ಕಾಣೆಯಾಗಿ 3 ದಿನಗಳ ಬಳಿಕ ಕೆರೆಯಲ್ಲಿ ತೇಲಾಡಿದ ತಾಯಿ, ಮಗಳ ಮೃತದೇಹಗಳು, ಆತ್ಮಹತ್ಯೆಯೋ, ಕೊಲೆಯೋ?

ಕಳೆದ ಮೂರು ದಿನಗಳಿಂದ ಮನೆಬಿಟ್ಟು ಹೋಗಿದ್ದ ತಾಯಿ ಮಗಳ ಶವ ಕೆರೆಯಲ್ಲಿ ಪತ್ತೆಯಾಗಿದೆ. ಇದು ಆತ್ಮಹತ್ಯೆಯೋ, ಕೊಲೆಯೋ? ಎನ್ನುವ ಶಂಕೆಗಳು ವ್ಯಕ್ತವಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.

ಕಾಣೆಯಾಗಿ 3 ದಿನಗಳ ಬಳಿಕ ಕೆರೆಯಲ್ಲಿ ತೇಲಾಡಿದ ತಾಯಿ, ಮಗಳ ಮೃತದೇಹಗಳು, ಆತ್ಮಹತ್ಯೆಯೋ, ಕೊಲೆಯೋ?
ಪ್ರಾತಿನಿಧಿಕ ಚಿತ್ರ
Edited By:

Updated on: Jan 06, 2023 | 8:11 PM

ಧಾರವಾಡ: ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ ತಾಯಿ, ಮಗಳ ಶವ ಕೆರೆಯಲ್ಲಿ ಪತ್ತೆಯಾಗಿವೆ. ತಾಯಿ ಮಕ್ತುಂಬಿ ಹಾಗೂ ಮಗಳು ಸೈನಾಜ್ ಮೃತದೇಹಗಳು ಇಂದು (ಜನವರಿ 06) ಧಾರವಾಡ ಜಿಲ್ಲೆ ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಕೆರೆಯಲ್ಲಿ ಪತ್ತೆಯಾಗಿವೆ. ಆದ್ರೆ, ಅನುಮಾನಸ್ಪದವಾಗಿ ತಾಯಿ-ಮಗಳ ಶವವಾಗಿ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಇದನ್ನೂ ಓದಿ: ಯಶವಂತಪುರ: ಡ್ರಮ್​ನಲ್ಲಿ ಅಪರಿಚಿತ ಮಹಿಳೆ ಶವಪತ್ತೆ

ಮಕ್ತುಂಬಿ ಹಾಗೂ ಮಗಳು ಸೈನಾಜ್ ಕಳೆದ ಮೂರು ದಿನಗಳಿಂದ ಕಾಣೆಯಾಗಿದ್ದರು. ಕುಟುಂಬದವರು ಹುಡುಕಾಟ ನಡೆಸಿದ್ದರು. ಅಲ್ಲದೇ ಮೃತ ಮಹಿಳೆಯ(ಮಕ್ತುಂಬಿ) ಗಂಡ ಮಾಬುಸಾಬ್, ಹೆಂಡತಿ ಹಾಗೂ ಮಗಳು ಕಾಣೆಯಾಗಿರುವುದರ ಬಗ್ಗೆ ಸಂಬಂಧಿಕರಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದ. ಆದ್ರೆ, ಮೂರು ದಿನದ ಬಳಿಕ ತಾಯಿ ಮಗಲ ಶವ ಬ್ಯಾಹಟ್ಟಿ ಕೆರೆಯಲ್ಲಿ ಪತ್ತೆಯಾಗಿದ್ದು, ಇದನ್ನು ನೋಡಿ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಸ್ಥಳೀಯರ ಸಹಾಯದಿಂದ ಮೃತದೇಹಗಳನ್ನು ನೀರಿನಿಂದ ಹೊರ ತೆಗೆದಿದ್ದಾರೆ. ಬಳಿಕ ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದು, ಇದು ಆತ್ಮಹತ್ಯೆಯೋ? ಕೊಲೆಯೋ? ಎನ್ನುವುದು ವರದಿ ಬಂದ ಬಳಿಕ ತಿಳಿಯಲಿದೆ.

ಇದನ್ನೂ ಓದಿ: ಪೋಷಕರು ಬುದ್ದಿವಾದ ಹೇಳಿದಕ್ಕೆ ಆತ್ಮಹತ್ಯೆ ಮಾಡಿಕೊಂಡ 9ನೇ ಕ್ಲಾಸ್ ವಿದ್ಯಾರ್ಥಿ

ಮದುವೆಯಾದ ದಿನದಿಂದ ಗಂಡ ಹೆಂಡತಿ ಚೆನ್ನಾಗಿದ್ದಿಲ್ಲ. ಗಂಡ ಮಾಬುಸಾಬ್ ಹೆಂಡತಿ‌‌ ಮಕ್ಕಳ‌ ಮೇಲೆ ಅನುಮಾನ ಪಡುತ್ತಿದ್ದಾನಂತೆ. ಹೀಗಾಗಿ ಗಂಡಶ್ರ(ಮಾಬುಸಾಬ್) ಕೊಲೆ ಮಾಡಿ ಕೆರೆಗೆ ಹಾಕಿದ್ದಾನೆ ಎಂದು ಮೃತ ಮಕ್ತುಂಬಿ ಸಂಬಂಧಿಕರು ಆರೋಪಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ತನಿಖೆ ನಡೆಸಿದ್ದಾರೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 8:10 pm, Fri, 6 January 23