AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖಾಸಗಿ ಆಸ್ಪತ್ರೆಗಳಲ್ಲೂ ಕೊರೊನಾ ಸೋಂಕಿತರಿಗೆ ಫ್ರೀ ಟ್ರೀಟ್​ಮೆಂಟ್.. ಟಿವಿ 9 ಬಿಗ್ ಇಂಪ್ಯಾಕ್ಟ್

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಸೋಂಕಿತರಿಗೆ ಫ್ರೀ ಟ್ರೀಟ್​ಮೆಂಟ್ ಕೊಡಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ಇನ್ಮುಂದೆ ಖಾಸಗಿ ಆಸ್ಪತ್ರೆಗಳಲ್ಲೂ ಕೂಡಾ ಕೊರೊನಾ ಟ್ರೀಟ್​ಮೆಂಟ್ ಫ್ರೀ ಆಗಿದೆ. ರೋಗಿಯ ಎಲ್ಲಾ ಖರ್ಚು ವೆಚ್ಚವನ್ನ ಸರ್ಕಾರವೇ ಭರಿಸಲು ತೀರ್ಮಾನ ಕೈಗೊಂಡಿದೆ. ಕರ್ನಾಟಕದಲ್ಲಿ ಪ್ರತಿಯೊಬ್ಬ ಕೊರೊನಾ ಸೋಂಕಿತರಿಗೂ ಫ್ರೀ ಟ್ರೀಟ್​ಮೆಂಟ್ ಸಿಗಬೇಕೆಂದು ಟಿವಿ9 ಆಗ್ರಹಿಸಿತ್ತು. ಸೋಂಕಿತರಲ್ಲಿ ಭೇದ ಭಾವ ಬೇಡ ಎಲ್ಲರಿಗೂ ಸಮವಾಗಿ ನೋಡಿ. ಎಲ್ಲರಿಗೂ ಫ್ರೀ ಟ್ರೀಟ್​ಮೆಂಟ್ ಸಿಗಬೇಕೆಂದು ಟಿವಿ9 ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಆರೋಗ್ಯ ಸಚಿವ ಶ್ರೀರಾಮುಲು ಹಾಗೂ ವೈದ್ಯಕೀಯ […]

ಖಾಸಗಿ ಆಸ್ಪತ್ರೆಗಳಲ್ಲೂ ಕೊರೊನಾ ಸೋಂಕಿತರಿಗೆ ಫ್ರೀ ಟ್ರೀಟ್​ಮೆಂಟ್.. ಟಿವಿ 9 ಬಿಗ್ ಇಂಪ್ಯಾಕ್ಟ್
ಆಯೇಷಾ ಬಾನು
| Edited By: |

Updated on:Jun 22, 2020 | 7:21 AM

Share

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಸೋಂಕಿತರಿಗೆ ಫ್ರೀ ಟ್ರೀಟ್​ಮೆಂಟ್ ಕೊಡಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ಇನ್ಮುಂದೆ ಖಾಸಗಿ ಆಸ್ಪತ್ರೆಗಳಲ್ಲೂ ಕೂಡಾ ಕೊರೊನಾ ಟ್ರೀಟ್​ಮೆಂಟ್ ಫ್ರೀ ಆಗಿದೆ. ರೋಗಿಯ ಎಲ್ಲಾ ಖರ್ಚು ವೆಚ್ಚವನ್ನ ಸರ್ಕಾರವೇ ಭರಿಸಲು ತೀರ್ಮಾನ ಕೈಗೊಂಡಿದೆ.

ಕರ್ನಾಟಕದಲ್ಲಿ ಪ್ರತಿಯೊಬ್ಬ ಕೊರೊನಾ ಸೋಂಕಿತರಿಗೂ ಫ್ರೀ ಟ್ರೀಟ್​ಮೆಂಟ್ ಸಿಗಬೇಕೆಂದು ಟಿವಿ9 ಆಗ್ರಹಿಸಿತ್ತು. ಸೋಂಕಿತರಲ್ಲಿ ಭೇದ ಭಾವ ಬೇಡ ಎಲ್ಲರಿಗೂ ಸಮವಾಗಿ ನೋಡಿ. ಎಲ್ಲರಿಗೂ ಫ್ರೀ ಟ್ರೀಟ್​ಮೆಂಟ್ ಸಿಗಬೇಕೆಂದು ಟಿವಿ9 ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಆರೋಗ್ಯ ಸಚಿವ ಶ್ರೀರಾಮುಲು ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್​ಗೂ ನೇರವಾಗಿ ಆಗ್ರಹಿಸಿತ್ತು. ಈ ಎಲ್ಲ ಆಗ್ರಹಗಳಿಗೆ ಮಣಿದ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಜೂನ್ 19 ರಂದೇ ಸಚಿವ ಶ್ರೀರಾಮುಲು ರಾಜ್ಯದಲ್ಲಿ ಫ್ರೀ ಟ್ರೀಟ್​ಮೆಂಟ್ ಕೊಡುವ ಭರವಸೆ ನೀಡಿದ್ದರು. ಕೊಟ್ಟ ಮಾತು ಉಳಿಸಿಕೊಂಡ ಸಚಿವ ಶ್ರೀರಾಮುಲು ಹಾಗೂ ನಮ್ಮ ಆಗ್ರಹಗಳನ್ನ ಜಾರಿಗೆ ತಂದ ಸರ್ಕಾರಕ್ಕೆ ಟಿವಿ9 ಅಭಿನಂದನೆ ಸಲ್ಲಿಸುತ್ತಿದೆ.

