ಹಿಂದೂ ದೇಗುಲ ಹಿಂದೂಗಳ ಕೈಗೆ ಕೊಡಿ ಬೇಡಿಕೆ ಸ್ವಾಗತಿಸುವ ಮನಸ್ಥಿತಿ ಸಿದ್ದರಾಮಯ್ಯಗೆ ಇಲ್ಲ; ಸಚಿವ ಶ್ರೀನಿವಾಸ ಪೂಜಾರಿ

ಹಿಂದೂ ದೇಗುಲ ಹಿಂದೂಗಳ ಕೈಗೆ ಕೊಡಿ ಎಂಬ ಬೇಡಿಕೆಗೆ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿದ್ದಾರೆ. ಸಿದ್ದರಾಮಯ್ಯ ಇದನ್ನು ಸ್ವಾಗತಿಸುತ್ತಾರೆಂದು ಭಾವಿಸಿದ್ದೆವು. ಆದರೆ ಅದನ್ನು ಸ್ವಾಗತಿಸುವ ಮನಸ್ಥಿತಿ ಸಿದ್ದರಾಮಯ್ಯಗೆ ಇಲ್ಲ ಎಂದು

ಹಿಂದೂ ದೇಗುಲ ಹಿಂದೂಗಳ ಕೈಗೆ ಕೊಡಿ ಬೇಡಿಕೆ ಸ್ವಾಗತಿಸುವ ಮನಸ್ಥಿತಿ ಸಿದ್ದರಾಮಯ್ಯಗೆ ಇಲ್ಲ; ಸಚಿವ ಶ್ರೀನಿವಾಸ ಪೂಜಾರಿ
ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ
Updated By: preethi shettigar

Updated on: Jan 07, 2022 | 2:08 PM

ಚಿತ್ರದುರ್ಗ: ಮುಜರಾಯಿ ದೇಗುಲ ಆರ್​ಎಸ್​ಎಸ್​ಗೆ (RSS) ಕೊಡುವ ಹುನ್ನಾರ ಎಂದು ಆರೋಪಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಚಿತ್ರದುರ್ಗದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ (Kota Shrinivas Poojari) ತಿರುಗೇಟು ನೀಡಿದ್ದಾರೆ. ಧಾರ್ಮಿಕ ಕೇಂದ್ರಗಳು ಆಯಾ ಜನಾಂಗದವರಿಂದ ನಿರ್ವಹಣೆ ಮಾಡಲಾಗುತ್ತದೆ. ಜೈನ, ಪಾರ್ಸಿ, ಮುಸ್ಲಿಂ ಜನಾಂಗದಿಂದ ನಿರ್ವಹಿಸಲಾಗುತ್ತಿದೆ. ಹಿಂದೂ ದೇಗುಲ (Temple) ಹಿಂದೂಗಳ ಕೈಗೆ ಕೊಡಿ ಎಂಬ ಬೇಡಿಕೆಗೆ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿದ್ದಾರೆ. ಸಿದ್ದರಾಮಯ್ಯ ಇದನ್ನು ಸ್ವಾಗತಿಸುತ್ತಾರೆಂದು ಭಾವಿಸಿದ್ದೆವು. ಆದರೆ ಅದನ್ನು ಸ್ವಾಗತಿಸುವ ಮನಸ್ಥಿತಿ ಸಿದ್ದರಾಮಯ್ಯಗೆ ಇಲ್ಲ ಎಂದು ತಿಳಿಸಿದ್ದಾರೆ.

ಮೇಕೆದಾಟು ಹೋರಾಟಕ್ಕೆ ಸರ್ಕಾರದಿಂದ ಕಡಿವಾಣ ಆರೋಪ
ತುರ್ತು ಪರಿಸ್ಥಿತಿ ವೇಳೆ ಕೆಲವರು ಪ್ರಯತ್ನ ಮಾಡಿರಬಹುದು. ನಾವು ಎಲ್ಲರ ಎಲ್ಲಾ ಹಕ್ಕುಗಳನ್ನು ಗೌರವಿಸುತ್ತೇವೆ. ಕೊವಿಡ್ ಕಾರಣಕ್ಕೆ ಒಂದಷ್ಟು ನಿಯಂತ್ರಣಕ್ಕೆ ಒಳಪಡಬೇಕು. ಜೀವ ಹೋದರೂ ನಿಲ್ಲಿಸಲ್ಲ ಅಂದರೆ ತಡೆಯುವವರು ಯಾರು? ಯಾರದ್ದೋ ಹೋರಾಟ ನಿಲ್ಲಿಸಲು ಕೊವಿಡ್ ಬಂದಿದ್ದಲ್ಲ. ಸಿಎಂ ಸ್ಥಾನದಲ್ಲಿದ್ದವರು, ಸಿಎಂ ಆಗುತ್ತೀವಿ ಎನ್ನುವವರು ಇದನ್ನು ಗಮನಿಸಲಿ ಎಂದು ಮೇಕೆದಾಟು ಹೋರಾಟಕ್ಕೆ ಸರ್ಕಾರದಿಂದ ಕಡಿವಾಣ ಆರೋಪಕ್ಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿರುಗೇಟು ನೀಡಿದ್ದಾರೆ.

ಸಿದ್ಧರಾಮಯ್ಯ ಅವರ ಶೈಲಿಯಲ್ಲಿ ಅವರು ಮಾತಾಡುತ್ತಾರೆ. 144 ಸೆಕ್ಷನ್ ಹಾಕಿದ್ರೂ ಪಾದಯಾತ್ರೆ ಮಾಡುತ್ತೆವೆಂದರೆ ಅವರೇ ತೀರ್ಮಾನಿಸಲಿ. ತುಂಬಾ ಜನ ಬುದ್ಧಿವಂತರು ಬೇರೆಯವರಿಗೆ ಬುದ್ಧಿ ಇಲ್ಲ ಅಂದುಕೊಂಡಿರುತ್ತಾರೆ. ಅದು ಅವರವರ ಮಾನಸಿಕತೆಗೆ ಸಂಬಂಧಪಟ್ಟ ವಿಚಾರ ಎಂದು ಕಟೀಲ್​ಗೆ ರಾಜಕೀಯ ಬುದ್ಧಿ ಬೆಳೆದಿಲ್ಲ ಎಂದಿದ್ದ ಸಿದ್ಧರಾಮಯ್ಯಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಟಾಂಗ್​ ನೀಡಿದ್ದಾರೆ.

ಇದನ್ನೂ ಓದಿ:
ಕೊರಗ ಕುಟುಂಬದ ಮೇಲೆ ಹಲ್ಲೆ ನಡೆಸಿದ ಪೊಲೀಸರ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚನೆ

ಮೇಕೆದಾಟು: ಸರ್ವಪಕ್ಷ ನಿಯೋಗ ಕರೆದೊಯ್ದರೆ ಮೋದಿ ಹತ್ರ ನಾನು ಮಾತಾಡ್ತೇನಿ- ಸಿದ್ದರಾಮಯ್ಯ ಘೋಷಣೆ

Published On - 1:54 pm, Fri, 7 January 22