ಪ್ರಾಣ ಉಳಿಸಲೆತ್ನಿಸದೆ ಯುವತಿ ಪ್ರಾಣ ಬಿಡುವ ವಿಡಿಯೋ ಮಾಡಿ ಅಮಾನವೀಯತೆ ತೋರಿದ ಜನರು

ಭರಮಸಾಗರ ಗ್ರಾಮದ ದೊಡ್ಡಕೆರೆಯಲ್ಲಿ ಯುವತಿಯೋರ್ವಳು ಮುಳಗಿ ಸಾವು-ಬದುಕಿನ ನಡುವೆ ಹೋರಾಟ ಮಾಡುತ್ತಿದ್ದರೂ, ಜನರು ಮಾನವೀಯತೆ ಮರೆತು ವಿಡಿಯೋ ರೆಕಾರ್ಡ್ ಮಾಡಿದ್ದಾರೆ.

ಪ್ರಾಣ ಉಳಿಸಲೆತ್ನಿಸದೆ ಯುವತಿ ಪ್ರಾಣ ಬಿಡುವ ವಿಡಿಯೋ ಮಾಡಿ ಅಮಾನವೀಯತೆ ತೋರಿದ ಜನರು
ಸಾಂಧರ್ಬಿಕ ಚಿತ್ರ
Edited By: ವಿವೇಕ ಬಿರಾದಾರ

Updated on: Oct 22, 2022 | 5:06 PM

ಚಿತ್ರದುರ್ಗ: ಚಿತ್ರದುರ್ಗ (chitradurga) ತಾಲೂಕಿನ ಭರಮಸಾಗರ ಗ್ರಾಮದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಭರಮಸಾಗರ ಗ್ರಾಮದ ದೊಡ್ಡಕೆರೆಯಲ್ಲಿ ಯುವತಿಯೋರ್ವಳು ಮುಳಗಿ ಸಾವು-ಬದುಕಿನ ನಡುವೆ ಹೋರಾಟ ಮಾಡುತ್ತಿದ್ದರೂ, ಜನರು ಮಾನವೀಯತೆ ಮರೆತು ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್​ ಆಗಿದೆ. ಹೆಗ್ಗೆರೆ ಗ್ರಾಮದ ರಮ್ಯ(22) ಮೃತ ಯುವತಿ. ರಮ್ಯ ಜೀವನದಲ್ಲಿ ಜಿಗುಪ್ಸೆಯಿಂದ ಕೆರೆಯಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಭರಮಸಾಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Web contact

TV9 Kannada

Read More
Follow Us