ರಾಜ್ಯದಲ್ಲಿ ಯಾರಿಗೆಲ್ಲ ಫ್ರೀ ಟ್ರೀಟ್​ಮೆಂಟ್ ಸಿಗುತ್ತೆ? ರಾಜ್ಯದ ಮುಕ್ಕಾಲು ಪಾಲು ಜನರಿಗೆ ಈ ಸೌಲಭ್ಯ ಸಿಗಲಿದೆ. ರಾಜ್ಯದ ಬರೋಬ್ಬರಿ 4 ಕೋಟಿ 20 ಲಕ್ಷ ಜನರು ಈ ಸೌಲಭ್ಯ ಪಡೆಯಬಹುದು. ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಚಿಕಿತ್ಸೆ ಸಂಪೂರ್ಣ ಉಚಿತ. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಅಡಿಯಲ್ಲಿನ ಆಸ್ಪತ್ರೆಯಲ್ಲಿ ಫ್ರೀ ಚಿಕಿತ್ಸೆ ನೀಡಲಾಗುತ್ತೆ.

ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಸ್ಕೀಂ ಅಡಿಯಲ್ಲಿ ಫ್ರೀ ಚಿಕಿತ್ಸೆ ನೀಡಲಾಗುತ್ತೆ. ಕರ್ನಾಟಕದಲ್ಲಿ 1 ಕೋಟಿ 37 ಲಕ್ಷ ಬಿಪಿಎಲ್ ಕಾರ್ಡ್ ಹೊಂದಿರೋ ಕುಟುಂಬಗಳಿವೆ. ಈ ಕುಟುಂಬಗಳಲ್ಲಿ 4 ಕೋಟಿ 20 ಲಕ್ಷ ಜನರಿದ್ದಾರೆ. ಇವರಲ್ಲಿ ಯಾರಿಗಾದ್ರು ಸೋಂಕು ತಗುಲಿದ್ರೆ ಅವರಿಗೆ ಫ್ರೀ ಟ್ರೀಟ್​ಮೆಂಟ್ ನೀಡಲಾಗುತ್ತೆ.

ಇನ್ನು ರಾಜ್ಯದಲ್ಲಿ ಎಪಿಎಲ್​ ಕಾರ್ಡ್​ದಾರರಿಗೂ ಫ್ರೀ ಟ್ರೀಟ್ಮೆಂಟ್ ಸಿಗುವ ನಿರೀಕ್ಷೆ ಇದೆ. ರಾಜ್ಯದಲ್ಲಿ 20 ಲಕ್ಷ ಎಪಿಎಲ್ ಕಾರ್ಡ್ ಹೊಂದಿರೋ ಕುಟುಂಬಗಳಿವೆ. 72 ಲಕ್ಷ ಜನ ಎಪಿಎಲ್ ಕಾರ್ಡ್​ನ ಸೌಲಭ್ಯಗಳಿಗೆ ಒಳಪಡ್ತಾರೆ. ಹೀಗಾಗಿ ಕರ್ನಾಟಕದಲ್ಲಿರೋ ಎಪಿಎಲ್ ಕಾರ್ಡ್​ದಾರರಿಗೂ ಸೌಲಭ್ಯ ಸಿಗೋ ಸಾಧ್ಯತೆ ಇದೆ. ಸದ್ಯ ಸರ್ಕಾರ ಶೇ.30ರಷ್ಟು ಮತ್ತು ಕಾರ್ಡ್​​ದಾರರು ಶೇ.70 ರಷ್ಟು ಚಿಕಿತ್ಸಾ ವೆಚ್ಚ ಭರಿಸ್ತಿದ್ದಾರೆ. ಕೊರೊನಾ ಸಮಯದಲ್ಲಿ APL ಕಾರ್ಡ್​ದಾರರಿಗೆ ಹಾಗೂ ಕಾರ್ಡ್ ಇಲ್ಲದವರಿಗೆ ಫ್ರೀ ಟ್ರೀಟ್​ಮೆಂಟ್​ ನೀಡೋ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ.

Published On - 2:34 pm, Sun, 21 June 20

Follow Us
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