AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೊಂದಲದ ಪ್ರಶ್ನೋತ್ತರಕ್ಕೆ ಗ್ರೇಸ್ ಅಂಕ ನೀಡಿ, ವಿಡಿಯೋ ಮೂಲಕ ಶಿಕ್ಷಣ ಸಚಿವ ಸುರೇಶ್​ ಕುಮಾರ್​ಗೆ ವಿದ್ಯಾರ್ಥಿನಿ ಒತ್ತಾಯ

ಜುಲೈ 22ರಂದು ನಡೆದ ಭಾಷಾ ವಿಷಯಗಳ ಪರೀಕ್ಷೆ ವೇಳೆ ಕನ್ನಡ ಪರೀಕ್ಷೆಯಲ್ಲಿ 19ನೇ ಪ್ರಶ್ನೆಗೆ ತಪ್ಪಾದ ನಾಲ್ಕು ಆಯ್ಕೆ ನೀಡಲಾಗಿತ್ತು. ಕಸರತ್ತು ಮಾಡಿ ಹತ್ತಿಪ್ಪತ್ತು ಕುದುರೆ ಕೊಂದವರು ಯಾರು ಎಂಬ ಪ್ರಶ್ನೆಗೆ ರಾಮ, ಭೀಮ, ಹನುಮ ಹಾಗೂ ಚಡಗ ಎಂದು ನಾಲ್ಕು ತಪ್ಪು ಆಯ್ಕೆ ನೀಡಲಾಗಿದೆ.

ಗೊಂದಲದ ಪ್ರಶ್ನೋತ್ತರಕ್ಕೆ ಗ್ರೇಸ್ ಅಂಕ ನೀಡಿ, ವಿಡಿಯೋ ಮೂಲಕ ಶಿಕ್ಷಣ ಸಚಿವ ಸುರೇಶ್​ ಕುಮಾರ್​ಗೆ ವಿದ್ಯಾರ್ಥಿನಿ ಒತ್ತಾಯ
ಎಸ್ಎಸ್ಎಲ್ಸಿ ವಿದ್ಯಾರ್ಥಿನಿ ಬನಶ್ರಿ ಭಟ್
TV9 Web
| Updated By: ಆಯೇಷಾ ಬಾನು|

Updated on:Jul 26, 2021 | 3:17 PM

Share

ದಾವಣಗೆರೆ: ಕೊರೊನಾ ಕಾರಣದಿಂದ ಮುಂದೂಡಲ್ಪಟ್ಟಿದ್ದ ಎಸ್ಎಸ್ಎಲ್ಸಿ ಪರೀಕ್ಷೆಯನ್ನು (SSLC Exam) ಜುಲೈ 19 ಹಾಗೂ ಜುಲೈ 22ರಂದು ಕರ್ನಾಟಕದಲ್ಲಿ ಏರ್ಪಡಿಸಲಾಗಿತ್ತು. ಸದ್ಯ ಪರೀಕ್ಷೆಗಳು ಯಶಸ್ವಿಯಾಗಿ ಮುಗಿದಿವೆ. ಆದರೆ ಈಗ ಗೊಂದಲದ ಪ್ರಶ್ನೋತ್ತರಕ್ಕೆ ಗ್ರೇಸ್ ಅಂಕ ನೀಡಿ ಎಂದು ವಿದ್ಯಾರ್ಥಿನಿಯೊಬ್ಬರು ವಿಡಿಯೋ ಮಾಡಿ ಶಿಕ್ಷಣ ಸಚಿವ ಸುರೇಶ ಕುಮಾರ್ರಿಗೆ ಆಗ್ರಹಿಸಿದ್ದಾರೆ.

