AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಬ್ಬಳ್ಳಿ ಹಿಂಸಾಚಾರದ ಭೀಕರ ಮುಖ: ದಿಡ್ಡಿ ಹನುಮಂತ ದೇಗುಲ ಬಳಿ ಇಬ್ಬರು ಕಾನ್ಸ್‌ಟೇಬಲ್ಸ್​ ಹತ್ಯೆಗೆ ಯತ್ನಿಸಿದ್ದ ಗಲಭೆಕೋರರು?

Hubballi Constables: ಇಬ್ಬರು ಕಾನ್ಸ್‌ಟೇಬಲ್​ ಗಳು ಕೂದಲೆಳೆ ಅಂತರದಲ್ಲಿ ಬಚಾವ್‌ ಆಗಿರುವುದು ಕಂಡುಬಂದಿದೆ. ಸೈಜಗಲ್ಲು ಎತ್ತಿಹಾಕಿ ಆ ಪೇದೆಗಳಿಬ್ಬರ ಹತ್ಯೆಗೆ ಗಲಭೆಕೋರರು ಯತ್ನಿಸಿದ್ದಾರೆ. ಕಸಬಾ ಪೇಟೆ ಠಾಣೆ ಕಾನ್ಸ್‌ಟೇಬಲ್ಸ್‌ ಅನಿಲ್ ಕಾಂಡೇಕರ್ ಮತ್ತು ಮಂಜುನಾಥ ನಾಮರಡ್ಡಿ ಹತ್ಯೆಗೆ ಕಿಡಿಗೇಡಿಗಳು ಯತ್ನಿಸಿದ್ದರು ಎಂದು ತಿಳಿದುಬಂದಿದೆ. ದಿಡ್ಡಿ ಹನುಮಂತ ದೇಗುಲ ಬಳಿ ಇವರಿಬ್ಬರನ್ನೂ ತಡೆದು, ಹತ್ಯೆಗೆ ಯತ್ನಿಸಿದ್ದಾರೆ.

ಹುಬ್ಬಳ್ಳಿ ಹಿಂಸಾಚಾರದ ಭೀಕರ ಮುಖ: ದಿಡ್ಡಿ ಹನುಮಂತ ದೇಗುಲ ಬಳಿ ಇಬ್ಬರು ಕಾನ್ಸ್‌ಟೇಬಲ್ಸ್​ ಹತ್ಯೆಗೆ ಯತ್ನಿಸಿದ್ದ ಗಲಭೆಕೋರರು?
ಹುಬ್ಬಳ್ಳಿ ಹಿಂಸಾಚಾರದ ಮತ್ತೊಂದು ಭೀಕರ ಮುಖ: ದಿಡ್ಡಿ ಹನುಮಂತ ದೇಗುಲ ಬಳಿ ಇಬ್ಬರು ಕಾನ್ಸ್‌ಟೇಬಲ್ಸ್​ ಹತ್ಯೆಗೆ ಯತ್ನಿಸಿದ್ದ ಗಲಭೆಕೋರರು?
Follow us
TV9 Web
| Updated By: ಸಾಧು ಶ್ರೀನಾಥ್​

Updated on:Apr 20, 2022 | 4:59 PM

ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯಲ್ಲಿ ಕಳೆದ ವಾರಂತ್ಯ ದಿಢೀರನೆ ಭುಗಿಲೆದ್ದ ಹಿಂಸಾಚಾರ (Hubballi violence) ಕುರಿತು ಮತ್ತೊಂದು ಭೀಕರ ವಿಡಿಯೋ ಟಿವಿ 9 ಗೆ ಲಭ್ಯವಾಗಿದೆ. ಈ ವಿಡಿಯೋ ನೊಡಿದ್ರೆ ಎಂತಹವರೂ ಬೆಚ್ವಿಬಿಳೋದು ಗ್ಯಾರೆಂಟಿ. ಗಲಭೆಯ ಟಾಪ್ ಆ್ಯಂಗಲ್ ವಿಡಿಯೋ ಇದಾಗಿದ್ದು ವೈರಲ್ ಆಗಿದೆ. ಪೊಲೀಸರು ಲಾಠಿ ಚಾರ್ಜ್​ ಮಾಡಿದರೂ ಬಗ್ಗದ ಕಿಡಿಗೇಡಿಗಳು ಪೊಲೀಸರ ಮೇಲೆಯೇ (Hubballi Constables) ಅಟ್ಯಾಕ್ ಮಾಡಲು ಗುಂಪು ಗುಂಪಾಗಿ ನುಗ್ಗಿ ಬರುತ್ತಿರುವುದು ವಿಡಿಯೋದಲ್ಲಿ ನಿಚ್ಚಳವಾಗಿ ಕಾಣಬರುತ್ತದೆ. ಇನ್ನು ಹುಬ್ಬಳ್ಳಿ ಗಲಭೆಯಲ್ಲಿ ರಕ್ತಚರಿತ್ರೆ ಬರೆಯಲು ಸಿದ್ದವಾಗಿತ್ತಾ ಸ್ಕೆಚ್ ಎಂಬ ಅನುಮಾನಕ್ಕೆ ಮತ್ತೊಂದು ಪುಷ್ಟಿ ಸಿಕ್ಕಿದೆ. ಅದು ಯಾವ ಪರಿ ಹಿಂಸಾಚಾರವೆಂದರೆ ನೇರವಾಗಿ ಪೊಲೀಸರನ್ನೇ ಟಾರ್ಗೆಟ್ ಮಾಡಿ ನೆತ್ತರೋಕುಳಿಗೆ ಹುನ್ನಾರ ನಡೆದಿತ್ತು ಎನ್ನಲಾಗಿದೆ. ಹುಬ್ಬಳ್ಳಿ ಗಲಭೆಯಲ್ಲಿ ಇಬ್ಬರ ಪೊಲೀಸರ ಹತ್ಯೆಗೆ ಸಂಚು ನಡೆದಿತ್ತಾ? ಎಂಬ ಅನುಮಾನ ಕಾಡುತ್ತಿದೆ. ಘಟನೆಯ ಭೀಕರತೆಯನ್ನು ಸ್ವತಃ ಪೊಲೀಸ್ ಸಿಬ್ಬಂದಿಯೊಬ್ಬರು ಬಿಚ್ಚಿಟ್ಟಿದ್ದಾರೆ (Diddi Hanumantha Temple).

