
ಚಿಕ್ಕಮಗಳೂರು, (ಮೇ 08): ಹೈಕೋರ್ಟ್ ಆದೇಶದಂತೆ 2023ರ ಚುನಾವಣೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದ (sringeri assembly constituency) ಅಂಚೆ ಮತಗಳ (ballot paper) ಮರು ಎಣಿಕೆ ಮಾಡಲಾಗಿದ್ದು, ಈ ವೇಳೆ ಬಿಜೆಪಿಯ ಜೀವರಾಜ್ ಗೆಲುವು ಸಾಧಿಸಿದ್ದಾರೆ. 2023ರ ಸಾರ್ವತ್ರಿಕ ಚುನಾವಣೆ ಫಲಿತಾಂಶದ ವೇಳೆ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ.ರಾಜೇಗೌಡ 201 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು.ಆದ್ರೆ, ಮರು ಮತ ಎಣಿಕೆಯಲ್ಲಿ ಕಾಂಗ್ರೆಸ್ಗೆ ಸೋಲಾಗಿದ್ದು, ಬಿಜೆಪಿ ಗೆದ್ದು ಬೀಗಿದೆ. ಇದರೊಂದಿಗೆ ಮೂರು ವರ್ಷಗಳ ಬಳಿಕ ಡಿ.ಎನ್.ಜೀವರಾಜ್ ಶಾಸಕರಾಗಿ ವಿಧಾನಸಭೆ ಪ್ರವೇಶ ಮಾಡಿದ್ದಾರೆ. ಇದರ ಬೆನ್ನಲ್ಲೇ ಇದೀಗ ಕ್ಷೇತ್ರದಲ್ಲಿ ಆಣೆ-ಪ್ರಮಾಣ ರಾಜಕೀಯ ಶುರುವಾಗಿದೆ. ಹೌದು..2023ರಲ್ಲಿ ಮತ ಏಣಿಕೆ ಕೇಂದ್ರದ ಬಿಜೆಪಿ ಎಜೆಂಟ್ ಅಗಿದ್ದ ಇಬ್ಬರ ಮೇಲೆ ಫಿಕ್ಸ್ ಆರೋಪ ಕೇಳಿಬಂದಿದ್ದು, ಇದೀಗ ಅವರಿಬ್ಬರು ಅಣೆ ಪ್ರಮಾಣ ಮಾಡಿದ್ದಾರೆ.
ಜೀವರಾಜ್ ಗೆಲ್ಲುತ್ತಿದ್ದಂತೆ ಶೃಂಗೇರಿ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರು ಪಕ್ಷ ವಿರೋಧಿ ಕೆಲಸ ಮಾಡಿದವರಿಗೆ ಯಾವಾಗ ಗೇಟ್ ಪಾಸ್ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡುತ್ತಿದ್ದರು. ರಾಮಸ್ವಾಮಿ ಹಾಗೂ ಸತೀಶ್ ಕಾಂಗ್ರೆಸ್ ಜೊತೆ ಕೈ ಸೇರಿಸಿ ಬಿಜೆಪಿ ಸೋಲಿಗೆ ಕಾರಣರಾಗಿದ್ದರು ಎಂದು ಆರೋಪಿಸಿದ್ದರು. ಇದರ ಬೆನ್ನಲ್ಲೇ 2023ರಲ್ಲಿ ಬಿಜೆಪಿ ಪಕ್ಷದಿಂದ ಚುನಾವಣಾ ಮತ ಎಣಿಕೆ ಕೇಂದ್ರದ ಏಜೆಂಟ್ ಆಗಿದ್ದ ರಾಮಸ್ವಾಮಿ ಶೆಟ್ಟಿಗದ್ದೆ ಹಾಗೂ ಸತೀಶ್ ಅದ್ದಡ ಕೊಪ್ಪ ತಾಲೂಕಿನ ವೀರಭದ್ರಸ್ವಾಮಿ ಹಾಗೂ ಗಬ್ಬಾನೆ ಬೂತರಾಯನ ದೇಗುಲದಲ್ಲಿ ಪ್ರಮಾಣ ಮಾಡಿದ್ದು 2023ರ ಮತ ಎಣಿಕೆ ಸರಳ ಹಾಗೂ ಪಾರದರ್ಶಕವಾಗಿ ನಡೆದಿದೆ ಎಂದು ನಮಗೆ ಅನ್ನಿಸಿದೆ ಎಂದು ದೇವರ ಮುಂದೆ ಸ್ಪಷ್ಟಪಡಿಸಿದ್ದಾರೆ.
