ಪ್ರಜ್ವಲ್​ನನ್ನು​ ಬಂಧಿಸಿ, ಮಹಿಳೆಯರ ಘನತೆ ಉಳಿಸಿ: ಮೇ 30ರಂದು ಹಾಸನ ಚಲೋ

| Updated By: ಗಂಗಾಧರ​ ಬ. ಸಾಬೋಜಿ

Updated on: May 24, 2024 | 4:22 PM

ಸಂಸದ ಪ್ರಜ್ವಲ್​ ರೇವಣ್ಣನನ್ನು ಬಂಧಿಸುವಂತೆ ಆಗ್ರಹಿಸಿ ಮೇ 30ರಂದು ರಾಜ್ಯ ಜನಪರ ಚಳುವಳಿಗಳ ಒಕ್ಕೂಟದಿಂದ ಹಾಸನ ಚಲೋ ಹೋರಾಟ ಹಮ್ಮಿಕೊಳ್ಳಲಾಗಿದೆ. ಹಾಸನದ ಗೌರವ ಕಾಪಾಡಲು ಬೃಹತ್ ಪ್ರತಿಭಟನೆ ಮಾಡಲಾಗುತ್ತಿದೆ ಎಂದು ಸಂಘಟನೆ ಮುಖಂಡ ಧರ್ಮೇಶ್ ಹೇಳಿದ್ದಾರೆ. ಹೋರಾಟಕ್ಕೆ ಸಾಹಿತಿಗಳು, ಚಿಂತಕರು, ಹೋರಾಟಗಾರರು ಪ್ರಗತಿಪರರು ಸೇರಿ ವಿವಿಧ ಸಂಘಟನೆಗಳು ಭಾಗಿಯಾಗಲಿವೆ ಎಂದಿದ್ದಾರೆ.

ಪ್ರಜ್ವಲ್​ನನ್ನು​ ಬಂಧಿಸಿ, ಮಹಿಳೆಯರ ಘನತೆ ಉಳಿಸಿ: ಮೇ 30ರಂದು ಹಾಸನ ಚಲೋ
ಪ್ರಜ್ವಲ್​ನನ್ನು​ ಬಂಧಿಸಿ, ಮಹಿಳೆಯರ ಘನತೆ ಉಳಿಸಿ: ಮೇ 30ರಂದು ಹಾಸನ ಚಲೋ
Follow us on

ಹಾಸನ, ಮೇ 24: ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಬಂಧನಕ್ಕೆ ಒತ್ತಾಯಿಸಿ ಮೇ 30 ರಂದು ಹಾಸನ (Hassan) ಚಲೋ ಹೋರಾಟ ಮಾಡಲಾಗುತ್ತಿದೆ. ಕರ್ನಾಟಕ ರಾಜ್ಯ ಜನಪರ ಚಳುವಳಿಗಳ ಒಕ್ಕೂಟದಿಂದ ಹೋರಾಟ ನಡೆಯಲಿದ್ದು, ಹೀಗಾಗಿ ಸಂಘಟನೆಯ ಪ್ರಮುಖರಿಂದ ಹೋರಾಟದ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಮೇ 30 ರಂದು ಮಹಿಳೆಯರ ಘನತೆ ಉಳಿಸಿ, ಹಾಸನದ ಗೌರವ ಕಾಪಾಡಲು ಬೃಹತ್ ಹೋರಾಟ ನಡೆಯಲಿದೆ.

ಹಾಸನದ ಗೌರವ ಕಾಪಾಡಲು ಬೃಹತ್ ಪ್ರತಿಭಟನೆ: ಮುಖಂಡ ಧರ್ಮೇಶ್

ಹಾಸನ ಚಲೋ ಕುರಿತಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆ ಮುಖಂಡ ಧರ್ಮೇಶ್​, ಮೇ 30 ರ ಹೋರಾಟಕ್ಕೆ ಸಾಹಿತಿಗಳು, ಚಿಂತಕರು, ಹೋರಾಟಗಾರರು, ಪ್ರಗತಿಪರರು ಸೇರಿ ಸಹಸ್ರಾರು ಜನರು ಭಾಗಿಯಾಗಲಿದ್ದಾರೆ. ಪ್ರಜ್ವಲ್ ರೇವಣ್ಣ ಬಂಧಿಸಿ ಶಿಕ್ಷೆ ವಿಧಿಸಬೇಕು. ವೀಡಿಯೋ ಹಂಚಿಕೆಯ ಷಡ್ಯಂತ್ರ ಮಾಡಿದವರ ವಿರುದ್ದವೂ ಕ್ರಮ ಆಗಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ: ಎಸ್​ಐಟಿ ಸಹಾಯವಾಣಿಗೆ ಬಂತು 30ಕ್ಕೂ ಹೆಚ್ಚು ಕರೆ

