Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಮಗಳೂರು ದೇವರಮನೆ ಬೆಟ್ಟದಲ್ಲಿ ಒಂಟಿ ಸಲಗ ಕಾಟ, ಪ್ರವಾಸಿಗರಿಗೆ ಆತಂಕ

ಚಿಕ್ಕಮಗಳೂರು ಜಿಲ್ಲೆಯ ದೇವರಮನೆ ಬೆಟ್ಟ ಪ್ರವಾಸಕ್ಕೆ ಮತ್ತು ಚಾರಣಕ್ಕೆ ಅತ್ಯುತ್ತಮ ಸ್ಥಳವಾಗಿದೆ. ಇಲ್ಲಿ ಕಾಲ ಭೈರವೇಶ್ವರ ದೇವಸ್ಥಾನ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಆದರೆ ಇದೀಗ ಈ ಸ್ಥಳಕ್ಕೆ ಭೇಟಿ ನೀಡಲು ಪ್ರವಾಸಿಗರು ಹಿಂದೇಟು ಹಾಕುತ್ತಿದ್ದಾರೆ. ಮತ್ತು ಭೇಟಿ ನೀಡಿದವರು ಆತಂಕದಲ್ಲಿ ಸುತ್ತಾಡುವಂತಾಗಿದೆ. ಏಕೆಂದರೆ ಬೆಟ್ಟದಲ್ಲಿ ಒಂಟಿ ಸಲಗ ಬೀಡು ಬಿಟ್ಟಿದ್ದು, ಪ್ರವಾಸಿಗರಿಗೆ ದಾಳಿಯ ಆತಂಕ ಕಾಡುತ್ತಿದೆ.

ಚಿಕ್ಕಮಗಳೂರು ದೇವರಮನೆ ಬೆಟ್ಟದಲ್ಲಿ ಒಂಟಿ ಸಲಗ ಕಾಟ, ಪ್ರವಾಸಿಗರಿಗೆ ಆತಂಕ
ದೇವರಮನೆ ಬೆಟ್ಟದಲ್ಲಿ ಒಂಟಿ ಸಲಗ
Follow us
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Updated By: ವಿವೇಕ ಬಿರಾದಾರ

Updated on:Mar 19, 2024 | 8:17 AM

ಚಿಕ್ಕಮಗಳೂರು, ಮಾರ್ಚ್​​ 19: ಮೂಡಿಗೆರೆ (Mudigere) ತಾಲೂಕಿನ ಪ್ರಸಿದ್ಧ ಪ್ರವಾಸಿತಾಣ ದೇವರಮನೆ ಬೆಟ್ಟಕ್ಕೆ (Devarmane Betta) ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಇಲ್ಲಿಗೆ ಬರುವ ಪ್ರವಾಸಿಗರಿಗೆ ಒಂಟಿ ಸಲಗದ (Elephant) ಆತಂಕ ಕಾಡುತ್ತಿದೆ. ಹೌದು ದೇವರಮನೆ ಬೆಟ್ಟದಲ್ಲಿ ಒಂಟಿ ಸಲಗ ಬೀಡುಬಿಟ್ಟಿದೆ. ಈ ಒಂಟಿ ಸಲಗ ದೇವರಮನೆ ಬೆಟ್ಟಕ್ಕೆ ತೆರಳುವ ಮಾರ್ಗದ ತಿರುವಿನಲ್ಲಿ ಕಾಣಿಸಿಕೊಂಡಿದೆ. ಅಲ್ಲದೆ ಬೆಟ್ಟದ ತುದಿಯಲ್ಲಿರುವ ಕಾಲ ಭೈರವೇಶ್ವರ ದೇವಾಲಯದ ಬಳಿಯೂ ಸಂಚಾರ ಮಾಡುತ್ತಿದೆ. ಈ ದೈತ್ಯ ಒಂಟಿ ಸಲಗವನ್ನು ಕಂಡು ಪ್ರವಾಸಿಗರು ಆತಂಕಗೊಂಡಿದ್ದಾರೆ. ಇನ್ನು ಬೆಟ್ಟದ ತಪ್ಪಲಿನಲ್ಲಿರುವ ಗ್ರಾಮಸ್ಥರಲ್ಲೂ ಒಂಟಿ ಸಲಗ ದಾಳಿ ಮಾಡುವ ಆತಂಕ ಕಾಡುತ್ತಿದೆ. ಹೀಗಾಗಿ ಒಂಟಿ ಸಲಗವನ್ನು ಸೆರೆಹಿಡಿದು ಕಾಡಿಗಟ್ಟುವಂತೆ ಪ್ರವಾಸಿಗರು ಮತ್ತು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ದೇವರಮನೆ ಬೆಟ್ಟದ ವಿಶೇಷತೆ

