AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IAS ಅಧಿಕಾರಿ ಆತ್ಮಹತ್ಯೆ, ರಾಜಕಾರಣಿಗಳ ಕಡೆ ಬೊಟ್ಟು ಮಾಡಿದ ಮಾಜಿ IPS ಅಧಿಕಾರಿ

ಬೆಂಗಳೂರು: IAS ಅಧಿಕಾರಿ ವಿಜಯ್ ಶಂಕರ್ ಆತ್ಮಹತ್ಯೆಯ ಹಿನ್ನೆಲೆಯಲ್ಲಿ ಮಾಜಿ IPS ಅಧಿಕಾರಿ ಶಂಕರ್​ ಬಿದರಿ ರಾಜ್ಯದ ಎಲ್ಲಾ ಹಿರಿಯ ಅಧಿಕಾರಿಗಳಿಗೆ ಕಿವಿಮಾತೊಂದನ್ನು ಹೇಳಿದ್ದಾರೆ. ತಮ್ಮ ಫೇಸ್​ಬುಕ್​ ಪೇಜ್​ ಪೋಸ್ಟ್​ ಒಂದರಲ್ಲಿ ಬಿದರಿ ಅವರು ಕಾನೂನು, ನಿಯಮ ಉಲ್ಲಂಘಿಸಿ ಯಾವುದೇ ಕೆಲಸ ಮಾಡಬೇಡಿ. ರಾಜಕಾರಣಿಗಳು ದಪ್ಪ ಚರ್ಮದವರು. ನಿಮ್ಮ ಗಳಿಕೆಯ ಶೇಕಡಾ 90 ರಷ್ಟನ್ನು ಕಸಿದುಕೊಳ್ಳುತ್ತಾರೆ. ಬಳಿಕ ಅವರು ನಿಮ್ಮನ್ನು ತಮ್ಮ ಗುಲಾಮರಂಥೆ ನಡೆಸಿಕೊಳ್ಳುತ್ತಾರೆ. ಆದರೆ, ಅಂತಿಮವಾಗಿ ನಿಮ್ಮೆಲ್ಲಾ ಪಾಪ ಹಾಗೂ ತಪ್ಪುಗಳಿಗೆ ನೀವೇ ಉತ್ತರಿಸಬೇಕು. ಯಾರೂ […]

IAS ಅಧಿಕಾರಿ ಆತ್ಮಹತ್ಯೆ, ರಾಜಕಾರಣಿಗಳ ಕಡೆ ಬೊಟ್ಟು ಮಾಡಿದ ಮಾಜಿ IPS ಅಧಿಕಾರಿ
KUSHAL V
| Edited By: |

Updated on:Jun 24, 2020 | 2:12 PM

Share

ಬೆಂಗಳೂರು: IAS ಅಧಿಕಾರಿ ವಿಜಯ್ ಶಂಕರ್ ಆತ್ಮಹತ್ಯೆಯ ಹಿನ್ನೆಲೆಯಲ್ಲಿ ಮಾಜಿ IPS ಅಧಿಕಾರಿ ಶಂಕರ್​ ಬಿದರಿ ರಾಜ್ಯದ ಎಲ್ಲಾ ಹಿರಿಯ ಅಧಿಕಾರಿಗಳಿಗೆ ಕಿವಿಮಾತೊಂದನ್ನು ಹೇಳಿದ್ದಾರೆ. ತಮ್ಮ ಫೇಸ್​ಬುಕ್​ ಪೇಜ್​ ಪೋಸ್ಟ್​ ಒಂದರಲ್ಲಿ ಬಿದರಿ ಅವರು ಕಾನೂನು, ನಿಯಮ ಉಲ್ಲಂಘಿಸಿ ಯಾವುದೇ ಕೆಲಸ ಮಾಡಬೇಡಿ. ರಾಜಕಾರಣಿಗಳು ದಪ್ಪ ಚರ್ಮದವರು. ನಿಮ್ಮ ಗಳಿಕೆಯ ಶೇಕಡಾ 90 ರಷ್ಟನ್ನು ಕಸಿದುಕೊಳ್ಳುತ್ತಾರೆ. ಬಳಿಕ ಅವರು ನಿಮ್ಮನ್ನು ತಮ್ಮ ಗುಲಾಮರಂಥೆ ನಡೆಸಿಕೊಳ್ಳುತ್ತಾರೆ. ಆದರೆ, ಅಂತಿಮವಾಗಿ ನಿಮ್ಮೆಲ್ಲಾ ಪಾಪ ಹಾಗೂ ತಪ್ಪುಗಳಿಗೆ ನೀವೇ ಉತ್ತರಿಸಬೇಕು. ಯಾರೂ ಎಂದಿಗೂ ನಿಮಗಾಗಿ ಕಣ್ಣೀರು ಹರಿಸುವುದಿಲ್ಲ ಎಂದು ಹೇಳಿದ್ದಾರೆ.

