Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧಾರವಾಡದಲ್ಲಿ ಬುದ್ಧ ತಪಸ್ಸಿಗೆ ಕುಳಿತ ಸಪ್ತವರ್ಣಿ ಮರಗಳದ್ದೇ ಕಾರುಬಾರು

ಧಾರವಾಡ ಅಂದರೆ ಅದು ವಿದ್ಯಾಕಾಶಿ ಜೊತೆಗೆ ಸಸ್ಯಕಾಶಿಯೂ ಹೌದು. ಇಲ್ಲಿ ಬಗೆ ಬಗೆಯ ಗಿಡ-ಮರಗಳು ಜನರನ್ನು ಸೆಳೆಯುತ್ತವೆ. ದೇಶ-ವಿದೇಶದ ವಿವಿಧ ಜಾತಿಯ ಮರಗಳು ಧಾರವಾಡಕ್ಕೆ ಸಸ್ಯಕಾಶಿ ಅನ್ನೋ ಹೆಸರನ್ನು ತಂದಿವೆ. ಎಲ್ಲ ಕಾಲಗಳಲ್ಲಿಯೂ ಒಂದಿಲ್ಲಾ ಒಂದು ಜಾತಿಯ ಗಿಡಗಳು ಮೈತುಂಬಾ ಹೂವನ್ನು ಹೊತ್ತು ನೋಡುಗರ ಕಣ್ಮನ ಸೆಳೆಯುತ್ತಲೇ ಇರುತ್ತವೆ. ಅಂಥ ಧಾರವಾಡದ ಸಸ್ಯ ಲೋಕದಲ್ಲಿ ಪ್ರಥಮ ಬಾರಿಗೆ ಸಪ್ತಪರ್ಣಿ ಅನ್ನೋ ಗಿಡಗಳು ಮೈತುಂಬಾ ಹೂವನ್ನು ಬಿಟ್ಟು ಜನರನ್ನು ಸೆಳೆಯುತ್ತಿವೆ. ಸಪ್ತಪರ್ಣಿ ಗಿಡಗಳ ಮೂಲ ಚೈನಾ.. ‘ಸಪ್ತಪರ್ಣಿ’ (ಅಲ್‍ಸ್ಟೋನಿಯಾ […]

ಧಾರವಾಡದಲ್ಲಿ ಬುದ್ಧ ತಪಸ್ಸಿಗೆ ಕುಳಿತ ಸಪ್ತವರ್ಣಿ ಮರಗಳದ್ದೇ ಕಾರುಬಾರು
Follow us
ಪೃಥ್ವಿಶಂಕರ
|

Updated on:Nov 04, 2020 | 5:28 PM

ಧಾರವಾಡ ಅಂದರೆ ಅದು ವಿದ್ಯಾಕಾಶಿ ಜೊತೆಗೆ ಸಸ್ಯಕಾಶಿಯೂ ಹೌದು. ಇಲ್ಲಿ ಬಗೆ ಬಗೆಯ ಗಿಡ-ಮರಗಳು ಜನರನ್ನು ಸೆಳೆಯುತ್ತವೆ. ದೇಶ-ವಿದೇಶದ ವಿವಿಧ ಜಾತಿಯ ಮರಗಳು ಧಾರವಾಡಕ್ಕೆ ಸಸ್ಯಕಾಶಿ ಅನ್ನೋ ಹೆಸರನ್ನು ತಂದಿವೆ. ಎಲ್ಲ ಕಾಲಗಳಲ್ಲಿಯೂ ಒಂದಿಲ್ಲಾ ಒಂದು ಜಾತಿಯ ಗಿಡಗಳು ಮೈತುಂಬಾ ಹೂವನ್ನು ಹೊತ್ತು ನೋಡುಗರ ಕಣ್ಮನ ಸೆಳೆಯುತ್ತಲೇ ಇರುತ್ತವೆ. ಅಂಥ ಧಾರವಾಡದ ಸಸ್ಯ ಲೋಕದಲ್ಲಿ ಪ್ರಥಮ ಬಾರಿಗೆ ಸಪ್ತಪರ್ಣಿ ಅನ್ನೋ ಗಿಡಗಳು ಮೈತುಂಬಾ ಹೂವನ್ನು ಬಿಟ್ಟು ಜನರನ್ನು ಸೆಳೆಯುತ್ತಿವೆ.

