ರೆಮ್​ಡೆಸಿವರ್​ ಬೇಕೋ? ಬೇಡವೋ? ವೈದ್ಯರಲ್ಲೇ ಭಿನ್ನಾಭಿಪ್ರಾಯ, ಒಬ್ರು ಬೇಡ ಅಂತಾರೆ, ಇನ್ನೊಬ್ರು ಜೀವ ರಕ್ಷಕ ಅಂತಾರೆ

ರೆಮ್​ಡೆಸಿವಿರ್ ಬಳಕೆಗೆ ಸಹಮತ ವ್ಯಕ್ತಪಡಿಸುವವರ ಬಗ್ಗೆ ಗಂಭೀರ ಆರೋಪಗಳೂ ಇದ್ದು, ಇದೆಲ್ಲಾ ಹಣಕ್ಕಾಗಿ ಮಾಡುತ್ತಿರುವುದು ಎಂದು ಕೆಲವರು ದೂಷಿಸುತ್ತಾರೆ. ಕೊವಿಡ್​ ಅಲ್ಲದೇ ನ್ಯುಮೋನಿಯಾ ರೋಗಿಗಳಿಗೂ ರೆಮ್​ಡೆಸಿವಿರ್​ ನೀಡಲು ಹೇಳುತ್ತಿರುವುದು ಕೇವಲ ಹಣದ ದೃಷ್ಟಿಯಿಂದ ಎಂಬ ಮಾತುಗಳು ಕೇಳಿಬರುತ್ತಿವೆ.

ರೆಮ್​ಡೆಸಿವರ್​ ಬೇಕೋ? ಬೇಡವೋ? ವೈದ್ಯರಲ್ಲೇ ಭಿನ್ನಾಭಿಪ್ರಾಯ, ಒಬ್ರು ಬೇಡ ಅಂತಾರೆ, ಇನ್ನೊಬ್ರು ಜೀವ ರಕ್ಷಕ ಅಂತಾರೆ
ರೆಮ್​ಡೆಸಿವಿರ್ ಇಂಜೆಕ್ಷನ್ (ಪ್ರಾತಿನಿಧಿಕ ಚಿತ್ರ)
Follow us
| Updated By: preethi shettigar

Updated on: May 01, 2021 | 10:43 AM

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆಯಿಂದಾಗಿ ಸೋಂಕಿತರ ಸಂಖ್ಯೆ ನಿರೀಕ್ಷೆಗಿಂತಲೂ ಅತ್ಯಧಿಕ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಈ ಬಾರಿ ಸೋಂಕಿನಿಂದ ಗಂಭೀರಾವಸ್ಥೆಗೆ ತಲುಪಿದವರನ್ನು ಬಚಾಯಿಸುವುದೇ ವೈದ್ಯರಿಗೆ ಬಹುದೊಡ್ಡ ಸವಾಲಾಗಿದ್ದು, ವೈದ್ಯಕೀಯ ಸೌಲಭ್ಯಗಳ ಕೊರತೆಯೂ ತಲೆದೋರಿದ ಕಾರಣ ಮರಣ ಪ್ರಮಾಣವೂ ಆತಂಕ ಮೂಡಿಸಿದೆ. ಏತನ್ಮಧ್ಯೆ, ಕೊರೊನಾ ಸೋಂಕಿತರಿಗೆ ಜೀವರಕ್ಷಕ ಎಂದು ಬಿಂಬಿತವಾಗಿರುವ ರೆಮ್​ಡೆಸಿವಿರ್ ಆ್ಯಂಟಿ ವೈರಲ್ ಇಂಜೆಕ್ಷನ್ ಬಗ್ಗೆ ವೈದ್ಯರಲ್ಲೇ ಹಲವು ಗೊಂದಲಗಳಿದ್ದು ಕೆಲವರು ರೆಮ್​ಡೆಸಿವಿರ್ ಅವಶ್ಯಕತೆಯೇ ಇಲ್ಲ ಎಂದರೆ, ಇನ್ನು ಕೆಲವರು ಕೊವಿಡ್​ಗೆ ಮಾತ್ರವಲ್ಲದೇ, ನ್ಯುಮೋನಿಯಾ ರೋಗಿಗಳಿಗೂ ರೆಮ್​ಡೆಸಿವಿರ್​ ಬರೆದುಕೊಡುತ್ತಿದ್ದಾರೆ. ವೈದ್ಯರ ಈ ನಡೆಯಿಂದ ರೋಗಿಗಳು ಹಾಗೂ ಅವರ ಕುಟುಂಬಸ್ಥರು ಸಹಜವಾಗಿ ಗೊಂದಲಕ್ಕೀಡಾಗಿದ್ದಾರೆ.

