆ ಸ್ವಚ್ಚತೆ, ಪರಿಸರ, ಪ್ರಕೃತಿ ಸೊಬಗಿಗೆ ಪ್ರಾಮುಖ್ಯತೆ ನೀಡದೇ ವ್ಯಾಪಾರ, ವಾಣಿಜ್ಯ ಲಾಭಕ್ಕೆ ಪ್ರಾಮುಖ್ಯತೆ ನೀಡಲಾಗಿದೆ. ಇದರಿಂದ ಗಿರಿಧಾಮದಲ್ಲಿ ಸ್ವಚ್ಚತೆ ಮರೀಚಿಕೆಯಾಗಿದ್ದು, ಪ್ರವಾಸಕ್ಕೆ ಬಂದ ಕೆಲವರು ಹೇಳೋರು, ಕೇಳೂರು ಯಾರೂ ಇಲ್ಲದೇ ಕುಡುಕರ ಅಡ್ಡೆಯನ್ನಾಗಿ ಮಾಡಿಕೊಂಡಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ – ಭೀಮಪ್ಪ ಪಾಟೀಲ, ಟಿವಿ 9, ಚಿಕ್ಕಬಳ್ಳಾಪುರ

ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