ಭೂಮಿಯ ಮೇಲಿರುವ ಕೈಲಾಸವೆಂದೇ ಕರೆಸಿಕೊಂಡಿರುವ ಗೋಕರ್ಣ, ಬೇಸಿಗೆ ರಜೆಯಲ್ಲಿ ಭೇಟಿ ನೀಡಲು ಉತ್ತಮ ತಾಣ

ಪ್ರಾಚೀನ ಕಡಲತೀರಗಳು, ಮನಸ್ಸಿಗೆ ಮುದ ನೀಡುವ ನೋಟಗಳು, ಸಾಹಸಮಯ ಚಾರಣ ಹಾದಿಗಳು, ಬೀಚ್​ಗಳು ಮತ್ತು ಪ್ರಾಚೀನ ಯಾತ್ರಾಸ್ಥಳಗಳು ಇವೆಲ್ಲವೂ ಗೋಕರ್ಣವನ್ನು ನಿಜವಾದ ಅರ್ಥದಲ್ಲಿ ವ್ಯಾಖ್ಯಾನಿಸುತ್ತವೆ. ಕಾಶಿಯಲ್ಲಿ ಪೂಜೆ ಸಲ್ಲಿಸುವುದರಿಂದ ಸಿಗುವ ಫಲಗಳಿಗೆ ಸಮನಾದ ಫಲಾಫಲಗಳನ್ನು ನೀಡುವ ದೇವಸ್ಥಾನವೊಂದು ನಮ್ಮ ಕರ್ನಾಟಕದಲ್ಲಿ ಇದೆ. ಅದುವೇ ಗೋಕರ್ಣ.

ಭೂಮಿಯ ಮೇಲಿರುವ ಕೈಲಾಸವೆಂದೇ ಕರೆಸಿಕೊಂಡಿರುವ ಗೋಕರ್ಣ, ಬೇಸಿಗೆ ರಜೆಯಲ್ಲಿ ಭೇಟಿ ನೀಡಲು ಉತ್ತಮ ತಾಣ
ಗೋಕರ್ಣ
Image Credit source: Tripadvisor

Updated on: Apr 23, 2024 | 3:25 PM

ಪ್ರಾಚೀನ ಕಡಲತೀರಗಳು, ಮನಸ್ಸಿಗೆ ಮುದ ನೀಡುವ ನೋಟಗಳು, ಸಾಹಸಮಯ ಚಾರಣ ಹಾದಿಗಳು, ಬೀಚ್​ಗಳು ಮತ್ತು ಪ್ರಾಚೀನ ಯಾತ್ರಾಸ್ಥಳಗಳು ಇವೆಲ್ಲವೂ ಗೋಕರ್ಣವನ್ನು ನಿಜವಾದ ಅರ್ಥದಲ್ಲಿ ವ್ಯಾಖ್ಯಾನಿಸುತ್ತವೆ. ಕಾಶಿಯಲ್ಲಿ ಪೂಜೆ ಸಲ್ಲಿಸುವುದರಿಂದ ಸಿಗುವ ಫಲಗಳಿಗೆ ಸಮನಾದ ಫಲಾಫಲಗಳನ್ನು ನೀಡುವ ದೇವಸ್ಥಾನವೊಂದು ನಮ್ಮ ಕರ್ನಾಟಕದಲ್ಲಿ ಇದೆ ಅದು ಗೋಕರ್ಣ.

ನೀವು ನಿಮ್ಮ ಕುಟುಂಬದೊಂದಿಗೆ ಭೇಟಿ ನೀಡಲು ಉತ್ತಮ ಸ್ಥಳ, ಪ್ರತಿ ವರ್ಷವೂ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಈ ಪ್ರದೇಶವು ನಿಮ್ಮಲ್ಲಿ ಉಲ್ಲಾಸ ಹಾಗೂ ಚೈತನ್ಯವನ್ನು ನೀಡುತ್ತದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಕರಾವಳಿ ನಗರವಾದ ಗೋಕರ್ಣದಲ್ಲಿ ಓಂ ಕಡಲತೀರ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ.

ಓಂ ಕಡಲತೀರ ಮೇಲಿನಿಂದ ನೋಡಿದಾಗ ಹಿಂದೂ ಪೌರಾಣಿಕ ಚಿಹ್ನೆಯಾದ ‘ಓಂ’ ನಂತೆ ಕಾಣುತ್ತದೆ. ಗೋಕರ್ಣವು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಕಡಲತೀರದಲ್ಲಿದೆ. ಈ ಪ್ರದೇಶವು ಕಾರವಾರದಿಂದ ಸುಮಾರು 60 ಕಿ.ಮಿ. ದೂರದಲ್ಲಿದೆ. ಈ ಸ್ಥಳದಲ್ಲಿ ಶಿವನು ಮಹಾಬಲೇಶ್ವರ ಎಂಬ ಹೆಸರಿನಿಂದ ನೆಲೆಸಿದ್ದಾನೆ. ಇದೇ ಸ್ಥಳದಲ್ಲಿ ಅಂಗಾರಕನ ಜನನವಾಯಿತು ಎಂದು ತಿಳಿದು ಬರುತ್ತದೆ. ಇದು ಪರಶುರಾಮನಿಂದ ನಿರ್ಮಿತವಾದ ಕ್ಷೇತ್ರವಾಗಿದೆ.

