AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Arecanut Husk: ಶಬ್ದ ನಿರೋಧಕವಾಗಿ ಕಾರ್ಯನಿರ್ವಹಿಸುವಲ್ಲಿ ಅಡಿಕೆ ಸಿಪ್ಪೆ ಪರಿಣಾಮಕಾರಿ; NITK ಸಂಶೋಧನೆ

ಸಾಮಾನ್ಯವಾಗಿ ಅಡಿಕೆ ಬೆಳೆಗಾರರು ಕೃಷಿ ತ್ಯಾಜ್ಯವಾದ ಅಡಿಕೆ ಸಿಪ್ಪೆಯನ್ನು ಗೊಬ್ಬರಕ್ಕೆ ಬಳಸುತ್ತಾರೆ. ಇನ್ನೂ ಕೆಲವರು ಬೆಂಕಿ ಹಾಕಿ ನೀರು ಕಾಯಿಸುತ್ತಾರೆ. ಇದರ ಹೊರತಾಗಿ, ಆಡಿಟೋರಿಯಂ ಅಥವಾ ಮೀಟಿಂಗ್ ಹಾಲ್​ನಲ್ಲಿ ಬರುವ ಅನಗತ್ಯ ಶಬ್ದಗಳನ್ನು ತಡೆಯುವಲ್ಲಿಯೂ ಅಡಿಕೆ ಸಿಪ್ಪೆ ಪರಿಣಾಮಕಾರಿಯಾಗಿದೆ ಎಂಬುದನ್ನು ಸುರತ್ಕಲ್​ನ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕರ್ನಾಟಕ (NITK) ನಡೆಸಿದ ಸಂಶೋಧನೆಯಿಂದ ತಿಳಿದುಬಂದಿದೆ.

Arecanut Husk: ಶಬ್ದ ನಿರೋಧಕವಾಗಿ ಕಾರ್ಯನಿರ್ವಹಿಸುವಲ್ಲಿ ಅಡಿಕೆ ಸಿಪ್ಪೆ ಪರಿಣಾಮಕಾರಿ; NITK ಸಂಶೋಧನೆ
ಎನ್​ಐಟಿಕೆ, NITK
TV9 Web
| Updated By: Rakesh Nayak Manchi|

Updated on: Oct 19, 2023 | 1:38 PM

Share

ಮಂಗಳೂರು, ಅ.19: ಸಾಮಾನ್ಯವಾಗಿ ಅಡಿಕೆ ಬೆಳೆಗಾರರು ಕೃಷಿ ತ್ಯಾಜ್ಯವಾದ ಅಡಿಕೆ ಸಿಪ್ಪೆಯನ್ನು ಗೊಬ್ಬರಕ್ಕೆ ಬಳಸುತ್ತಾರೆ. ಇನ್ನೂ ಕೆಲವರು ಬೆಂಕಿ ಹಾಕಿ ನೀರು ಕಾಯಿಸುತ್ತಾರೆ. ಇದರ ಹೊರತಾಗಿ, ಆಡಿಟೋರಿಯಂ ಅಥವಾ ಮೀಟಿಂಗ್ ಹಾಲ್​ನಲ್ಲಿ ಬರುವ ಅನಗತ್ಯ ಶಬ್ದಗಳನ್ನು ತಡೆಯುವಲ್ಲಿಯೂ ಅಡಿಕೆ ಸಿಪ್ಪೆ (Arecanut Husk) ಪರಿಣಾಮಕಾರಿಯಾಗಿದೆ ಎಂಬುದನ್ನು ಸುರತ್ಕಲ್​ನ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕರ್ನಾಟಕ (NITK) ನಡೆಸಿದ ಸಂಶೋಧನೆಯಿಂದ ತಿಳಿದುಬಂದಿದೆ.

ಎನ್​ಐಟಿಕೆಯ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರೊ.ಪಿ.ಜಯರಾಜ್ ನೇತೃತ್ವದ ಸಂಶೋಧಕರು ಈ ಸಂಶೋಧನೆಯನ್ನು ನಡೆಸಿದ್ದು, ಶಬ್ದ ನಿರೋಧಕ ಬೋರ್ಡ್​​ಗಳನ್ನು ರಚಿಸಲು ಇದನ್ನು ಬಳಸಬಹುದು ಎಂದು ತಿಳಿಸಿದೆ.

