AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೈಬರ್​​ ಕ್ರೈಂ​ ತಡೆಗೆ ಕರ್ನಾಟಕದ ದಿಟ್ಟ ಹೆಜ್ಜೆ: 2025ರಲ್ಲಿ ಕೇಸ್​​ಗಳ ಸಂಖ್ಯೆ 13,000ಕ್ಕೆ ಇಳಿಕೆ

ರಾಜ್ಯ ಸರ್ಕಾರ ಕೈಗೊಂಡಿರುವ ದಿಟ್ಟ ಕ್ರಮಗಳಿಂದಾಗಿ ಕಳೆದ ವರ್ಷಗಳಿಗೆ ಹೋಲಿಸಿದರೆ 2025ರಲ್ಲಿ ಸೈಬರ್ ಕ್ರೈಂ ಪ್ರಕರಣಗಳು ಕರ್ನಾಟಕದಲ್ಲಿ ಗಣನೀಯವಾಗಿ ಇಳಿಕೆ ಕಂಡಿವೆ. ಡಿಜಿಪಿ ನೇಮಕ, ಹೆಚ್ಚಿನ ಸೆನ್ ಠಾಣೆಗಳು, ಮತ್ತು ಸಹಾಯವಾಣಿ ಸೇವೆ ಆರಂಭದಿಂದಾಗಿ ಈ ಸಾಧನೆ ಸಾಧ್ಯವಾಗಿದ್ದು, ಡಿಜಿಟಲ್​​ ವಂಚಕರಿಗೆ ಕರ್ನಾಟಕ ಪೊಲೀಸರು ಸಿಂಹಸ್ವಪ್ನವಾಗಿ ಮಾರ್ಪಟ್ಟಿದ್ದಾರೆ.

ಸೈಬರ್​​ ಕ್ರೈಂ​ ತಡೆಗೆ ಕರ್ನಾಟಕದ ದಿಟ್ಟ ಹೆಜ್ಜೆ: 2025ರಲ್ಲಿ ಕೇಸ್​​ಗಳ ಸಂಖ್ಯೆ 13,000ಕ್ಕೆ ಇಳಿಕೆ
ಸೈಬರ್​​ ಕ್ರೈಂ​
ಪ್ರಜ್ವಲ್​ ಕುಮಾರ್ ಎನ್​ ವೈ
| Edited By: |

Updated on:Dec 05, 2025 | 4:58 PM

Share

ಬೆಂಗಳೂರು, ಡಿಸೆಂಬರ್​​ 05: ದೇಶದಲ್ಲಿ ಸೈಬರ್​​ ಕ್ರೈಂ ಪ್ರಕರಣಗಳು ಮೇಲಿಂದ ಮೇಲೆ ವರದಿಯಾಗುತ್ತಿವೆ. ಬಹುತೇಕ ವಿದ್ಯಾವಂತರೇ ಇಂತಹ ಕೇಸ್​​ಗಳಲ್ಲಿ ಸಂತ್ರಸ್ತರಾಗುತ್ತಿದ್ದು, ಡಿಜಿಟಲ್​​ ಅರೆಸ್ಟ್​​ ಮತ್ತು ಟ್ರೇಡಿಂಗ್​​ ಹೆಸರಿನಲ್ಲಿ ವಂಚನೆಗೆ ಒಳಗಾಗುತ್ತಿದ್ದಾರೆ. ಈ ನಡುವೆ ಕರ್ನಾಟಕದಲ್ಲಿ ಡಿಜಿಟಲ್​ ವಂಚನೆ ಪ್ರಕರಣಗಳಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಈ ಬಗ್ಗೆ ಸ್ವತಃ ಗೃಹ ಸಚಿವ ಪರಮೇಶ್ವರ್​​ ಅವರೇ ಅಂಕಿ-ಅಂಶ ಬಿಚ್ಚಿಟ್ಟಿದ್ದು, 2025ರಲ್ಲಿ ದಾಖಲಾದ ಪ್ರಕರಣಗಳ ಬಗ್ಗೆ ಉಲ್ಲೇಖಿಸಿದ್ದಾರೆ.