ಮತ್ತಷ್ಟು ಓದಿ: Karnataka Summer Travel: ಪಶ್ಚಿಮ ಘಟ್ಟದ ಚಾರಣ ಸ್ನೇಹಿ ಬೆಟ್ಟ ಈ ಕೊಡಚಾದ್ರಿ, ಹೋಗುವ ಮಾರ್ಗಗಳ ಬಗ್ಗೆ ಇಲ್ಲಿದೆ ಮಾಹಿತಿ

ಹತ್ತಿರದ ಇತರ ಆಕರ್ಷಣೆಗಳು: ಯಾಣ ಬಂಡೆಗಳು (53 ಕಿ.ಮೀ), ಮುರುಡೇಶ್ವರ (80 ಕಿ.ಮೀ) ಮತ್ತು ಕಾರವಾರ (65 ಕಿ.ಮೀ) ಗೋಕರ್ಣದ ಜೊತೆಗೆ ಭೇಟಿ ನೀಡಬಹುದಾದ ಹತ್ತಿರದ ಆಕರ್ಷಣೆಗಳು.

ಭೇಟಿ: ಓಂ ಬೀಚ್ ಗೋಕರ್ಣ ನಗರ ಕೇಂದ್ರದಿಂದ 6 ಕಿ.ಮೀ ದೂರದಲ್ಲಿದೆ. ಗೋಕರ್ಣ ಬೆಂಗಳೂರಿನಿಂದ 500 ಕಿ.ಮೀ ಮತ್ತು ಮಂಗಳೂರಿನಿಂದ 230 ಕಿ.ಮೀ ದೂರದಲ್ಲಿದೆ. ಗೋವಾ ಹತ್ತಿರದ ವಿಮಾನ ನಿಲ್ದಾಣವಾಗಿದೆ (ಗೋಕರ್ಣದಿಂದ 150 ಕಿ.ಮೀ). ಅಂಕೋಲಾ ಹತ್ತಿರದ ರೈಲು ನಿಲ್ದಾಣ (19 ಕಿ.ಮೀ). ಗೋಕರ್ಣ ನಗರದಿಂದ, ಓಂ ಬೀಚ್ ತಲುಪಲು ಆಟೋ ಅಥವಾ ಟ್ಯಾಕ್ಸಿ ಬಾಡಿಗೆಗೆ ಪಡೆಯಬಹುದಾಗಿದೆ.

ಗೋಕರ್ಣದಿಂದ ಸುಮಾರು 20 ಕಿಮೀ ದೂರದಲ್ಲಿರುವ ಅಂಕೋಲಾದಲ್ಲಿ ಹತ್ತಿರದ ರೈಲು ನಿಲ್ದಾಣವಿದೆ. ಮಂಗಳೂರು, ಮುಂಬೈ, ತಿರುವನಂತಪುರಂ, ವೆರವಲ್ ಸೇರಿದಂತೆ ಹಲವು ನಗರಗಳಿಂದ ಬರುವ ರೈಲುಗಳು ನಿಲ್ದಾಣದಲ್ಲಿ ನಿಲುಗಡೆಯಾಗುತ್ತವೆ. ನಿಲ್ದಾಣದಿಂದ ಗೋಕರ್ಣಕ್ಕೆ ಟ್ಯಾಕ್ಸಿ ಸೇವೆಗಳು ಲಭ್ಯವಿವೆ.

ಗೋಕರ್ಣವು ರಸ್ತೆಯ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ. ಕೆಎಸ್ಆರ್ಟಿಸಿ ಬಸ್ಸುಗಳು ಬೆಂಗಳೂರು, ಮಂಗಳೂರು, ಹುಬ್ಬಳ್ಳಿ ಮತ್ತು ಕರ್ನಾಟಕದ ಇತರ ನಗರಗಳಿಂದ ನಿಯಮಿತವಾಗಿ ಸಂಚರಿಸುತ್ತವೆ. ಮಡಗಾಂವ್ ಮತ್ತು ಗೋವಾದ ಇತರ ನಗರಗಳಿಂದ ಗೋಕರ್ಣಕ್ಕೆ ಬಸ್ ಹತ್ತಬಹುದು.

 

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:27 am, Thu, 11 April 24

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us