AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಬ್ಬಳ್ಳಿಯಲ್ಲಿ ಒಬ್ಬ ವಿಶಿಷ್ಟ ಪಕ್ಷಿ ಪ್ರೇಮಿ: ದುಡಿದ ಹಣದಲ್ಲಿಯೇ ನಿತ್ಯ ಸಾವಿರಾರು ಪಾರಿವಾಳಗಳಿಗೆ ಆಹಾರ

Hubballi News: ಹುಬ್ಬಳ್ಳಿಯ ಕಂಚಗಾರ ಗಲ್ಲಿಯಲ್ಲಿ ಒಬ್ಬ ವಿಶಿಷ್ಟ ಪಕ್ಷಿ ಪ್ರೇಮಿ ಇದ್ದಾರೆ. ಅವರ ಹೆಸರು ವಿಕಾಸ್. ಇವರು ನಿತ್ಯ ಸಾವಿರಾರು ಪಾರಿವಾಳಗಳಿಗೆ ಅಹಾರ ಹಾಕ್ತೀದಾರೆ. ಎಸ್ ವಿಕಾಸ್ ಅಡವಿ ಪಾರಿವಾಳಗಳಿಗೆ ಅಕ್ಷರಶಃ ಅನ್ನದಾತ ಎಂದರೆ ತಪ್ಪಾಗಲಿಕಿಲ್ಲ.

ಹುಬ್ಬಳ್ಳಿಯಲ್ಲಿ ಒಬ್ಬ ವಿಶಿಷ್ಟ ಪಕ್ಷಿ ಪ್ರೇಮಿ: ದುಡಿದ ಹಣದಲ್ಲಿಯೇ ನಿತ್ಯ ಸಾವಿರಾರು ಪಾರಿವಾಳಗಳಿಗೆ ಆಹಾರ
ಪಕ್ಷಿ ಪ್ರೇಮಿ ವಿಕಾಸ್
Follow us
ಶಿವಕುಮಾರ್ ಪತ್ತಾರ್
| Updated By: ಗಂಗಾಧರ​ ಬ. ಸಾಬೋಜಿ

Updated on: Aug 21, 2023 | 9:17 PM

ಹುಬ್ಬಳ್ಳಿ, ಆಗಸ್ಟ್​ 21: ಆತ ಸಣ್ಣ ಪೇಪರ್ ತಯಾರಿಕೆ ಅಂಗಡಿ ಮಾಲೀಕ. ಕೆಲಸದ ಜೊತೆಗೆ ಆತ ಪಕ್ಷಿ ಮೇಲಿರುವ ಕಾಳಜಿ (bird lover) ಎಂತಹವರನ್ನು ಹುಬ್ಬೇರಿಸುತ್ತಿದೆ. ಅಂಗಡಿಯಲ್ಲಿ ಕೆಲಸ ಮಾಡುತ್ತಾ, ಆತ ನಿತ್ಯ ಸಾವಿರಾರು ಪಕ್ಷಿಗಳಿಗೆ ಆಹಾರ ಹಾಕುತ್ತಾನೆ. ದುಡಿದ ಹಣದಲ್ಲಿಯೇ ನಿತ್ಯ ಸಾವಿರಾರು ಪಾರಿವಾಳಗಳಿಗೆ ಆತ ಅನ್ನ ನೀಡುತ್ತಿದ್ದಾನೆ. ಆತ ಬಂದನೆಂದರೆ ಸಾಕು ಪಾರಿವಾಳಗಳು ಆಹಾರಕ್ಕಾಗಿ ಹಿಂಡು ಹಿಂಡಾಗಿ ಬರುತ್ತವೆ. ಸಾವಿರಾರು ಪಾರಿವಾಳಗಳು ಹಿಂಡು ಹಿಂಡಾಗಿ ಅಹಾರ ಸೇವಿಸುವ ದೃಶ್ಯ ಮೈರೋಮಾಚಂನಗೊಳಿಸತ್ತೆ.