ಜುಲೈ 22ರಂದು ನಡೆದ ಭಾಷಾ ವಿಷಯಗಳ ಪರೀಕ್ಷೆ ವೇಳೆ ಪ್ರಥಮ ಭಾಷೆ ಕನ್ನಡ ಪರೀಕ್ಷೆಯಲ್ಲಿ(First Language Kannada) 19ನೇ ಪ್ರಶ್ನೆಗೆ ತಪ್ಪಾದ ನಾಲ್ಕು ಆಯ್ಕೆ ನೀಡಲಾಗಿತ್ತು. ಕಸರತ್ತು ಮಾಡಿ ಹತ್ತಿಪ್ಪತ್ತು ಕುದುರೆ ಕೊಂದವರು ಯಾರು ಎಂಬ ಪ್ರಶ್ನೆಗೆ ರಾಮ, ಭೀಮ, ಹನುಮ ಹಾಗೂ ಚಡಗ ಎಂದು ನಾಲ್ಕು ತಪ್ಪು ಆಯ್ಕೆ ನೀಡಲಾಗಿದೆ. ನಿಜವಾದ ಉತ್ತರ ಬಾಲ. ಹೀಗಾಗಿ ಇದಕ್ಕೆ ಗ್ರೇಸ್ ಅಂಕ ನೀಡಿ ಎಂದು ವಿಡಿಯೋ ಮಾಡಿ ಶಿಕ್ಷಣ ಸಚಿವ ಸುರೇ ಶ್ ಕುಮಾರ್ರಿಗರ ದಾವಣಗೆರೆ ಮೂಲದ ಎಸ್ಎಸ್ಎಲ್ಸಿ ವಿದ್ಯಾರ್ಥಿನಿ ಬನಶ್ರಿ ಭಟ್ ಆಗ್ರಹಿಸಿದ್ದಾರೆ. ಆದ್ರೆ ತಜ್ಞರ ಪ್ರಕಾರ ಭೀಮ ಸರಿಯಾದ ಉತ್ತರ ಎಂದು ಹೇಳಲಾಗುತ್ತಿದೆ.

SSLC

ಕನ್ನಡ ಪರೀಕ್ಷೆಯ 19ನೇ ಪ್ರಶ್ನೆ

ಬಾಲನು ಮಾಡಿದ ಕಸರತ್ತ.. ಕುದುರೆಯ ಕಡಿದ ಹತ್ತಿಪ್ಪತ್ತ.. ಎಂದು ಪಠ್ಯ ಪುಸ್ತಕದಲ್ಲಿ ಇದೆ. ಚಂದನದಲ್ಲಿ ಪ್ರಸಾರ ಮಾಡಿದ ಪಾಠದಲ್ಲಿಯೂ ಅದನ್ನೇ ಹೇಳಲಾಗಿದೆ. ಆದರೆ ಪರೀಕ್ಷೆಯಲ್ಲಿ ಮಾತ್ರ ಬಾಲನ ಹೆಸರು ನೀಡದೇ ಇರುವುದು ಗೊಂದಲಕ್ಕೆ ಕಾರಣವಾಗಿದೆ ಎಂದು ಬನಶ್ರೀ ಅಭಿಪ್ರಾಯ ಪಟ್ಟಿದ್ದಾರೆ.

ಬನಶ್ರಿ ಭಟ್ ದಾವಣಗೆರೆ ಸೇಂಟ್ ಪಾಲ್ಸ್ ಕಾನ್ವೇಂಟ್ ವಿದ್ಯಾರ್ಥಿನಿ. ಇತ್ತೀಚಿಗೆ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆಯ ಕನ್ನಡ ಭಾಷಾ ವಿಷಯ ದಲ್ಲಿ ವೇಳೆ 19ನೇ ಪ್ರಶ್ನೆಗೆ ನೀಡಿದ ನಾಲ್ಕು ಉತ್ತರಗಳು ತಪ್ಪಾಗಿವೆ. ಪ್ರಶ್ನೆ ಇರುವುದು ಕಸರತ್ತು ಮಾಡಿ ಹತ್ತಿಪ್ಪತ್ತು ಕುದುರೆ ಕೊಂದವರು ಯಾರು ಅಂತಾ. ಇದಕ್ಕೆ ರಾಮ,ಭೀಮ, ಹನುಮ ಹಾಗೂ ಚಡಗ ಎಂಬ ನಾಲ್ಕು ಉತ್ತರ ಕೊಡಲಾಗಿದೆ. ಆದ್ರೆ ಈ ನಾಲ್ಕು ಉತ್ತರಗಳು ತಪ್ಪು‌. ಹೀಗೆ ನಾಲ್ಕು ತಪ್ಪು ಆಯ್ಕೆ ನೀಡಲಾಗಿದೆ. ನಿಜವಾದ ಉತ್ತರ ಬಾಲ ಅಂತಾ. ಈ ಪ್ರಶ್ನೆಗೆ ಗ್ರೇಸ್ ಅಂಕ ನೀಡುವಂತೆ ಆಗ್ರಹಿಸಿ ಸಚಿವರಿಗೆ ಹಾಗೂ ಸಚಿವ ಪತ್ನಿಗೆ ಕಳುಹಿಸಿದ್ದಾಳೆ ಬನಶ್ರೀ ಭಟ್. ಇದನ್ನ ಪರಿಶೀಲನೆ ಮಾಡಿ ಸೂಕ್ತ ಒಂದು ಅಂಕ ಬೀಡಬೇಕು ಎಂಬುದು ಬನಶ್ರೀ ಭಟ್ ಆಗ್ರಹ.

