AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

11 ತಿಂಗಳ ಕಂದನಿಗೆ ಇಡೀ ವಿಶ್ವವೇ ಬೆಚ್ಚುವಂತಾ ಸಮಸ್ಯೆ! ಮಗು ಬದುಕುಳಿಯಲು 16 ಕೋಟಿ ರೂ. ಬೇಕು..

TV9 Campaign ಮಕ್ಕಳಂದ್ರೆ ಹೆತ್ತವರಿಗೆ ಖುಷಿ.. ನೋವು ಮರೆಸೋ ಚಿಲುಮೆ.. ಮಗು ಮನೆಯಲ್ಲಿ ಆಡ್ತಿದ್ರೆ ತಂದೆ-ತಾಯಿಯ ನೋವೇ ಮಾಯವಾಗಿಬಿಡುತ್ತೆ. ಆದ್ರೆ, ಈ ದಂಪತಿಯ ಬಾಳಲ್ಲಿ ಹಾಗಾಗಿಲ್ಲ. ಮಗುವಿನ ಜೊತೆ ದೇವರು ಯಾರಿಂದಲೂ ಎದುರಿಸಲಾಗದಂಥಾ ನೋವು ಕೊಟ್ಟಿದ್ದು, 16 ಕೋಟಿ ರೂಪಾಯಿಯ ಸಂಜೀವಿನಿಗಾಗಿ ಪುಟಾಣಿ ಜೀವ ಕೈಯಲ್ಲಿಡಿದು ಕಾಯುತ್ತಿದೆ.

11 ತಿಂಗಳ ಕಂದನಿಗೆ ಇಡೀ ವಿಶ್ವವೇ ಬೆಚ್ಚುವಂತಾ ಸಮಸ್ಯೆ! ಮಗು ಬದುಕುಳಿಯಲು 16 ಕೋಟಿ ರೂ. ಬೇಕು..
ಜನೀಶ್
ಆಯೇಷಾ ಬಾನು
|

Updated on: Feb 05, 2021 | 3:01 PM

Share

ಬೆಂಗಳೂರು: ಪುಟ್ಟ ಕಂದ.. ಪಿಳಿ ಪಿಳಿ ಕಣ್ಣು ಬಿಡುತ್ತಾ.. ಪಿಸು ಪಿಸು ನಗುತಾ.. ತುಂಟಾಟ ನೋಡ್ತಾ ಹೆತ್ತವರು ನೋವು ಮರೆತು ಖುಷಿಯಾಗಿರಬೇಕಿತ್ತು. ಜೀವನದುದ್ದಕ್ಕೂ ಹರುಷವಾಗಿ ಇರಬೇಕಿತ್ತು. ಆದ್ರೆ, ಈ ದಂಪತಿಗೆ ದೇವರು ಆ ಖುಷಿ ಅನುಭವಿಸೋ ಅವಕಾಶವನ್ನೇ ಕೊಟ್ಟಿಲ್ಲ. ಯಾಕಂದ್ರೆ, ದೇವರು ಮಗು ಕೊಟ್ಟ. ಆದ್ರೆ, ಮಗುವಿನ ಜೊತೆ ಈ ಜಗತ್ತಿನಲ್ಲಿ ಯಾರಿಗೂ ಕೊಡಲಾರದಂಥಾ ದೊಡ್ಡ ನೋವು ಕೊಟ್ಟು ಕಳಿಸಿದ್ದಾನೆ.

