AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆರೆಯೊಳಗೆ ಸಿಕ್ತು ಅಪರೂಪದ ಸೀತಾರಾಮರ ವಿಗ್ರಹ: ರಾಮನ ಎಡತೊಡೆ ಮೇಲೆ ಕುಳಿತ‌ ಸೀತಾ ಮಾತೆ

ಇಡೀ ದೇಶದಲ್ಲೇ ಎಲ್ಲೂ ಕಾಣಸಿಗದ ರಾಮನ ಎಡತೊಡೆಯ ಮೇಲೆ‌ ಸೀತಾ ಮಾತೆ ಕುಳಿತಿರುವ ವಿಶೇಷ ಪುರಾತನ ಕಾಲದ ಪಟ್ಟಾಭಿರಾಮನ ವಿಗ್ರಹ ಚಿಕ್ಕಮಗಳೂರು ಜಿಲ್ಲೆಯ ತರೀಕೆರರೆ ಪಟ್ಟಣದ ತುದಿಪೇಟೆಯಲ್ಲಿರುವ ದೇವಾಲಯದಲ್ಲಿದೆ. ಈ ಅಪರೂಪದ ಸೀತಾರಾಮರ ವಿಗ್ರಹ ಸಿಕ್ಕಿದ್ದು ಕೆರೆಯೊಳಗೆ.

ಕೆರೆಯೊಳಗೆ ಸಿಕ್ತು ಅಪರೂಪದ ಸೀತಾರಾಮರ ವಿಗ್ರಹ: ರಾಮನ ಎಡತೊಡೆ ಮೇಲೆ ಕುಳಿತ‌ ಸೀತಾ ಮಾತೆ
ಸೀತಾರಾಮರ ಪುರಾತನ ವಿಗ್ರಹ
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Updated By: ಗಂಗಾಧರ​ ಬ. ಸಾಬೋಜಿ|

Updated on: Jan 21, 2024 | 2:05 PM

Share

ಚಿಕ್ಕಮಗಳೂರು, ಜನವರಿ 21: ಕರ್ನಾಟಕಕ್ಕೂ ಶ್ರೀರಾಮನಿಗೂ ಅವಿನಾಭಾವ ನಂಟು ಇದು. ರಾಜ್ಯದ ಜಿಲ್ಲೆ ಜಿಲ್ಲೆಯಲ್ಲೂ ರಾಮನ ಹೆಜ್ಜೆ ಗುರುತುಗಳು ಇವೆ. ಇದೀಗ ದೇಶದಲ್ಲೇ ಅಪರೂಪದ ಶ್ರೀರಾಮನ ವಿಗ್ರಹ ಕಾಫಿನಾಡು ಚಿಕ್ಕಮಗಳೂರು (Chikkamagaluru) ಜಿಲ್ಲೆಯಲ್ಲಿದೆ. ರಾಮನ ಎಡತೊಡೆಯ ಮೇಲೆ ಸೀತೆ ಕೂತಿರುವುದರ ಜೊತೆಗೆ ಆಂಜನೇಯ ನಮಸ್ಕರಿಸುತ್ತಿರುವ ಪುರಾತನ ಕಾಲದ ವಿಶೇಷವಾದ ವಿಗ್ರಹ ಇದಾಗಿದ್ದು. ಸಾವಿರಾರು ವರ್ಷಗಳ ಪುರಾತನ ವಿಗ್ರಹಕ್ಕೆ ವಿಶೇಷ ಪೂಜಾ ಕಾರ್ಯ ನಡೆಯುತ್ತಿದೆ.

ಇಡೀ ದೇಶದಲ್ಲೇ ಎಲ್ಲೂ ಕಾಣಸಿಗದ ರಾಮನ ಎಡತೊಡೆಯ ಮೇಲೆ‌ ಸೀತಾ ಮಾತೆ ಕುಳಿತಿರುವ ವಿಶೇಷ ಪುರಾತನ ಕಾಲದ ಪಟ್ಟಾಭಿರಾಮನ ವಿಗ್ರಹ ಜಿಲ್ಲೆಯ ತರೀಕೆರರೆ ಪಟ್ಟಣದ ತುದಿಪೇಟೆಯಲ್ಲಿರುವ ದೇವಾಲಯದಲ್ಲಿದೆ. ಈ ಅಪರೂಪದ ಸೀತಾರಾಮರ ವಿಗ್ರಹ ಸಿಕ್ಕಿದ್ದು ಕೆರೆಯೊಳಗೆ. ಸುಮಾರು 70 ವರ್ಷಗಳ ಹಿಂದೆ ತರೀಕೆರೆ ತಾಲೂಕಿನ ಚಿಕ್ಕಾತೂರು ಮಾರ್ಗದಲ್ಲಿನ ದಳವಾಯಿ ಕೆರೆಯ ಏರಿ ದುರಸ್ಥಿ ಮಾಡಲು ಕೆರೆ ಏರಿ ಅಗೆಯುವಾಗ ಈ ಮೂರ್ತಿ ಸಿಕ್ಕಿದೆ.

