AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯದಲ್ಲಿ ಸಮುದಾಯದಲ್ಲಿ ಕೊರೊನಾ ಹರಡುವಿಕೆ: ಸಿರೊ ಸಮೀಕ್ಷೆ ಪ್ರಕಟ, ದೀಪಾವಳಿ ಕಂಟಕ ತರುತ್ತ?

ಬೆಂಗಳೂರು: ಕೋವಿಡ್-19 ಸಿರೊ-ಸಮೀಕ್ಷೆ ಬಗ್ಗೆ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಸುದ್ದಿಗೋಷ್ಠಿ ನಡೆಸಿದ್ದಾರೆ. ಸಭೆಯಲ್ಲಿ ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ, ನಿರ್ದೇಶಕ ಡಾ. ಪಾಟೀಲ್ ಓಂ ಪ್ರಕಾಶ್, ಸಾಂಕ್ರಾಮಿಕ ಸೋಂಕು ಶಾಸ್ತ್ರಜ್ಞ ಗಿರಿಧರ್ ಬಾಬು ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಇನ್ನು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುಧಾಕರ್, ಸೆರೊ ಸರ್ವೆಗೆ ಸಭೆಯನ್ನ ಮಾಡಿದ್ವಿ. ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಬಗ್ಗೆ ಸರ್ವೆ ಮಾಡಲಾಗಿದೆ. ಸಮುದಾಯದಲ್ಲಿ ಯಾವ ರೀತಿ ಹರಡ್ತಿದೆ ಅನ್ನೋದನ್ನ ತಿಳಿದುಕೊಳ್ಳಲು ಈ ಸರ್ವೆ ಮಾಡಲಾಗಿದೆ. ಮಹಾರಾಷ್ಟ್ರ, ರಾಜ್ಯದ […]

ರಾಜ್ಯದಲ್ಲಿ ಸಮುದಾಯದಲ್ಲಿ ಕೊರೊನಾ ಹರಡುವಿಕೆ: ಸಿರೊ ಸಮೀಕ್ಷೆ ಪ್ರಕಟ, ದೀಪಾವಳಿ ಕಂಟಕ ತರುತ್ತ?
ವೈದ್ಯಕೀಯ ಸಚಿವ ಡಾ. ಸುಧಾಕರ್
ಆಯೇಷಾ ಬಾನು
|

Updated on:Nov 04, 2020 | 1:09 PM

Share

ಬೆಂಗಳೂರು: ಕೋವಿಡ್-19 ಸಿರೊ-ಸಮೀಕ್ಷೆ ಬಗ್ಗೆ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಸುದ್ದಿಗೋಷ್ಠಿ ನಡೆಸಿದ್ದಾರೆ. ಸಭೆಯಲ್ಲಿ ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ, ನಿರ್ದೇಶಕ ಡಾ. ಪಾಟೀಲ್ ಓಂ ಪ್ರಕಾಶ್, ಸಾಂಕ್ರಾಮಿಕ ಸೋಂಕು ಶಾಸ್ತ್ರಜ್ಞ ಗಿರಿಧರ್ ಬಾಬು ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.

ಇನ್ನು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುಧಾಕರ್, ಸೆರೊ ಸರ್ವೆಗೆ ಸಭೆಯನ್ನ ಮಾಡಿದ್ವಿ. ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಬಗ್ಗೆ ಸರ್ವೆ ಮಾಡಲಾಗಿದೆ. ಸಮುದಾಯದಲ್ಲಿ ಯಾವ ರೀತಿ ಹರಡ್ತಿದೆ ಅನ್ನೋದನ್ನ ತಿಳಿದುಕೊಳ್ಳಲು ಈ ಸರ್ವೆ ಮಾಡಲಾಗಿದೆ. ಮಹಾರಾಷ್ಟ್ರ, ರಾಜ್ಯದ ಎಲ್ಲ ಜಿಲ್ಲೆ, ಬೆಂಗಳೂರಿನ 8 ವಲಯಗಳಲ್ಲಿ ಸಮೀಕ್ಷೆ ಮಾಡಿದ್ದು ತಮಿಳುನಾಡು, ದೆಹಲಿಯಲ್ಲೂ ಈ ಸರ್ವೆ ಮಾಡಲಾಗಿದೆ.