ಅಂದು ರಾಮಸ್ವಾಮಿ ಶೆಟ್ಟಿಗದ್ದೆ ಇವಿಎಂ ಕೌಂಟ್ ನೋಡಿಕೊಳ್ಳುತ್ತಿದ್ದರೆ, ಸತೀಶ್ ಅದ್ದಡ ಅಂಚೆ ಮತಗಳ ಎಣಿಕೆ ನೋಡಿಕೊಳ್ಳುತ್ತಿದ್ದರು. ಇಂದು ಇಬ್ಬರು ದೇವಸ್ಥಾನದಲ್ಲಿ ಮತ ಎಣಿಕೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ನಾವು ಯಾವುದೇ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ಮತ ಎಣಿಕೆ ಪಾರದರ್ಶಕವಾಗಿತ್ತು. ನಮ್ಮ ವಿರುದ್ಧ ಅಪಪ್ರಚಾರ ಮಾಡುವವರಿಗೆ ದೇವರೇ ನೋಡಿಕೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ.
ಬಹಳ ಸರಳ ಹಾಗೂ ಪಾರದರ್ಶಕ ವಾಗಿ ನಡೆದಿದೆ ಅನ್ನಿಸಿತು.ಘಟನೆಗಳ ನಂತರ ಮೇ 2ರಂದು ಮತ್ತೆ ಕೌಟಿಂಗ್ ನಡೆಯಿತು. ಆಗ ಶಾಸಕ ಸ್ಥಾನ ಬದಲಾಯಿತು.ಒಂದಷ್ಟು ಜನ ಸೇರಿ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ಅವರ ಬಳಿ ಹಣ ತೆಗೆದುಕೊಂಡು ಅಲ್ಲಿ ಲ್ಯಾಪ್ಸ್ ಅಗಿದ್ದ ಓಟ್ ಗಳನ್ನ ಕಾಂಗ್ರೆಸ್ ಅಭ್ಯರ್ಥಿ ಗೆ ಹಾಕಲು ನಾನು ಸಹ ಭಾಗಿದಾರ ಅನ್ನೋ ರೀತಿ ಎಲ್ಲ ಮಾತನಾಡುತ್ತಿದ್ದಾರೆ. ಅದ್ರೆ ನನಗೆ ವಿಶ್ವಾಸ ಇದೆ ನಂಬಿಕೆ ನಾನು ಪಕ್ಷದಲ್ಲಿ 1993ರಿಂದ ಕೆಲಸ ಮಾಡಿಕೊಂಡು ಬಂದೋನು. ಇದುವರೆಗೆ ಪಕ್ಷ ದ್ರೋಹ, ವಿಶ್ಚಾಸ ದ್ರೋಹ, ಹಣಕ್ಕಾಗಿ ಕೆಲ್ಸ ಎಲ್ಲಿಯೂ ಮಾಡಿಲ್ಲ. ಅವತ್ತು ಸಹ ಸರಿಯಾಗಿಯೇ ಮಾಡಿದ್ದೀನಿ. ಯಾವುದೇ ಮೋಸನೂ ಮಾಡಿಲ್ಲ. ನಡೆದಂತಹ ಕೌಟಿಂಗ್ ಸಹ ಎಲ್ಲವೂ ಸರಿಯಾಗಿತ್ತು.ನನಗೆ ಹೆದರಿಕೆ ಇಲ್ಲ. ನಾನು ಎಲ್ಲಿಯೂ ತಪ್ಪಲಿ ಭಾಗಿಯಾಗಿಲ್ಲ. ಎನೂ ಹೇಳಿದ್ದಾರೆ ಅದನ್ನ ಭೂತರಾಯ ಸ್ವಾಮಿ ಮುಂದೆ ಹೇಳುತ್ತಿದ್ದೇನೆ. ನಾನು ಏನೂ ತಪ್ಪು ಮಾಡಿಲ್ಲ.ನಾನು ಏನಾದರೂ ತಪ್ಪು ಮಾಡಿದ್ರೆ ನಾನು ನಾಶ ಅಗಿ ಹೊಗಬೇಕು. ಸುಖಾಸುಮ್ಮನೆ ನನ್ನ ಚಾರಿತ್ರ್ಯವದೆ ಮಾಡುತ್ತಿರುವವರು ನಾಶ ಅಗಲಿ ಎಂದು ಕೇಳಿಕೊಳ್ಳಲ್ಲ ಭೂತರಾಯ ನೀನು ನೋಡ್ಕ ಅಂತಾ ಕೇಳಿಕೊಳ್ತೇನೆ ಎಂದು ಪ್ರಮಾಣ ಮಾಡಿದ್ದಾರೆ.
Published On - 6:52 pm, Fri, 8 May 26