ಜುಲೈ 19 ಹಾಗೂ ಜುಲೈ 22ರಂದು ಪರೀಕ್ಷೆಗಳು ನಡೆದಿದ್ದು ಬೆಳಗ್ಗೆ 10.30ರಿಂದ ಮಧ್ಯಾಹ್ನ 1.30ರ ತನಕ ಪರೀಕ್ಷೆ ನಡೆದಿತ್ತು. ಕೋರ್ ವಿಷಯಗಳಾದ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಷಯಗಳಿಗೆ ಜುಲೈ 19 ಪರೀಕ್ಷೆ ಆಯೋಜಿಸಲಾಗಿತ್ತು. ಹಾಗೂ ಜುಲೈ 22ರಂದು ಭಾಷಾ ವಿಷಯಗಳಾದ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಸಂಸ್ಕೃತ ಸೇರಿದಂತೆ ಪರೀಕ್ಷೆ ನಡೆದಿತ್ತು. ಮೂರು ವಿಷಯಗಳಿಂದ ಒಟ್ಟು 120 ಅಂಕಗಳಿಗೆ ಪರೀಕ್ಷೆ ಇರಲಿದ್ದು, ಆಬ್ಜೆಕ್ಟಿವ್ ಮಾದರಿಯಲ್ಲಿ ಪರೀಕ್ಷೆ ನಡೆಯಲಿದೆ. ಈ ಪ್ರಶ್ನೆಗಳಿಗೆ ಓಎಮ್ಆರ್ ಹಾಳೆಯಲ್ಲಿ ವಿದ್ಯಾರ್ಥಿಗಳು ಉತ್ತರ (Answer) ಬರೆಯಬೇಕಿದ್ದು, ಒಂದೊಂದು ವಿಷಯಕ್ಕೂ ಒಂದೊಂದು ಬಣ್ಣದ OMR ಶೀಟ್ ಇತ್ತು.

ಇದನ್ನೂ ಓದಿ: ದುಡ್ಡು ಕೊಟ್ಟರೆ ಎಸ್​ಎಸ್​ಎಲ್​ಸಿ ಪಾಸ್ ಮಾಡಲಾಗುತ್ತೆ ಎಂಬ ಸುಳ್ಳು ಸುದ್ದಿಯನ್ನು ನಂಬಬೇಡಿ; ಶಿಕ್ಷಣ ಸಚಿವ ಸುರೇಶ್ ಕುಮಾರ್ ಮನವಿ

