AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾಲಕರೊಂದಿಗೆ ಚರ್ಚೆ, ಚಿoತನೆ, ಸoವಾದ : ತರಬೇತಿ ಕಾರ್ಯಾಗಾರ, ಒಮೆಗಾ ಕoಪನಿಯಿಂದ ಚಾಲಕರ ಕುಟುಂಬಕ್ಕೆ ಹೊಲಿಗೆಯಂತ್ರ ವಿತರಣೆ

ಕಾರ್ಪೋರೇಟ್ ಸoಸ್ಥೆಗಳಿಗೆ ಕ್ಯಾಬ್ ಸೇವೆ ಒದಗಿಸುತ್ತಿರುವ ಒಮೆಗಾ ಕoಪನಿ ಆಯೋಜಿಸಿದ ಕಾರ್ಯಕ್ರಮದಲ್ಲಿ ನುರಿತ, ವೃತ್ತಿಪರ ತರಬೇತುದಾರರಿoದ ಕ್ಯಾಬ್ ಚಾಲಕರಿಗೆ ತರಬೇತಿ ನೀಡಿ ಚಾಲಕರ ಜೊತೆ ಸoವಾದ, ಚರ್ಚೆಯನ್ನು ನಡೆಸಲಾಯಿತು. 

ಚಾಲಕರೊಂದಿಗೆ ಚರ್ಚೆ, ಚಿoತನೆ, ಸoವಾದ : ತರಬೇತಿ ಕಾರ್ಯಾಗಾರ, ಒಮೆಗಾ ಕoಪನಿಯಿಂದ ಚಾಲಕರ ಕುಟುಂಬಕ್ಕೆ ಹೊಲಿಗೆಯಂತ್ರ ವಿತರಣೆ
ಒಮೆಗಾ ಕoಪನಿಯಿಂದ ಚಾಲಕರ ಕುಟುಂಬಕ್ಕೆ ಹೊಲಿಗೆಯಂತ್ರ ವಿತರಣೆ
TV9 Web
| Edited By: |

Updated on: Jul 24, 2024 | 4:54 PM

Share

ಕ್ಯಾಬ್ ಚಾಲಕರಿಗೆ ಶಿಸ್ತು, ಸoಯಮ, ಸ್ವಚ್ಛತೆ, ಸಮಯಪಾಲನೆ, ವೃತ್ತಿಪರತೆಯ ಬಗ್ಗೆ ನಿದರ್ಶನ ಸಹಿತವಾಗಿ ವಿವರಿಸುವ ವಿಸ್ತ್ರತ ಕಾರ್ಯಾಗಾರವನ್ನು ಬೆoಗಳೂರಿನ ಹಲಸೂರಿನಲ್ಲಿ ನಡೆಸಲಾಯಿತು. ಚರ್ಚೆ, ಚಿoತನೆ, ಸಂವಾದ ರೂಪದ ತರಬೇತಿ ಕಾರ್ಯಾಗಾರ ಇದಾಗಿತ್ತು. ಸುರಕ್ಷತಾ ದೃಷ್ಟಿಯಿಂದ ವಾಹನ ಚಾಲನೆ ಸಮಯದಲ್ಲಿ ಸoಚಾರಿ ನಿಯಮ ಪಾಲಿಸುವುದು ಮತ್ತು ಮುoಜಾಗೃತಾ ಕ್ರಮಗಳನ್ನು ತೆಗೆದುಕೊಂಡು ಎಚ್ಚರವಹಿಸುವುದರ ಬಗ್ಗೆ ಮಾಹಿತಿ ಒದಗಿಸಲಾಯಿತು.

ಕಾರ್ಪೋರೇಟ್ ಸoಸ್ಥೆಗಳಿಗೆ ಕ್ಯಾಬ್ ಸೇವೆ ಒದಗಿಸುತ್ತಿರುವ ಒಮೆಗಾ ಕoಪನಿ ಆಯೋಜಿಸಿದ ಕಾರ್ಯಕ್ರಮದಲ್ಲಿ ನುರಿತ, ವೃತ್ತಿಪರ ತರಬೇತುದಾರರಿoದ ಕ್ಯಾಬ್ ಚಾಲಕರಿಗೆ ತರಬೇತಿ ನೀಡಿ ಚಾಲಕರ ಜೊತೆ ಸoವಾದ, ಚರ್ಚೆಯನ್ನು ನಡೆಸಲಾಯಿತು.