ಸಪ್ತಪರ್ಣಿ ಗಿಡಗಳ ಮೂಲ ಚೈನಾ.. ‘ಸಪ್ತಪರ್ಣಿ’ (ಅಲ್‍ಸ್ಟೋನಿಯಾ ಸ್ಕೊಲ್ಯಾರಿಸ್) ಎಂದು ಕರೆಯಲಾಗುವ ಈ ಗಿಡಗಳ ಮೂಲ ಚೈನಾ, ಆಸ್ಟ್ರೇಲಿಯಾ ಮತ್ತು ಭಾಗಶಃ ಟ್ರಾಪಿಕಲ್ ಏಷ್ಯಾ ಭಾಗ. ಪ್ರಥಮ ಬಾರಿಗೆ ಐದು ವರ್ಷಗಳ ಬಳಿಕ, ಧಾರವಾಡ ನಗರದ ಕೆಲಗೇರಿ ಬಳಿಯ ಗಾಯತ್ರಿಪುರಂ ಬಡಾವಣೆಯಲ್ಲಿನ ಆರು ಮರಗಳು ಸುವಾಸನೆ ಬೀರುವ ಹೂ ಮೈತುಂಬಾ ಹೊದ್ದು ನಿಂತಿವೆ.

‘ಬ್ಲ್ಯಾಕ್‍ಬೋರ್ಡ್ ಟ್ರೀ’ ಅಥವಾ ‘ಡೆವಿಲ್ಸ್ ಟ್ರೀ’ ಎಂದೂ ಕೂಡ ಕರೆಯಲಾಗುವ ಈ ಮರಗಳು, ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಕಾಣಸಿಗುವ, ‘ಎಪೋಸಿನೇಸಿಯೆ’ ಕುಟುಂಬ ಪ್ರಬೇಧಕ್ಕೆ ಸೇರಿವೆ.

ರವೀಂದ್ರನಾಥ ಠಾಗೂರರಿಗೆ ಅಚ್ಚುಮೆಚ್ಚು.. ಗುರುದೇವ ರವೀಂದ್ರನಾಥ ಠಾಗೂರರು, ಪಶ್ಚಿಮ ಬಂಗಾಳದ ಶಾಂತಿನಿಕೇತನದ ವಿಶ್ವ ಭಾರತಿ ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ, ಸ್ನಾತಕೋತ್ತರ ಮತ್ತು ಸ್ನಾತಕ ಪದವಿ ಪ್ರಮಾಣಪತ್ರದೊಂದಿಗೆ, ವಿಧಿವತ್ತಾಗಿ ಸಪ್ತಪರ್ಣಿ ಹೂವನ್ನು ಯುವ ಪದವೀಧರರಿಗೆ ನೀಡುವ ಸಂಪ್ರದಾಯ ಹಾಕಿಕೊಟ್ಟರು.

ದೇಶದ ಪ್ರಧಾನ ಮಂತ್ರಿ ಈ ವಿಶ್ವವಿದ್ಯಾಲಯದ ಕುಲಾಧಿಪತಿಯಾಗಿದ್ದು, ಅವರ ಸ್ವಾಗತ ಸೇರಿದಂತೆ, ಘಟಿಕೋತ್ಸವ ಸಮಾರಂಭದಲ್ಲಿ ಪ್ರತಿಯೊಬ್ಬರಿಗೂ ಸಪ್ತಪರ್ಣಿ ಹೂವನ್ನು ನೀಡಿ, ಗೌರವಿಸುವ ಪದ್ಧತಿ ಶಾಂತಿನಿಕೇತನದಲ್ಲಿತ್ತು. ಆದರೆ, ಹೂಗಳ ಅನಗತ್ಯ ಮತ್ತು ಅಪರಿಮಿತ ಬಳಕೆ ತಪ್ಪಿಸಲು, ಈಗ ಸಾಂಕೇತಕವಾಗಿ ಮಾತ್ರ ಈ ಹೂವನ್ನು ಪ್ರದರ್ಶಿಸಲಾಗುತ್ತದೆ.

ಸಪ್ತಪರ್ಣಿ ಮರದ ಕಾಂಡವನ್ನು ಪೆನ್ಸಿಲ್ ತಯಾರಿಕೆಯಲ್ಲಿ ಹೆಚ್ಚು ಬಳಸಲಾಗುತ್ತದೆ. ತುಂಬ ವೇಗವಾಗಿ ಬೆಳೆಯೋ ಈ ಗಿಡ ತಾಳಿಕೆ ಮತ್ತು ಬಾಳಿಕೆಗೆ ಹೆಸರುವಾಸಿ. ಬೇಗನೇ ಈ ಮರ ಹುಲುಸಾಗಿ ಬೆಳೆಯುತ್ತದೆ. ಶ್ರೀಲಂಕಾದಲ್ಲಿ ಮರದ ಶವಪೆಟ್ಟಿಗೆಗಳ ತಯಾರಿಕೆಯಲ್ಲಿ ಹೆಚ್ಚು ಬಳಕೆಯಲ್ಲಿರುವ ಮರವೂ ಹೌದು.