ಹುಬ್ಬಳ್ಳಿಯ ಕಂಚಗಾರ ಗಲ್ಲಿಯಲ್ಲಿ ಒಬ್ಬ ವಿಶಿಷ್ಟ ಪಕ್ಷಿ ಪ್ರೇಮಿ ಇದ್ದಾರೆ. ಅವರ ಹೆಸರು ವಿಕಾಸ್. ಇವರು ನಿತ್ಯ ಸಾವಿರಾರು ಪಾರಿವಾಳಗಳಿಗೆ ಅಹಾರ ಹಾಕ್ತೀದಾರೆ. ಎಸ್ ವಿಕಾಸ್ ಅಡವಿ ಪಾರಿವಾಳಗಳಿಗೆ ಅಕ್ಷರಶಃ ಅನ್ನದಾತ ಎಂದರೆ ತಪ್ಪಾಗಲಿಕಿಲ್ಲ. ದಿನಕ್ಕೆ ಸುಮಾರು 250 ಕೆಜಿ ಅಷ್ಟು ಗೋದಿ ಪುಠಾಣಿಯನ್ನ ವಿಕಾಸ ಪಾರಿವಾಳಕ್ಕೆ ಆಹಾರ ಹಾಕುವ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ: ಸ್ಮಾರಕವಾದ ಹತ್ತೇ ವರ್ಷದಲ್ಲಿ ಭೂತ ಬಂಗಲೆ ಆದ ಡಾ ಗಂಗೂಬಾಯಿ ಹಾನಗಲ್​ ಮನೆ: ಅಭಿವೃದ್ಧಿಗಾಗಿ ಕಾಯುತ್ತಿರುವ ಜನರು

ಕಂಚಗಾರ ಗಲ್ಲಿಯಲ್ಲಿರೋ ದೊಡ್ಡ ಕಟ್ಟಡದ ಮೇಲೆ ಬಂದು ತಟ್ಟೆ ಶಬ್ದಮಾಡಿದರೆ ಸಾಕು ಪಾರಿವಾಳಗಳು ನಮಗೆ ಊಟ ಬಂದಿದೆ ಎಂದ ಎಲ್ಲಿದ್ದರೂ ಹಿಂಡು ಹಿಂಡಾಗಿ ಓಡೋಡಿ ಬರುತ್ತೇವೆ. ಸಾವಿರಾರು ಪಾರಿವಾಳಗಳಿಗೆ ವಿಕಾಸ್ ನಿತ್ಯ ಅನ್ನ ನೀಡುವ ಕಾಯಕದಲ್ಲಿ ತೊಡಗಿದ್ದಾರೆ. ಪಕ್ಷಿಗಳೆಂದರೆ ವಿಕಾಸ್​ಗೆ ಅಚ್ಚು ಮೆಚ್ಚು ದಿನವೊಂದಕ್ಕೆ ಬರೋಬ್ಬರಿ 250 ಕೆಜಿ ಅಷ್ಟು ಅಹಾರ ಹಾಕೋದು ಸುಲಭದ ಮಾತಲ್ಲ. ಆದರೆ ವಿಕಾಸ್ ಪಕ್ಷಿಗಳಿಗೆ ಅಹಾರ ಹಾಕೋದ್ರಲ್ಲಿ ಖುಷಿ ಪಡ್ತೀದಾರೆ. ಬೆಳೆಗ್ಗೆ 11 ಗಂಟೆಗೆ ವಿಕಾಸ್ ಕಟ್ಡಡದ ಮೇಲೆ ಬಂದು ತಟ್ಟೆ ಶಬ್ದ ಮಾಡಿದರೆ ಸಾಕು ಹಾರಾಡುವ ಪಾರಿವಾಳಗಳೆಲ್ಲ‌ ಓಡೋಡಿ ಬಂದು ಹೊಟ್ಟೆ ತುಂಬಿಸಿಕೊಳ್ಳುತ್ತವೆ.

ಮೂಲತಃ ಹುಬ್ಬಳ್ಳಿ ನಿವಾಸಿಯಾಗಿರೋ ವಿಕಾಸ್ ಪೇಪರ್ ಅಂಗಡಿ ಮಾಲೀಕ ಝರಾಕ್ಸ್ ಪೇಪರ್ ತಯಾರಿಕಾ ಕೆಲಸ ಮಾಡ್ತಾನೆ. ಆದರೆ ಕಳೆದ ಹತ್ತು ವರ್ಷಗಳಿಂದ ಪಾರಿವಾಳಕ್ಕೆ ಊಟ ಹಾಕುವ ಕೆಲಸ ಮಾಡುತ್ತಾರೆ ಅಂದರೆ ನೀವು ನಂಬಬೇಕು. ಮೊದ ಮೊದಲು ಕೇವಲ 50 ರಿಂದ 100 ಪಾರಿವಾಳಗಳು ಬರ್ತಿದ್ವು. ಇದೀಗ ಸಾವಿರಾರು ಪಾರಿವಾಳಗಳು ಬರುತ್ತಿವೆ.

