ಸಿಎಂ ಬೊಮ್ಮಾಯಿ ಇವತ್ತಿನ ಭೇಟಿಗೂ 40 ಪರ್ಸೆಂಟ್ ಕಮಿಷನ್ ಹೋರಾಟಕ್ಕೂ ಸಂಬಂಧವಿಲ್ಲ. ಭ್ರಷ್ಟಾಚಾರ ಕಡಿಮೆ ಮಾಡಲು ನಮ್ಮ ಸಹಕಾರ ಬೇಕು ಅಂದಿದ್ದಾರೆ ಮುಖ್ಯಮಂತ್ರಿ. ನಮ್ಮ ಬೇಡಿಕೆಗಳಿಗೆ ಸಿಎಂ ಬೊಮ್ಮಾಯಿ ಚೆನ್ನಾಗಿ ಸ್ಪಂದಿಸಿದ್ದಾರೆ. ನಾವೂನೂ ಸಹಕಾರ ಕೊಡ್ತೀವಿ, ಅವರು ಕೂಡ ನಮಗೆ ಸಹಕಾರ ಕೊಡ್ತಾರೆ. ನಾವೂ ನಿರಂತರವಾಗಿ ಭ್ರಷ್ಟಾಚಾರ ವಿರುದ್ಧ ಹೋರಾಟ ಮಾಡ್ತೀವಿ. ನಮ್ಮ ಬೇಡಿಕೆ ಈಡೇರದಿದ್ದರೆ ದಾಖಲೆಗಳನ್ನ ಹೊರಗಡೆ ಬಿಡುಗಡೆ ಮಾಡ್ತೀವಿ ಎಂದು ಕೆಂಪಣ್ಣ ಗುಡುಗಿದ್ದಾರೆ.
ಹೊಸದಾಗಿ ಕಮಿಟಿ ಮಾಡುವ ಭರವಸೆಯನ್ನ ಸಿಎಂ ಹೇಳಿದ್ದಾರೆ. ಪ್ಯಾಕೇಜ್ ಪದ್ಧತಿಯನ್ನ ಆದಷ್ಟು ನಿಲ್ಲಿಸುತ್ತೇನೆ ಎಂದು ಹೇಳಿದ್ದಾರೆ. ಭ್ರಷ್ಟಾಚಾರ ಮುಕ್ತ ಮಾಡೋದರ ಬಗ್ಗೆ ಸಿಎಂ ಬೊಮ್ಮಾಯಿ ಚರ್ಚೆ ಮಾಡಿದರು. ಸೀನಿಯಾರಿಟಿ ಪ್ರಕಾರ ಪೇಮೆಂಟ್ ಕೊಡಿಸೋದಾಗಿ ಹೇಳಿದ್ದಾರೆ. ಮೇ 11 ರಂದು ನಮ್ಮ ಗುತ್ತಿಗೆದಾರರ ಸಂಘದಿಂದ ಸಭೆ ಆಯೋಜಿಸಿದ್ದೇವೆ. ಬಳಿಕ ಹೋರಾಟದ ಸ್ವರೂಪದ ಬಗ್ಗೆ ನಿರ್ಣಯ ತೆಗೆದುಕೊಳ್ಳುತ್ತೇವೆ.
Kempanna: ಈಗ ಪಡಿತಿರೋ 40% ಕಮಿಷನ್ ಕಮ್ಮಿ ಮಾಡಿ ಅಂತಾ ಮನವಿ ಮಾಡಿದ್ದೇನೆ