ಆಡಿಟೋರಿಯಂ ಅಥವಾ ಮೀಟಿಂಗ್ ಹಾಲ್​ನಲ್ಲಿ ಪ್ರೇಕ್ಷಕರ ಗಮನವನ್ನು ಬೇರೆಡೆಗೆ ಸೆಳೆಯುವ ಅನಗತ್ಯ ಶಬ್ದವನ್ನು ನಿಯಂತ್ರಿಸಲು ಶಬ್ದ ಹೀರಿಕೊಳ್ಳುವ ವಸ್ತುಗಳನ್ನು ಬಳಸಲಾಗುತ್ತದೆ ಎಂದು ಜಯರಾಜ್ ಹೇಳಿದರು. ಇಂತಹ ಧ್ವನಿ ಹೀರುವಿಕೆಗೆ ಬಳಸಲಾಗುವ ಗಾಜು ಅಥವಾ ಉಣ್ಣೆ ಬೋರ್ಡ್​, ಪ್ಲಾಸ್ಟಿಕ್ ಮತ್ತು ಸಂಶ್ಲೇಷಿತ ನೊರೆಗಳಂತಹ ವಸ್ತುಗಳು ಪ್ರಕೃತಿಗೆ ವಿಷಕಾರಿಯಾಗಿವೆ ಮತ್ತು ಮಾನವ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಇದಲ್ಲದೆ, ಈ ವಸ್ತುಗಳನ್ನು ಅವುಗಳ ಅಂತಿಮ ಬಳಕೆಯ ನಂತರ ವಿಲೇವಾರಿ ಮಾಡುವುದು ಕಠಿಣ ಕೆಲಸವಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ಮಂಗಳೂರು: ಸ್ಯಾಂಡಲ್​ವುಡ್​ ನಟಿ ರಾಧಿಕಾ ಎಸ್ಟೇಟ್​ನಲ್ಲಿ ಕೆಲಸಕ್ಕಿದ್ದ ಮಹಿಳೆ ನಿಗೂಢ ನಾಪತ್ತೆ

“ಶಬ್ದ ಫಲಕಗಳನ್ನು ಹೆಚ್ಚು ಪರಿಸರ ಸ್ನೇಹಿ ಮತ್ತು ಜೈವಿಕ ಸಂಯೋಜನೆಯನ್ನಾಗಿ ಮಾಡಲು, ಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಸಂಶೋಧಕರನ್ನು ಒಳಗೊಂಡ ತಂಡವು ಅಡಿಕೆ ಹೊಟ್ಟನ್ನು ಅನ್ವೇಷಿಸಲು ಪ್ರಾರಂಭಿಸಿತು. ಅದರಂತೆ ಫಲಿತಾಂಶವು ಸಕಾರಾತ್ಮಕವಾಗಿ ಬಂದಿದೆ” ಎಂದು ಜಯರಾಜ್ ಹೇಳಿದರು, ಅವರು ತಮ್ಮ ಸಂಶೋಧನಾ ವಿದ್ಯಾರ್ಥಿಗಳೊಂದಿಗೆ ನೈಸರ್ಗಿಕ ಫೈಬರ್, ಅಡಿಕೆ ಹೊಟ್ಟು ಮತ್ತು ಜೈವಿಕ ಸಂಯೋಜನೆಗಳಿಂದ ಮಾಡಿದ ಧ್ವನಿ-ನಿರೋಧಕ ಫಲಕಗಳ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದರು.

ನೈಸರ್ಗಿಕ ನಾರಿಗೆ ಸಂಬಂಧಿಸಿದ ಪೊರೊಸಿಟಿ ಮತ್ತು ಫೈಬರ್ ಮತ್ತು ಶಬ್ದ ತರಂಗಗಳ ಪರಸ್ಪರ ಕ್ರಿಯೆಯು ಅವುಗಳನ್ನು ಶಬ್ದ ಹೀರಿಕೊಳ್ಳುವ ಅನ್ವಯಿಕೆಗಳಿಗೆ ಸೂಕ್ತವಾಗಿಸುತ್ತದೆ. ಗೋಳಾಕಾರದ ರಂಧ್ರಗಳು ಮತ್ತು ವೃತ್ತಾಕಾರವಲ್ಲದ ರಂಧ್ರಗಳ ಸರಣಿಯಂತಹ ಸಂಕೀರ್ಣ ರಂಧ್ರ ರೇಖಾಗಣಿತವನ್ನು ಹೊಂದಿರುವ ಫಲಕಗಳನ್ನು ಬಳಸುವ ಮೂಲಕ ಧ್ವನಿ ಹೀರಿಕೊಳ್ಳುವಿಕೆಯನ್ನು ಸುಧಾರಿಸಬಹುದು ಎಂದು ಸಂಶೋಧನಾ ತಂಡವು ಕಂಡುಹಿಡಿದಿದೆ ಎಂದು ಜಯರಾಜ್ ಹೇಳಿದರು. ವಿವಿಧ ರೂಪಗಳಲ್ಲಿ ಶಬ್ದ ವಸ್ತುಗಳ 3 ಡಿ-ಮುದ್ರಿತ ಮಾದರಿಗಳನ್ನು ಸಹ ತಯಾರಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