ಬುದ್ಧ ಜ್ಞಾನೋದಯಕ್ಕಾಗಿ ತಪಸ್ಸಿಗೆ ಕುಳಿತ ಮರವೇ ಸಪ್ತಪರ್ಣಿ.. ಬೋರ್ನಿಯೋದಲ್ಲಿ ಮೀನುಗಾರಿಕೆಯ ಬಲೆಗಳನ್ನು ತೇಲಿಸಲು ಈ ಮರದ ಕಾಂಡ ಬಳಸಲಾಗುತ್ತದೆ. ಮಹತ್ವದ ಪೇಯಗಳ ಬಾಟಲಿಯ ಮುಚ್ಚಳ ‘ಕಾರ್ಕ್’ ಆಗಿ ಸಹ ಈ ಮರ ಬಳಕೆಯಲ್ಲಿದೆ. ಬೌದ್ಧರು ಈ ಮರವನ್ನು ಅತ್ಯಂತ ಆದರದಿಂದ ಕಾಣುತ್ತಾರೆ. ಗೌತಮ ಬುದ್ಧ ತನ್ನ ಜ್ಞಾನೋದಯಕ್ಕಾಗಿ ತಪಸ್ಸಿಗೆ ಕುಳಿತದ್ದು ಮತ್ತು ಜ್ಞಾನೋದಯ ಪಡೆದಿದ್ದು, ಬೋಧಿ ವೃಕ್ಷದ ಕೆಳಗಡೆ, ಸಾರಾನಾಥದ ಲುಂಬಿನಿ ವನದಲ್ಲಿ. ಆ ಮರವೇ ಸಪ್ತಪರ್ಣಿ. ಹೂವಿನ ಕೆಳಗಡೆ ಒಟ್ಟು ಏಳು ಎಲೆಗಳಿರುತ್ತವೆ.

ಆಯುರ್ವೇದದಲ್ಲಿ ಅತಿಸಾರ ಭೇದಿ, ಅತೀ ಹೆಚ್ಚು ಬಾಧಿತ ಡಯೋರಿಯಾ ಹಾಗೂ ಅಪಚನ ಸಂಬಂಧಿ ಜಠರ ವ್ಯಾಧಿಗಳಿಗೆ ಸಪ್ತಪರ್ಣಿ ಮರದ ಟೊಂಗೆಗಳನ್ನು ಔಷಧವಾಗಿಯೂ ಬಳಸುವ ಉಲ್ಲೇಖವಿದೆ. 1889 ರಲ್ಲಿ ‘ದ ಯೂಸ್‍ಫುಲ್ ನೇಟಿವ್ ಪ್ಲ್ಯಾಂಟ್ಸ್ ಆಫ್ ಆಸ್ಟ್ರೇಲಿಯಾ’ ಹಾಗೂ ‘ಮಟೀರಿಯಾ ಮೆಡಿಕಾ ಆಫ್ ವೆಸ್ಟರ್ನ್ ಇಂಡಿಯಾ’ ದಲ್ಲಿ ಲಭ್ಯವಿದೆ. ಎಲೆಗಳ ಕಷಾಯ ಸಹ ಔಷಧವಾಗಿ ಬಳಸುವ ವಿಧಾನಗಳಿವೆ. ಮರದ ಎಲ್ಲ ಭಾಗಗಳೂ ತುಂಬ ಕಹಿ. ಪ್ರಮಾಣ ಮೀರಿದರೆ ವಿಷವೂ ಹೌದು.

5 ವರ್ಷಗಳಲ್ಲಿ ಹೂವು ಬಿಟ್ಟಿರೋದು ಸಸ್ಯಲೋಕದ ವೈಚಿತ್ರ್ಯ.. ನಗರದ ವಿವಿಧ ಕಡೆಗಳಲ್ಲಿ ಈ ಸಪ್ತಪರ್ಣಿ ಗಿಡಗಳು 10 ರಿಂದ 12 ವರ್ಷಗಳಷ್ಟು ಹಳೆಯದ್ದಾಗಿದ್ದರೂ ಹೂವು ಬಿಟ್ಟಿಲ್ಲ. ಆದರೆ ಕೇವಲ ಐದು ವರ್ಷಗಳಲ್ಲಿ ಹೂವು ಬಿಟ್ಟಿರೋದು ಸಸ್ಯಲೋಕದ ವಿಚಿತ್ರ. ಈ ಗಿಡಗಳನ್ನು ಹೂವು ಬಿಟ್ಟಾಗ ನೋಡೋದೇ ಕಣ್ಣಿಗೆ ಹಬ್ಬ ಅನ್ನುತ್ತಾರೆ ಪರಿಸರ ತಜ್ಞ ಪಿ.ವಿ. ಹಿರೇಮಠ.

ಒಟ್ಟಿನಲ್ಲಿ ಹೊಸ ಬಗೆಯ ಹೂವಿನಿಂದಾಗಿ ಇದೀಗ ಗಾಯತ್ರಿಪುರಂ ಬಡಾವಣೆ ಜನರ ಅಚ್ಚುಮೆಚ್ಚಿನ ತಾಣವಾಗಿ ಪರಿಣಮಿಸಿದೆ.-ನರಸಿಂಹಮೂರ್ತಿ ಪ್ಯಾಟಿ

Published On - 5:17 pm, Wed, 4 November 20

ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