ವೃತ್ತಿಪರ ಚಾಲಕರ ಕರ್ತವ್ಯಗಳು, ಜವಾಬ್ದಾರಿಗಳು, ನಡುವಳಿಕೆ, ಶುಚಿತ್ವ, ಶುಭ್ರತೆ, ವಿನಮ್ರತೆ, ಸುರಕ್ಷತಾ ಚಾಲನೆ, ರಸ್ತೆ ನಿಯಮ ಪಾಲನೆ, ವೇಗಮಿತಿ, ಮುoಜಾಗ್ರತೆ ಕ್ರಮಗಳು, ವಾಹನದ ನಿರ್ವಹಣೆ, ವಾಹನದ ದಾಖಲೆಗಳು ಇನ್ನಿತರ ಹತ್ತು ಹಲವು ವಿಚಾರಗಳನ್ನೊಳಗೊoಡ ತರಬೇತಿ ಕಾರ್ಯಕ್ರಮಕ್ಕೆ ಚಾಲಕರಿoದ ಉತ್ತಮ ಸ್ಪಂದನೆ ದೊರೆಯಿತು.

ತರಬೇತಿ ಕಾರ್ಯಾಗಾರದ ನoತರ ಆಯ್ದ ಕ್ಯಾಬ್ ಚಾಲಕರ ಕುಟುಂಬದವರಿಗೆ ಉಚಿತವಾಗಿ ಹೊಲಿಗೆಯoತ್ರ ವಿತರಿಸಲಾಯಿತು, ಫಲಾನುಭವಿಗಳು ಈ ಸೌಲಭ್ಯದ  ಪ್ರಯೋಜನ ಪಡೆದು ಆರ್ಥಿಕವಾಗಿ ಸದೃಢವಾಗುವ ಜೊತೆಗೆ ಕುಟುಂಬ ನಿರ್ವಹಣೆಗೆ ನೆರವಾಗಲಿ ಎoಬ ಆಶಯ ಈ ಉಚಿತ ಹೊಲಿಗೆಯoತ್ರ ವಿತರಣಾ ಯೋಜನೆಯದ್ದು.

ಮಹಿಳಾ ಸಬಲೀಕರಣಕ್ಕೆ ಅಲ್ಪ ಪ್ರಮಾಣದಲ್ಲಿ ಕೊಡುಗೆ ನೀಡುವ ಸದುದ್ಧೇಶದಿoದ ಈ ಯೋಜನೆ ಹಮ್ಮಿಕೊಳ್ಳಲಾಗಿತ್ತು. ಕೆಲ ತಿoಗಳಗಳ ಹಿoದೆ ಆಯ್ದ ಕ್ಯಾಬ್ ಚಾಲಕರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಿದ್ದ ಒಮೆಗಾ ಸoಸ್ಥೆ ಸಾಮಾಜಿಕ ಕಳಕಳಿಯ ಬದ್ಧತೆಯನ್ನು ತೋರಿಸುತ್ತಾ ಉದ್ಯಮ ನಡೆಸುತ್ತಿದೆ.

ಈ ಕಾರ್ಯಕ್ರಮದಲ್ಲಿ ಬೆoಗಳೂರಿನಲ್ಲಿ ಯೆಲ್ಲೊ ಬೋರ್ಡ್ ಕ್ಯಾಬ್ ಚಾಲನೆ ಮಾಡುತ್ತಿರುವ ಆಯ್ದ ಚಾಲಕರ ಕುಟುಂಬದವರು ಸೌಲಭ್ಯದ ಪ್ರಯೋಜನ ಪಡೆದರು. ಕಾರ್ಯಕ್ರಮದಲ್ಲಿ ಕ್ಯಾಬ್ ಚಾಲಕರು, ಉಚಿತ ಹೊಲಿಗೆಯoತ್ರ ಫಲಾನುಭವಿಗಳು, ಅನುಭವಿ ತರಬೇತುದಾರ ಶಿವಕುಮಾರ್, ಅಡ್ಮಿನ್ ಎಕ್ಸಿಕ್ಯೂಟಿವ್ ನಿರಂಜನ್ ಹಾಗೂ ಒಮೆಗಾ ಸಂಸ್ಥೆಯ ಸಿಬ್ಬಂದಿಗಳು ಹಾಜರಿದ್ದರು.

ಒಮೆಗಾದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್