ಶಾಮನೂರು ಕುಟುಂಬದಿಂದ ಅಹಿಂದ ವರ್ಗಕ್ಕೆ ಅನ್ಯಾಯ: ಹಿರಿಯ ಮುಖಂಡ ಕಾಂಗ್ರೆಸ್​​ಗೆ ಗುಡ್​ಬೈ

ದಾವಣಗೆರೆ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿಗೆ ಮತ್ತೊಂದು ಕಂಟಕ ಎದುರಾಗಿದೆ. ಹೌದು, ಶಾಮನೂರು ಶಿವಶಂಕರಪ್ಪ(Shamanuru Shivashankarappa) ಕುಟುಂಬದಿಂದ ಅಹಿಂದ ವರ್ಗಕ್ಕೆ ಅನ್ಯಾಯವಾದ ಆರೋಪ ಕೇಳಿಬಂದಿದೆ. ಈ ಹಿನ್ನಲೆ ಅಹಿಂದ ವರ್ಗದ ಮುಖಂಡರು ಕಾಂಗ್ರೆಸ್​ಗೆ ಗುಡ್​ಬೈ ಹೇಳಿದ್ದಾರೆ.

ಶಾಮನೂರು ಕುಟುಂಬದಿಂದ ಅಹಿಂದ ವರ್ಗಕ್ಕೆ ಅನ್ಯಾಯ: ಹಿರಿಯ ಮುಖಂಡ ಕಾಂಗ್ರೆಸ್​​ಗೆ ಗುಡ್​ಬೈ
ಕಾಂಗ್ರೆಸ್​ ಹಿರಿಯ ಮುಖಂಡ ಡಾ.ವೈ.ರಾಮಪ್ಪ, ಶಾಮನೂರು ಶಿವಶಂಕರಪ್ಪ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on:Apr 09, 2024 | 5:56 PM

ದಾವಣಗೆರೆ, ಏ.09: ಲೋಕಸಭಾ ಚುನಾವಣಾ ಕಣ ರಂಗೇರಿದ್ದು, ಈ ಮಧ್ಯೆ ದಾವಣಗೆರೆ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿಗೆ ಮತ್ತೊಂದು ಕಂಟಕ ಎದುರಾಗಿದೆ. ಹೌದು, ಶಾಮನೂರು ಶಿವಶಂಕರಪ್ಪ(Shamanuru Shivashankarappa) ಕುಟುಂಬದಿಂದ ಅಹಿಂದ ವರ್ಗಕ್ಕೆ ಅನ್ಯಾಯವಾದ ಆರೋಪ ಕೇಳಿಬಂದಿದೆ. ಈ ಹಿನ್ನಲೆ ಅಹಿಂದ ವರ್ಗದ ಮುಖಂಡರು ಕಾಂಗ್ರೆಸ್​ಗೆ ಗುಡ್​ಬೈ ಹೇಳಿದ್ದಾರೆ. ಈ ವೇಳೆ ಮಾತನಾಡಿದ ಕಾಂಗ್ರೆಸ್​ ಪಕ್ಷಕ್ಕೆ ಹಿರಿಯ ಮುಖಂಡ ಡಾ.ವೈ.ರಾಮಪ್ಪ, ‘ದಾವಣಗೆರೆಯಲ್ಲಿ ಕಾಂಗ್ರೆಸ್ ಅಂದ್ರೆ ಪ್ರೈವೇಟ್ ಲಿಮಿಟೆಡ್ ರೀತಿ ಇದೆ. ಒಂದು ಕುಟುಂಬಕ್ಕೆ ಮಾತ್ರ ಜಿಲ್ಲೆಯಲ್ಲಿ ಕಾಂಗ್ರೆಸ್ ಸೀಮಿತವಾಗಿದೆ ಎಂದು ಕಿಡಿಕಾರಿದರು.

‘ಕನಿಷ್ಠ ಜ್ಞಾನವಿಲ್ಲದ ವ್ಯಕ್ತಿಗೆ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನ ನೀಡಿದ್ದಾರೆ. ಈ ಚುನಾವಣೆಯಲ್ಲಿ ಬೋವಿ ಸಮುದಾಯವನ್ನು ಕಡೆಗಣಿಸಿದ್ದಾರೆ. ಚುನಾವಣೆಗೆ ದುಡಿಯಲು ಮಾತ್ರ ಅಹಿಂದ ವರ್ಗ ಬೇಕು. ಆದ್ದರಿಂದ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ‌ ರಾಜೀನಾಮೆ ನೀಡುತ್ತೇನೆ. ನಾಳೆ(ಏ.10) ದೆಹಲಿ ಪ್ರವಾಸ ಬಳಿಕ ಯಾವ ಪಕ್ಷಕ್ಕೆ ಬೆಂಬಲ ಎಂದು ತಿಳಿಸುತ್ತೇನೆ ಎಂದರು.

ಇದನ್ನೂ ಓದಿ:ಹವಾನಿಯಂತ್ರಿತ ಕ್ಕಿನಿಕ್ ನಿಂದ ಹೊರಬಂದು ದಾವಣಗೆರೆಯ ಸುಡುಬಿಸಿಲಲ್ಲಿ ಮತಯಾಚಿಸುತ್ತಿರುವ ಡಾ ಪ್ರಭಾ ಮಲ್ಲಿಕಾರ್ಜುನ

ಇನ್ನು ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ  ಅವರಿಗೆ ಟಿಕೆಟ್​ ಸಿಕ್ಕ ಬೆನ್ನಲ್ಲೇ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಅದರಂತೆ ಏಪ್ರಿಲ್​ 05 ರಂದು ಆಧಾರ್​​ ಕಾರ್ಡ್​ ತೋರಿಸಿ ಬಸ್​​​​ನಲ್ಲಿ ಪ್ರಯಾಣ ಮಾಡಿದ್ದರು. ಆ ಮೂಲಕ ದಾವಣಗೆರೆಯಲ್ಲಿ ಸಿಟಿ ಬಸ್​​ನಲ್ಲಿ ಪ್ರಯಾಣಿಸಿ ‘ಶಕ್ತಿ ಯೋಜನೆ’ ಮಾಹಿತಿ ಸಂಗ್ರಹಿಸಿದ್ದರು. ಉಚಿತ ಬಸ್​ ಪ್ರಯಾಣದ ಕುರಿತು ಬಸ್​ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳಾ ಪ್ರಯಾಣಿಕರಿಂದ ಮಾಹಿತಿ ಸಂಗ್ರಹ ಮಾಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:49 pm, Tue, 9 April 24

ತಾಜಾ ಸುದ್ದಿ