AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಬ್ಬಳ್ಳಿ ಹಿಂಸಾಚಾರದ ಭೀಕರ ಮುಖ: ದಿಡ್ಡಿ ಹನುಮಂತ ದೇಗುಲ ಬಳಿ ಇಬ್ಬರು ಕಾನ್ಸ್‌ಟೇಬಲ್ಸ್​ ಹತ್ಯೆಗೆ ಯತ್ನಿಸಿದ್ದ ಗಲಭೆಕೋರರು?

Hubballi Constables: ಇಬ್ಬರು ಕಾನ್ಸ್‌ಟೇಬಲ್​ ಗಳು ಕೂದಲೆಳೆ ಅಂತರದಲ್ಲಿ ಬಚಾವ್‌ ಆಗಿರುವುದು ಕಂಡುಬಂದಿದೆ. ಸೈಜಗಲ್ಲು ಎತ್ತಿಹಾಕಿ ಆ ಪೇದೆಗಳಿಬ್ಬರ ಹತ್ಯೆಗೆ ಗಲಭೆಕೋರರು ಯತ್ನಿಸಿದ್ದಾರೆ. ಕಸಬಾ ಪೇಟೆ ಠಾಣೆ ಕಾನ್ಸ್‌ಟೇಬಲ್ಸ್‌ ಅನಿಲ್ ಕಾಂಡೇಕರ್ ಮತ್ತು ಮಂಜುನಾಥ ನಾಮರಡ್ಡಿ ಹತ್ಯೆಗೆ ಕಿಡಿಗೇಡಿಗಳು ಯತ್ನಿಸಿದ್ದರು ಎಂದು ತಿಳಿದುಬಂದಿದೆ. ದಿಡ್ಡಿ ಹನುಮಂತ ದೇಗುಲ ಬಳಿ ಇವರಿಬ್ಬರನ್ನೂ ತಡೆದು, ಹತ್ಯೆಗೆ ಯತ್ನಿಸಿದ್ದಾರೆ.

ಹುಬ್ಬಳ್ಳಿ ಹಿಂಸಾಚಾರದ ಭೀಕರ ಮುಖ: ದಿಡ್ಡಿ ಹನುಮಂತ ದೇಗುಲ ಬಳಿ ಇಬ್ಬರು ಕಾನ್ಸ್‌ಟೇಬಲ್ಸ್​ ಹತ್ಯೆಗೆ ಯತ್ನಿಸಿದ್ದ ಗಲಭೆಕೋರರು?
ಹುಬ್ಬಳ್ಳಿ ಹಿಂಸಾಚಾರದ ಮತ್ತೊಂದು ಭೀಕರ ಮುಖ: ದಿಡ್ಡಿ ಹನುಮಂತ ದೇಗುಲ ಬಳಿ ಇಬ್ಬರು ಕಾನ್ಸ್‌ಟೇಬಲ್ಸ್​ ಹತ್ಯೆಗೆ ಯತ್ನಿಸಿದ್ದ ಗಲಭೆಕೋರರು?
TV9 Web
| Updated By: ಸಾಧು ಶ್ರೀನಾಥ್​|

Updated on:Apr 20, 2022 | 4:59 PM

Share

ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯಲ್ಲಿ ಕಳೆದ ವಾರಂತ್ಯ ದಿಢೀರನೆ ಭುಗಿಲೆದ್ದ ಹಿಂಸಾಚಾರ (Hubballi violence) ಕುರಿತು ಮತ್ತೊಂದು ಭೀಕರ ವಿಡಿಯೋ ಟಿವಿ 9 ಗೆ ಲಭ್ಯವಾಗಿದೆ. ಈ ವಿಡಿಯೋ ನೊಡಿದ್ರೆ ಎಂತಹವರೂ ಬೆಚ್ವಿಬಿಳೋದು ಗ್ಯಾರೆಂಟಿ. ಗಲಭೆಯ ಟಾಪ್ ಆ್ಯಂಗಲ್ ವಿಡಿಯೋ ಇದಾಗಿದ್ದು ವೈರಲ್ ಆಗಿದೆ. ಪೊಲೀಸರು ಲಾಠಿ ಚಾರ್ಜ್​ ಮಾಡಿದರೂ ಬಗ್ಗದ ಕಿಡಿಗೇಡಿಗಳು ಪೊಲೀಸರ ಮೇಲೆಯೇ (Hubballi Constables) ಅಟ್ಯಾಕ್ ಮಾಡಲು ಗುಂಪು ಗುಂಪಾಗಿ ನುಗ್ಗಿ ಬರುತ್ತಿರುವುದು ವಿಡಿಯೋದಲ್ಲಿ ನಿಚ್ಚಳವಾಗಿ ಕಾಣಬರುತ್ತದೆ. ಇನ್ನು ಹುಬ್ಬಳ್ಳಿ ಗಲಭೆಯಲ್ಲಿ ರಕ್ತಚರಿತ್ರೆ ಬರೆಯಲು ಸಿದ್ದವಾಗಿತ್ತಾ ಸ್ಕೆಚ್ ಎಂಬ ಅನುಮಾನಕ್ಕೆ ಮತ್ತೊಂದು ಪುಷ್ಟಿ ಸಿಕ್ಕಿದೆ. ಅದು ಯಾವ ಪರಿ ಹಿಂಸಾಚಾರವೆಂದರೆ ನೇರವಾಗಿ ಪೊಲೀಸರನ್ನೇ ಟಾರ್ಗೆಟ್ ಮಾಡಿ ನೆತ್ತರೋಕುಳಿಗೆ ಹುನ್ನಾರ ನಡೆದಿತ್ತು ಎನ್ನಲಾಗಿದೆ. ಹುಬ್ಬಳ್ಳಿ ಗಲಭೆಯಲ್ಲಿ ಇಬ್ಬರ ಪೊಲೀಸರ ಹತ್ಯೆಗೆ ಸಂಚು ನಡೆದಿತ್ತಾ? ಎಂಬ ಅನುಮಾನ ಕಾಡುತ್ತಿದೆ. ಘಟನೆಯ ಭೀಕರತೆಯನ್ನು ಸ್ವತಃ ಪೊಲೀಸ್ ಸಿಬ್ಬಂದಿಯೊಬ್ಬರು ಬಿಚ್ಚಿಟ್ಟಿದ್ದಾರೆ (Diddi Hanumantha Temple).

