AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖಾಸಗಿ ಆಸ್ಪತ್ರೆಗಳಲ್ಲೂ ಕೊರೊನಾ ಸೋಂಕಿತರಿಗೆ ಫ್ರೀ ಟ್ರೀಟ್​ಮೆಂಟ್.. ಟಿವಿ 9 ಬಿಗ್ ಇಂಪ್ಯಾಕ್ಟ್

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಸೋಂಕಿತರಿಗೆ ಫ್ರೀ ಟ್ರೀಟ್​ಮೆಂಟ್ ಕೊಡಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ಇನ್ಮುಂದೆ ಖಾಸಗಿ ಆಸ್ಪತ್ರೆಗಳಲ್ಲೂ ಕೂಡಾ ಕೊರೊನಾ ಟ್ರೀಟ್​ಮೆಂಟ್ ಫ್ರೀ ಆಗಿದೆ. ರೋಗಿಯ ಎಲ್ಲಾ ಖರ್ಚು ವೆಚ್ಚವನ್ನ ಸರ್ಕಾರವೇ ಭರಿಸಲು ತೀರ್ಮಾನ ಕೈಗೊಂಡಿದೆ. ಕರ್ನಾಟಕದಲ್ಲಿ ಪ್ರತಿಯೊಬ್ಬ ಕೊರೊನಾ ಸೋಂಕಿತರಿಗೂ ಫ್ರೀ ಟ್ರೀಟ್​ಮೆಂಟ್ ಸಿಗಬೇಕೆಂದು ಟಿವಿ9 ಆಗ್ರಹಿಸಿತ್ತು. ಸೋಂಕಿತರಲ್ಲಿ ಭೇದ ಭಾವ ಬೇಡ ಎಲ್ಲರಿಗೂ ಸಮವಾಗಿ ನೋಡಿ. ಎಲ್ಲರಿಗೂ ಫ್ರೀ ಟ್ರೀಟ್​ಮೆಂಟ್ ಸಿಗಬೇಕೆಂದು ಟಿವಿ9 ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಆರೋಗ್ಯ ಸಚಿವ ಶ್ರೀರಾಮುಲು ಹಾಗೂ ವೈದ್ಯಕೀಯ […]

ಖಾಸಗಿ ಆಸ್ಪತ್ರೆಗಳಲ್ಲೂ ಕೊರೊನಾ ಸೋಂಕಿತರಿಗೆ ಫ್ರೀ ಟ್ರೀಟ್​ಮೆಂಟ್.. ಟಿವಿ 9 ಬಿಗ್ ಇಂಪ್ಯಾಕ್ಟ್
ಆಯೇಷಾ ಬಾನು
| Edited By: |

Updated on:Jun 22, 2020 | 7:21 AM

Share

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಸೋಂಕಿತರಿಗೆ ಫ್ರೀ ಟ್ರೀಟ್​ಮೆಂಟ್ ಕೊಡಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ಇನ್ಮುಂದೆ ಖಾಸಗಿ ಆಸ್ಪತ್ರೆಗಳಲ್ಲೂ ಕೂಡಾ ಕೊರೊನಾ ಟ್ರೀಟ್​ಮೆಂಟ್ ಫ್ರೀ ಆಗಿದೆ. ರೋಗಿಯ ಎಲ್ಲಾ ಖರ್ಚು ವೆಚ್ಚವನ್ನ ಸರ್ಕಾರವೇ ಭರಿಸಲು ತೀರ್ಮಾನ ಕೈಗೊಂಡಿದೆ.

ಕರ್ನಾಟಕದಲ್ಲಿ ಪ್ರತಿಯೊಬ್ಬ ಕೊರೊನಾ ಸೋಂಕಿತರಿಗೂ ಫ್ರೀ ಟ್ರೀಟ್​ಮೆಂಟ್ ಸಿಗಬೇಕೆಂದು ಟಿವಿ9 ಆಗ್ರಹಿಸಿತ್ತು. ಸೋಂಕಿತರಲ್ಲಿ ಭೇದ ಭಾವ ಬೇಡ ಎಲ್ಲರಿಗೂ ಸಮವಾಗಿ ನೋಡಿ. ಎಲ್ಲರಿಗೂ ಫ್ರೀ ಟ್ರೀಟ್​ಮೆಂಟ್ ಸಿಗಬೇಕೆಂದು ಟಿವಿ9 ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಆರೋಗ್ಯ ಸಚಿವ ಶ್ರೀರಾಮುಲು ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್​ಗೂ ನೇರವಾಗಿ ಆಗ್ರಹಿಸಿತ್ತು. ಈ ಎಲ್ಲ ಆಗ್ರಹಗಳಿಗೆ ಮಣಿದ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಜೂನ್ 19 ರಂದೇ ಸಚಿವ ಶ್ರೀರಾಮುಲು ರಾಜ್ಯದಲ್ಲಿ ಫ್ರೀ ಟ್ರೀಟ್​ಮೆಂಟ್ ಕೊಡುವ ಭರವಸೆ ನೀಡಿದ್ದರು. ಕೊಟ್ಟ ಮಾತು ಉಳಿಸಿಕೊಂಡ ಸಚಿವ ಶ್ರೀರಾಮುಲು ಹಾಗೂ ನಮ್ಮ ಆಗ್ರಹಗಳನ್ನ ಜಾರಿಗೆ ತಂದ ಸರ್ಕಾರಕ್ಕೆ ಟಿವಿ9 ಅಭಿನಂದನೆ ಸಲ್ಲಿಸುತ್ತಿದೆ.