ಹೆಚ್ಚುತ್ತಿರುವ ಸೈಬರ್​​ ಅಪರಾಧಗಳ ತಡೆಗೆ ದೇಶದಲ್ಲಿಯೇ ಮೊಟ್ಟ ಮೊದಲಬಾರಿಗೆ ಸೈಬರ್ ಕ್ರೈಮ್​ ವಿಭಾಗಕ್ಕೆ ಕರ್ನಾಟಕದಲ್ಲಿ ಡಿಜಿಪಿ ನೇಮಕ ಮಾಡಲಾಗಿದೆ. ಸೆನ್​​ ಠಾಣೆಗಳನ್ನು ಮಾಡಿದ ಬಳಿಕ ಆನ್​ಲೈನ್​​ ವಂಚನೆಗಳ ಬಗ್ಗೆ ದಾಖಲಾಗುತ್ತಿರುವ ಕೇಸ್​​ಗಳೂ ಹೆಚ್ಚಾಗಿವೆ. ಅಮೆರಿಕದಲ್ಲಿ ಇದ್ದವರನ್ನು ಡಿಜಿಟಲ್ ಅರೆಸ್ಟ್ ಮಾಡಿ ಅವರ ಅಕೌಂಟ್​ನಿಂದ ಹಣ ತೆಗೆಯುತ್ತಿದ್ದಂಹ ಡಿಜಿಟಲ್​​ ವಂಚಕರನ್ನೂ ಕರ್ನಾಟಕ ಪೊಲೀಸರು ಬಂಧಿಸಿದ್ದಾರೆ. ಇದೆಲ್ಲದರ ಪರಿಣಾಮವಾಗಿ ಪ್ರಸ್ತುತ ವರ್ಷ ರಾಜ್ಯದಲ್ಲಿ ಸೈಬರ್​ ಕ್ರೈಮ್​ ಪ್ರಕರಣಗಳು 13,000ಕ್ಕೆ ಇಳಿದಿವೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.

ಇದನ್ನೂ ಓದಿ: ನಿಮ್ಮ ಫೋನ್‌ನಲ್ಲಿ 1930 ಸಂಖ್ಯೆಯನ್ನು ಸೇವ್ ಮಾಡಿದ್ದೀರ? ಇದರಿಂದ ಏನು ಪ್ರಯೋಜನ?

ಯಾವ್ಯಾವ ವರ್ಷ ಎಷ್ಟು ಪ್ರಕರಣ?

ವರ್ಷ ಪ್ರಕರಣ
2022 12,550
2023 21,903
2024 21,995
2025 13,000

ಕಳೆದ ವರ್ಷಕ್ಕೆ ಹೋಲಿಸಿದರೆ 2025ರಲ್ಲಿ ಸುಮಾರು 9 ಸಾವಿರದಷ್ಟು ಸೈಬರ್​​ ಅಪರಾಧ ಪ್ರಕರಣಗಳು ಇಳಿಕೆಯಾಗಿವೆ. ಆನ್​​ಲೈನ್​​ ವಂಚನೆಗೆ ಒಳಗಾದ ಸಂತ್ರಸ್ತರು 1930 ಸಂಖ್ಯೆಗೆ ಸೈಬರ್ ಕ್ರೈಮ್ ದೂರುಗಳನ್ನು ನೀಡಬಹುದು. 66 ಸಿಬ್ಬಂದಿ ಈ ಕರೆಗಳನ್ನು ಸ್ವೀಕರಿಸುವ ಕೆಲಸ ಮಾಡುತ್ತಿದ್ದು,ಸೈಬರ್​​ ಕ್ರೈಮ್​​ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಸಕಲ ಪ್ರಯತ್ನ ಮಾಡುತ್ತಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್​​ ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:17 pm, Fri, 5 December 25