ಇದನ್ನೂ ಓದಿ: Chaturthi 2023: ಹುಬ್ಬಳ್ಳಿಯಲ್ಲಿ ಗಣೇಶನ ವಿಗ್ರಹಗಳನ್ನು ತಯಾರಿಸುತ್ತಿರುವ ಮುಸ್ಲಿಂ ಮಹಿಳೆ

ಅಷ್ಟು ಪಾರಿವಾಳಗಳಿಗೆ ವಿಕಾಸ್ ಹೊಟ್ಟೆ ತುಂಬಿಸೋ ಕೆಲಸ ಮಾಡ್ತೀದಾರೆ. ವಿಕಾಸ್ ಮಾರುಕಟ್ಡೆಯಿಂದ ಗೋದಿ, ಪುಠಾಣಿ ಖರೀದಿ ಮಾಡಿ ಪಾರಿವಾಳಗಳಿಗೆ ಹಾಕ್ತಾರೆ. ನಿತ್ಯವೂ ಇದೆ ಕಾಯಕ. ಇವರಿಗೆ ಅವರ ಸಮಾಜದ ಕೆಲವರು ಸಹಾಯ ಮಾಡ್ತೀದಾರೆ. ಜೈನ ಸಮಾಜದ ಯುವಕರು ಇವರ ಜೊತೆ ಸೇರಿಕೊಂಡಿದ್ದು ಆಕಸ್ಮಾತ್ ಮನೆಯಲ್ಲಿ ಕಾರ್ಯಕ್ರಮ ಇದ್ರೆ, ಅವತ್ತು ಪಾರಿವಾಳಗಳಿಗೆ ಕಾಳುಗಳನ್ನ ಹಾಕ್ತಾರೆ. ಹೀಗೆ ಕಳೆದ 10 ವರ್ಷಗಳಿಂದ ವಿಕಾಸ್ ಸಾವಿರಾರು ಪಕ್ಷಿಗಳಿಗೆ ಅನ್ನದಾತ ಆಗಿದ್ದಾರೆ.