ಚಿಕ್ಕಮಗಳೂರು ಜಿಲ್ಲೆಯು ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಜಿಲ್ಲೆಯು ಅತ್ಯಂತ ಅದ್ಭುತವಾದ ಕೆಲವು ಚಾರಣದ ನೆಲೆಯಾಗಿದೆ. ಈ ಚಿಕ್ಕಮಗಳೂರು ಜಿಲ್ಲೆಯ ದೇವರಮನೆ ಬೆಟ್ಟಕ್ಕೆ ಮಳೆಗಾಲದಲ್ಲಿ ಭೇಟಿ ನೀಡಲು ಅತ್ಯುತ್ತಮ ಸ್ಥಳವಾಗಿದೆ. ದೇವರಮನೆ ಬೆಟ್ಟವು ಸಮುದ್ರ ಮಟ್ಟದಿಂದ ಸುಮಾರು 3,500 ಅಡಿಗಳಷ್ಟು ಎತ್ತರದಲ್ಲಿದೆ.

ಈ ದೇವರಮನೆ ಬೆಟ್ಟ ಚಲನಚಿತ್ರ ಚಿತ್ರೀಕರಣಕ್ಕೆ ಸೂಕ್ತವಾದ ಸ್ಥಳವಾಗಿದೆ. ಲಾಸ್ಟ್ ಬಸ್ ಚಲನಚಿತ್ರವನ್ನು ಇಲ್ಲಿಯೇ ಚಿತ್ರಿಸಲಾಗಿದೆ. ಜನವರಿಯಲ್ಲಿ ಈ ಬೆಟ್ಟಕ್ಕೆ ಭೇಟಿ ನೀಡಿದರೆ, ನೀವು ಹಲವಾರು ಸ್ಥಳೀಯ ಜಾತ್ರೆಗಳಿಗೆ ಸಾಕ್ಷಿಯಾಗಬಹುದು.

ದೇವರಮನೆ ಬೆಟ್ಟ ಚಾರಣ ಪ್ರೀಯರಿಗೆ ಸೂಕ್ತವಾದ ಸ್ಥಳ. ಈ ಬೆಟ್ಟದ ತುದಿಗೆ ಹೋಗಲು ಚಿಕ್ಕದಾದ ಮತ್ತು ಸುಲಭವಾದ ಮಾರ್ಗವಿದೆ. ಬೆಟ್ಟದ ತುದಿಗೆ ಹೋಗಿ ಕೆಳಗೆ ಬರುವಾಗ 800 ವರ್ಷಗಳಷ್ಟು ಹಳೆಯದಾದ ಕಾಲ ಭೈರವೇಶ್ವರ ದೇವಾಲಯವನ್ನು ಕಾಣಬಹುದು. ಇಲ್ಲಿನ ಶ್ರೀಗಂಧದ ಸುವಾಸನೆಯು ನಿಮ್ಮನ್ನು ಮಂತ್ರಮುಗ್ದರನ್ನಾಗಿಸುತ್ತದೆ. ಶಿಲ್ಪಗಳು ಹೆಚ್ಚಾಗಿ ಅಸ್ಪೃಷ್ಟವಾಗಿದ್ದು, ನಿಮ್ಮನ್ನು ಮತ್ತೊಂದು ಯುಗಕ್ಕೆ ಕರೆದೊಯ್ಯುತ್ತವೆ. ದೇವಾಲಯದ ಉದ್ದಕ್ಕೂ ಒಂದು ಸರೋವರವಿದೆ, ಅಲ್ಲಿ ಕಾಡು ಆನೆಗಳು ರಾತ್ರಿಯಲ್ಲಿ ಸ್ನಾನ ಮಾಡುತ್ತವೆ.

