ಹುಬ್ಬಳ್ಳಿ ಅಂಜಲಿ ಹತ್ಯೆ ಪ್ರಕರಣದ ಆರೋಪಿ ವಿಶ್ವ ಕಿಮ್ಸ್​ ನರ್ಸ್​ ಜೊತೆ ಅನುಚಿತ ವರ್ತನೆ

| Updated By: ವಿವೇಕ ಬಿರಾದಾರ

Updated on: May 22, 2024 | 2:04 PM

Hubballi Anjali murder case: ಮೇ 15 ರಂದು ಅಂಜಲಿ ಅಂಬಿಗೇರ ಎಂಬ ಯುವತಿಯನ್ನು ಕೊಲೆ ಮಾಡಲಾಗಿದೆ. ಅಂಜಲಿ ಅಂಬಿಗೇರನನ್ನು ಕೊಲೆ ಮಾಡಿದ ಆರೋಪಿ ವಿಶ್ವ ರೈಲಿನಿಂದ ಜಿಗಿದು ಗಾಯಗೊಂಡಿದ್ದು, ಆತನನ್ನು ಕಿಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯಲ್ಲೂ ನರ್ಸ್​ ಜೊತೆ ಅನುಚಿತವಾಗಿ ವರ್ತಿಸಿದ್ದಾನೆ. ​

ಹುಬ್ಬಳ್ಳಿ ಅಂಜಲಿ ಹತ್ಯೆ ಪ್ರಕರಣದ ಆರೋಪಿ ವಿಶ್ವ ಕಿಮ್ಸ್​ ನರ್ಸ್​ ಜೊತೆ ಅನುಚಿತ ವರ್ತನೆ
ಅಂಜಲಿ ಅಂಬಿಗೇರ, ಆರೋಪಿ ವಿಶ್ವ
Follow us on

ಹುಬ್ಬಳ್ಳಿ, ಮೇ 22: ರೈಲಿನಿಂದ ಜಿಗಿದು ಗಾಯಗೊಂಡು ಕಿಮ್ಸ್​ನಲ್ಲಿ (KIMS) ಚಿಕಿತ್ಸೆ ಪಡೆಯುತ್ತಿರುವ ಅಂಜಲಿ ಅಂಬಿಗೇರ (20) (Anjali Ambiger) ಕೊಲೆ ಆರೋಪಿ ವಿಶ್ವ (Vishwa) ಅಲಿಯಾಸ್​ ಗಿರೀಶ್​ ಆಸ್ಪತ್ರೆಯ ಮಹಿಳಾ ಸಿಬ್ಬಂದಿ ಜೊತೆಗೂ ಅನುಚಿತವಾಗಿ ವರ್ತಿಸಿದ್ದಾನೆ. ನರ್ಸ್ ಚಿಕಿತ್ಸೆ ಕೊಡುವಾಗ ವಿಶ್ವ ಹುಚ್ಚಾಟವಾಡಿದ್ದಾನೆ. ಅಲ್ಲದೆ ಅವರ ಜೊತೆ ಅನುಚಿತವಾಗಿ ವರ್ತಿಸಿದ್ದಾನೆ. ಕೊಠಡಿಯಲ್ಲಿ ಕೆಲಸ ಮಾಡುತ್ತಿದ್ದ ಆಯಾಗೆ ಧಮ್ಕಿ ಹಾಕಿದ್ದಾನೆ. ಇದರಿಂದ ಕಿಮ್ಸ್​ ಸಿಬ್ಬಂದಿ ಭಯ ಭೀತರಾಗಿದ್ದಾರೆ. ಹೀಗಾಗಿ ವಿಶ್ವ ಚಿಕಿತ್ಸೆ ಪಡೆಯುತ್ತಿದ್ದ ಕೊಠಡಿಗೆ ಪೊಲೀಸ್​ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಏಳು ಜನ ಪೊಲೀಸರನ್ನು ನಿಯೋಜಿಸಲಾಗಿದೆ.

ಅಂಜಲಿ ಹತ್ಯೆ ಪ್ರಕರಣ ಸಿಐಡಿಗೆ ವರ್ಗಾವಣೆಯಾಗಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಹುಬ್ಬಳ್ಳಿಗೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ. ಅಂಜಲಿಯನ್ನು ಹತ್ಯೆ ಮಾಡಿರುವ ಆರೋಪಿಯಿಂದಲೂ ಸಿಐಡಿ ಅಧಿಕಾರಿಗಳು ಹೇಳಿಕೆ ಪಡೆದಿದ್ದಾರೆ.