ಕಂದನಿಗೆ ಸ್ಪೈನಲ್ ಮಸ್ಕ್ಯೂಲರ್ ಆಟ್ರೋಪಿ ಕುತ್ತು! ಇಷ್ಟಕ್ಕೂ ಈ 11 ತಿಂಗಳ ಕಂದ ಜನೀಶ್.. ಸಂಜೀವಿನಿ ನಗರದ ನಿವಾಸಿಗಳಾಗಿರುವ ನವೀನ್​ಕುಮಾರ್-ಜ್ಯೋತಿ ದಂಪತಿ ಪುತ್ರ. ಕುಟುಂಬದ ಪರಿಸ್ಥಿತಿಯೂ ಅಷ್ಟೇನು ಚೆನ್ನಾಗಿಲ್ಲ. ಇಂಥಾದ್ರ ಮಧ್ಯೆ ಮಗುವಿಗೆ ಜೀನ್ ಸಮಸ್ಯೆ ಕಾಣಿಸಿಕೊಂಡಿದೆ. ಸ್ಪೈನಲ್ ಮಸ್ಕ್ಯೂಲರ್ ಆಟ್ರೋಪಿ ಸಮಸ್ಯೆ ಅಂದ್ರೆ, ಬೆನ್ನು ಮೂಳೆಯ ಸ್ನಾಯು ಕ್ಷೀಣತೆ ಅಂತಾ. ವೈದ್ಯಲೋಕದಲ್ಲೇ ಇದು ಅಪರೂಪದ ಸಮಸ್ಯೆ. ಈಗ ಜನೀಶ್ ಉಳಿಯಬೇಕಾದ್ರೆ ಬರೋಬ್ಬರಿ 16 ಕೋಟಿಯ ಮೆಡಿಸಿನ್ ಬೇಕಾಗಿದೆ. ಅದೂ ಅಮೆರಿಕದಲ್ಲಿ ಸಿಗುವ ಔಷಧಿಯೇ ಬೇಕು. ಇಷ್ಟೊಂದು ದುಡ್ಡು ಎಲ್ಲಿಂದ ತರೋದು ಅಂತಾ ತಂದೆ ನವೀನ್​ಕುಮಾರ್ ಕಣ್ಣೀರಿಡ್ತಿದ್ದಾರೆ.

ಲಕ್ಷಾಂತರ ಮಕ್ಕಳಲ್ಲಿ ಒಬ್ಬರಿಗೆ ಇಂಥಹ ರೋಗ ಕಾಣಿಸುತ್ತೆ. ಇಂಥಹ ಕಾಯಿಲೆ ಇರುವವರಿಗೆ, ದೇಹದ ಯಾವುದೇ ಅಂಗಾಂಗಗಳು ಕೆಲಸ ಮಾಡುವುದಿಲ್ಲ. ಉಸಿರಾಡಲೂ ಕಷ್ಟವಾಗುತ್ತೆ. ಕೈ ಕಾಲು ಕದಲಿಸೋಕೂ ಆಗಲ್ಲ. ಆಹಾರ ಸೇವಿಸಲೂ ಆಗಲ್ಲ. ತುಟಿ ಬಿಚ್ಚಿ ಮಾತಾಡೋದೂ ಕಷ್ಟ. ಇಂಥಾ ಸಮಸ್ಯೆಯಿಂದ ಬಳಲುತ್ತಿರೋ ಜನೀಶ್​ಗೆ ಸದ್ಯ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ತಂದೆ ಇನ್ಶುರೆನ್ಸ್ ಸರ್ವೆಯರ್ ಆಗಿ ಕೆಲಸ ಮಾಡುತ್ತಿದ್ದು, ಜೀವನ ನಡೆಸೋದೇ ಕಷ್ಟ. ದುಡಿಮೆಯಲ್ಲೇ ಮಗು ಉಳಿಸಿಕೊಳ್ಳೋದು ಅಸಾಧ್ಯವೇ ಸರಿ. ಹೀಗಾಗಿ, ಮಗುವನ್ನ ಉಳಿಸಿಕೊಡಿ ಅಂತಾ ತಾಯಿ ಜ್ಯೋತಿ, ಹೃದಯವಂತರ ಸಹಾಯಕ್ಕಾಗಿ ಅಂಗಲಾಚಿದ್ದಾರೆ.

ದೇವರೇ ನೀನೆಷ್ಟು ಕ್ರೂರಿ.. ಜಗತ್ತಿನ ಅರಿವೇ ಇಲ್ಲದ ಕಂದನಿಗೆ ಅದೆಂಥಾ ಕಷ್ಟ ಕೊಟ್ಟೆ ಅಂತಾ ಹೆತ್ತವರು ನಿತ್ಯ ಮರುಗುತ್ತಿದ್ದಾರೆ. ಇವರ ಈ ಮರುಕ, ಕಣ್ಣೀರು ಮಾಯವಾಗಿ ಖುಷಿಯಾಗಿರಬೇಕು ಅಂದ್ರೆ, ಈ ಕರುನಾಡಿನ ಪುಣ್ಯವಂತರು, ಹೃದಯವಂತರು, ಆಳುವ ಸರ್ಕಾರ ನೆರವಿಗೆ ಬರಬೇಕಿದೆ. ಈ ದಂಪತಿಯ ಕಣ್ಣೀರಿಗೆ ಆಸರೆಯಾಗಬೇಕಿದೆ.

ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