ಇದನ್ನೂ ಓದಿ: ರಾಮಮಂದಿರದ ತಳಪಾಯದಿಂದ ಹಿಡಿದ ರಾಮ ಮೂರ್ತಿ ವರೆಗೂ ಕನ್ನಡಿಗರದ್ದೇ ಕೆಲಸ

ಈ ಅಪರೂಪದ ಈ ಪಟ್ಟಾಭಿರಾಮನ ವಿಗ್ರಹ ನಮಗೇ ಬೇಕೆಂದು ಅಂದು ತರೀಕೆರೆ ತಾಲೂಕಿನ ಎರಡು ಗ್ರಾಮಗಳ ಮಧ್ಯೆ ಗಲಾಟೆ-ಮಾತಿನ ಚಕಮಕಿ ಕೂಡ ನಡೆದಿತ್ತು. ಆದರೆ, ಅಂದು ಈ ಪಟ್ಟಾಭಿರಾಮನ ಮೂರ್ತಿಯನ್ನ ಎತ್ತಿನಗಾಡಿಯಲ್ಲಿ ಹೊತ್ತು ತಂದಿದ್ದರು‌. 1962ರ ನವೆಂಬರ್ ತಿಂಗಳಿನಲ್ಲಿ ಸಿಕ್ಕ ಈ ಮೂರ್ತಿಯನ್ನ 1982ರ ಮಾರ್ಚ್‍ನಲ್ಲಿ ಪ್ರತಿಷ್ಠಾಪನೆ ಮಾಡಿದ್ದರು. ಅಂದಿನಿಂದಲೂ ಸೀತೆಯನ್ನ ತನ್ನ ತೊಡೆ ಮೇಲೆ ಕೂರಿಸಿಕೊಂಡಿರುವ ಈ ಪಟ್ಟಾಭಿರಾಮನಿಗೆ ಪೂಜೆ-ಪುನಸ್ಕಾರ-ಕ್ರೈಂಕರ್ಯಗಳು ನಿರಂತರವಾಗಿ ನಡೆದುಕೊಂಡು ಬಂದಿದೆ.

ಇದನ್ನೂ ಓದಿ: ಮೈಸೂರು: ಶ್ರೀರಾಮನ ಲಕ್ಷ ದೀಪೋತ್ಸವಕ್ಕೆ ಅನುಮತಿ ರದ್ದು, 111 ಅಡಿ ಉದ್ದದ ಅಗರಬತ್ತಿ ಉರಿಯಲು 2 ತಾಸು ಅನುಮತಿ

ದಳವಾಯಿ ಕೆರೆ ಅಂಚಿನಲ್ಲಿ ಶತಮಾನಗಳ ಹಿಂದೆ ದೇವಸ್ಥಾನ ಇತ್ತು ಅನ್ನೋದು ಸ್ಥಳಿಯರ ಮಾತಾಗಿದ್ದು, ಇಂದಿಗೂ ಕೆರೆ ಏರಿಯಲ್ಲಿರುವ ದೇವಸ್ಥಾನದ ಕಲ್ಲುಗಳು ಇದಕ್ಕೆ ಸಾಕ್ಷಿಯಾಗಿವೆ. ಆ ಕಲ್ಲುಗಳು ದೇವಸ್ಥಾನದ ಕಲ್ಲುಗಳೇ ಎಂಬುದನ್ನು ಒತ್ತಿ ಒತ್ತಿ ಹೇಳುತ್ತಿವೆ. ಶತಮಾನಗಳ ಹಿಂದೆ ಇದ್ದ ದೇವಸ್ಥಾನ ನಶಿಸಿ ಹೋಗಿದ್ದು ನಾಶವಾದ ದೇವಾಲಯದ ಒಳಗಿದ್ದ ರಾಮನ ವಿಗ್ರಹ ಮಣ್ಣಿನಡಿ ಹಾಗೂ ದೇವಸ್ಥಾನದ ಕಲ್ಲುಗಳ ಅವಶೇಷದೊಂದಿಗೆ ಮುಚ್ಚಿ ಹೋಗಿದ್ದಿರಬಹುದು ಎಂದು ತುದಿಪೇಟೆಯಲ್ಲಿರುವ ಸ್ಥಳೀಯರ ನಂಬಿಕೆಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