ನಾವು ಸೆಪ್ಟೆಂಬರ್ 3 ರಿಂದ 16 ರವರೆ ಸರ್ವೆ ಮಾಡಿದ್ದೀವಿ. ಬೇರೆ ರಾಜ್ಯದವರು ಕೇವಲ ಅವರ ಮೆಟ್ರೋ ಪಾಲಿಟನ್ ಸಿಟಿಗಳಲ್ಲಿ ಮಾತ್ರ ಮಾಡಿದ್ದಾರೆ. ಆದರೆ ನಾವು ರಾಜ್ಯದ ಎಲ್ಲಾ ಕಡೆ ಮಾಡಿದ್ದೇವೆ. ರಾಜ್ಯದಲ್ಲಿ 16,585 ಮಂದಿಯನ್ನ ಸರ್ವೆಗೆ ಒಳಪಡಿಸಿದ್ವಿ ಅದರಲ್ಲಿ 15,624 ಮಂದಿಯ ಫಲಿತಾಂಶ ಬಂದಿದೆ ಎಂದು ತಿಳಿಸಿದ್ರು.

ರಾಜ್ಯದಲ್ಲಿ 27.3% ಮಂದಿಗೆ ಕೊರೊನಾ: ಕಡಿಮೆ ರಿಸ್ಕ್ ಇರುವವರನ್ನ ಮೊದಲು ಸರ್ವೆ ಮಾಡಲಾಯ್ತು. ನಂತರ ಮಾಡರೇಟ್ ರಿಸ್ಕ್ ಇರುವ ಕಡೆ ಅಂದರೆ ಮಾಲ್​ಗಳು, ರೈಲು & ಬಸ್​ ನಿಲ್ದಾಣಗಳಲ್ಲಿ ಕೆಲಸ ಮಾಡುವವರ ಸರ್ವೆ ಮಾಡಲಾಯಿತು. ಬಳಿಕ ಸಿವಿಯರ್ ರಿಸ್ಕ್​ ಸೇರಿದಂತೆ ಐಸಿಎಂಆರ್ ಮಾರ್ಗಸೂಚಿಯಂತೆ ಮೂರು ವಿಧದಲ್ಲಿ ಸರ್ವೆ ಮಾಡಲಾಗಿದೆ.

ಆ್ಯಂಟಿಜನ್ ಟೆಸ್ಟ್, RTPCR ಟೆಸ್ಟ್ ಹಾಗೂ ಆ್ಯಂಟಿಬಾಡಿ ಟೆಸ್ಟ್ ಮಾಡಲಾಗಿದೆ. ಆ್ಯಂಟಿಬಾಡಿ ಟೆಸ್ಟ್​ನಿಂದ ಕೊರೊನಾ ಬಂದು ಹೋಗಿರುವುದರ ಬಗ್ಗೆ ಗೊತ್ತಾಗುತ್ತೆ. ಹೀಗಾಗಿ ಸಮಗ್ರವಾಗಿ ವೈಜ್ಞಾನಿಕವಾಗಿ ಸರ್ವೆಯನ್ನು ನಮ್ಮ ಕಮಿಟಿ ಮಾಡಿದೆ. ರಾಜ್ಯದಲ್ಲಿ 15,624 ಮಂದಿ ಫಲಿತಾಂಶದಲ್ಲಿ ಆ್ಯಂಟಿಬಾಡಿ ಬಂದಿರುವವರ ಪ್ರಮಾಣ 16.4 ಇದೆ.