ಹಾಸನ ಜಿಲ್ಲೆಯ ಗೌರವ ಹಾಳಾಗಿದೆ ಇದನ್ನ ಉಳಿಸಲು ನಮ್ಮ ಹೋರಾಟ. ಈ ಹೋರಾಟವನ್ನು ಕೆಲವರು ದಿಕ್ಕು ತಪ್ಪಿಸಲು ಪ್ರಯತ್ನ ಮಾಡುತ್ತಿದ್ದಾರೆ. ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತೆಯರು ಬರುತ್ತಾರೆ ಎಂದರು.

ಇದು ಸರ್ಕಾರಿ ಪ್ರಯೋಜಿತ ಎಂದು ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದಾರೆ. ಇದು ಬೇಜವಾಬ್ದಾರಿ ಹೇಳಿಕೆ. ಅವರು ಹಾಗಿದ್ದರೆ ಮಹಿಳೆಯರ ಪರವಾಗಿ ಇಲ್ಲವೇ? ಇಷ್ಟೊಂದು ದೊಡ್ಡ ಹಗರಣ ಆಗಿರುವಾಗ ಅವರು ಇಂತಹ ಹೇಳಿಕೆ ಕೊಡಬಾರದು ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಅಶ್ಲೀಲ ವಿಡಿಯೋ ಪ್ರಕರಣ: ಸಿಎಂ ಪತ್ರ ಬೆನ್ನಲ್ಲೇ ಪ್ರಜ್ವಲ್ ರೇವಣ್ಣಗೆ ಬಿಗ್ ಶಾಕ್ ಕೊಟ್ಟ ವಿದೇಶಾಂಗ ಸಚಿವಾಲಯ

ಈ ಪ್ರತಿಭಟನೆ ಯಾವುದೇ ಕುಟುಂಬದ ವಿರುದ್ಧವಾಗಲಿ ಅಥವಾ ರಾಜಕೀಯ ಪಕ್ಷದ ವಿರುದ್ದವೂ ಅಲ್ಲ. ಇದು ಪ್ರಜ್ವಲ್ ಬಂಧನಕ್ಕಾಗಿ ನಡೆಯುತ್ತಿರುವ ಹೋರಾಟ. ಪ್ರಜ್ವಲ್ ಬಂಧಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಎರಡೂ ವಿಫಲವಾಗಿದೆ. ನಾವು ರಾಜ್ಯ ಸರ್ಕಾರವನ್ನು ಪ್ರಶ್ನೆ ಮಾಡುತ್ತಿರುವಾಗ ಇದು ಪ್ರಾಯೋಗಿತ ಹೋರಾಟ ಹೇಗೆ ಆಗಲಿದೆ. ಈ ಹೋರಾಟಕ್ಕೆ ಸಾವಿರಾರು ಸಂಖ್ಯೆಯಲ್ಲು ಮಹಿಳೆಯರೇ ಬರುತ್ತಾರೆ. ಏನಾದರು ತೊಂದರೆ ಆದರೆ ಅವರೇ ಹೊಣೆಗಾರರಾಗಬೇಕಾಗುತ್ತೆ ಎಂದಿದ್ದಾರೆ.

ಮಹಿಳೆಯರ ಘನತೆ ಹಾಗೂ ಹಾಸನದ ಗೌರವದ ವಿಚಾರದಲ್ಲಿ ನೀವು ಬೇಜವಾಬ್ದಾರಿತನದಿಂದ ವರ್ತಿಸಬೇಡಿ. ನೀವು ಪ್ರಜ್ವಲ್ ಅವರನ್ನು ಅಮಾನತು ಮಾಡಿದ್ದೀರಿ ಆತ ಈಗ ನಿಮ್ಮ ಪಕ್ಷದ ಸದಸ್ಯ ಅಲ್ಲ. ಹಾಗಾಗಿ‌ ನೀವು ಕೂಡ ಈ ಹೋರಾಟ ಬೆಂಬಲಿಸಿ ಎಂದು ಕುಮಾರಸ್ವಾಮಿಗೆ ಹೋರಾಟಗಾರರು ಮನವಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.