ರೆಮ್​ಡೆಸಿವಿರ್​ ಬಳಕೆ ಬಗ್ಗೆ ಮಾತನಾಡುವ ಕೆಲ ವೈದ್ಯರು, ಇದು ಮೊದಲ ಅಲೆಯಲ್ಲಿ ನಿಸ್ಸಂದೇಹವಾಗಿ ಹಲವರ ಜೀವ ಉಳಿಸಿದೆ. ಆದರೆ, ಈ ಬಾರಿ ಸೋಂಕಿತರನ್ನು ಗುಣಪಡಿಸುವಲ್ಲಿ ಅಷ್ಟು ಪರಿಣಾಮಕಾರಿ ಎನಿಸುತ್ತಿಲ್ಲ. ಬಹುಮುಖ್ಯವಾಗಿ ಸರ್ಕಾರವೇ ಕಳೆದ ಬಾರಿ ರೆಮ್​ಡೆಸಿವಿರ್​ ಬಗ್ಗೆ ಹೆಚ್ಚು ಒತ್ತು ನೀಡಿತ್ತು. ಅದರಿಂದಾಗಿ ಜನರಿಗೆ ರೆಮ್​ಡೆಸಿವಿರ್ ಜೀವರಕ್ಷಕ ಎಂಬ ಭಾವನೆ ಬೇರೂರಿದೆ. ಈಗ ರೆಮ್​ಡೆಸಿವಿರ್ ಉಪಯೋಗಕ್ಕೆ ಬರುವುದಿಲ್ಲ ಎಂದರೆ ಜನರು ವೈದ್ಯರ ಮೇಲೆಯೇ ಅನುಮಾನ ಪಡುತ್ತಾರೆ. ಎರಡನೇ ಅಲೆಯ ಸೋಂಕು ವಿಭಿನ್ನವಾಗಿ ವರ್ತಿಸುತ್ತಿರುವುದರಿಂದ ರೆಮ್​ಡೆಸಿವಿರ್​ ಚುಚ್ಚುಮದ್ದನ್ನೇ ನಂಬಿಕೊಂಡಿರಲು ಸಾಧ್ಯವಿಲ್ಲ ಎನ್ನುತ್ತಾರೆ.

ಆದರೆ, ಇನ್ನು ಕೆಲ ವೈದ್ಯರು ಕೊರೊನಾ ಸೋಂಕಿನಿಂದ ಉಸಿರಾಟದ ಸಮಸ್ಯೆಗೆ ತುತ್ಥಾಗಿ ಗಂಭೀರ ಸ್ಥಿತಿ ತಲುಪಿದವರಿಗೆ ರೆಮ್​ಡೆಸಿವಿರ್ ಅನಿವಾರ್ಯ. ಕೆಲವರು ಸ್ಟಿರಾಯ್ಡ್ ಬಳಸುವಂತೆ ಸೂಚನೆ ನೀಡುತ್ತರಾದರೂ ಅದು ಮಧುಮೇಹದ ಮಟ್ಟವನ್ನು ಏರಿಳಿತ ಮಾಡುವುದರಿಂದ ಅಷ್ಟೊಂದು ಸುರಕ್ಷಿತವಲ್ಲ ಎನ್ನುವ ಮೂಲಕ ರೆಮ್​ಡೆಸಿವಿರ್ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಇದಕ್ಕೆ ವ್ಯತಿರಿಕ್ತವಾಗಿ ರೆಮ್​ಡೆಸಿವಿರ್ ಬಳಕೆಗೆ ಸಹಮತ ವ್ಯಕ್ತಪಡಿಸುವವರ ಬಗ್ಗೆ ಗಂಭೀರ ಆರೋಪಗಳೂ ಇದ್ದು, ಇದೆಲ್ಲಾ ಹಣಕ್ಕಾಗಿ ಮಾಡುತ್ತಿರುವುದು ಎಂದು ಕೆಲವರು ದೂಷಿಸುತ್ತಾರೆ. ಕೊವಿಡ್​ ಅಲ್ಲದೇ ನ್ಯುಮೋನಿಯಾ ರೋಗಿಗಳಿಗೂ ರೆಮ್​ಡೆಸಿವಿರ್​ ನೀಡಲು ಹೇಳುತ್ತಿರುವುದು ಕೇವಲ ಹಣದ ದೃಷ್ಟಿಯಿಂದ ಎಂಬ ಮಾತುಗಳು ಕೇಳಿಬರುತ್ತಿವೆ. ವೈದ್ಯರ ನಡುವೆಯೇ ಇರುವ ಈ ಭಿನ್ನಾಭಿಪ್ರಾಯಗಳಿಂದಾಗಿ ಜನರಲ್ಲಿ ಯಾರನ್ನು ನಂಬಬೇಕು, ಯಾರು ಸತ್ಯ ಹೇಳುತ್ತಿದ್ದಾರೆ, ಯಾರು ಮೋಸ ಮಾಡುತ್ತಿದ್ದಾರೆ ಎಂಬ ಗೊಂದಲ ಮೂಡಿದೆ.

ಇದನ್ನೂ ಓದಿ: Covid Helpline Numbers: ಆಕ್ಸಿಜನ್​, ರೆಮ್​ಡೆಸಿವರ್​ ಬೇಕಾದಲ್ಲಿ ಈ ಸಂಖ್ಯೆಗಳನ್ನು ಸಂಪರ್ಕಿಸಿ 

25 ಮಂದಿಗೆ ರೆಮ್​ಡೆಸಿವರ್​ಗೆ ವೈದ್ಯರ ಸೂಚನೆ; ಬೆಂಗಳೂರಿನ ಕಿಮ್ಸ್ ಆಸ್ಪತ್ರೆ ಬಳಿ ಕುಟುಂಬಸ್ಥರ ಆಕ್ರೋಶ

ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?