ಹಾಗೂ ದೆಹಲಿಯಲ್ಲಿ ಇದರ ಪ್ರಮಾಣ 21.9 ಪರ್ಸೆಂಟ್ ಇದೆ. ದೆಹಲಿಯ ಸ್ಲಂಗಳಲ್ಲಿ 57 ಪರ್ಸೆಂಟ್ ಆ್ಯಂಟಿಬಾಡಿ ಬಂದಿದೆ. ಕರ್ನಾಟಕದಲ್ಲಿ 16.4 ಪರ್ಸೆಂಟ್ ಇದೆ. ಆ್ಯಂಟಿಜನ್ ಅಂಡ್ ಆರ್​ಟಿಪಿಸಿಆರ್ ರಾಜ್ಯದಲ್ಲಿ ಸಕ್ರಿಯ ಸೋಂಕಿತರ ಪ್ರಮಾಣ 12.7 ಇದೆ. ರಾಜ್ಯದಲ್ಲಿ 27.3 ಪರ್ಸೆಂಟ್ ಮಂದಿಗೆ ಕೊರೊನಾ ಬಂದಿದೆ. ಹಾಗೂ ರಾಜ್ಯದ ಒಟ್ಟು ಮರಣ ಪ್ರಮಾಣ 0.05 ನಷ್ಟಿದೆ. ದೆಹಲಿಯಲ್ಲಿ 0.09 ಪರ್ಸೆಂಟ್ ಇದೆ ಎಂದು ಹೇಳಿದ್ದಾರೆ.

ಕೊರೊನಾ ಪ್ರಮಾಣ ಎಷ್ಟಿದೆ ಎಂದು ಅಂದಾಜಿಗೆ ಸಮಿತಿ: ಇನ್ನು ಕೊರೊನಾ ಪ್ರಮಾಣ ಎಷ್ಟಿದೆ ಎಂದು ಅಂದಾಜಿಗೆ ಸಮಿತಿ ಮಾಡಲಾಗಿದ್ದು ಅದರಲ್ಲಿ ನಿಮ್ಹಾನ್ಸ್, ಬಿಎಂಸಿಆರ್, PHFI ಸೇರಿ ಹಲವು ಸಂಸ್ಥೆಗಳು ಸೇರಿಕೊಂಡಿವೆ. ಡಿಸೆಂಬರ್ ಅಂತ್ಯದಲ್ಲಿ ಹಾಗೂ ಫೆಬ್ರವರಿ ಅಥವಾ ಮಾರ್ಚ್​ನಲ್ಲಿ ಮತ್ತೊಮ್ಮೆ ಸರ್ವೆ ಮಾಡಿಸಲು ತೀರ್ಮಾನ ಮಾಡಲಾಗಿದೆ. ಅನೇಕ ಪರಿಣಿತರು ಚೆನ್ನಾಗಿ ಕೆಲಸ ಮಾಡಿದ್ದಾರೆ. ಬಳ್ಳಾರಿಯಲ್ಲಿ 43.1 ನಷ್ಟು ಸೋಂಕಿತರ ಪ್ರಮಾಣವಿದೆ. ಬೆಂಗಳೂರಿನಲ್ಲಿ 29 ಪರ್ಸೆಂಟ್ ಸೋಂಕಿತರ ಪ್ರಮಾಣವಿದೆ. ಬೆಂಗಳೂರು ಪಶ್ವಿಮದಲ್ಲಿ 45 ಪರ್ಸೆಂಟ್ ಸೋಂಕಿತರ ಪ್ರಮಾಣವಿದೆ.

ಈ ಸರ್ವೆ ಪ್ರಕಾರ ತಿಳಿಯುವುದೇನೆಂದರೆ ರಾಜ್ಯದಲ್ಲಿ ಜನರಿಗೆ ಹೆಚ್ಚಿನ ಇಮ್ಯೂನಿಟಿ ಸಮಸ್ಯೆ ಇದೆ. ಹೀಗಾಗಿ ಸೋಂಕು ಬಂದು ಹೋದವರಿಗೂ ಮತ್ತೆ ಸೋಂಕು ವಕ್ಕರಿಸಬಹುದು. ಹಾಗೂ ಹೊಸದಾಗಿ ಸೋಂಕಿತರ ಸಂಖ್ಯೆ ಹೆಚ್ಚಾಗಬಹುದು. ಹೀಗಾಗಿ ಈ ಬಾರಿ ದೀಪಾವಳಿಯನ್ನು ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಸುರಕ್ಷಿತವಾಗಿ ಆಚರಿಸಿ. ಇಲ್ಲದಿದ್ದರೆ ರಾಜ್ಯದಲ್ಲಿ ಮತ್ತೆ ಕೊರೊನಾ ಅಬ್ಬರ ಹೆಚ್ಚಾಗುವ ಸಾಧ್ಯತೆ ಇದೆ.

Published On - 12:52 pm, Wed, 4 November 20

ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!