ಕೂದಲೆಳೆ ಅಂತರದಲ್ಲಿ ಬಚಾವ್‌ ಆಗಿದ್ದ ಕಾನ್ಸ್‌ಟೇಬಲ್ಸ್‌: ಇಬ್ಬರು ಕಾನ್ಸ್‌ಟೇಬಲ್​ ಗಳು ಕೂದಲೆಳೆ ಅಂತರದಲ್ಲಿ ಬಚಾವ್‌ ಆಗಿರುವುದು ಕಂಡುಬಂದಿದೆ. ಸೈಜಗಲ್ಲು ಎತ್ತಿಹಾಕಿ ಆ ಪೇದೆಗಳಿಬ್ಬರ ಹತ್ಯೆಗೆ ಗಲಭೆಕೋರರು ಯತ್ನಿಸಿದ್ದಾರೆ. ಕಸಬಾ ಪೇಟೆ ಠಾಣೆ ಕಾನ್ಸ್‌ಟೇಬಲ್ಸ್‌ ಅನಿಲ್ ಕಾಂಡೇಕರ್ ಮತ್ತು ಮಂಜುನಾಥ ನಾಮರಡ್ಡಿ ಹತ್ಯೆಗೆ ಕಿಡಿಗೇಡಿಗಳು ಯತ್ನಿಸಿದ್ದರು ಎಂದು ತಿಳಿದುಬಂದಿದೆ. ದಿಡ್ಡಿ ಹನುಮಂತ ದೇಗುಲ ಬಳಿ ಇವರಿಬ್ಬರನ್ನೂ ತಡೆದು, ಹತ್ಯೆಗೆ ಯತ್ನಿಸಿದ್ದಾರೆ. 10-15 ಗಲಭೆಕೋರರು ಸುತ್ತುವರಿದು ಪೊಲೀಸರಿಬ್ಬರ ಹತ್ಯೆಗೆ ಯತ್ನಿಸಿದ್ದರು. ಆ ವೇಳೆ, ಬೈಕ್ ಬಿಟ್ಟು ತಪ್ಪಿಸಿಕೊಂಡು, ಪ್ರಾಣ ಉಳಿಸಿಕೊಂಡಿದ್ದಾರೆ ಇಬ್ಬರೂ ಕಾನ್ಸ್‌ಟೇಬಲ್​ ಗಳು. ಈ ಬಗ್ಗೆ ಇಬ್ಬರೂ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತಮ್ಮ ದೂರಿನಲ್ಲಿ ಕಿಡಿಗೇಡಿಗಳ ಕರಾಳತೆಯನ್ನು ಇಂಚಿಂಚೂ ಬಿಚ್ಚಿಟ್ಟಿದ್ದಾರೆ ಈ ಪೊಲೀಸ್ ಸಿಬ್ಬಂದಿ.