ಕೂದಲೆಳೆ ಅಂತರದಲ್ಲಿ ಬಚಾವ್‌ ಆಗಿದ್ದ ಕಾನ್ಸ್‌ಟೇಬಲ್ಸ್‌: ಇಬ್ಬರು ಕಾನ್ಸ್‌ಟೇಬಲ್​ ಗಳು ಕೂದಲೆಳೆ ಅಂತರದಲ್ಲಿ ಬಚಾವ್‌ ಆಗಿರುವುದು ಕಂಡುಬಂದಿದೆ. ಸೈಜಗಲ್ಲು ಎತ್ತಿಹಾಕಿ ಆ ಪೇದೆಗಳಿಬ್ಬರ ಹತ್ಯೆಗೆ ಗಲಭೆಕೋರರು ಯತ್ನಿಸಿದ್ದಾರೆ. ಕಸಬಾ ಪೇಟೆ ಠಾಣೆ ಕಾನ್ಸ್‌ಟೇಬಲ್ಸ್‌ ಅನಿಲ್ ಕಾಂಡೇಕರ್ ಮತ್ತು ಮಂಜುನಾಥ ನಾಮರಡ್ಡಿ ಹತ್ಯೆಗೆ ಕಿಡಿಗೇಡಿಗಳು ಯತ್ನಿಸಿದ್ದರು ಎಂದು ತಿಳಿದುಬಂದಿದೆ. ದಿಡ್ಡಿ ಹನುಮಂತ ದೇಗುಲ ಬಳಿ ಇವರಿಬ್ಬರನ್ನೂ ತಡೆದು, ಹತ್ಯೆಗೆ ಯತ್ನಿಸಿದ್ದಾರೆ. 10-15 ಗಲಭೆಕೋರರು ಸುತ್ತುವರಿದು ಪೊಲೀಸರಿಬ್ಬರ ಹತ್ಯೆಗೆ ಯತ್ನಿಸಿದ್ದರು. ಆ ವೇಳೆ, ಬೈಕ್ ಬಿಟ್ಟು ತಪ್ಪಿಸಿಕೊಂಡು, ಪ್ರಾಣ ಉಳಿಸಿಕೊಂಡಿದ್ದಾರೆ ಇಬ್ಬರೂ ಕಾನ್ಸ್‌ಟೇಬಲ್​ ಗಳು. ಈ ಬಗ್ಗೆ ಇಬ್ಬರೂ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತಮ್ಮ ದೂರಿನಲ್ಲಿ ಕಿಡಿಗೇಡಿಗಳ ಕರಾಳತೆಯನ್ನು ಇಂಚಿಂಚೂ ಬಿಚ್ಚಿಟ್ಟಿದ್ದಾರೆ ಈ ಪೊಲೀಸ್ ಸಿಬ್ಬಂದಿ.

Also Read: GAIL ಕಂಪನಿ ಅಧಿಕಾರಿಗಳಿಂದಲೂ ಲಂಚ ಪಡೆದ ಚಿಕ್ಕಜಾಲ ಇನ್ಸ್‌ಪೆಕ್ಟರ್‌ ಹಂಸವೇಣಿ, ಎಸಿಬಿ ಬಲೆಗೆ ಬಿದ್ದು ವಿಲವಿಲ

Also Read: ಆರ್ಮಿಯಲ್ಲಿ ಹವಾಲ್ದಾರನಾಗಿರುವ ಬಾಗಲಕೋಟೆ ಯುವಕ ಏಷ್ಯನ್ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಕಂಚು ಗೆದ್ದ

Published On - 4:51 pm, Wed, 20 April 22

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