ಇಂದಿನ‌ ಅಧುನಿಕ ಯುಗದಲ್ಲಿ ಒಂದು ತುತ್ತ ಊಟ ಕೇಳಿದ್ರೂ ಇಲ್ಲ ಅನ್ನೋರೆ ಜಾಸ್ತಿ. ಅಂತದ್ದರಲ್ಲಿ ನಿತ್ಯ ಸಾವಿರಾರು ಪಾರಿವಾಳಗಳಿಗೆ ಊಟ ಹಾಕೋದು ಗ್ರೇಟ್. ಯಾವುದೇ ಪ್ರತಿಫಲಾಕ್ಷೆಯಿಲ್ಲದೆ ವಿಕಾಸ್ ಮೂಕ ಪಕ್ಷಿಗಳಿಗೆ ಆಶ್ರಯದಾತನಾಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಕಾನೂನು ಪ್ರಕ್ರಿಯೆ ಮೂಲಕ ಜನಾರ್ಧನ ರೆಡ್ಡಿಗೆ ರಿಲೀಫ್: ಶ್ರೀರಾಮುಲು
ಕಾನೂನು ಪ್ರಕ್ರಿಯೆ ಮೂಲಕ ಜನಾರ್ಧನ ರೆಡ್ಡಿಗೆ ರಿಲೀಫ್: ಶ್ರೀರಾಮುಲು
ವಿಡಿಯೋ ಮಾಡೋದು ನಿಲ್ಲಿಸು; ಡ್ರಗ್ ಪಾರ್ಟಿ ವೇಳೆ ಪೊಲೀಸರಿಗೆ ಮಂಗ್ಲಿ ಆವಾಜ್
ವಿಡಿಯೋ ಮಾಡೋದು ನಿಲ್ಲಿಸು; ಡ್ರಗ್ ಪಾರ್ಟಿ ವೇಳೆ ಪೊಲೀಸರಿಗೆ ಮಂಗ್ಲಿ ಆವಾಜ್
ಮಂತ್ರಿ ಸ್ಥಾನ ಒಲ್ಲೆಯೆನ್ನಲು ನಾನೇನು ಸನ್ಯಾಸಿಯೇ? ಬಸವರಾಜು, ಶಾಸಕ
ಮಂತ್ರಿ ಸ್ಥಾನ ಒಲ್ಲೆಯೆನ್ನಲು ನಾನೇನು ಸನ್ಯಾಸಿಯೇ? ಬಸವರಾಜು, ಶಾಸಕ
ಇಬ್ಬರು ಬೇರೆ ಬೇರೆ ಜಾತಿಯವರು; ಯುವತಿ ಎಸ್​ಸಿಯಾದರೆ ಯುವಕ ಗೌಡಾಸ್!
ಇಬ್ಬರು ಬೇರೆ ಬೇರೆ ಜಾತಿಯವರು; ಯುವತಿ ಎಸ್​ಸಿಯಾದರೆ ಯುವಕ ಗೌಡಾಸ್!
ಸಂಸದ ಇ ತುಕಾರಾಂ ಮತ್ತು ಶಾಸಕ ಭರತ್ ರೆಡ್ಡಿ ಮನಗಳ ಮೇಲೂ ಈಡಿ ದಾಳಿ
ಸಂಸದ ಇ ತುಕಾರಾಂ ಮತ್ತು ಶಾಸಕ ಭರತ್ ರೆಡ್ಡಿ ಮನಗಳ ಮೇಲೂ ಈಡಿ ದಾಳಿ
ಹನುಮಾನ್ ಭಕ್ತರೊಬ್ಬರ ಅಂತ್ಯಕ್ರಿಯೆಗೆ ಬಂದ ಕೋತಿ
ಹನುಮಾನ್ ಭಕ್ತರೊಬ್ಬರ ಅಂತ್ಯಕ್ರಿಯೆಗೆ ಬಂದ ಕೋತಿ
ಶ್ರೀಕಾಂತ್ ಮತ್ತವನ ತಂಡದಿಂದ ಮಚ್ಚಿನಿಂದ ಹಲ್ಲೆ, ಹಂತಕರು ಪರಾರಿ
ಶ್ರೀಕಾಂತ್ ಮತ್ತವನ ತಂಡದಿಂದ ಮಚ್ಚಿನಿಂದ ಹಲ್ಲೆ, ಹಂತಕರು ಪರಾರಿ
ಕೃಷ್ಣ ನಟನೆಯ ‘ಬ್ರ್ಯಾಟ್’ ಚಿತ್ರದ ಟೀಸರ್ ನೋಡಿದ ಮಗಳು ಪರಿ ರಿಯಾಕ್ಷನ್ ನೋಡಿ
ಕೃಷ್ಣ ನಟನೆಯ ‘ಬ್ರ್ಯಾಟ್’ ಚಿತ್ರದ ಟೀಸರ್ ನೋಡಿದ ಮಗಳು ಪರಿ ರಿಯಾಕ್ಷನ್ ನೋಡಿ
ಶ್ರೀನಿವಾಸಪುರದಿಂದ ಬೇರೆ ಊರುಗಳಿಗೆ ಹೋಗುವ ರಸ್ತೆಗಳು ಬಂದ್
ಶ್ರೀನಿವಾಸಪುರದಿಂದ ಬೇರೆ ಊರುಗಳಿಗೆ ಹೋಗುವ ರಸ್ತೆಗಳು ಬಂದ್
ರಾಜಾ ರಘುವಂಶಿ ಕೊಲೆ ಆರೋಪಿಗೆ ಏರ್​ಪೋರ್ಟ್​ನಲ್ಲಿ ಪ್ರಯಾಣಿಕರಿಂದ ಕಪಾಳಮೋಕ್ಷ
ರಾಜಾ ರಘುವಂಶಿ ಕೊಲೆ ಆರೋಪಿಗೆ ಏರ್​ಪೋರ್ಟ್​ನಲ್ಲಿ ಪ್ರಯಾಣಿಕರಿಂದ ಕಪಾಳಮೋಕ್ಷ