AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಲ್​ ಪಾವತಿಸದ ಮಹಿಳೆ, ವಿದ್ಯುತ್ ಸರಬರಾಜು ಬಂದ್ ಮಾಡಿದ್ದ ಹೆಸ್ಕಾಂ – ಗ್ರಾಹಕರ ಆಯೋಗ ಹೇಳಿದ್ದೇನು?

ಆರು ಮೀಟರುಗಳ ವಿದ್ಯುತ್ ಬಳಕೆಯ ಶುಲ್ಕವನ್ನು ಕಟ್ಟಿಲ್ಲದ ಕಾರಣ ವಿದ್ಯಾಗಿರಿ ಹೆಸ್ಕಾಂ ಅಧಿಕಾರಿಗಳು ವಿದ್ಯುತ್ ಸರಬರಾಜು ಬಂದ್ ಮಾಡಿದ್ದರು. ತಮ್ಮ ವಾಸ್ತವ್ಯದ ಎರಡು ಮನೆಗಳ ವಿದ್ಯುತ್ ಸರಬರಾಜು ನಿಲ್ಲಿಸಿದರೆ ತನಗೆ ತೊಂದರೆಯಾಗುತ್ತದೆ ಎಂದು ಹೆಸ್ಕಾಂಗೆ ಆದೇಶ ನೀಡಬೇಕೆಂದು ದೂರುದಾರರು ದೂರು ಸಲ್ಲಿಸಿದರು.

ಬಿಲ್​ ಪಾವತಿಸದ ಮಹಿಳೆ, ವಿದ್ಯುತ್ ಸರಬರಾಜು ಬಂದ್ ಮಾಡಿದ್ದ ಹೆಸ್ಕಾಂ - ಗ್ರಾಹಕರ ಆಯೋಗ ಹೇಳಿದ್ದೇನು?
ಬಿಲ್​ ಪಾವತಿಸದ ಮಹಿಳೆ, ವಿದ್ಯುತ್ ಸರಬರಾಜು ಬಂದ್ ಮಾಡಿದ ಹೆಸ್ಕಾಂ!
Follow us
ನರಸಿಂಹಮೂರ್ತಿ ಪ್ಯಾಟಿ, ಧಾರವಾಡ
| Updated By: ಸಾಧು ಶ್ರೀನಾಥ್​

Updated on: Feb 09, 2024 | 5:32 PM

ಆರು ಮೀಟರುಗಳ ವಿದ್ಯುತ್ ಬಳಕೆಯ ಶುಲ್ಕವನ್ನು ಕಟ್ಟಿಲ್ಲದ ಕಾರಣ ವಿದ್ಯಾಗಿರಿ ಹೆಸ್ಕಾಂ ಅಧಿಕಾರಿಗಳು ವಿದ್ಯುತ್ ಸರಬರಾಜು ಬಂದ್ ಮಾಡಿದ್ದರು. ತಮ್ಮ ವಾಸ್ತವ್ಯದ ಎರಡು ಮನೆಗಳ ವಿದ್ಯುತ್ ಸರಬರಾಜು ನಿಲ್ಲಿಸಿದರೆ ತನಗೆ ತೊಂದರೆಯಾಗುತ್ತದೆ ಎಂದು ಹೆಸ್ಕಾಂಗೆ (HESCOM) ಆದೇಶ ನೀಡಬೇಕೆಂದು ದೂರುದಾರರು ದೂರು ಸಲ್ಲಿಸಿದರು. ಧಾರವಾಡದ ನಿವಾಸಿ ಆರ್.ಎಂ. ಉಷಾ ಎಂಬುವವರು (Woman) ಶಕ್ತಿ ನಗರದ ಮನೆ ನಂ. 97 ರಲ್ಲಿ ವಾಸವಿದ್ದು, ಅದರಲ್ಲಿ ಒಟ್ಟು ಆರು ಮನೆಗಳ ಭಾಗಗಳಿದ್ದವು. ಅವುಗಳ ಪೈಕಿ ಎರಡಲ್ಲಿ ದೂರುದಾರರು (Consumer) ಮತ್ತು ಅವರ ಮಗ ವಾಸಿಸುತ್ತಿದ್ದರು. ಉಳಿದ ನಾಲ್ಕು ಮನೆಗಳಲ್ಲಿ ಬಾಡಿಗೆದಾರರು ಇದ್ದರು. ಈ ಮನೆಗಳ ಕುರಿತು ವ್ಯಾಜ್ಯ ಇರುವುದರಿಂದ ಬಾಡಿಗೆದಾರರು ಮನೆ ಖಾಲಿ ಮಾಡಿದ್ದರು.