ಇದನ್ನೂ ಓದಿ: ಬಂಡೀಪುರ: ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಕ್ಯಾಮೆರಾ, ಡ್ರೋನ್​ ಚಿತ್ರೀಕರಣ ನಿಷೇಧ

ನಂಬಿಕೆಯ ಪ್ರಕಾರ ಈ ಸರೋವರದಲ್ಲಿ ಸ್ನಾನ ಮಾಡುವುದರಿಂದ ಎಲ್ಲ ಕಾಯಿಲೆಗಳು ನಿವಾರಣೆಯಾಗುತ್ತವೆ ಎಂದು ಹೇಳಲಾಗುತ್ತದೆ. ಭೈರವೇಶ್ವರ ದೇವಸ್ಥಾನದ ಐತಿಹಾಸಿಕ ದೇವಾಲಯವು ಸ್ಥಳೀಯರಲ್ಲಿ ಬಹಳ ಜನಪ್ರಿಯವಾಗಿದೆ ಮತ್ತು ಅವರಲ್ಲಿ ಅನೇಕರಿಗೆ ‘ಮನೆ ದೇವರು’ ಆಗಿದೆ. ಪ್ರತಿ 12 ವರ್ಷಗಳಿಗೊಮ್ಮೆ ಅರಳುವ ಹಾರ್ಲು ಹೂವುಗಳನ್ನು ಇಲ್ಲಿ ನೋಡಬಹುದು.

ದೇವರಮನೆ ಬೆಟ್ಟ ತಲುಪುವುದು ಹೇಗೆ

ರಸ್ತೆಯ ಮೂಲಕ ಕೊಪ್ಪವು ದೇವರಮನೆಗೆ ಹತ್ತಿರದ ಪಟ್ಟಣವಾಗಿದೆ. ಕೊಪ್ಪ ದೇವರಮನೆಯಿಂದ 12 ಕಿ.ಮೀ. ಇದೆ. ಕೊಪ್ಪದಿಂದ ದೇವರಮನೆಗೆ ರಸ್ತೆ ಸಂಪರ್ಕವಿದೆ. ಇನ್ನು ದೇವರಮನೆ ಹತ್ತಿರ 10 ಕಿ.ಮೀ ಕಡಿಮೆ ವ್ಯಾಪ್ತಿಯಲ್ಲಿ ಯಾವುದೇ ರೈಲು ನಿಲ್ದಾಣವಿಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:16 am, Tue, 19 March 24

ತಕ್ಕ ಪಾಠ ಕಲಿಸುತ್ತೇವೆ; ಉಗ್ರರ ದಾಳಿಗೆ ಸಚಿವ ಪ್ರಲ್ಹಾದ್ ಜೋಶಿ ಖಂಡನೆ
ತಕ್ಕ ಪಾಠ ಕಲಿಸುತ್ತೇವೆ; ಉಗ್ರರ ದಾಳಿಗೆ ಸಚಿವ ಪ್ರಲ್ಹಾದ್ ಜೋಶಿ ಖಂಡನೆ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ಸೌದಿ ಅರೇಬಿಯಾಗೆ ಬಂದಿಳಿದ ಪ್ರಧಾನಿ ಮೋದಿಗೆ 21 ಗನ್ ಸಲ್ಯೂಟ್ ಸ್ವಾಗತ
ಸೌದಿ ಅರೇಬಿಯಾಗೆ ಬಂದಿಳಿದ ಪ್ರಧಾನಿ ಮೋದಿಗೆ 21 ಗನ್ ಸಲ್ಯೂಟ್ ಸ್ವಾಗತ
ಶಿಲಾದಿತ್ಯ ಬೋಸ್ ಇಡೀ ಪ್ರಕರಣವನ್ನೇ ತಿರುಚುವ ಯತ್ನ ಮಾಡಿದ್ದಾನೆ: ಪ್ರತಾಪ್
ಶಿಲಾದಿತ್ಯ ಬೋಸ್ ಇಡೀ ಪ್ರಕರಣವನ್ನೇ ತಿರುಚುವ ಯತ್ನ ಮಾಡಿದ್ದಾನೆ: ಪ್ರತಾಪ್
ಸವದತ್ತಿ: ಫುಲ್​ ಟೈಟ್ ಆಗಿ ರೋಗಿಗೆ ಚಿಕಿತ್ಸೆ ನೀಡಿದ ಸರ್ಕಾರಿ ವೈದ್ಯ
ಸವದತ್ತಿ: ಫುಲ್​ ಟೈಟ್ ಆಗಿ ರೋಗಿಗೆ ಚಿಕಿತ್ಸೆ ನೀಡಿದ ಸರ್ಕಾರಿ ವೈದ್ಯ