ರಾಜ್ಯದಲ್ಲಿ ಯಾರಿಗೆಲ್ಲ ಫ್ರೀ ಟ್ರೀಟ್​ಮೆಂಟ್ ಸಿಗುತ್ತೆ? ರಾಜ್ಯದ ಮುಕ್ಕಾಲು ಪಾಲು ಜನರಿಗೆ ಈ ಸೌಲಭ್ಯ ಸಿಗಲಿದೆ. ರಾಜ್ಯದ ಬರೋಬ್ಬರಿ 4 ಕೋಟಿ 20 ಲಕ್ಷ ಜನರು ಈ ಸೌಲಭ್ಯ ಪಡೆಯಬಹುದು. ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಚಿಕಿತ್ಸೆ ಸಂಪೂರ್ಣ ಉಚಿತ. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಅಡಿಯಲ್ಲಿನ ಆಸ್ಪತ್ರೆಯಲ್ಲಿ ಫ್ರೀ ಚಿಕಿತ್ಸೆ ನೀಡಲಾಗುತ್ತೆ.

ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಸ್ಕೀಂ ಅಡಿಯಲ್ಲಿ ಫ್ರೀ ಚಿಕಿತ್ಸೆ ನೀಡಲಾಗುತ್ತೆ. ಕರ್ನಾಟಕದಲ್ಲಿ 1 ಕೋಟಿ 37 ಲಕ್ಷ ಬಿಪಿಎಲ್ ಕಾರ್ಡ್ ಹೊಂದಿರೋ ಕುಟುಂಬಗಳಿವೆ. ಈ ಕುಟುಂಬಗಳಲ್ಲಿ 4 ಕೋಟಿ 20 ಲಕ್ಷ ಜನರಿದ್ದಾರೆ. ಇವರಲ್ಲಿ ಯಾರಿಗಾದ್ರು ಸೋಂಕು ತಗುಲಿದ್ರೆ ಅವರಿಗೆ ಫ್ರೀ ಟ್ರೀಟ್​ಮೆಂಟ್ ನೀಡಲಾಗುತ್ತೆ.

ಇನ್ನು ರಾಜ್ಯದಲ್ಲಿ ಎಪಿಎಲ್​ ಕಾರ್ಡ್​ದಾರರಿಗೂ ಫ್ರೀ ಟ್ರೀಟ್ಮೆಂಟ್ ಸಿಗುವ ನಿರೀಕ್ಷೆ ಇದೆ. ರಾಜ್ಯದಲ್ಲಿ 20 ಲಕ್ಷ ಎಪಿಎಲ್ ಕಾರ್ಡ್ ಹೊಂದಿರೋ ಕುಟುಂಬಗಳಿವೆ. 72 ಲಕ್ಷ ಜನ ಎಪಿಎಲ್ ಕಾರ್ಡ್​ನ ಸೌಲಭ್ಯಗಳಿಗೆ ಒಳಪಡ್ತಾರೆ. ಹೀಗಾಗಿ ಕರ್ನಾಟಕದಲ್ಲಿರೋ ಎಪಿಎಲ್ ಕಾರ್ಡ್​ದಾರರಿಗೂ ಸೌಲಭ್ಯ ಸಿಗೋ ಸಾಧ್ಯತೆ ಇದೆ. ಸದ್ಯ ಸರ್ಕಾರ ಶೇ.30ರಷ್ಟು ಮತ್ತು ಕಾರ್ಡ್​​ದಾರರು ಶೇ.70 ರಷ್ಟು ಚಿಕಿತ್ಸಾ ವೆಚ್ಚ ಭರಿಸ್ತಿದ್ದಾರೆ. ಕೊರೊನಾ ಸಮಯದಲ್ಲಿ APL ಕಾರ್ಡ್​ದಾರರಿಗೆ ಹಾಗೂ ಕಾರ್ಡ್ ಇಲ್ಲದವರಿಗೆ ಫ್ರೀ ಟ್ರೀಟ್​ಮೆಂಟ್​ ನೀಡೋ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ.