Also Read: GAIL ಕಂಪನಿ ಅಧಿಕಾರಿಗಳಿಂದಲೂ ಲಂಚ ಪಡೆದ ಚಿಕ್ಕಜಾಲ ಇನ್ಸ್‌ಪೆಕ್ಟರ್‌ ಹಂಸವೇಣಿ, ಎಸಿಬಿ ಬಲೆಗೆ ಬಿದ್ದು ವಿಲವಿಲ

Also Read: ಆರ್ಮಿಯಲ್ಲಿ ಹವಾಲ್ದಾರನಾಗಿರುವ ಬಾಗಲಕೋಟೆ ಯುವಕ ಏಷ್ಯನ್ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಕಂಚು ಗೆದ್ದ

Published On - 4:51 pm, Wed, 20 April 22

ತಮ್ಮ ಪಕ್ಷದ ಅಧ್ಯಕ್ಷರಿಗೆ ಮಾಲೆ ಹಾಕಿ, ಕಪಾಳಕ್ಕೆ ಬಾರಿಸಿದ ನಾಯಕ
ತಮ್ಮ ಪಕ್ಷದ ಅಧ್ಯಕ್ಷರಿಗೆ ಮಾಲೆ ಹಾಕಿ, ಕಪಾಳಕ್ಕೆ ಬಾರಿಸಿದ ನಾಯಕ
ನನ್ನ ವಯಸ್ಸು 35, ಶಿವಣ್ಣ ಚಿತ್ರರಂಗಕ್ಕೆ ಬಂದೇ 40 ವರ್ಷ ಆಗಿದೆ: ಧ್ರುವ
ನನ್ನ ವಯಸ್ಸು 35, ಶಿವಣ್ಣ ಚಿತ್ರರಂಗಕ್ಕೆ ಬಂದೇ 40 ವರ್ಷ ಆಗಿದೆ: ಧ್ರುವ
ಫೋಟೋ, ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು ಜಲಪಾತಗಳ ಬಂಡೆಗಳೇ ಆಗಬೇಕೇ?
ಫೋಟೋ, ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು ಜಲಪಾತಗಳ ಬಂಡೆಗಳೇ ಆಗಬೇಕೇ?
ರಾಜ್ಯ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ: ಕಾಗೇರಿ
ರಾಜ್ಯ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ: ಕಾಗೇರಿ
ಅಪಾರ್ಟ್​ಮೆಂಟ್​​ನಲ್ಲಿ ಬೆಂಕಿ ಅವಘಡ; ಮಹಡಿಯಿಂದ ಹಾರಿದ ತಂದೆ, ಮಕ್ಕಳ ಸಾವು
ಅಪಾರ್ಟ್​ಮೆಂಟ್​​ನಲ್ಲಿ ಬೆಂಕಿ ಅವಘಡ; ಮಹಡಿಯಿಂದ ಹಾರಿದ ತಂದೆ, ಮಕ್ಕಳ ಸಾವು
ಅಪ್ಪು ಇದ್ದ ಕಡೆ ನಗುವಿಗೆಲ್ಲಿ ಕೊರತೆ, ಅಪ್ಪು ಹಳೆ ವಿಡಿಯೋ
ಅಪ್ಪು ಇದ್ದ ಕಡೆ ನಗುವಿಗೆಲ್ಲಿ ಕೊರತೆ, ಅಪ್ಪು ಹಳೆ ವಿಡಿಯೋ
ಜಾತಿಗಣತಿಯ ಮರುಸರ್ವೇ ಮಾಡಿಸಲು ಹೈಕಮಾಂಡ್ ಸೂಚಿಸಿದೆ: ಸಿದ್ದರಾಮಯ್ಯ
ಜಾತಿಗಣತಿಯ ಮರುಸರ್ವೇ ಮಾಡಿಸಲು ಹೈಕಮಾಂಡ್ ಸೂಚಿಸಿದೆ: ಸಿದ್ದರಾಮಯ್ಯ
ಶಾಂತಿಯುತವಾಗಿ ಹೋರಾಟ ಮಾಡುವ ವಾಟಾಳ್ ಇವತ್ತು ಭಿನ್ನವಾಗಿ ಕಂಡರು
ಶಾಂತಿಯುತವಾಗಿ ಹೋರಾಟ ಮಾಡುವ ವಾಟಾಳ್ ಇವತ್ತು ಭಿನ್ನವಾಗಿ ಕಂಡರು
ಸಿದ್ದರಾಮಯ್ಯ ಬಚಾವಾಗಲು ಸಾಧ್ಯವೇ ಇಲ್ಲ ಎಂದ ಸ್ನೇಹಮಯಿ ಕೃಷ್ಣ
ಸಿದ್ದರಾಮಯ್ಯ ಬಚಾವಾಗಲು ಸಾಧ್ಯವೇ ಇಲ್ಲ ಎಂದ ಸ್ನೇಹಮಯಿ ಕೃಷ್ಣ
ಜಾತಿ ಗಣತಿ ವರದಿ, ಕಾಲ್ತುಳಿತದ ಬಗ್ಗೆ CM-DCMಗೆ ಹೈಕಮಾಂಡ್ ಖಡಕ್​ ಸೂಚನೆ
ಜಾತಿ ಗಣತಿ ವರದಿ, ಕಾಲ್ತುಳಿತದ ಬಗ್ಗೆ CM-DCMಗೆ ಹೈಕಮಾಂಡ್ ಖಡಕ್​ ಸೂಚನೆ