ಆರು ಮೀಟರುಗಳ ವಿದ್ಯುತ್ ಬಳಕೆಯ ಶುಲ್ಕವನ್ನು ಕಟ್ಟಿಲ್ಲದ ಕಾರಣ ವಿದ್ಯಾಗಿರಿ ಹೆಸ್ಕಾಂ ಅಧಿಕಾರಿಗಳು ವಿದ್ಯುತ್ ಸರಬರಾಜು ಬಂದ್ ಮಾಡಿದ್ದರು. ತಮ್ಮ ವಾಸ್ತವ್ಯದ ಎರಡು ಮನೆಗಳ ವಿದ್ಯುತ್ ಸರಬರಾಜು ನಿಲ್ಲಿಸಿದರೆ ತನಗೆ ತೊಂದರೆಯಾಗುತ್ತದೆ ಎಂದು ಹೆಸ್ಕಾಂಗೆ ಆದೇಶ ನೀಡಬೇಕೆಂದು ದೂರುದಾರರು ದೂರು ಸಲ್ಲಿಸಿದರು.

ಇದನ್ನೂ ಓದಿ:  ಹುಬ್ಬಳ್ಳಿ -ಡೆಪಾಸಿಟ್​ ಹಿಂದಿರುಗಿಸದ ಸರಸ್ವತಿ ಕೋ ಆಪ್​​ ಸೊಸೈಟಿಗೆ 11 ಲಕ್ಷ ರೂ ದಂಡ ವಿಧಿಸಿದ ಕೋರ್ಟ್​​

ದೂರುದಾರಳು ಮತ್ತು ಅವರ ಗಂಡನಿಗೆ ಸಂಬಂಧಿಸಿದ ಒಟ್ಟು ಆರು ವಿದ್ಯುತ್ ಬಳಕೆಯ ಮೀಟರಗಳಿದ್ದು ಅವುಗಳ ವಿದ್ಯುತ್ ಬಿಲ್ಲನ್ನು ಕಟ್ಟಿರಲಿಲ್ಲ. ವಿದ್ಯುತ್ ಬಳಕೆಯ ಬಾಕಿ ಬಿಲ್ ಕಟ್ಟದೇ ದೂರುದಾರರಿಗೆ ಯಾವುದೇ ರೀತಿ ಸಹಾಯ ಮಾಡಲಾಗುವುದಿಲ್ಲ ಎಂದು ಹೆಸ್ಕಾಂ ಆಕ್ಷೇಪಣೆ ಎತ್ತಿತ್ತು. ಈ ದೂರಿನ ಬಗ್ಗೆ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ, ದೂರುದಾರಳು ಬಾಕಿ ಇರುವ ವಿದ್ಯುತ್ ಬಳಕೆಯ ಶುಲ್ಕ ಕಟ್ಟಲು ತಯಾರು ಇರುವುದಾಗಿ ಮತ್ತು ತಾನು ಉಪಯೋಗಿಸುತ್ತಿರುವ ಎರಡು ಮೀಟರುಗಳ ವಿದ್ಯುತ್ ಬಳಕೆಯ ಶುಲ್ಕವನ್ನು ನಿಯಮಿತವಾಗಿ ಕಟ್ಟುವುದಾಗಿ ಹೇಳಿದರು.

Also Read: ಠೇವಣಿ ಹಣ ಹಿಂದಿರುಗಿಸದ ಧಾರವಾಡದ ಸೊಸೈಟಿಗೆ ದಂಡ, ಪರಿಹಾರಕ್ಕೆ ಗ್ರಾಹಕರ ಆಯೋಗ ಆದೇಶ

ಬಾಕಿ ವಿದ್ಯುತ್ ಶುಲ್ಕ ಎದುರುದಾರ ಹೆಸ್ಕಾಂನವರಿಗೆ ದೂರುದಾರಳು ಕಟ್ಟಿ ಬಂದು ವರದಿ ಮಾಡಿದರು. ದೂರುದಾರಳೂ ಹೆಣ್ಣು ಮಗಳಾದ್ದರಿಂದ ಮಾನವೀಯತೆಯ ದೃಷ್ಟಿಯಿಂದ ಅವರ ಹಾಗೂ ಮಗನ ಬಳಕೆಯ ಎರಡು ವಿದ್ಯುತ್ ಮೀಟರಗಳಿಗೆ ಸರಬರಾಜು ಬಂದ್ ಮಾಡದಂತೆ ಹೆಸ್ಕಾಂನವರಿಗೆ ಆಯೋಗ ಆದೇಶಿಸಿದೆ. ಜೊತೆಗೆ ಇನ್ನು ಮುಂದೆ ವಿದ್ಯುತ್ ಬಳಕೆಯ ಶುಲ್ಕ ತಪ್ಪದೇ ಕಟ್ಟಿಕೊಂಡು ಹೋಗುವಂತೆ ದೂರುದಾರರಿಗೆ ಸೂಚಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!
ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ
ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