Published On - 2:34 pm, Sun, 21 June 20

Follow Us
ಸ್ವಾಮಿ ವಿವೇಕಾನಂದರ ಕೆನಡಾ ಭೇಟಿಯನ್ನು ಉಲ್ಲೇಖಿಸಿದ ಪ್ರಧಾನಿ ಕಾರ್ನಿ
ಸ್ವಾಮಿ ವಿವೇಕಾನಂದರ ಕೆನಡಾ ಭೇಟಿಯನ್ನು ಉಲ್ಲೇಖಿಸಿದ ಪ್ರಧಾನಿ ಕಾರ್ನಿ
ದೆಹಲಿಯಲ್ಲಿ ಪ್ರಧಾನಿ ಮೋದಿಯನ್ನು ಭೇಟಿಯಾದ ಕೆನಡಾ ಪಿಎಂ ಮಾರ್ಕ್ ಕಾರ್ನಿ
ದೆಹಲಿಯಲ್ಲಿ ಪ್ರಧಾನಿ ಮೋದಿಯನ್ನು ಭೇಟಿಯಾದ ಕೆನಡಾ ಪಿಎಂ ಮಾರ್ಕ್ ಕಾರ್ನಿ
ಯುದ್ಧ ಪೀಡಿತ ಪ್ರದೇಶದಲ್ಲಿರೋ ಕನ್ನಡಿಗರ ಬಗ್ಗೆ ಕುಮಾರಸ್ವಾಮಿ ಶಾಕಿಂಗ್ ಹೇಳಿ
ಯುದ್ಧ ಪೀಡಿತ ಪ್ರದೇಶದಲ್ಲಿರೋ ಕನ್ನಡಿಗರ ಬಗ್ಗೆ ಕುಮಾರಸ್ವಾಮಿ ಶಾಕಿಂಗ್ ಹೇಳಿ
ಭಾರತ ಮತ್ತು ಇಲ್ಲಿನ ಜನರ ಪ್ರೀತಿ ಅದ್ಭುತ: ಇರಾನ್ ಮೂಲದ ಪೈಲ್ವಾನ್ ಮಿರ್ಜಾ
ಭಾರತ ಮತ್ತು ಇಲ್ಲಿನ ಜನರ ಪ್ರೀತಿ ಅದ್ಭುತ: ಇರಾನ್ ಮೂಲದ ಪೈಲ್ವಾನ್ ಮಿರ್ಜಾ
ಅಧಿಕಾರ ಹಂಚಿಕೆ ಜಟಾಪಟಿ: ಅಚ್ಚರಿಯ ಹೇಳಿಕೆ ಕೊಟ್ಟ ಸತೀಶ್​​ ಜಾರಕಿಹೊಳಿ
ಅಧಿಕಾರ ಹಂಚಿಕೆ ಜಟಾಪಟಿ: ಅಚ್ಚರಿಯ ಹೇಳಿಕೆ ಕೊಟ್ಟ ಸತೀಶ್​​ ಜಾರಕಿಹೊಳಿ
ಸಿಲಿಂಡರ್​​ ಸ್ಫೋಟಗೊಂಡು ಮನೆಗೆ ಮನೆಯೇ ಸರ್ವನಾಶ!
ಸಿಲಿಂಡರ್​​ ಸ್ಫೋಟಗೊಂಡು ಮನೆಗೆ ಮನೆಯೇ ಸರ್ವನಾಶ!
ಕುವೈತ್​ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಆವರಣದಲ್ಲಿ ಇರಾನ್ ಡ್ರೋನ್ ದಾಳಿ
ಕುವೈತ್​ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಆವರಣದಲ್ಲಿ ಇರಾನ್ ಡ್ರೋನ್ ದಾಳಿ
ಬೆಂಗಳೂರಿನಿಂದ ವಿದೇಶಕ್ಕೆ ಹೋಗಬೇಕಾದ, ಬರಬೇಕಾದ ಒಟ್ಟು 24 ವಿಮಾನ ರದ್ದು
ಬೆಂಗಳೂರಿನಿಂದ ವಿದೇಶಕ್ಕೆ ಹೋಗಬೇಕಾದ, ಬರಬೇಕಾದ ಒಟ್ಟು 24 ವಿಮಾನ ರದ್ದು
ಉಚಿತ ಗ್ಯಾರಂಟಿಗೆ ‘ಕೈ’ ಶಾಸಕರಿಂದಲೇ ಮತ್ತೆ ಅಪಸ್ವರ
ಉಚಿತ ಗ್ಯಾರಂಟಿಗೆ ‘ಕೈ’ ಶಾಸಕರಿಂದಲೇ ಮತ್ತೆ ಅಪಸ್ವರ
ಬಬಲಾದಿ ಮಠದ ಕಾಲಜ್ಞಾನ ನಿಜವಾಯಿತೇ?
ಬಬಲಾದಿ ಮಠದ ಕಾಲಜ್ಞಾನ ನಿಜವಾಯಿತೇ?