ಅಂಜಲಿ ಅಂಬಿಗೇರ ಕೊಲೆ

ಕೊಲೆಯಾದ ಅಂಜಲಿ ಅಂಬಿಗೇರ ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿ ತಂಗಿ ಯಶೋಧ ಮತ್ತು ಅಜ್ಜಿಯೊಂದಿಗೆ ವಾಸವಾಗಿದ್ದರು. ಬುಧವಾರ ಮೇ 15 ರಂದು ನಸುಕಿನ ಜಾವ 4:30ರ ಸುಮಾರಿಗೆ ಗಾಂಜಾ ನಶೆಯಲ್ಲಿ ಅಂಜಲಿ ಮನೆಗೆ ಬಂದ ಆರೋಪಿ ವಿಶ್ವ ಬಾಗಿಲು ಬಡೆದಿದ್ದಾನೆ. ಬಾಗಿಲು ತೆರದು ಹೊರ ಬಂದ ಅಂಜಲಿ, ವಿಶ್ವನ ಜೊತೆ ಕೆಲ ಕ್ಷಣ ಮಾತನಾಡಿದ್ದಾಳೆ. ಆಗ ವಿಶ್ವ, ಅಂಜಲಿಗೆ ನನ್ನ ಜೊತೆ ಬಾ ಎಂದು ಕರೆದಿದ್ದಾನೆ. ಅದಕ್ಕೆ ಅಂಜಲಿ ಬರಲ್ಲ ಅಂತ ವಿರೋಧ ವ್ಯಕ್ತಪಡಿಸಿದ್ದಾನೆ.

ಇದನ್ನೂ ಓದಿ: ಅಂಜಲಿಯನ್ನು ಕೊಲೆ ಮಾಡಿದ ಆರೋಪಿ ವಿಶ್ವ ಯಾರು, ಈತನ ಹಿನ್ನೆಲೆ ಏನು? ಇಲ್ಲಿದೆ ಓದಿ

ಬಳಿಕ ಅಂಜಲಿ ಮನೆಯೊಳಗೆ ಹೋಗಿದ್ದಾಳೆ. ಆಕೆಯ ಹಿಂದೆಯೇ ಮನೆಯೊಳಗೆ ನುಗ್ಗಿದ ವಿಶ್ವ ಅಂಜಲಿಗೆ ಚಾಕುವಿನಿಂದ ಚುಚ್ಚಿದ್ದಾನೆ. ಈ ವೇಳೆ ತಡೆಯಲು ಬಂದ ತಂಗಿ ಮತ್ತು ಅಜ್ಜಿಯ ಮೇಲೆ ಹಲ್ಲೆ ಮಾಡಿದ್ದಾನೆ. ಬಳಿಕ ವಿಶ್ವ ಅಂಜಲಿಯ ತಲೆ ಕೂದಲು ಹಿಡಿದು, ಎಳೆದುಕೊಂಡು ಅಡುಗೆ ಮನೆಯೊಳಗೆ ಎಳೆದುಕೊಂಡು ಹೋಗಿದ್ದಾನೆ. ಅಲ್ಲಿಯೂ ಚಾಕುವಿನಿಂದ ಹೊಟ್ಟೆಗೆ ಹಲವು ಬಾರಿ ಚುಚ್ಚಿದ್ದಾನೆ. ಇದರಿಂದ ಅಂಜಲಿ ಉಸಿರು ಚಲ್ಲಿದ್ದಾಳೆ. ಅಂಜಲಿ ಮೃತಪಟ್ಟಿರುವು ಖಾತರಿ ಆಗುತ್ತಿದ್ದಂತೆ ವಿಶ್ವ ಅಲ್ಲಿಂದ ಕಾಲ್ಕಿತ್ತಿದ್ದಾನೆ.

ನೇಹಾ ಕೊಲೆ ಕೇಸ್ ಸಿಬಿಐಗೆ ಕೊಡಲ್ಲ

ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಒತ್ತಾಯಗಳು ಕೇಳಿಬಂದಿದ್ದು, ಈ ಬಗ್ಗೆ ಗೃಹ ಸಚಿವ ಜಿ. ಪರಮೇಶ್ವರ್ ಪ್ರತಿಕ್ರಿಯಿಸಿ, ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣ ಸಿಬಿಐಗೆ ಕೊಡಲ್ಲ ಎಂದು ಹೇಳಿದ್ದರು. ರಾಜ್ಯದ ಪೊಲೀಸರು ಸಮರ್ಥರಿದ್ದಾರೆ, ಹೀಗಾಗಿ ಸಿಬಿಐಗೆ ಕೊಡಲ್ಲ. ಕೆಲವು ಬಾರಿ ಹೊರಗಿನವರಿಂದ ತನಿಖೆ ಆಗಬೇಕು. ಹೀಗಾಗಿ ನೇಹಾ ಪ್ರಕರಣ ಸಿಐಡಿಗೆ ಹಸ್ತಾಂತರ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