Published On - 10:15 am, Mon, 26 July 21

ಬ್ರೆಜಿಲ್​ನಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತ ಕೇಳಿ ತಲೆದೂಗಿದ ಪ್ರಧಾನಿ ಮೋದಿ
ಬ್ರೆಜಿಲ್​ನಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತ ಕೇಳಿ ತಲೆದೂಗಿದ ಪ್ರಧಾನಿ ಮೋದಿ
ತಂದೆ ಬಗ್ಗೆ ಮಕ್ಕಳು ಕೇಳಿದರೆ ಏನು ಹೇಳ್ತೀರಿ? ನಿರ್ಧಾರ ತಿಳಿಸಿದ ಭಾವನಾ
ತಂದೆ ಬಗ್ಗೆ ಮಕ್ಕಳು ಕೇಳಿದರೆ ಏನು ಹೇಳ್ತೀರಿ? ನಿರ್ಧಾರ ತಿಳಿಸಿದ ಭಾವನಾ
ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಅಧಿಕಾರವಲ್ಲ, ಅದೊಂದು ಜವಾಬ್ದಾರಿ: ಸಿಟಿ ರವಿ
ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಅಧಿಕಾರವಲ್ಲ, ಅದೊಂದು ಜವಾಬ್ದಾರಿ: ಸಿಟಿ ರವಿ
ಯಡಿಯೂರಪ್ಪ ವಿರುದ್ಧ ನಾನು ವಾಗ್ದಾಳಿ ನಡೆಸಲೇ ಇಲ್ಲ: ಲಿಂಬಾವಳಿ
ಯಡಿಯೂರಪ್ಪ ವಿರುದ್ಧ ನಾನು ವಾಗ್ದಾಳಿ ನಡೆಸಲೇ ಇಲ್ಲ: ಲಿಂಬಾವಳಿ
ಕೇಸ್ ವಾಪಸ್ ತೆಗೆದುಕೊಂಡರೆ ಮನು ವಿರುದ್ಧ ಸಾಕ್ಷಿ ಬಿಡ್ತೀನಿ: ಸಂತ್ರಸ್ತೆ
ಕೇಸ್ ವಾಪಸ್ ತೆಗೆದುಕೊಂಡರೆ ಮನು ವಿರುದ್ಧ ಸಾಕ್ಷಿ ಬಿಡ್ತೀನಿ: ಸಂತ್ರಸ್ತೆ
ಸಿನಿಮಾ ಆರಿಸಿಕೊಂಡಿದ್ದೇಕೆ? ಜನಾರ್ಧನ ರೆಡ್ಡಿ ಪುತ್ರನ ಉತ್ತರ
ಸಿನಿಮಾ ಆರಿಸಿಕೊಂಡಿದ್ದೇಕೆ? ಜನಾರ್ಧನ ರೆಡ್ಡಿ ಪುತ್ರನ ಉತ್ತರ
ಪಕ್ಷದ ಕಾರ್ಯದರ್ಶಿ ಮತ್ತು ಅಧಿಕಾರಿಗಳ ಸಭೆ ರಾಮನಗರದಲ್ಲಿ ನಡೆಯಲಿದೆ: ಶಾಸಕ
ಪಕ್ಷದ ಕಾರ್ಯದರ್ಶಿ ಮತ್ತು ಅಧಿಕಾರಿಗಳ ಸಭೆ ರಾಮನಗರದಲ್ಲಿ ನಡೆಯಲಿದೆ: ಶಾಸಕ
ಮನೆಯಲ್ಲಿ ಯಾರೂ ಇಲ್ಲದಿದ್ದಾಗ 3ನೇ ಮಹಡಿಯ ಕಿಟಕಿಯಿಂದ ಹೊರಗೆ ನೇತಾಡಿದ ಮಗು
ಮನೆಯಲ್ಲಿ ಯಾರೂ ಇಲ್ಲದಿದ್ದಾಗ 3ನೇ ಮಹಡಿಯ ಕಿಟಕಿಯಿಂದ ಹೊರಗೆ ನೇತಾಡಿದ ಮಗು
ಸುರ್ಜೇವಾಲಾ ಶಾಸಕರನ್ನು ಭೇಟಿಯಾಗುತ್ತಿರುವುದು ಒಂದು ಪ್ರಕ್ರಿಯೆ: ಲಕ್ಷ್ಮಿ
ಸುರ್ಜೇವಾಲಾ ಶಾಸಕರನ್ನು ಭೇಟಿಯಾಗುತ್ತಿರುವುದು ಒಂದು ಪ್ರಕ್ರಿಯೆ: ಲಕ್ಷ್ಮಿ
ಸರ್ಕಾರೀ ಕೆಲಸದ ನಿಮಿತ್ತ ಸಿಎಂ, ಡಿಸಿಎಂ ದೆಹಲಿ ಹೋಗಿರಬಹುದು: ದೇಶಪಾಂಡೆ
ಸರ್ಕಾರೀ ಕೆಲಸದ ನಿಮಿತ್ತ ಸಿಎಂ, ಡಿಸಿಎಂ ದೆಹಲಿ ಹೋಗಿರಬಹುದು: ದೇಶಪಾಂಡೆ