ಜೊತೆಗೆ, ರಾಜಕಾರಣಿಗಳು ಜೈಲಿಗೆ ಹೋದಾಗ ಅವರನ್ನ ಮೆರವಣಿಗೆಯಲ್ಲಿ ಕರೆದುಕೊಂಡು ಹೋಗುತ್ತಾರೆ. ಹಿಂದಿರುಗಿದಾಗ ಪಟಾಕಿ ಸಿಡಿಸಿ, ಆರತಿ ಎತ್ತಿ ಅವರನ್ನು ಸ್ವಾಗತಿಸಲಾಗುತ್ತದೆ. ಅಂಥವರಿಗೆ ಭಯ ಪಡಬೇಡಿ, ಏಕೆಂದರೆ ಅವರಲ್ಲಿ ಕನಿಷ್ಠ 75 % ಜನರು ನೈತಿಕವಾಗಿ ದಿವಾಳಿಯಾಗಿರುವವರೇ ಎಂದು  ಬಿದರಿ ಬರೆದಿದ್ದಾರೆ.

ಜೈಲಿಗೆ ಹೋದ್ರೂ ಕಾಶಿಯಾತ್ರೆ ಅಥವಾ ತಿರುಮಲೆಗೆ ಯಾತ್ರೆ ಹೋದಂತೆ ವರ್ತಿಸುತ್ತಾರೆ. ಆದರೆ, ನೀವು ಹೆಚ್ಚಾಗಿ ಮಧ್ಯಮ ವರ್ಗದ ಕುಟುಂಬಗಳಿಂದ ಬಂದವರು. ವಿದ್ಯಾವಂತರು. ನೀವು ನಿಮ್ಮ ಗೌರವವನ್ನು ಪರಿಗಣಿಸಿ ಬಹು ಬೇಗನೆ ಅವಮಾನಕ್ಕೆ ಒಳಗಾಗುತ್ತೀರಿ. ಬಂಧನ ಮತ್ತು ವಿಚಾರಣೆಯ ಅವಮಾನವನ್ನು ನೀವು ಅನುಭವಿಸಲು ಸಾಧ್ಯವಿಲ್ಲ. ಬಹಳ ಹೆಚ್ಚಂದರೆ ರಾಜಕಾರಣಿಗಳು ನಿಮ್ಮನ್ನು ವರ್ಗಾವಣೆ ಮಾಡಬಹುದು ಅಷ್ಟೇ. ಆದ್ದರಿಂದ ದಯವಿಟ್ಟು ರಾಜಕಾರಣಿಗಳನ್ನ ಮೆಚ್ಚಿಸಲು ಕಾನೂನು ಮತ್ತು ನಿಯಮಗಳನ್ನು ಉಲ್ಲಂಘಿಸಿ ಏನನ್ನೂ ಮಾಡಬೇಡಿ ಎಂದು ಸಹ ಉಲ್ಲೇಖಿಸಿದ್ದಾರೆ.

ಅವರಿಂದ ಯಾವುದೇ ಪೋಸ್ಟಿಂಗ್‌  ಕೇಳಬೇಡಿ. ದೃಢವಾಗಿರಿ. ಯಾರೂ ನಿಮಗೆ ಏನನ್ನೂ ಮಾಡಲು ಸಾಧ್ಯವಿಲ್ಲ. ನಿಮ್ಮ ನಿಧನದ ತನಕ ನಿಮ್ಮ ವೇತನ, ಪಿಂಚಣಿ ಮತ್ತು ಕುಟುಂಬದ ಪಿಂಚಣಿಯೊಂದಿಗೆ ಸರ್ಕಾರವು ನಿಮ್ಮನ್ನು ನೋಡಿಕೊಳ್ಳಲು ಬದ್ಧವಾಗಿರುತ್ತದೆ. ಹಾಗಾಗಿ ಈ ದುರಂತದಿಂದ ನೀವು ಎಚ್ಚೆತ್ತುಕೊಳ್ಳಬೇಕು ಎಂದು ಶಂಕರ್ ಬಿದರಿ ಬುದ್ಧಿಮಾತು ಹೇಳಿದ್ದಾರೆ.

Published On - 1:57 pm, Wed, 24 June 20

‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್