AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ಯಾನುಭೋಗನಹಳ್ಳಿ: ಎತ್ತಿಗಾಡಿಯಲ್ಲಿ ತೆನೆಹೊತ್ತ ಮಹಿಳೆಯೊಂದಿಗೆ ಕುಮಾರಸ್ವಾಮಿ ಪ್ರಚಾರ

ಶ್ಯಾನುಭೋಗನಹಳ್ಳಿ: ಎತ್ತಿಗಾಡಿಯಲ್ಲಿ ತೆನೆಹೊತ್ತ ಮಹಿಳೆಯೊಂದಿಗೆ ಕುಮಾರಸ್ವಾಮಿ ಪ್ರಚಾರ

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 07, 2024 | 7:42 PM

ಶ್ಯಾನುಭೋಗನಹಳ್ಳಿಯಲ್ಲಿ ಪುಟ್ಟಮಕ್ಕಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿತ್ತು. ಕುಮಾರಸ್ವಾಮಿಯವರನ್ನು ಹೊತ್ತ ಎತ್ತಿನಗಾಡಿಗೆ ಬೆಲ್ಲದಾರತಿಯನ್ನು ಬೆಳಗಿದ್ದು ಒಂದು ಪುಟ್ಟಹೆಣ್ಣು ಮಗು. ಎರಡೂ ಪಕ್ಷಗಳು ಅಂದರೆ ಜೆಡಿಎಸ್ ಮತ್ತು ಕಾಂಗ್ರೆಸ್ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸುತ್ತಿವೆ. ಬುಧವಾರದಂದು ಮತದಾರ ತನ್ನ ನಿರ್ಧಾರ ತಿಳಿಸಲಿದ್ದಾನೆ. 

ರಾಮನಗರ: ಮಗನನ್ನು ಗೆಲ್ಲಿಸುವ ಛಲ ತೊಟ್ಟು ಚನ್ನಪಟ್ಟಣ ಕ್ಷೇತ್ರದಲ್ಲಿ ಪ್ರಚಾರ ಮಾಡಿತ್ತಿರುವ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಯವರು ಇಂದು ಕ್ಷೇತ್ರದ ಶ್ಯಾನುಭೋಗನಹಳ್ಳಿಯಲ್ಲಿ ವಿಭಿನ್ನ ರೀತಿಯಲ್ಲಿ ಪ್ರಚಾರ ಮಾಡಿದರು. ಪ್ರಚಾರಕ್ಕಾಗಿ ಎತ್ತಿನಗಾಡಿಯನ್ನು ಕಟ್ಟಿಸಿದ ಅವರು ಗಾಡಿಯಲ್ಲಿ ತಮ್ಮ ಪಕ್ಷದ ಸಂಕೇತವಾಗಿರುವ ತೆನೆಹೊತ್ತ ಮಹಿಳೆಯನ್ನು ಕೂರಿಸಿಕೊಂಡಿದ್ದರು. ಹಳ್ಳಿಯಲ್ಲಿ ಅವರಿಗೆ ಭರ್ಜರಿ ಸ್ವಾಗತ ಸಿಕ್ಕಿದ್ದು ಸುಳ್ಳಲ್ಲ. ರಸ್ತೆಯ ಇಕ್ಕೆಲಗಳಲ್ಲಿ ನೆರೆದು ಜನ ಕುಮಾರಸ್ವಾಮಿಯನ್ನು ಸ್ವಾಗತಿಸಿದರೆ ಕೇಂದ್ರ ಸಚಿವ ಎರಡೂ ಕೈಜೋಡಿಸಿ ನಮಸ್ಕರಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿಟಿಟ್ ಫಾರ್ ಟ್ಯಾಟ್; ಡಿಕೆ ಸುರೇಶ್ ಆಡಿಯೋ ಬಹಿರಂಗಗೊಳಿಸಿದ ಹೆಚ್ ಡಿ ಕುಮಾರಸ್ವಾಮಿ